<p>ತಾಳವಾದ್ಯ ಕೇಂದ್ರದ ಈ ವರ್ಷದ ತಾಳ ವಾದ್ಯೋತ್ಸವದಲ್ಲಿ ಪಾಲ್ಘಾಟ್ ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವವೂ ಮಿಳಿತವಾಗಿರುವುದು ವಿಶೇಷ. ಭಾನುವಾರದಿಂದ ಭಾನುವಾರದವರೆಗೆ (ಜು.15ರಿಂದ 22) ನಡೆಯಲಿರುವ ಉತ್ಸವದಲ್ಲಿ ಐದು ಪ್ರಶಸ್ತಿಗಳನ್ನು ಪ್ರತಿಭಾವಂತ ಕಲಾವಿದರಿಗೆ ಪ್ರದಾನ ಮಾಡಲಾಗುವುದು.<br /> <strong><br /> ಮೃದಂಗ ಕಲಾ ಶಿರೋಮಣಿ</strong><br /> ಈ ವರ್ಷದ ಮಣಿ ಅಯ್ಯರ್ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಲಿರುವ ತಿರುವನಂತಪುರಂ ವಿ. ಸುರೇಂದ್ರನ್ (70) `ಗಾನಭೂಷಣಂ~ ಡಿಪ್ಲೊಮಾ ಪಡೆದಿರುವರಲ್ಲದೆ ಪಾಲ್ಘಾಟ್ ಮಣಿ ಅಯ್ಯರ್ ಅವರಲ್ಲಿ 11 ವರ್ಷ ಶಿಕ್ಷಣ ಪಡೆದು ತಂಜಾವೂರು ಬಾನಿಯಲ್ಲಿ ಪರಿಣತರಾಗಿದ್ದಾರೆ. <br /> <br /> ಚೆಂಬೈನಿಂದ ಚಿಟ್ಟಿಬಾಬುವರೆಗೆ ಮೂರು ತಲೆಮಾರಿನವರಿಗೆ ಮೃದಂಗ ಪಕ್ಕವಾದ್ಯ ನುಡಿಸಿರುವ ಅವರು ಬಾನುಲಿಯ ಎ-ಟಾಪ್ ಕಲಾವಿದರೂ ಹೌದು. ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಂಚಿಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಇದೀಗ ತಾಳವಾದ್ಯ ಉತ್ಸವದಲ್ಲಿ ಡಾ. ಎ.ಎಚ್. ರಾಮರಾವ್ ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ ಮೃದಂಗ ಕಲಾಶಿರೋಮಣಿ ಬಿರುದನ್ನೂ ಸುರೇಂದ್ರನ್ ಸ್ವೀಕರಿಸಲಿದ್ದಾರೆ.<br /> <br /> <strong>ಲಯಕಲಾ ನಿಪುಣ</strong><br /> ಈ ವರ್ಷ `ಪಳನಿ ಸುಬ್ರಹ್ಮಣ್ಯ ಪಿಳ್ಳೆ ಸ್ಮಾರಕ ಪ್ರಶಸ್ತಿ~ಯನ್ನು ಸ್ವೀಕರಿಸಲಿರುವ ತಿರುಚಿ ಜೆ. ವೆಂಕಟರಾಮನ್ ಅವರು ತಮ್ಮ ತಂದೆ ಕೆ.ವಿ. ಜಯರಾಮನ್ ಅಯ್ಯಂಗಾರ್ ಅವರಲ್ಲಿ ಪ್ರಾರಂಭಿಸಿ, ಆಲತ್ತೂರು ವೆಂಕಟೇಶ ಅಯ್ಯರ್ ಅವರಲ್ಲಿ ಪ್ರೌಢ ವ್ಯಾಸಂಗ ಪಡೆದರು. <br /> <br /> ತಿರುಚಿರಾಪಳ್ಳಿ ಆಕಾಶವಾಣಿ ನಿಲಯದ ಕಲಾವಿದರಾಗಿ ಮೂರು ದಶಕ ಸೇವೆ ಸಲ್ಲಿಸಿರುವರಲ್ಲದೆ ಅನೇಕ ಸಂಗೀತ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತಾಳವಾದ್ಯ ಉತ್ಸವದಲ್ಲಿ ಸುಧಾ ಆರ್. ರಾವ್ ಪ್ರಾಯೋಜಿಸಿರುವ ಪಳನಿ ಸ್ಮಾರಕ ಪ್ರಶಸ್ತಿಯೊಂದಿಗೆ `ಲಯಕಲಾ ನಿಪುಣ~ ಬಿರುದನ್ನು ವೆಂಕಟರಾಮನ್ ಪಡೆಯಲಿದ್ದಾರೆ.