<p><strong>ಹುಬ್ಬಳ್ಳಿ:</strong> ಮಕ್ಕಳ ಮುಖದಲ್ಲಿ ಸಂಭ್ರಮವಿತ್ತು. ಶಿಕ್ಷಕರು ಸಂತಸದಲ್ಲಿದ್ದರು. ಪಾಲಕರ ಆತಂಕ ದೂರವಾಗಿತ್ತು. ಯಾಕೆಂದರೆ ಅಲ್ಲಿ ಮಕ್ಕಳು ಪರಸ್ಪರ ಕಟ್ಟಿದ `ಬ್ಯಾಂಡ್~ ವಿಶೇಷವಾಗಿತ್ತು. ಅದರಲ್ಲಿ `ಸೆ ನೋ ಟು ಟೊಬ್ಯಾಕೋ~ (ತಂಬಾಕಿನಿಂದ ದೂರವಿರಿ) ಎಂದು ಬರೆದಿತ್ತು. <br /> <br /> ಈ ಕಾರ್ಯಕ್ರಮ ನಡೆದದ್ದು ಬಸವೇಶ್ವರ ನಗರದ ಚಿನ್ನಬಸಮ್ಮ ಲಿಂಗನಗೌಡ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಗರದ ಗ್ರಾಮ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ದೇಶ ತಂಬಾಕಿನ ದುಷ್ಪರಿಣಾಮದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು. <br /> <br /> ಮುಂಬೈನ ನರೋತ್ತಮ ಶೇಷಕಾರಿ ಫೌಂಡೇಷನ್ನ ತಂಬಾಕು ವಿರೋಧಿ ಯೋಜನೆಯ ಅಂಗವಾಗಿ ನಗರದ ವಿವಿಧ ಶಾಲೆ-ಕಾಲೇಜುಗಳಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಮಕ್ಕಳು ಪರಸ್ಪರ ಬ್ಯಾಂಡ್ ಕಟ್ಟಿದರು, ತಂಬಾಕು ದುಷ್ಪರಿಣಾಮದ ಬಗ್ಗೆ ಕಿರು ಪ್ರಹಸನ ಪ್ರದರ್ಶಿಸಿದರು, ತಂಬಾಕು ಉತ್ಪನ್ನಗಳ ವಿರುದ್ಧ ಅರಿವು ಮೂಡಿಸಲು ಸಜ್ಜಾದರು.<br /> <br /> ಕಾರ್ಯಕ್ರಮ್ನ ಉದ್ಘಾಟಿಸಿದ ಗ್ರಾಮ ಶಿಕ್ಷಣ ಪ್ರತಿಷ್ಠಾನದ ರೀನಾ ಹೊಂಬಳ, ತಂಬಾಕುಯುಕ್ತ ಪದಾರ್ಥ ತಿನ್ನುವುದನ್ನು ಅನೇಕರು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುತ್ತಾರೆ. ದುಷ್ಪರಿಣಾಮ ಗೊತ್ತಿದ್ದರೂ ತಂಬಾಕು ತಿನ್ನುವುದನ್ನು ಬಿಡಲು ಯಾರೂ ಸಿದ್ಧರಿಲ್ಲ. ಹೀಗಾಗಿ ಈ ಚಟವನ್ನು ಆರಂಭಿಸದಂತೆ ಅರಿವು ಮೂಡಿಸಬೇಕಾದ ಅಗತ್ಯವಿರುವುದರಿಂದ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.<br /> <br /> `ಕೆಲವು ತಂಬಾಕುಯುಕ್ತ ಪದಾರ್ಥಗಳಲ್ಲಿ 40ಕ್ಕೂ ಹೆಚ್ಚು ವಿಷಕಾರಿ ವಸ್ತುಗಳಿರುತ್ತವೆ. ಹಲ್ಲಿಗಳನ್ನು ಪುಡಿ ಮಾಡಿ ಹಾಕಿ ತಯಾರಿಸುವ ಪದಾರ್ಥಗಳು ಕೂಡ ಇವೆ. ಇದು ಕ್ಯಾನ್ಸರ್ನಂಥ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಅಂಥ ಪದಾರ್ಥಗಳ ಸೇವನೆಯನ್ನು ಬಿಡಲು ಪ್ರಯತ್ನ ಮಾಡಬೇಕು~ ಎಂದು ಹೇಳಿದರು. <br /> <br /> ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ವೈ. ಹಳೇಪೇಟೆ ಮಾತನಾಡಿ, ತಂಬಾಕುಯುಕ್ತ ಪದಾರ್ಥಗಳನ್ನು ಸೇವಿಸದೇ ಇರುವವರು ಅದನ್ನು ಸೇವಿಸದಿರುವಂತೆ ಇತರರಿಗೂ ಹೇಳಬೇಕು. ಹೀಗೆ ಮಾಡಿ ಎಲ್ಲರ ಆರೋಗ್ಯವನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.<br /> <br /> ಸ್ಥಳೀಯರಾದ ಎ.ವಿ. ಕಾಮತ್, ಶಾಲೆಗಳಲ್ಲಿ ತಂಬಾಕು ವಿರೋಧಿ ಕಾರ್ಯಕ್ರಮಗಳನ್ನು ನಡೆಸುವುದು ಅಭಿನಂದನೀಯ, ದೇಶವನ್ನು ತಂಬಾಕಿನಿಂದ ಮುಕ್ತವಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು. <br /> <br /> `ತಂಬಾಕು ಮುಕ್ತ ಶಾಲೆ~ ಯೋಜನೆಯ ವ್ಯವಸ್ಥಾಪಕಿ ಶಿವಲೀಲಾ, ಪಾಲಕರಾದ ಕಾಡಪ್ಪ, ಮಾರುತಿ ಮೊರಬದ ಉಪಸ್ಥಿತರಿದ್ದರು. ಎ.ವಿ. ಶೆಟ್ಟರ ಸ್ವಾಗತಿಸಿದರು. ಅಜಯಕುಮಾರ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಮಕ್ಕಳ ಮುಖದಲ್ಲಿ ಸಂಭ್ರಮವಿತ್ತು. ಶಿಕ್ಷಕರು ಸಂತಸದಲ್ಲಿದ್ದರು. ಪಾಲಕರ ಆತಂಕ ದೂರವಾಗಿತ್ತು. ಯಾಕೆಂದರೆ ಅಲ್ಲಿ ಮಕ್ಕಳು ಪರಸ್ಪರ ಕಟ್ಟಿದ `ಬ್ಯಾಂಡ್~ ವಿಶೇಷವಾಗಿತ್ತು. ಅದರಲ್ಲಿ `ಸೆ ನೋ ಟು ಟೊಬ್ಯಾಕೋ~ (ತಂಬಾಕಿನಿಂದ ದೂರವಿರಿ) ಎಂದು ಬರೆದಿತ್ತು. <br /> <br /> ಈ ಕಾರ್ಯಕ್ರಮ ನಡೆದದ್ದು ಬಸವೇಶ್ವರ ನಗರದ ಚಿನ್ನಬಸಮ್ಮ ಲಿಂಗನಗೌಡ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಗರದ ಗ್ರಾಮ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ದೇಶ ತಂಬಾಕಿನ ದುಷ್ಪರಿಣಾಮದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು. <br /> <br /> ಮುಂಬೈನ ನರೋತ್ತಮ ಶೇಷಕಾರಿ ಫೌಂಡೇಷನ್ನ ತಂಬಾಕು ವಿರೋಧಿ ಯೋಜನೆಯ ಅಂಗವಾಗಿ ನಗರದ ವಿವಿಧ ಶಾಲೆ-ಕಾಲೇಜುಗಳಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಮಕ್ಕಳು ಪರಸ್ಪರ ಬ್ಯಾಂಡ್ ಕಟ್ಟಿದರು, ತಂಬಾಕು ದುಷ್ಪರಿಣಾಮದ ಬಗ್ಗೆ ಕಿರು ಪ್ರಹಸನ ಪ್ರದರ್ಶಿಸಿದರು, ತಂಬಾಕು ಉತ್ಪನ್ನಗಳ ವಿರುದ್ಧ ಅರಿವು ಮೂಡಿಸಲು ಸಜ್ಜಾದರು.