<p><strong>ವಿಜಾಪುರ:</strong> ಮಹಿಳೆಯೊಬ್ಬರು ತರಕಾರಿಯ ಜೊತೆಗೆ 28 ಮದ್ಯದ ಚಿಕ್ಕ ಬಾಟಲ್ಗಳನ್ನು ಸಾಗಿಸುವಾಗಿ ಸ್ತ್ರೀ ಶಕ್ತಿ ಸಂಘದವರು ಅದನ್ನು ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.<br /> <br /> ಮಹಿಳೆ ತರಕಾರಿಯ ಜೊತೆಗೆ ಈ ಮದ್ಯವನ್ನು ಗ್ರಾಮಕ್ಕೆ ತಂದಿದ್ದರು. ಸಂಶಯ ಬಂದು ತಾವು ಅದನ್ನು ಪತ್ತೆ ಹಚ್ಚಿ, ಅಬಕಾರಿ ಇಲಾಖೆಯವರಿಗೆ ಮಾಹಿತಿ ನೀಡಿದೆವು ಎಂದು ಸ್ತ್ರಿಶಕ್ತಿ ಸಂಘದವರು ತಿಳಿಸಿದ್ದಾರೆ.<br /> <br /> ಸ್ತ್ರೀಶಕ್ತಿ ಸಂಘದ ಮಾತಾಜಿ ಚಿಕ್ಕರೆಡ್ಡಿ, ಶಂಕ್ರಮ್ಮ ಜಾರೆಡ್ಡಿ, ಸಿದ್ದಮ್ಮ ಲಿಂಗದಳ್ಳಿ, ಮಲ್ಲಮ್ಮ ಕೌಲಗಿ ಮತ್ತಿತರರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಸಂಘದವರು ಹೇಳಿದ್ದಾರೆ.<br /> <br /> ಆದರೆ, `ಸಾರವಾಡ ಗ್ರಾಮದಲ್ಲಿ ದಾಳಿ ನಡೆಸಿ 5.4 ಲೀಟರ್ ಮದ್ಯ ವಶಪಡಿಸಿಕೊಂಡು ದುಂಡವ್ವ ರಂಗಪ್ಪ ಕರ್ಜಗಿ ಎಂಬ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ' ಎಂದು ಅಬಕಾರಿ ಉಪ ಆಯುಕ್ತ ಬಸವರಾಜ ಎಸ್. ತಿಳಿಸಿದ್ದಾರೆ!<br /> <br /> ವಶಪಡಿಸಿಕೊಂಡ ಮದ್ಯದ ಮೌಲ್ಯ ರೂ 1,500 ಇದ್ದು, ಅಬಕಾರಿ ಉಪ ನಿರೀಕ್ಷಕ ರಾಜು ಎಚ್. ಗೊಂಡೆೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಪಿ.ಎಸ್ ಪೀಡಕರ, ಅಬಕಾರಿ ರಕ್ಷಕರಾದ ವಿ.ಎಸ್. ಮಮದಾಪೂರ, ಗಂಗೂಬಾಯಿ ಕಟ್ಟಿಮನಿ, ವಾಹನ ಚಾಲಕ ಬಿ.ವೈ. ಬಜಂತ್ರಿ ಭಾಗವಹಿಸಿದ್ದರು ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ:</strong> ಮಹಿಳೆಯೊಬ್ಬರು ತರಕಾರಿಯ ಜೊತೆಗೆ 28 ಮದ್ಯದ ಚಿಕ್ಕ ಬಾಟಲ್ಗಳನ್ನು ಸಾಗಿಸುವಾಗಿ ಸ್ತ್ರೀ ಶಕ್ತಿ ಸಂಘದವರು ಅದನ್ನು ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.<br /> <br /> ಮಹಿಳೆ ತರಕಾರಿಯ ಜೊತೆಗೆ ಈ ಮದ್ಯವನ್ನು ಗ್ರಾಮಕ್ಕೆ ತಂದಿದ್ದರು. ಸಂಶಯ ಬಂದು ತಾವು ಅದನ್ನು ಪತ್ತೆ ಹಚ್ಚಿ, ಅಬಕಾರಿ ಇಲಾಖೆಯವರಿಗೆ ಮಾಹಿತಿ ನೀಡಿದೆವು ಎಂದು ಸ್ತ್ರಿಶಕ್ತಿ ಸಂಘದವರು ತಿಳಿಸಿದ್ದಾರೆ.<br /> <br /> ಸ್ತ್ರೀಶಕ್ತಿ ಸಂಘದ ಮಾತಾಜಿ ಚಿಕ್ಕರೆಡ್ಡಿ, ಶಂಕ್ರಮ್ಮ ಜಾರೆಡ್ಡಿ, ಸಿದ್ದಮ್ಮ ಲಿಂಗದಳ್ಳಿ, ಮಲ್ಲಮ್ಮ ಕೌಲಗಿ ಮತ್ತಿತರರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಸಂಘದವರು ಹೇಳಿದ್ದಾರೆ.<br /> <br /> ಆದರೆ, `ಸಾರವಾಡ ಗ್ರಾಮದಲ್ಲಿ ದಾಳಿ ನಡೆಸಿ 5.4 ಲೀಟರ್ ಮದ್ಯ ವಶಪಡಿಸಿಕೊಂಡು ದುಂಡವ್ವ ರಂಗಪ್ಪ ಕರ್ಜಗಿ ಎಂಬ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ' ಎಂದು ಅಬಕಾರಿ ಉಪ ಆಯುಕ್ತ ಬಸವರಾಜ ಎಸ್. ತಿಳಿಸಿದ್ದಾರೆ!<br /> <br /> ವಶಪಡಿಸಿಕೊಂಡ ಮದ್ಯದ ಮೌಲ್ಯ ರೂ 1,500 ಇದ್ದು, ಅಬಕಾರಿ ಉಪ ನಿರೀಕ್ಷಕ ರಾಜು ಎಚ್. ಗೊಂಡೆೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಪಿ.ಎಸ್ ಪೀಡಕರ, ಅಬಕಾರಿ ರಕ್ಷಕರಾದ ವಿ.ಎಸ್. ಮಮದಾಪೂರ, ಗಂಗೂಬಾಯಿ ಕಟ್ಟಿಮನಿ, ವಾಹನ ಚಾಲಕ ಬಿ.ವೈ. ಬಜಂತ್ರಿ ಭಾಗವಹಿಸಿದ್ದರು ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>