<p><strong>ನವದೆಹಲಿ(ಪಿಟಿಐ): </strong>ಪೆಟ್ರೋಲ್ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, ತರಕಾರಿಗಳ ಧಾರಣೆಯಲ್ಲಿಯೂ ವಿಪರೀತ ಏರಿಕೆಯಾಗಿರುವುದರ ಪರಿಣಾಮ ದೇಶದಲ್ಲಿನ ಹಣದುಬ್ಬರ ಪ್ರಮಾಣ ಶೇ 7.55ಕ್ಕೆ ಏರಿದೆ.<br /> <br /> ದೇಶದ ಆರ್ಥಿಕ ಪರಿಸ್ಥಿತಿ ಹಿನ್ನಡೆ ಕಂಡಿರುವ ಕಠಿಣ ಸಂದರ್ಭದಲ್ಲಿಯೇ ಹಣದುಬ್ಬರವೂ ಹೆಚ್ಚಿರುವುದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ಗೆ ಮುಂದಿನ ವಾರ ಹೊಸ ಬಡ್ಡಿದರ ನೀತಿ ಪ್ರಕಟಿಸುವ ವಿಚಾರದಲ್ಲಿ ಸವಾಲು ಒಡ್ಡಿದಂತಿದೆ.<br /> <br /> `ಹಣದುಬ್ಬರದಲ್ಲಿನ ಈ ಏರಿಕೆಗೆ ಆಹಾರ ಹಣದುಬ್ಬರವೇ ಕಾರಣ~ ಎಂದು ಹಣಕಾಸು ತಜ್ಞರು ವಿಶ್ಲೇಷಿದ್ದಾರೆ.<br /> ಆರ್ಬಿಐ ಇದೇ 18ರಂದು ಹಣಕಾಸು ನಿರ್ವಹಣಾ ನೀತಿ ಪರಾಮರ್ಶೆ ಪ್ರಕಟಿಸಲಿದ್ದು, ಬಡ್ಡಿಯ ಮೂಲದರದಲ್ಲಿ ಕನಿಷ್ಠ ಶೇ 0.25ರಷ್ಟು ಅಂಶಗಳನ್ನು ಕಡಿತಗೊಳಿಸಬಹುದಾಗಿದೆ. ಈ ಕ್ರಮ ಕೈಗೊಳ್ಳಲು ಈಗಿನ ಹಣದುಬ್ಬರ ಪ್ರಮಾಣವೇನೂ ಆರ್ಬಿಐಗೆ ಅಡ್ಡಿಯಾಗದು ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಕಳೆದ ವರ್ಷಕ್ಕಿಂತ ಉತ್ತಮ: ಹಣದುಬ್ಬರದ ಮಟ್ಟ ಏಪ್ರಿಲ್ನಲ್ಲಿ ಶೇ 7.23ರಷ್ಟಿದ್ದಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಶೇ 9.56ರ ಕಳವಳಕಾರಿ ಮಟ್ಟದಲ್ಲಿತ್ತು.<br /> <br /> ಸಗಟು ದರ ಪಟ್ಟಿಯಲ್ಲಿ ಆಹಾರ ಪದಾರ್ಥಗಳ ಪಾಲೇ ಶೇ 14.3ರಷ್ಟಿರುತ್ತದೆ. ಏಪ್ರಿಲ್- ಮೇ ತಿಂಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಹಾಲು, ಮೊಟ್ಟೆ, ಮಾಂಸ, ಆಲೂಗಡ್ಡೆ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ. ಹಾಗಾಗಿಯೇ ಏಪ್ರಿಲ್ನಲ್ಲಿ ಶೇ 10.49ರಷ್ಟಿದ್ದ ಆಹಾರದ ಒಟ್ಟಾರೆ ಹಣದುಬ್ಬರ ಮೇ ತಿಂಗಳಲ್ಲಿ ಶೇ 10.74ಕ್ಕೇರಿದೆ. <br /> <br /> <strong>ಪ್ರಣವ್ ನಿರೀಕ್ಷೆ: </strong>ಈಗಿನ ಹಣದುಬ್ಬರ ಏರಿಕೆ ಬಗ್ಗೆ ಆತಂಕ ಪಡುವುದೇನೂ ಇಲ್ಲ ಎಂದಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಈ ಬಾರಿ ಮುಂಗಾರು ಉತ್ತಮವಾಗಿರುವ ನಿರೀಕ್ಷೆ ಇದೆ. ಹಾಗಾದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಮಟ್ಟ ಶೇ 6.5ರಿಂದ ಶೇ 7.5ರ ನಡುವೆ ಇರಲಿದೆ ಎಂದಿದ್ದಾರೆ.<br /> <br /> ಹಣದುಬ್ಬರ ಕುರಿತು ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಸಚಿವರು, ಕೆಲವು ಆಹಾರ ಪದಾರ್ಥಗಳು, ಕಾಯಿಪಲ್ಲೆಗಳು ಕೆಲವೇ ಋತುಗಳಲ್ಲಿ ಲಭ್ಯವಾಗುವಂತಹವು. ಹಾಗಾಗಿ ಅವುಗಳ ಧಾರಣೆಯಲ್ಲಿ ಹೆಚ್ಚಳವಾಗಿದೆ ಎಂದು ವಿಶ್ಲೇಷಿಸಿದರು.