<br /> <br /> <strong>ಸಂಗೀತ ಕಲಾಭಿಜ್ಞ</strong><br /> `ಬೆಂಗಳೂರು ಕೆ. ವೆಂಕಟರಾಂ ಸ್ಮಾರಕ ಪ್ರಶಸ್ತಿ~ ಸ್ವೀಕರಿಸಲಿರುವ ಸೀತಾಲಕ್ಷ್ಮಿ ವೆಂಕಟೇಶನ್ ಅವರು ವೈದ್ಯನಾಥ ಅಯ್ಯರ್ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ಶಂಕರ ಅಯ್ಯರ್ ಅವರಲ್ಲಿ ಮುಂದುವರಿಸಿ, ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರಲ್ಲಿ ಪ್ರೌಢ ಪಾಠ ಪಡೆದರು. ಅವರ ಸಂಗೀತ ಸೇವೆಯನ್ನು ಮನ್ನಿಸಿ ಅನೇಕ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.<br /> <br /> <strong>ಅವುಗಳಲ್ಲಿ ಕೆಲವು: </strong>ಬೆಂಗಳೂರು ಗಾಯನ ಸಮಾಜದಿಂದ ಸಂಗೀತ ಕಲಾರತ್ನ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾಶ್ರಿ~, ರಾಜ್ಯೋತ್ಸವ ಪ್ರಶಸ್ತಿ. ಈಗ ಉತ್ಸವದಲ್ಲಿ ಡಾ. ಟಿ.ಎಸ್. ಸತ್ಯವತಿ ಮತ್ತು ಪದ್ಮಾ ಗುರುದತ್ ಅವರು ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಸಂಗೀತ ಕಲಾಭಿಜ್ಞ~ ಬಿರುದಿಗೂ ಭಾಜನರಾಗಲಿದ್ದಾರೆ.<br /> <br /> <strong>ಲಯಕಲಾ ಪ್ರತಿಭಾಮಣಿ</strong><br /> ಎಚ್.ಪಿ. ರಾಮಾಚಾರ್ ನಿರ್ಮಿಸಿದ ಎಚ್. ಪುಟ್ಟಾಚಾರ್ ಸ್ಮಾರಕ ಪ್ರಶಸ್ತಿ ಸ್ವೀಕರಿಸಲಿರುವ ಎಂ. ಗುರುರಾಜ್ ಸಂಗೀತದ ಮನೆತನದಲ್ಲೇ ಬಂದವರು. ವಿದ್ವಾನ್ ಎಂ. ವೆಂಕಟೇಶಾಚಾರ್ ಅವರ ಮಗನಾದ ಗುರುರಾಜ್ ಲಯವಾದ್ಯಗಳಲ್ಲಿ ಟಿ.ಎ.ಎಸ್. ಮಣಿ ಅವರ ಶಿಷ್ಯ. <br /> <br /> ಹಿರಿ ಕಿರಿಯ ಕಲಾವಿದರಿಗೆ ಮೃದಂಗ, ಮೋರ್ಚಿಂಗ್ ಪಕ್ಕವಾದ್ಯಗಳನ್ನು ನುಡಿಸಿರುವ ಅವರು ಕೆಲ ಕಾಲದಿಂದ ಬೆಂಗಳೂರು ಬಾನುಲಿ ನಿಲಯದ ಕಲಾವಿದರಾಗಿದ್ದಾರೆ. ತಾಳ ವಾದ್ಯೋತ್ಸವದಲ್ಲಿ ಬಿ.ಆರ್.