<br /> <br /> ಕಾರ್ಯಕ್ರಮ್ನ ಉದ್ಘಾಟಿಸಿದ ಗ್ರಾಮ ಶಿಕ್ಷಣ ಪ್ರತಿಷ್ಠಾನದ ರೀನಾ ಹೊಂಬಳ, ತಂಬಾಕುಯುಕ್ತ ಪದಾರ್ಥ ತಿನ್ನುವುದನ್ನು ಅನೇಕರು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುತ್ತಾರೆ. ದುಷ್ಪರಿಣಾಮ ಗೊತ್ತಿದ್ದರೂ ತಂಬಾಕು ತಿನ್ನುವುದನ್ನು ಬಿಡಲು ಯಾರೂ ಸಿದ್ಧರಿಲ್ಲ. ಹೀಗಾಗಿ ಈ ಚಟವನ್ನು ಆರಂಭಿಸದಂತೆ ಅರಿವು ಮೂಡಿಸಬೇಕಾದ ಅಗತ್ಯವಿರುವುದರಿಂದ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.<br /> <br /> `ಕೆಲವು ತಂಬಾಕುಯುಕ್ತ ಪದಾರ್ಥಗಳಲ್ಲಿ 40ಕ್ಕೂ ಹೆಚ್ಚು ವಿಷಕಾರಿ ವಸ್ತುಗಳಿರುತ್ತವೆ. ಹಲ್ಲಿಗಳನ್ನು ಪುಡಿ ಮಾಡಿ ಹಾಕಿ ತಯಾರಿಸುವ ಪದಾರ್ಥಗಳು ಕೂಡ ಇವೆ. ಇದು ಕ್ಯಾನ್ಸರ್ನಂಥ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಅಂಥ ಪದಾರ್ಥಗಳ ಸೇವನೆಯನ್ನು ಬಿಡಲು ಪ್ರಯತ್ನ ಮಾಡಬೇಕು~ ಎಂದು ಹೇಳಿದರು. <br /> <br /> ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ವೈ. ಹಳೇಪೇಟೆ ಮಾತನಾಡಿ, ತಂಬಾಕುಯುಕ್ತ ಪದಾರ್ಥಗಳನ್ನು ಸೇವಿಸದೇ ಇರುವವರು ಅದನ್ನು ಸೇವಿಸದಿರುವಂತೆ ಇತರರಿಗೂ ಹೇಳಬೇಕು. ಹೀಗೆ ಮಾಡಿ ಎಲ್ಲರ ಆರೋಗ್ಯವನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.<br /> <br /> ಸ್ಥಳೀಯರಾದ ಎ.ವಿ. ಕಾಮತ್, ಶಾಲೆಗಳಲ್ಲಿ ತಂಬಾಕು ವಿರೋಧಿ ಕಾರ್ಯಕ್ರಮಗಳನ್ನು ನಡೆಸುವುದು ಅಭಿನಂದನೀಯ, ದೇಶವನ್ನು ತಂಬಾಕಿನಿಂದ ಮುಕ್ತವಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು. <br /> <br /> `ತಂಬಾಕು ಮುಕ್ತ ಶಾಲೆ~ ಯೋಜನೆಯ ವ್ಯವಸ್ಥಾಪಕಿ ಶಿವಲೀಲಾ, ಪಾಲಕರಾದ ಕಾಡಪ್ಪ, ಮಾರುತಿ ಮೊರಬದ ಉಪಸ್ಥಿತರಿದ್ದರು. ಎ.ವಿ. ಶೆಟ್ಟರ ಸ್ವಾಗತಿಸಿದರು. ಅಜಯಕುಮಾರ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>