<br /> <br /> ಆಹಾರ ಪದಾರ್ಥಗಳ ಸರಬರಾಜು ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಗೋದಾಮುಗಳು ಮತ್ತು ಶೀತಲಗೃಹಗಳ ವ್ಯವಸ್ಥೆಯನ್ನೂ ಮಾಡಬೇಕಿದೆ ಎಂದೂ ಹೇಳಿದರು.<br /> <br /> <strong>ರಫ್ತು ಕ್ಷೇತ್ರ: ಶೇ 4.16 ಕುಸಿತ<br /> ನವದೆಹಲಿ(ಪಿಟಿಐ):</strong> ಈಗಾಗಲೇ ಇಳಿಜಾರಿನಲ್ಲಿರುವ ದೇಶದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕೆಳ ದೂಡುವಂತೆ ರಫ್ತು ಕ್ಷೇತ್ರವೂ ಕಳಪೆ ಸಾಧನೆ ತೋರಿದೆ. <br /> <br /> ರಫ್ತು ಕ್ಷೇತ್ರದ ಪ್ರಗತಿ ಮೇ ತಿಂಗಳಲ್ಲಿ ಶೇ 4.16ರಷ್ಟು ಕುಸಿತ ಕಂಡು 2568 ಕೋಟಿ ಅಮೆರಿಕನ್ ಡಾಲರ್(ರೂ. 1.41 ಲಕ್ಷ ಕೋಟಿ)ಗೆ ಬಂದು ನಿಂತಿದೆ.<br /> <br /> ಕೈಗಾರಿಕಾ ಕ್ಷೇತ್ರದ ಕಳಪೆ ಸಾಧನೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಪರಿಣಾಮ ಭಾರತದ ರಫ್ತು ಉದ್ಯಮ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಎಸ್.ಆರ್.ರಾವ್ ಗುರುವಾರ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ): </strong>ಪೆಟ್ರೋಲ್ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, ತರಕಾರಿಗಳ ಧಾರಣೆಯಲ್ಲಿಯೂ ವಿಪರೀತ ಏರಿಕೆಯಾಗಿರುವುದರ ಪರಿಣಾಮ ದೇಶದಲ್ಲಿನ ಹಣದುಬ್ಬರ ಪ್ರಮಾಣ ಶೇ 7.55ಕ್ಕೆ ಏರಿದೆ.<br /> <br /> ದೇಶದ ಆರ್ಥಿಕ ಪರಿಸ್ಥಿತಿ ಹಿನ್ನಡೆ ಕಂಡಿರುವ ಕಠಿಣ ಸಂದರ್ಭದಲ್ಲಿಯೇ ಹಣದುಬ್ಬರವೂ ಹೆಚ್ಚಿರುವುದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ಗೆ ಮುಂದಿನ ವಾರ ಹೊಸ ಬಡ್ಡಿದರ ನೀತಿ ಪ್ರಕಟಿಸುವ ವಿಚಾರದಲ್ಲಿ ಸವಾಲು ಒಡ್ಡಿದಂತಿದೆ.<br /> <br /> `ಹಣದುಬ್ಬರದಲ್ಲಿನ ಈ ಏರಿಕೆಗೆ ಆಹಾರ ಹಣದುಬ್ಬರವೇ ಕಾರಣ~ ಎಂದು ಹಣಕಾಸು ತಜ್ಞರು ವಿಶ್ಲೇಷಿದ್ದಾರೆ.<br /> ಆರ್ಬಿಐ ಇದೇ 18ರಂದು ಹಣಕಾಸು ನಿರ್ವಹಣಾ ನೀತಿ ಪರಾಮರ್ಶೆ ಪ್ರಕಟಿಸಲಿದ್ದು, ಬಡ್ಡಿಯ ಮೂಲದರದಲ್ಲಿ ಕನಿಷ್ಠ ಶೇ 0.25ರಷ್ಟು ಅಂಶಗಳನ್ನು ಕಡಿತಗೊಳಿಸಬಹುದಾಗಿದೆ. ಈ ಕ್ರಮ ಕೈಗೊಳ್ಳಲು ಈಗಿನ ಹಣದುಬ್ಬರ ಪ್ರಮಾಣವೇನೂ ಆರ್ಬಿಐಗೆ ಅಡ್ಡಿಯಾಗದು ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಕಳೆದ ವರ್ಷಕ್ಕಿಂತ ಉತ್ತಮ: ಹಣದುಬ್ಬರದ ಮಟ್ಟ ಏಪ್ರಿಲ್ನಲ್ಲಿ ಶೇ 7.23ರಷ್ಟಿದ್ದಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಶೇ 9.56ರ ಕಳವಳಕಾರಿ ಮಟ್ಟದಲ್ಲಿತ್ತು.