<p>ಕೂಡ್ಲಿಗಿ: ಪಟ್ಟಣದ ಶುಕ್ರವಾರದ ಸಂತೆಯಲ್ಲಿ ತರಕಾರಿ ಬೆಲೆಗಳೆಲ್ಲ ಗಗನಕ್ಕೇರಿರುವುದು ಗ್ರಾಹಕರಿಗೆ ನುಂಗಲಾರದ ತುಪ್ಪವಾಗಿದೆ. <br /> <br /> ತರಕಾರಿಗಳಲ್ಲಿ ಅತಿಹೆಚ್ಚು ಬೆಲೆ ಎಂದರೆ ಚವಳೆಕಾಯಿ. ಕಿಲೋ ಒಂದಕ್ಕೆ 30 ರೂಪಾಯಿ ಇರುವ ಚವಳೆಕಾಯಿಯನ್ನು ಗ್ರಾಹಕ ಕಣ್ತುಂಬ ನೋಡಿ ಸಂತಸಪಡಬೇಕಷ್ಟೆ. ಗ್ರಾಹಕರು ತರಕಾರಿ ಬೆಲೆ ಕೇಳಿದೊಡನೆ ಬೆಚ್ಚಿಬೀಳಬಾರದೆಂದು ಮಾರಾಟಗಾರರು `ಕಾಲು ಕೆ.ಜಿ ಚವಳೆಕಾಯಿ 8 ರೂ. ಮಾತ್ರ; ಎಂದಷ್ಟೇ ಹೇಳುತ್ತಾರೆ. <br /> <br /> ಈರುಳ್ಳಿ 15 ರೂ.ಗಳಿಗೆ ಕೆ.ಜಿಯಾಗಿರುವುದು ಗ್ರಾಹಕರು ದಿಕ್ಕುತೋಚದಂತಾಗಿದೆ. ಟೊಮೆಟೊ ಬೆಲೆ 16 ರೂ., ಬದನೆಕಾಯಿ 20 ರೂ., ಮೆಣಸಿನಕಾಯಿ 20 ರೂ., ಸೌತೆಕಾಯಿ 16 ರೂ. ಹೀರೇಕಾಯಿ 20 ರೂ.ಗಳಾಗಿದ್ದು, ಪಟ್ಟಣದ ನಾಗರಿಕರು ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಿದರು. <br /> <br /> `ಪೆಟ್ರೊಲ್ ಬೆಲೆ ಹೆಚ್ಚು, ಕಿರಾಣಿ ವಸ್ತುಗಳ ಬೆಲೆ ಹೆಚ್ಚು, ತರಕಾರಿಗಳ ಬೆಲೆಯೂ ಹೆಚ್ಚಾದರೆ ಇನ್ನು ಹೊಟ್ಟೆಗೆ ತಣ್ಣೀರೇ ಗತಿ~ ಎಂದು ಪಟ್ಟಣದ ಬಡ ಹಾಗೂ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ. <br /> <br /> `ಮಳೀನ ಆಗಿಲ್ರಿ, ನಾವು ತೊಗೊಂಡ ರೇಟ್ ಜಾಸ್ತಿ ಐತ್ರಿ, ನಾವರ ಕಡಿಮಿ ರೇಟಿಗೆ ಹೆಂಗ ಕೊಡಾಕ ಬರ್ತೈತ್ರಿ, ಇದರಾಗ ನಮಗೆ ಉಳಿಯೋ ಲಾಭಾನೂ ಅಷ್ಟಕ್ಕಷ್ಟ~ ಎನ್ನುತ್ತಾರೆ ತರಕಾರಿ ಮಾರಾಟಗಾರರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೂಡ್ಲಿಗಿ: ಪಟ್ಟಣದ ಶುಕ್ರವಾರದ ಸಂತೆಯಲ್ಲಿ ತರಕಾರಿ ಬೆಲೆಗಳೆಲ್ಲ ಗಗನಕ್ಕೇರಿರುವುದು ಗ್ರಾಹಕರಿಗೆ ನುಂಗಲಾರದ ತುಪ್ಪವಾಗಿದೆ. <br /> <br /> ತರಕಾರಿಗಳಲ್ಲಿ ಅತಿಹೆಚ್ಚು ಬೆಲೆ ಎಂದರೆ ಚವಳೆಕಾಯಿ. ಕಿಲೋ ಒಂದಕ್ಕೆ 30 ರೂಪಾಯಿ ಇರುವ ಚವಳೆಕಾಯಿಯನ್ನು ಗ್ರಾಹಕ ಕಣ್ತುಂಬ ನೋಡಿ ಸಂತಸಪಡಬೇಕಷ್ಟೆ. ಗ್ರಾಹಕರು ತರಕಾರಿ ಬೆಲೆ ಕೇಳಿದೊಡನೆ ಬೆಚ್ಚಿಬೀಳಬಾರದೆಂದು ಮಾರಾಟಗಾರರು `ಕಾಲು ಕೆ.ಜಿ ಚವಳೆಕಾಯಿ 8 ರೂ. ಮಾತ್ರ; ಎಂದಷ್ಟೇ ಹೇಳುತ್ತಾರೆ. <br /> <br /> ಈರುಳ್ಳಿ 15 ರೂ.ಗಳಿಗೆ ಕೆ.ಜಿಯಾಗಿರುವುದು ಗ್ರಾಹಕರು ದಿಕ್ಕುತೋಚದಂತಾಗಿದೆ. ಟೊಮೆಟೊ ಬೆಲೆ 16 ರೂ., ಬದನೆಕಾಯಿ 20 ರೂ., ಮೆಣಸಿನಕಾಯಿ 20 ರೂ., ಸೌತೆಕಾಯಿ 16 ರೂ. ಹೀರೇಕಾಯಿ 20 ರೂ.ಗಳಾಗಿದ್ದು, ಪಟ್ಟಣದ ನಾಗರಿಕರು ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಿದರು. <br /> <br /> `ಪೆಟ್ರೊಲ್ ಬೆಲೆ ಹೆಚ್ಚು, ಕಿರಾಣಿ ವಸ್ತುಗಳ ಬೆಲೆ ಹೆಚ್ಚು, ತರಕಾರಿಗಳ ಬೆಲೆಯೂ ಹೆಚ್ಚಾದರೆ ಇನ್ನು ಹೊಟ್ಟೆಗೆ ತಣ್ಣೀರೇ ಗತಿ~ ಎಂದು ಪಟ್ಟಣದ ಬಡ ಹಾಗೂ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ. <br /> <br /> `ಮಳೀನ ಆಗಿಲ್ರಿ, ನಾವು ತೊಗೊಂಡ ರೇಟ್ ಜಾಸ್ತಿ ಐತ್ರಿ, ನಾವರ ಕಡಿಮಿ ರೇಟಿಗೆ ಹೆಂಗ ಕೊಡಾಕ ಬರ್ತೈತ್ರಿ, ಇದರಾಗ ನಮಗೆ ಉಳಿಯೋ ಲಾಭಾನೂ ಅಷ್ಟಕ್ಕಷ್ಟ~ ಎನ್ನುತ್ತಾರೆ ತರಕಾರಿ ಮಾರಾಟಗಾರರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>