<p><strong>ಗಂಗಾವತಿ: </strong>ನೀರಾವರಿ ಗಂಗಾವತಿ, ಮಳೆಯಾಶ್ರಿತ ಕನಕಗಿರಿ ಕ್ಷೇತ್ರದಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ಇತ್ತ ರೈತ, ಮೇವು, ನೀರಿಲ್ಲದೆ ಅತ್ತ ಜನ-ಜಾನುವಾರು ಸಂಕಷ್ಟದಲ್ಲಿದ್ದರೆ, ಎಪಿಎಂಸಿ ಸದಸ್ಯರು `ಅಧ್ಯಯನ~ ನೆಪದ ಮೋಜಿನ ಉತ್ತರ ಭಾರತ ಪ್ರವಾಸ ಬುಧವಾರದಿಂದ ಕೈಗೊಂಡಿದ್ದಾರೆ.<br /> <br /> ತಾಲ್ಲೂಕಿನಲ್ಲಿ ಬರ ಬಿದ್ದು ರೈತ ಜನ-ಜಾನುವಾರು ಪರದಾಡುತ್ತಿದ್ದರೆ, ರೈತರ ಹಣದಲ್ಲಿ ಮೋಜು ಮಾಡುವ ಜರೂರು ಏನಿತ್ತು..? ಕೃಷಿ ಸಂಧಿಗ್ಧತೆಯಲ್ಲಿದ್ದಾಗ ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಎಪಿಎಂಸಿ ಸದಸ್ಯರು ಮೋಜು ಮಾಡುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ.<br /> <br /> <strong>ಲಕ್ಷ ಲಕ್ಷ ಹಣ ಪೋಲು: </strong>ಗಂಗಾವತಿ ಎಪಿಎಂಸಿಯಿಂದ ಜುಲೈ 4ರಿಂದ 13ರವರೆಗೆ 12 ಸದಸ್ಯರಿಗೆ ಉತ್ತರ ಭಾರತದ ಜಮ್ಮು-ಕಾಶ್ಮೀರ, ಪಂಜಾಬ, ಅಮೃತಸರ, ದೆಹಲಿ, ಚಂಢಿ ೀಗಡ, ಹರಿದ್ವಾರ, ಆಗ್ರಾ, ಜೈಪುರ, ರಾಜಸ್ತಾನ ಮೊದಲಾದ ಸ್ಥಳಗಳಲ್ಲಿ 10 ದಿನದ ಯಾತ್ರೆ ಆಯೋಜಿಸಲಾಗಿದೆ. <br /> <br /> ಒಬ್ಬೊಬ್ಬ ಸದಸ್ಯರಿಗೆ ಕೇವಲ 41 ಸಾವಿರ ಹಣ ವ್ಯೆಯಿಸುತ್ತಿರುವುದಾಗಿ ಎಪಿಎಂಸಿ ಅಧಿಕಾರಿಕ ಮೂಲಗಳು ತಿಳಿಸುತ್ತಿವೆ. ಆದರೆ ವಿಮಾನಯಾನ, ಎಸಿ ವಸತಿ ಗೃಹ, ಭೂರಿಭೋಜನ, ಯಾತ್ರಾ ಸ್ಥಳಗಳ ವೀಕ್ಷಣೆಯ ವಾಹನ ವ್ಯವಸ್ಥೆಗೆ ಲಕ್ಷಾಂತರ ರೂಪಾಯಿ ವ್ಯೆಯಿಸಲಾಗುತ್ತಿದೆ.<br /> <br /> ಅಧ್ಯಯನ ಎಂಬ ನೆಪ: ಹೊರ ರಾಜ್ಯಗಳಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವುದು, ಅಲ್ಲಿ ಅಳವಡಿಸಿದ ತಾಂತ್ರಿಕತೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸದಸ್ಯರಿಗೆ ಉತ್ತರ ಭಾರತದ ಯಾತ್ರೆ ಆಯೋಜಿಸಲಾಗಿದೆ ಎನ್ನಲಾಗಿದೆ. <br /> <br /> ಆದರೆ ಸದಸ್ಯರು ಸಂಚರಿಸುತ್ತಿರುವುದು ಮಾತ್ರ ಬಹುತೇಕ ಯಾತ್ರಾ ಮತ್ತು ಪ್ರಸಿದ್ಧಿ ಪಡೆದ ಸ್ಥಳಗಳಲ್ಲಿ. ಕಾಟಾಚಾರಕ್ಕೆ ಎಂಬಂತೆ ಅಲ್ಲಿಲ್ಲಿ ಮೂರು ಎಪಿಎಂಸಿ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಯನ ನೆಪದಲ್ಲಿ ಸದಸ್ಯರ ಸ್ವಕಾರ್ಯ, ಸ್ವಾಮಿ ಕಾರ್ಯ ನಡೆಯುತ್ತಿದೆ. <br /> <br /> `ಎಪಿಎಂಸಿಯ ಈಗಿನ ಆಡಳಿತ ಮಂಡಳಿಯ ಎಲ್ಲ ಸದಸ್ಯರು ರೈತರಿಂದ ಆಯ್ಕೆಯಾಗದೇ ರಾಜಕಾರಣಿಗಳಿಂದ ನಾಮ ನಿರ್ದೇಶನಗೊಂಡವರು. ಇಂತವರಿಗೆ ರೈತರ ಪರವಾದ ಕಳಕಳಿಯಾದರೂ ಏನಿದ್ದೀತು~ ಎಂದು ರೈತರಾದ ಹೇಮಂತ, ಸುಂದರರಾಜ, ಕೋವಲನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. <br /> <br /> <strong>ಹಿಂದಿನ ಅಧ್ಯಯನ ಎಲ್ಲಿ?: </strong>ಅಧ್ಯಯನ ವಿಷಯವಾಗಿ ಎಪಿಎಂಸಿ ಸದಸ್ಯರು ಯಾತ್ರೆ ಮಾಡುವುದು ತಪ್ಪಲ್ಲ. ಆದರೆ ಪ್ರವಾಸದ ಸಮಯ, ಸಂದರ್ಭ, ಆಯ್ಕೆ ಮಾಡಿದ ರಾಜ್ಯದ ಎಪಿಎಂಸಿಗಳು ಯಾವ ಸಾಧನೆ ತೋರಿವೆ ಎಂಬ ಸಮೀಕ್ಷೆಯ ಮೂಲದಿಂದ ಯಾತ್ರೆ ಆಯೋಜನೆಗೊಂಡಿಲ್ಲ. <br /> <br /> ಕಳೆದ ಅವಧಿಯಲ್ಲಿ ಎಪಿಎಂಸಿ ಸದಸ್ಯರಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಹಣ ವ್ಯೆಯಿಸಿ ವಿದೇಶಿ ಯಾತ್ರೆ ಮಾಡಿಸಲಾಯಿತು. ಆದರೆ ಹೋಗಿ ಬಂದವರು ಸ್ಥಳೀಯ ಮಾರುಕಟ್ಟೆಯಲ್ಲಿ ಯಾವ ಬದಲಾವಣೆ ತಂದರು?. ಯಾವ ಶಿಫಾರಸ್ಸು ಮಾಡಿದರು? ಎಂಬ ವರದಿ ಇಂದಿಗೂ ಬಹಿರಂಗವಾಗಿಲ್ಲ.<br /> <br /> ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಎಪಿಎಂಸಿ ಮತ್ತೀಗ ಲಕ್ಷಾಂತರ ರೂಪಾಯಿ ಹಣ ವ್ಯೆಯಿಸಿ 14 ಸದಸ್ಯರಲ್ಲಿ 12 ಜನರಿಗೆ ಉತ್ತರ ಭಾರತ ಯಾತ್ರೆಗೆ ಕಳುಹಿಸಿರುವುದು ಎಷ್ಟು ಸರಿ ಎಂಬ ಚರ್ಚೆ ಸಾರ್ವಜನಿಕರಲ್ಲಿದೆ. ಅದಕ್ಕೆ ಎಪಿಎಂಸಿಯೇ ಉತ್ತರಿಸಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ನೀರಾವರಿ ಗಂಗಾವತಿ, ಮಳೆಯಾಶ್ರಿತ ಕನಕಗಿರಿ ಕ್ಷೇತ್ರದಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ಇತ್ತ ರೈತ, ಮೇವು, ನೀರಿಲ್ಲದೆ ಅತ್ತ ಜನ-ಜಾನುವಾರು ಸಂಕಷ್ಟದಲ್ಲಿದ್ದರೆ, ಎಪಿಎಂಸಿ ಸದಸ್ಯರು `ಅಧ್ಯಯನ~ ನೆಪದ ಮೋಜಿನ ಉತ್ತರ ಭಾರತ ಪ್ರವಾಸ ಬುಧವಾರದಿಂದ ಕೈಗೊಂಡಿದ್ದಾರೆ.<br /> <br /> ತಾಲ್ಲೂಕಿನಲ್ಲಿ ಬರ ಬಿದ್ದು ರೈತ ಜನ-ಜಾನುವಾರು ಪರದಾಡುತ್ತಿದ್ದರೆ, ರೈತರ ಹಣದಲ್ಲಿ ಮೋಜು ಮಾಡುವ ಜರೂರು ಏನಿತ್ತು..? ಕೃಷಿ ಸಂಧಿಗ್ಧತೆಯಲ್ಲಿದ್ದಾಗ ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಎಪಿಎಂಸಿ ಸದಸ್ಯರು ಮೋಜು ಮಾಡುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ.<br /> <br /> <strong>ಲಕ್ಷ ಲಕ್ಷ ಹಣ ಪೋಲು: </strong>ಗಂಗಾವತಿ ಎಪಿಎಂಸಿಯಿಂದ ಜುಲೈ 4ರಿಂದ 13ರವರೆಗೆ 12 ಸದಸ್ಯರಿಗೆ ಉತ್ತರ ಭಾರತದ ಜಮ್ಮು-ಕಾಶ್ಮೀರ, ಪಂಜಾಬ, ಅಮೃತಸರ, ದೆಹಲಿ, ಚಂಢಿ ೀಗಡ, ಹರಿದ್ವಾರ, ಆಗ್ರಾ, ಜೈಪುರ, ರಾಜಸ್ತಾನ ಮೊದಲಾದ ಸ್ಥಳಗಳಲ್ಲಿ 10 ದಿನದ ಯಾತ್ರೆ ಆಯೋಜಿಸಲಾಗಿದೆ. <br /> <br /> ಒಬ್ಬೊಬ್ಬ ಸದಸ್ಯರಿಗೆ ಕೇವಲ 41 ಸಾವಿರ ಹಣ ವ್ಯೆಯಿಸುತ್ತಿರುವುದಾಗಿ ಎಪಿಎಂಸಿ ಅಧಿಕಾರಿಕ ಮೂಲಗಳು ತಿಳಿಸುತ್ತಿವೆ. ಆದರೆ ವಿಮಾನಯಾನ, ಎಸಿ ವಸತಿ ಗೃಹ, ಭೂರಿಭೋಜನ, ಯಾತ್ರಾ ಸ್ಥಳಗಳ ವೀಕ್ಷಣೆಯ ವಾಹನ ವ್ಯವಸ್ಥೆಗೆ ಲಕ್ಷಾಂತರ ರೂಪಾಯಿ ವ್ಯೆಯಿಸಲಾಗುತ್ತಿದೆ.<br /> <br /> ಅಧ್ಯಯನ ಎಂಬ ನೆಪ: ಹೊರ ರಾಜ್ಯಗಳಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವುದು, ಅಲ್ಲಿ ಅಳವಡಿಸಿದ ತಾಂತ್ರಿಕತೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸದಸ್ಯರಿಗೆ ಉತ್ತರ ಭಾರತದ ಯಾತ್ರೆ ಆಯೋಜಿಸಲಾಗಿದೆ ಎನ್ನಲಾಗಿದೆ. <br /> <br /> ಆದರೆ ಸದಸ್ಯರು ಸಂಚರಿಸುತ್ತಿರುವುದು ಮಾತ್ರ ಬಹುತೇಕ ಯಾತ್ರಾ ಮತ್ತು ಪ್ರಸಿದ್ಧಿ ಪಡೆದ ಸ್ಥಳಗಳಲ್ಲಿ. ಕಾಟಾಚಾರಕ್ಕೆ ಎಂಬಂತೆ ಅಲ್ಲಿಲ್ಲಿ ಮೂರು ಎಪಿಎಂಸಿ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಯನ ನೆಪದಲ್ಲಿ ಸದಸ್ಯರ ಸ್ವಕಾರ್ಯ, ಸ್ವಾಮಿ ಕಾರ್ಯ ನಡೆಯುತ್ತಿದೆ. <br /> <br /> `ಎಪಿಎಂಸಿಯ ಈಗಿನ ಆಡಳಿತ ಮಂಡಳಿಯ ಎಲ್ಲ ಸದಸ್ಯರು ರೈತರಿಂದ ಆಯ್ಕೆಯಾಗದೇ ರಾಜಕಾರಣಿಗಳಿಂದ ನಾಮ ನಿರ್ದೇಶನಗೊಂಡವರು. ಇಂತವರಿಗೆ ರೈತರ ಪರವಾದ ಕಳಕಳಿಯಾದರೂ ಏನಿದ್ದೀತು~ ಎಂದು ರೈತರಾದ ಹೇಮಂತ, ಸುಂದರರಾಜ, ಕೋವಲನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. <br /> <br /> <strong>ಹಿಂದಿನ ಅಧ್ಯಯನ ಎಲ್ಲಿ?: </strong>ಅಧ್ಯಯನ ವಿಷಯವಾಗಿ ಎಪಿಎಂಸಿ ಸದಸ್ಯರು ಯಾತ್ರೆ ಮಾಡುವುದು ತಪ್ಪಲ್ಲ. ಆದರೆ ಪ್ರವಾಸದ ಸಮಯ, ಸಂದರ್ಭ, ಆಯ್ಕೆ ಮಾಡಿದ ರಾಜ್ಯದ ಎಪಿಎಂಸಿಗಳು ಯಾವ ಸಾಧನೆ ತೋರಿವೆ ಎಂಬ ಸಮೀಕ್ಷೆಯ ಮೂಲದಿಂದ ಯಾತ್ರೆ ಆಯೋಜನೆಗೊಂಡಿಲ್ಲ. <br /> <br /> ಕಳೆದ ಅವಧಿಯಲ್ಲಿ ಎಪಿಎಂಸಿ ಸದಸ್ಯರಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಹಣ ವ್ಯೆಯಿಸಿ ವಿದೇಶಿ ಯಾತ್ರೆ ಮಾಡಿಸಲಾಯಿತು. ಆದರೆ ಹೋಗಿ ಬಂದವರು ಸ್ಥಳೀಯ ಮಾರುಕಟ್ಟೆಯಲ್ಲಿ ಯಾವ ಬದಲಾವಣೆ ತಂದರು?. ಯಾವ ಶಿಫಾರಸ್ಸು ಮಾಡಿದರು? ಎಂಬ ವರದಿ ಇಂದಿಗೂ ಬಹಿರಂಗವಾಗಿಲ್ಲ.<br /> <br /> ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಎಪಿಎಂಸಿ ಮತ್ತೀಗ ಲಕ್ಷಾಂತರ ರೂಪಾಯಿ ಹಣ ವ್ಯೆಯಿಸಿ 14 ಸದಸ್ಯರಲ್ಲಿ 12 ಜನರಿಗೆ ಉತ್ತರ ಭಾರತ ಯಾತ್ರೆಗೆ ಕಳುಹಿಸಿರುವುದು ಎಷ್ಟು ಸರಿ ಎಂಬ ಚರ್ಚೆ ಸಾರ್ವಜನಿಕರಲ್ಲಿದೆ. ಅದಕ್ಕೆ ಎಪಿಎಂಸಿಯೇ ಉತ್ತರಿಸಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>