<br /> <br /> ಸಗಟು ದರ ಪಟ್ಟಿಯಲ್ಲಿ ಆಹಾರ ಪದಾರ್ಥಗಳ ಪಾಲೇ ಶೇ 14.3ರಷ್ಟಿರುತ್ತದೆ. ಏಪ್ರಿಲ್- ಮೇ ತಿಂಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಹಾಲು, ಮೊಟ್ಟೆ, ಮಾಂಸ, ಆಲೂಗಡ್ಡೆ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ. ಹಾಗಾಗಿಯೇ ಏಪ್ರಿಲ್ನಲ್ಲಿ ಶೇ 10.49ರಷ್ಟಿದ್ದ ಆಹಾರದ ಒಟ್ಟಾರೆ ಹಣದುಬ್ಬರ ಮೇ ತಿಂಗಳಲ್ಲಿ ಶೇ 10.74ಕ್ಕೇರಿದೆ. <br /> <br /> <strong>ಪ್ರಣವ್ ನಿರೀಕ್ಷೆ: </strong>ಈಗಿನ ಹಣದುಬ್ಬರ ಏರಿಕೆ ಬಗ್ಗೆ ಆತಂಕ ಪಡುವುದೇನೂ ಇಲ್ಲ ಎಂದಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಈ ಬಾರಿ ಮುಂಗಾರು ಉತ್ತಮವಾಗಿರುವ ನಿರೀಕ್ಷೆ ಇದೆ. ಹಾಗಾದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಮಟ್ಟ ಶೇ 6.5ರಿಂದ ಶೇ 7.5ರ ನಡುವೆ ಇರಲಿದೆ ಎಂದಿದ್ದಾರೆ.<br /> <br /> ಹಣದುಬ್ಬರ ಕುರಿತು ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಸಚಿವರು, ಕೆಲವು ಆಹಾರ ಪದಾರ್ಥಗಳು, ಕಾಯಿಪಲ್ಲೆಗಳು ಕೆಲವೇ ಋತುಗಳಲ್ಲಿ ಲಭ್ಯವಾಗುವಂತಹವು. ಹಾಗಾಗಿ ಅವುಗಳ ಧಾರಣೆಯಲ್ಲಿ ಹೆಚ್ಚಳವಾಗಿದೆ ಎಂದು ವಿಶ್ಲೇಷಿಸಿದರು.<br /> <br /> ಆಹಾರ ಪದಾರ್ಥಗಳ ಸರಬರಾಜು ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಗೋದಾಮುಗಳು ಮತ್ತು ಶೀತಲಗೃಹಗಳ ವ್ಯವಸ್ಥೆಯನ್ನೂ ಮಾಡಬೇಕಿದೆ ಎಂದೂ ಹೇಳಿದರು.<br /> <br /> <strong>ರಫ್ತು ಕ್ಷೇತ್ರ: ಶೇ 4.16 ಕುಸಿತ<br /> ನವದೆಹಲಿ(ಪಿಟಿಐ):</strong> ಈಗಾಗಲೇ ಇಳಿಜಾರಿನಲ್ಲಿರುವ ದೇಶದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕೆಳ ದೂಡುವಂತೆ ರಫ್ತು ಕ್ಷೇತ್ರವೂ ಕಳಪೆ ಸಾಧನೆ ತೋರಿದೆ. <br /> <br /> ರಫ್ತು ಕ್ಷೇತ್ರದ ಪ್ರಗತಿ ಮೇ ತಿಂಗಳಲ್ಲಿ ಶೇ 4.16ರಷ್ಟು ಕುಸಿತ ಕಂಡು 2568 ಕೋಟಿ ಅಮೆರಿಕನ್ ಡಾಲರ್(ರೂ. 1.41 ಲಕ್ಷ ಕೋಟಿ)ಗೆ ಬಂದು ನಿಂತಿದೆ.<br /> <br /> ಕೈಗಾರಿಕಾ ಕ್ಷೇತ್ರದ ಕಳಪೆ ಸಾಧನೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಪರಿಣಾಮ ಭಾರತದ ರಫ್ತು ಉದ್ಯಮ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಎಸ್.ಆರ್.ರಾವ್ ಗುರುವಾರ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>