<p><strong>ಮುಂಬೈ:</strong>ಪ್ರಶಸ್ತಿ, ಪುರಸ್ಕಾರ ಪಡೆಯದವರ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ಆ ಹಿರಿಯರ ಸಾಧನೆಯನ್ನು ನೆನೆಯವುದೇ ರೋಮಾಂಚನದ ವಿಷಯ. ಅಂತಹ ಜನರ ಮುಂದೆ ನಾನು ಇನ್ನೂ ಕೂಸು ಎಂದು ಖ್ಯಾತ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಅವರು ಹೇಳಿದರು. <br /> <br /> ಇಲ್ಲಿ ಕರ್ನಾಟಕ ಸಂಘದ 2011 ಸಾಲಿನ ವರದರಾಜ ಆದ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಅವರು ಆದ್ಯ ಪ್ರಶಸ್ತಿಯಿಂದ ತಮಗೆ ಸಂತೋಷ ಹಾಗೂ ಸಂಕೋಚ ಆಗುತ್ತದೆ ವಿನಮ್ರವಾಗಿ ನುಡಿದರು. <br /> <br /> ಕನ್ನಡದ ಕೈಂಕರ್ಯಕ್ಕೆ ಸಂಕಲ್ಪ ತೊಟ್ಟಿರುವ ಕನ್ನಡಿಗರನ್ನು ಕಂಡಾಗ ಸಂತೋಷವಾಗುತ್ತದೆ. ಕನ್ನಡ ಮತ್ತು ಮರಾಠಿಯ ತೌಲನಿಕ ಅಧ್ಯಯನ ಅಗತ್ಯ. ಗಡಿನಾಡಿನಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅನ್ಯೋನ್ಯವಾಗಿದ್ದಾರೆ ಎಂದು ಹೇಳಿದರು.<br /> <br /> ಮುಖ್ಯ ಅತಿಥಿ ಮುಲುಂಡ್ನ ವಿ.ಪಿ.ಎಮ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಬಿ.ಎಚ್. ಕುಲಕರ್ಣಿ ಅವರು ಉಪನಗರದಲ್ಲಿ ಕನ್ನಡಿಗರು ಹಂಚಿಹೋಗಿದ್ದಾರೆ. ನಮ್ಮ ಮೊಮ್ಮಕ್ಕಳಿಗೆ ಕನ್ನಡ ಕಲಿಸುವ ಪ್ರಾಮಾಣಿಕ ಕಾಳಜಿ ಬೇಕು ಎಂದರು.<br /> <br /> ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಿ.ಡಿ. ಜೋಶಿ ಅವರು ಕರ್ನಾಟಕ ಸಂಘ ಬೆಳೆಸುವಲ್ಲಿ ವರದರಾಜ ಆದ್ಯ ಅವರ ಪರಿಶ್ರಮವನ್ನು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong>ಪ್ರಶಸ್ತಿ, ಪುರಸ್ಕಾರ ಪಡೆಯದವರ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ಆ ಹಿರಿಯರ ಸಾಧನೆಯನ್ನು ನೆನೆಯವುದೇ ರೋಮಾಂಚನದ ವಿಷಯ. ಅಂತಹ ಜನರ ಮುಂದೆ ನಾನು ಇನ್ನೂ ಕೂಸು ಎಂದು ಖ್ಯಾತ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಅವರು ಹೇಳಿದರು. <br /> <br /> ಇಲ್ಲಿ ಕರ್ನಾಟಕ ಸಂಘದ 2011 ಸಾಲಿನ ವರದರಾಜ ಆದ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಅವರು ಆದ್ಯ ಪ್ರಶಸ್ತಿಯಿಂದ ತಮಗೆ ಸಂತೋಷ ಹಾಗೂ ಸಂಕೋಚ ಆಗುತ್ತದೆ ವಿನಮ್ರವಾಗಿ ನುಡಿದರು. <br /> <br /> ಕನ್ನಡದ ಕೈಂಕರ್ಯಕ್ಕೆ ಸಂಕಲ್ಪ ತೊಟ್ಟಿರುವ ಕನ್ನಡಿಗರನ್ನು ಕಂಡಾಗ ಸಂತೋಷವಾಗುತ್ತದೆ. ಕನ್ನಡ ಮತ್ತು ಮರಾಠಿಯ ತೌಲನಿಕ ಅಧ್ಯಯನ ಅಗತ್ಯ. ಗಡಿನಾಡಿನಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅನ್ಯೋನ್ಯವಾಗಿದ್ದಾರೆ ಎಂದು ಹೇಳಿದರು.<br /> <br /> ಮುಖ್ಯ ಅತಿಥಿ ಮುಲುಂಡ್ನ ವಿ.ಪಿ.ಎಮ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಬಿ.ಎಚ್. ಕುಲಕರ್ಣಿ ಅವರು ಉಪನಗರದಲ್ಲಿ ಕನ್ನಡಿಗರು ಹಂಚಿಹೋಗಿದ್ದಾರೆ. ನಮ್ಮ ಮೊಮ್ಮಕ್ಕಳಿಗೆ ಕನ್ನಡ ಕಲಿಸುವ ಪ್ರಾಮಾಣಿಕ ಕಾಳಜಿ ಬೇಕು ಎಂದರು.<br /> <br /> ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಿ.ಡಿ. ಜೋಶಿ ಅವರು ಕರ್ನಾಟಕ ಸಂಘ ಬೆಳೆಸುವಲ್ಲಿ ವರದರಾಜ ಆದ್ಯ ಅವರ ಪರಿಶ್ರಮವನ್ನು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>