ಲತಾ ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಲಯಕಲಾ ಪ್ರತಿಭಾಮಣಿ~ ಬಿರುದನ್ನೂ ಸ್ವೀಕರಿಸಲಿದ್ದಾರೆ.<br /> <br /> <strong>ಪ್ರತಿಭಾ ಪುರಸ್ಕಾರ</strong><br /> ಉತ್ತರ ಅಮೆರಿಕಾದ ಕರ್ನಾಟಕ ಸಂಗೀತ ಸಂಘದ ದತ್ತಿಯ ಬಹುಮಾನ ಪಡೆಯಲಿರುವ ಎ. ರಾಧೇಶ್ ಸಹ ಸಂಗೀತ ಕುಟುಂಬದಿಂದ ಬಂದವರು. ಪಿ.ಜಿ. ಲಕ್ಷ್ಮೀನಾರಾಯಣ ಅವರಲ್ಲಿ 15 ವರ್ಷಗಳ ಶಿಕ್ಷಣ ಪಡೆದಿರುವ ಅವರಿಗೆ ಆಕಾಶವಾಣಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಗಾಯನ ಸಮಾಜ, ಅಕಾಡೆಮಿ, `ಅನನ್ಯ~ ಸಂಸ್ಥೆಗಳಿಂದ ಬಹುಮಾನ-ಪುರಸ್ಕಾರಗಳನ್ನು ಪಡೆದಿರುತ್ತಾರೆ.<br /> <br /> ಮುಂದಿನ ಭಾನುವಾರ (ಜುಲೈ 22) ನಡೆಯಲಿರುವ ತಾಳ ವಾದ್ಯ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಗಳ ವಿತರಣೆ ಆಗಲಿವೆ.</p>.<p><strong>ತಾಳ ವಾದ್ಯೋತ್ಸವ</strong><br /> ಈ ವರ್ಷದ ತಾಳವಾದ್ಯೋತ್ಸವದಲ್ಲಿ ಕಛೇರಿಗಳಲ್ಲದೆ ಮಣಿ ಅಯ್ಯರ್ ಅವರಿಗೆ ಶ್ರದ್ಧಾಂಜಲಿಯೂ ಸಲ್ಲಲಿದೆ. ಲಯ ವಿನ್ಯಾಸ, ಪ್ರಾತ್ಯಕ್ಷಿಕೆ, ಪ್ರಶಸ್ತಿ ವಿತರಣೆ, ಜುಗಲ್ಬಂದಿ, ವಲ್ಲಭಂ ಕಲ್ಯಾಣ ಸುಂದರಂ ಅವರ ಶತಮಾನೋತ್ಸವ ಹಾಗೂ ವಿಚಾರ ಸಂಕಿರಣಗಳು ಜುಲೈ 15ರಿಂದ 22ರವರೆಗೆ ಗಾಯನ ಸಮಾಜದ ಸಭಾಂಗಣದಲ್ಲಿ ನಡೆಯಲಿವೆ.<br /> <br /> ಜು.15ರಂದು (ಭಾನುವಾರ) ಪರ್ಕಸಿವ್ ಆರ್ಟ್ ಸೆಂಟರ್: ಬೆಳಿಗ್ಗೆ 10ಕ್ಕೆ ತಾಳವಾದ್ಯೋತ್ಸವವನ್ನು ಹಿರಿಯ ಮೃದಂಗ ವಾದಕ ಡಾ. ಟಿ.ಕೆ. ಮೂರ್ತಿ ಉದ್ಘಾಟಿಸುವರು.<br /> <br /> ವಿದ್ವಾನ್ ಬಿ. ಕಮಲಾಕರ್ ರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಹಾಗೂ ವಿದ್ವಾನ್ ಬಿ.ಕೆ. ಚಂದ್ರಮೌಳಿ - ಮುಖ್ಯ ಅತಿಥಿ. ಬೆಳಿಗ್ಗೆ 11ಕ್ಕೆ ರುದ್ರಪಟ್ಟಣ ಸಹೋದರರು ಯುಗಳ ಗಾಯನ. ಸಂಜೆ 6-00 ಡಾ. ಆರ್.