<p>ಕುಷ್ಟಗಿ: ಆನ್ಲೈನ್ ವ್ಯವಸ್ಥೆ ಅಳವಡಿಸಿಕೊಂಡು ವರ್ಷಕಳೆದರೂ ತಾಂತ್ರಿಕ ತೊಂದರೆಯ ಕಾರಣಗಳನ್ನು ಮುಂದೆಮಾಡಿ ಇಲ್ಲಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪದೇ ಪದೇ ವ್ಯವಹಾರ ಸ್ಥಗಿತಗೊಳಿಸುತ್ತಿರುವುದರಿಂದ ಗ್ರಾಹಕರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಖಾತೆಗಳನ್ನು ಹೊಂದಿರುವ ರೈತರು ಪರದಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.<br /> <br /> ಶುಕ್ರವಾರ ವ್ಯಹಾರದ ಸಮಯ ಆರಂಭಗೊಳ್ಳುತ್ತಿದ್ದಂತೆ ಬ್ಯಾಂಕ್ನ ಗೇಟ್ ಮುಚ್ಚಿ ಅದಕ್ಕೆ `ತಾಂತ್ರಿಕ ದೋಷದಿಂದಾಗಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ~ ಎಂಬ ಫಲಕವನ್ನು ನೇತುಹಾಕಿದ್ದರಿಂದ ವ್ಯವಹರಿಸಲು ಬಂದ ಗ್ರಾಹಕರು ಹಾಗೇ ಮರಳಿ ಹೋಗುತ್ತಿದ್ದುದು ಕಂಡುಬಂದಿತು. <br /> <br /> ಸಿಬ್ಬಂದಿಯ ಸಹಕಾರದಿಂದಾಗಿ ಸದರಿ ಬ್ಯಾಂಕ್ಶಾಖೆಯಲ್ಲಿ ಹಳ್ಳಿಗಾಡಿನ ಮತ್ತು ಅನಕ್ಷರಸ್ಥರು, ಸಾಮಾನ್ಯ ಗ್ರಾಹಕರು ಹೆಚ್ಚಾಗಿ ಇಲ್ಲಿ ಖಾತೆಗಳನ್ನು ತೆರೆದಿದ್ದು, ಮೊದಲು ಇಂಥ ಸಮಸ್ಯೆ ಇರಲಿಲ್ಲ.<br /> <br /> ಆನ್ಲೈನ್ ವ್ಯವಸ್ಥೆ ಅಳವಡಿಸಿಕೊಂಡ ನಂತರ ಹೆಚ್ಚಾಗಿದ್ದು ಯಾವುದೇ ವ್ಯವಹಾರ ನಡೆಯುವ ಖಾತರಿ ಇಲ್ಲದಂತಾಗಿದೆ ಎಂದು ಕೆಲ ಗ್ರಾಹಕರು ಅಳಲು ತೋಡಿಕೊಂಡರು.</p>.<p>ಆನ್ಲೈನ್ ವ್ಯವಸ್ಥೆಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ. ಇತರೆ ಬ್ಯಾಂಕ್ಗಳಲ್ಲಿ ಇಲ್ಲದ ತಾಂತ್ರಿಕ ಸಮಸ್ಯೆ ಈ ಶಾಖೆಯಲ್ಲಿ. ಈ ವಿಷಯವನ್ನು ಬಿಎಸ್ಎನ್ಎಲ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬ್ಯಾಂಕ್ನ ಮೂಲಗಳು ತಿಳಿಸಿವೆ.</p>.<p>ಆಗಾಗ್ಗೆ ರಜೆ ದಿನಗಳು ಬಂದಾಗ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅಲ್ಲದೇ ಏ.14 ಸಾರ್ವತ್ರಿಕ ರಜೆ ಭಾನುವಾರ ವಾರದ ರಜೆ ಹಾಗಾಗಿ ಸೋಮವಾರದವರೆಗೂ ಕಾಯಬೇಕು. ಅಂದು ಸಹ ತಾಂತ್ರಿಕ ದೋಷ ಉಂಟಾದರೆ ನಮ್ಮ ಗತಿ ಏನು ಎಂಬುದು ಗ್ರಾಹಕರ ಪ್ರಶ್ನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಷ್ಟಗಿ: ಆನ್ಲೈನ್ ವ್ಯವಸ್ಥೆ ಅಳವಡಿಸಿಕೊಂಡು ವರ್ಷಕಳೆದರೂ ತಾಂತ್ರಿಕ ತೊಂದರೆಯ ಕಾರಣಗಳನ್ನು ಮುಂದೆಮಾಡಿ ಇಲ್ಲಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪದೇ ಪದೇ ವ್ಯವಹಾರ ಸ್ಥಗಿತಗೊಳಿಸುತ್ತಿರುವುದರಿಂದ ಗ್ರಾಹಕರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಖಾತೆಗಳನ್ನು ಹೊಂದಿರುವ ರೈತರು ಪರದಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.<br /> <br /> ಶುಕ್ರವಾರ ವ್ಯಹಾರದ ಸಮಯ ಆರಂಭಗೊಳ್ಳುತ್ತಿದ್ದಂತೆ ಬ್ಯಾಂಕ್ನ ಗೇಟ್ ಮುಚ್ಚಿ ಅದಕ್ಕೆ `ತಾಂತ್ರಿಕ ದೋಷದಿಂದಾಗಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ~ ಎಂಬ ಫಲಕವನ್ನು ನೇತುಹಾಕಿದ್ದರಿಂದ ವ್ಯವಹರಿಸಲು ಬಂದ ಗ್ರಾಹಕರು ಹಾಗೇ ಮರಳಿ ಹೋಗುತ್ತಿದ್ದುದು ಕಂಡುಬಂದಿತು. <br /> <br /> ಸಿಬ್ಬಂದಿಯ ಸಹಕಾರದಿಂದಾಗಿ ಸದರಿ ಬ್ಯಾಂಕ್ಶಾಖೆಯಲ್ಲಿ ಹಳ್ಳಿಗಾಡಿನ ಮತ್ತು ಅನಕ್ಷರಸ್ಥರು, ಸಾಮಾನ್ಯ ಗ್ರಾಹಕರು ಹೆಚ್ಚಾಗಿ ಇಲ್ಲಿ ಖಾತೆಗಳನ್ನು ತೆರೆದಿದ್ದು, ಮೊದಲು ಇಂಥ ಸಮಸ್ಯೆ ಇರಲಿಲ್ಲ.<br /> <br /> ಆನ್ಲೈನ್ ವ್ಯವಸ್ಥೆ ಅಳವಡಿಸಿಕೊಂಡ ನಂತರ ಹೆಚ್ಚಾಗಿದ್ದು ಯಾವುದೇ ವ್ಯವಹಾರ ನಡೆಯುವ ಖಾತರಿ ಇಲ್ಲದಂತಾಗಿದೆ ಎಂದು ಕೆಲ ಗ್ರಾಹಕರು ಅಳಲು ತೋಡಿಕೊಂಡರು.</p>.<p>ಆನ್ಲೈನ್ ವ್ಯವಸ್ಥೆಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ. ಇತರೆ ಬ್ಯಾಂಕ್ಗಳಲ್ಲಿ ಇಲ್ಲದ ತಾಂತ್ರಿಕ ಸಮಸ್ಯೆ ಈ ಶಾಖೆಯಲ್ಲಿ. ಈ ವಿಷಯವನ್ನು ಬಿಎಸ್ಎನ್ಎಲ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬ್ಯಾಂಕ್ನ ಮೂಲಗಳು ತಿಳಿಸಿವೆ.</p>.<p>ಆಗಾಗ್ಗೆ ರಜೆ ದಿನಗಳು ಬಂದಾಗ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅಲ್ಲದೇ ಏ.14 ಸಾರ್ವತ್ರಿಕ ರಜೆ ಭಾನುವಾರ ವಾರದ ರಜೆ ಹಾಗಾಗಿ ಸೋಮವಾರದವರೆಗೂ ಕಾಯಬೇಕು. ಅಂದು ಸಹ ತಾಂತ್ರಿಕ ದೋಷ ಉಂಟಾದರೆ ನಮ್ಮ ಗತಿ ಏನು ಎಂಬುದು ಗ್ರಾಹಕರ ಪ್ರಶ್ನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>