ಕೆ. ಶ್ರೀಕಂಠನ್ ಗಾಯನ <br /> <strong>ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಳವಾದ್ಯ ಕೇಂದ್ರದ ಈ ವರ್ಷದ ತಾಳ ವಾದ್ಯೋತ್ಸವದಲ್ಲಿ ಪಾಲ್ಘಾಟ್ ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವವೂ ಮಿಳಿತವಾಗಿರುವುದು ವಿಶೇಷ. ಭಾನುವಾರದಿಂದ ಭಾನುವಾರದವರೆಗೆ (ಜು.15ರಿಂದ 22) ನಡೆಯಲಿರುವ ಉತ್ಸವದಲ್ಲಿ ಐದು ಪ್ರಶಸ್ತಿಗಳನ್ನು ಪ್ರತಿಭಾವಂತ ಕಲಾವಿದರಿಗೆ ಪ್ರದಾನ ಮಾಡಲಾಗುವುದು.<br /> <strong><br /> ಮೃದಂಗ ಕಲಾ ಶಿರೋಮಣಿ</strong><br /> ಈ ವರ್ಷದ ಮಣಿ ಅಯ್ಯರ್ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಲಿರುವ ತಿರುವನಂತಪುರಂ ವಿ. ಸುರೇಂದ್ರನ್ (70) `ಗಾನಭೂಷಣಂ~ ಡಿಪ್ಲೊಮಾ ಪಡೆದಿರುವರಲ್ಲದೆ ಪಾಲ್ಘಾಟ್ ಮಣಿ ಅಯ್ಯರ್ ಅವರಲ್ಲಿ 11 ವರ್ಷ ಶಿಕ್ಷಣ ಪಡೆದು ತಂಜಾವೂರು ಬಾನಿಯಲ್ಲಿ ಪರಿಣತರಾಗಿದ್ದಾರೆ. <br /> <br /> ಚೆಂಬೈನಿಂದ ಚಿಟ್ಟಿಬಾಬುವರೆಗೆ ಮೂರು ತಲೆಮಾರಿನವರಿಗೆ ಮೃದಂಗ ಪಕ್ಕವಾದ್ಯ ನುಡಿಸಿರುವ ಅವರು ಬಾನುಲಿಯ ಎ-ಟಾಪ್ ಕಲಾವಿದರೂ ಹೌದು. ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಂಚಿಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಇದೀಗ ತಾಳವಾದ್ಯ ಉತ್ಸವದಲ್ಲಿ ಡಾ. ಎ.ಎಚ್. ರಾಮರಾವ್ ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ ಮೃದಂಗ ಕಲಾಶಿರೋಮಣಿ ಬಿರುದನ್ನೂ ಸುರೇಂದ್ರನ್ ಸ್ವೀಕರಿಸಲಿದ್ದಾರೆ.<br /> <br /> <strong>ಲಯಕಲಾ ನಿಪುಣ</strong><br /> ಈ ವರ್ಷ `ಪಳನಿ ಸುಬ್ರಹ್ಮಣ್ಯ ಪಿಳ್ಳೆ ಸ್ಮಾರಕ ಪ್ರಶಸ್ತಿ~ಯನ್ನು ಸ್ವೀಕರಿಸಲಿರುವ ತಿರುಚಿ ಜೆ. ವೆಂಕಟರಾಮನ್ ಅವರು ತಮ್ಮ ತಂದೆ ಕೆ.ವಿ. ಜಯರಾಮನ್ ಅಯ್ಯಂಗಾರ್ ಅವರಲ್ಲಿ ಪ್ರಾರಂಭಿಸಿ, ಆಲತ್ತೂರು ವೆಂಕಟೇಶ ಅಯ್ಯರ್ ಅವರಲ್ಲಿ ಪ್ರೌಢ ವ್ಯಾಸಂಗ ಪಡೆದರು. <br /> <br /> ತಿರುಚಿರಾಪಳ್ಳಿ ಆಕಾಶವಾಣಿ ನಿಲಯದ ಕಲಾವಿದರಾಗಿ ಮೂರು ದಶಕ ಸೇವೆ ಸಲ್ಲಿಸಿರುವರಲ್ಲದೆ ಅನೇಕ ಸಂಗೀತ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತಾಳವಾದ್ಯ ಉತ್ಸವದಲ್ಲಿ ಸುಧಾ ಆರ್. ರಾವ್ ಪ್ರಾಯೋಜಿಸಿರುವ ಪಳನಿ ಸ್ಮಾರಕ ಪ್ರಶಸ್ತಿಯೊಂದಿಗೆ `ಲಯಕಲಾ ನಿಪುಣ~ ಬಿರುದನ್ನು ವೆಂಕಟರಾಮನ್ ಪಡೆಯಲಿದ್ದಾರೆ.<br /> <br /> <strong>ಸಂಗೀತ ಕಲಾಭಿಜ್ಞ</strong><br /> `ಬೆಂಗಳೂರು ಕೆ. ವೆಂಕಟರಾಂ ಸ್ಮಾರಕ ಪ್ರಶಸ್ತಿ~ ಸ್ವೀಕರಿಸಲಿರುವ ಸೀತಾಲಕ್ಷ್ಮಿ ವೆಂಕಟೇಶನ್ ಅವರು ವೈದ್ಯನಾಥ ಅಯ್ಯರ್ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ಶಂಕರ ಅಯ್ಯರ್ ಅವರಲ್ಲಿ ಮುಂದುವರಿಸಿ, ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರಲ್ಲಿ ಪ್ರೌಢ ಪಾಠ ಪಡೆದರು. ಅವರ ಸಂಗೀತ ಸೇವೆಯನ್ನು ಮನ್ನಿಸಿ ಅನೇಕ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.<br /> <br /> <strong>ಅವುಗಳಲ್ಲಿ ಕೆಲವು: </strong>ಬೆಂಗಳೂರು ಗಾಯನ ಸಮಾಜದಿಂದ ಸಂಗೀತ ಕಲಾರತ್ನ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾಶ್ರಿ~, ರಾಜ್ಯೋತ್ಸವ ಪ್ರಶಸ್ತಿ. ಈಗ ಉತ್ಸವದಲ್ಲಿ ಡಾ. ಟಿ.ಎಸ್. ಸತ್ಯವತಿ ಮತ್ತು ಪದ್ಮಾ ಗುರುದತ್ ಅವರು ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಸಂಗೀತ ಕಲಾಭಿಜ್ಞ~ ಬಿರುದಿಗೂ ಭಾಜನರಾಗಲಿದ್ದಾರೆ.<br /> <br /> <strong>ಲಯಕಲಾ ಪ್ರತಿಭಾಮಣಿ</strong><br /> ಎಚ್.ಪಿ. ರಾಮಾಚಾರ್ ನಿರ್ಮಿಸಿದ ಎಚ್. ಪುಟ್ಟಾಚಾರ್ ಸ್ಮಾರಕ ಪ್ರಶಸ್ತಿ ಸ್ವೀಕರಿಸಲಿರುವ ಎಂ. ಗುರುರಾಜ್ ಸಂಗೀತದ ಮನೆತನದಲ್ಲೇ ಬಂದವರು. ವಿದ್ವಾನ್ ಎಂ. ವೆಂಕಟೇಶಾಚಾರ್ ಅವರ ಮಗನಾದ ಗುರುರಾಜ್ ಲಯವಾದ್ಯಗಳಲ್ಲಿ ಟಿ.ಎ.ಎಸ್. ಮಣಿ ಅವರ ಶಿಷ್ಯ. <br /> <br /> ಹಿರಿ ಕಿರಿಯ ಕಲಾವಿದರಿಗೆ ಮೃದಂಗ, ಮೋರ್ಚಿಂಗ್ ಪಕ್ಕವಾದ್ಯಗಳನ್ನು ನುಡಿಸಿರುವ ಅವರು ಕೆಲ ಕಾಲದಿಂದ ಬೆಂಗಳೂರು ಬಾನುಲಿ ನಿಲಯದ ಕಲಾವಿದರಾಗಿದ್ದಾರೆ. ತಾಳ ವಾದ್ಯೋತ್ಸವದಲ್ಲಿ ಬಿ.ಆರ್.ಲತಾ ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಲಯಕಲಾ ಪ್ರತಿಭಾಮಣಿ~ ಬಿರುದನ್ನೂ ಸ್ವೀಕರಿಸಲಿದ್ದಾರೆ.<br /> <br /> <strong>ಪ್ರತಿಭಾ ಪುರಸ್ಕಾರ</strong><br /> ಉತ್ತರ ಅಮೆರಿಕಾದ ಕರ್ನಾಟಕ ಸಂಗೀತ ಸಂಘದ ದತ್ತಿಯ ಬಹುಮಾನ ಪಡೆಯಲಿರುವ ಎ. ರಾಧೇಶ್ ಸಹ ಸಂಗೀತ ಕುಟುಂಬದಿಂದ ಬಂದವರು. ಪಿ.ಜಿ. ಲಕ್ಷ್ಮೀನಾರಾಯಣ ಅವರಲ್ಲಿ 15 ವರ್ಷಗಳ ಶಿಕ್ಷಣ ಪಡೆದಿರುವ ಅವರಿಗೆ ಆಕಾಶವಾಣಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಗಾಯನ ಸಮಾಜ, ಅಕಾಡೆಮಿ, `ಅನನ್ಯ~ ಸಂಸ್ಥೆಗಳಿಂದ ಬಹುಮಾನ-ಪುರಸ್ಕಾರಗಳನ್ನು ಪಡೆದಿರುತ್ತಾರೆ.<br /> <br /> ಮುಂದಿನ ಭಾನುವಾರ (ಜುಲೈ 22) ನಡೆಯಲಿರುವ ತಾಳ ವಾದ್ಯ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಗಳ ವಿತರಣೆ ಆಗಲಿವೆ.</p>.<p><strong>ತಾಳ ವಾದ್ಯೋತ್ಸವ</strong><br /> ಈ ವರ್ಷದ ತಾಳವಾದ್ಯೋತ್ಸವದಲ್ಲಿ ಕಛೇರಿಗಳಲ್ಲದೆ ಮಣಿ ಅಯ್ಯರ್ ಅವರಿಗೆ ಶ್ರದ್ಧಾಂಜಲಿಯೂ ಸಲ್ಲಲಿದೆ. ಲಯ ವಿನ್ಯಾಸ, ಪ್ರಾತ್ಯಕ್ಷಿಕೆ, ಪ್ರಶಸ್ತಿ ವಿತರಣೆ, ಜುಗಲ್ಬಂದಿ, ವಲ್ಲಭಂ ಕಲ್ಯಾಣ ಸುಂದರಂ ಅವರ ಶತಮಾನೋತ್ಸವ ಹಾಗೂ ವಿಚಾರ ಸಂಕಿರಣಗಳು ಜುಲೈ 15ರಿಂದ 22ರವರೆಗೆ ಗಾಯನ ಸಮಾಜದ ಸಭಾಂಗಣದಲ್ಲಿ ನಡೆಯಲಿವೆ.<br /> <br /> ಜು.15ರಂದು (ಭಾನುವಾರ) ಪರ್ಕಸಿವ್ ಆರ್ಟ್ ಸೆಂಟರ್: ಬೆಳಿಗ್ಗೆ 10ಕ್ಕೆ ತಾಳವಾದ್ಯೋತ್ಸವವನ್ನು ಹಿರಿಯ ಮೃದಂಗ ವಾದಕ ಡಾ. ಟಿ.ಕೆ. ಮೂರ್ತಿ ಉದ್ಘಾಟಿಸುವರು.<br /> <br /> ವಿದ್ವಾನ್ ಬಿ. ಕಮಲಾಕರ್ ರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಹಾಗೂ ವಿದ್ವಾನ್ ಬಿ.ಕೆ. ಚಂದ್ರಮೌಳಿ - ಮುಖ್ಯ ಅತಿಥಿ. ಬೆಳಿಗ್ಗೆ 11ಕ್ಕೆ ರುದ್ರಪಟ್ಟಣ ಸಹೋದರರು ಯುಗಳ ಗಾಯನ. ಸಂಜೆ 6-00 ಡಾ. ಆರ್.ಕೆ. ಶ್ರೀಕಂಠನ್ ಗಾಯನ <br /> <strong>ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>