<p><strong>ಮೈಸೂರು</strong>: `ಜೀವನಕ್ಕೆ ಒಂದು ರಿದಂ ಇರಬೇಕು, ಎಂದಿಗೂ ತಾಳ ತಪ್ಪಿದ ಬಾಳು ಆಗಬಾರದು~ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.<br /> <br /> ನಗರದ ಊಟಿ ರಸ್ತೆಯ ಜೆಎಸ್ಎಸ್ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. <br /> <br /> ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ಕೀಳರಿಮೆ ಪಡುವ ಅಗತ್ಯವಿಲ್ಲ. ಶೇ.80-90 ಅಂಕಗಳಿಸಿದವರು ಐಎಎಸ್, ಕೆಎಎಸ್ ಅಧಿಕಾರಿಗಳಾಗ ಬಹುದು. ಸಾಮಾನ್ಯ ವಿದ್ಯಾರ್ಥಿ ಮುಖ್ಯಮಂತ್ರಿ, ಪ್ರಧಾನಿಯೂ ಆಗಬಹುದು. ಇದು ಪ್ರಜಾಪ್ರಭುತ್ವದ ಶಕ್ತಿ. ಆದ್ದರಿಂದಲೇ ಕುವೆಂಪು ಶ್ರೀ ಸಾಮಾನ್ಯನನ್ನು `ಮಾನ್ಯ~ ಮಾಡುತ್ತಾರೆ. ನಿಮ್ಮಲ್ಲಿರುವ ಪ್ರತಿಭೆಯಿಂದ ತೆಂಡೂಲ್ಕರ್, ಪಿಟೀಲು ಚೌಡಯ್ಯ ಮುಂತಾದವರ ರೀತಿ ಉತ್ತಮ ಸ್ಥಾನಕ್ಕೆ ಏರಬಹುದು ಎಂದು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು. <br /> <br /> ಪ್ರಾಣಿಗಳಿಗೆ ಹೊಟ್ಟೆಗೆ ಹಿಟ್ಟು ಬೇಕು. ಆದರೆ ಮನುಷ್ಯನಿಗೆ ಹೊಟ್ಟೆಗೆ ಹಿಟ್ಟು-ಜುಟ್ಟಿಗೆ ಮಲ್ಲಿಗೆಯೂ ಬೇಕು. ಕನಸು ಕಾಣದೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಕನಸನ್ನು ನನಸು ಮಾಡುವ ಪ್ರಯತ್ನವೂ ಆಗಬೇಕು. `ನೀ ಏನಾದರೂ ಆಗು ಮೊದಲು ಮಾನವನಾಗು...~ ಎಂಬ ಗೀತೆಯನ್ನು ಹಾಡಿ, ನಂತರ ಅಹಂಕಾರ ತ್ಯಜಿಸಿ ವಿನಯವಂತರಾಗಿ, ಮಾನವೀಯ ಗುಣ ಬೆಳಸಿಕೊಳ್ಳಬೇಕು ಎಂಬ ಸಂದೇಶ ಈ ಹಾಡಿನಲ್ಲಿದೆ ಎಂದರು.<br /> <br /> ಭಾರತ ಬಹುಮುಖಿ ಸಂಸ್ಕೃತಿಯ ದೇಶ. ಆದ್ದರಿಂದಲೇ ಕಬೀರ, ಸಂತ ಶಿಶುನಾಳ ಷರೀಫ ಅಂತಹವರು ಈ ಮಣ್ಣಿನಿಂದಲೇ ಹುಟ್ಟಿ ಬರುತ್ತಾರೆ. ಭಾರತೀಯರ ಭಾವೈಕ್ಯತೆಗೆ ಸಾಕ್ಷಿಯಾದವರು ಷರೀಫರು. `ಕಾಡು ಕುದುರೆ ಓಡಿ ಬಂದಿತ್ತಾ~ ಎಂಬ ಗೀತೆ ನನಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. ಇದಕ್ಕೆ ಕಾರಣ ಕಂಬಾರರ ಕಾವ್ಯದಲ್ಲಿರುವ ಅದ್ಭುತ ಶಕ್ತಿ ಎಂದು ವಿನಯಪೂರ್ವಕವಾಗಿ ಗೀತೆ ರಚನಕಾರರನ್ನು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: `ಜೀವನಕ್ಕೆ ಒಂದು ರಿದಂ ಇರಬೇಕು, ಎಂದಿಗೂ ತಾಳ ತಪ್ಪಿದ ಬಾಳು ಆಗಬಾರದು~ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.<br /> <br /> ನಗರದ ಊಟಿ ರಸ್ತೆಯ ಜೆಎಸ್ಎಸ್ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. <br /> <br /> ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ಕೀಳರಿಮೆ ಪಡುವ ಅಗತ್ಯವಿಲ್ಲ. ಶೇ.80-90 ಅಂಕಗಳಿಸಿದವರು ಐಎಎಸ್, ಕೆಎಎಸ್ ಅಧಿಕಾರಿಗಳಾಗ ಬಹುದು. ಸಾಮಾನ್ಯ ವಿದ್ಯಾರ್ಥಿ ಮುಖ್ಯಮಂತ್ರಿ, ಪ್ರಧಾನಿಯೂ ಆಗಬಹುದು. ಇದು ಪ್ರಜಾಪ್ರಭುತ್ವದ ಶಕ್ತಿ. ಆದ್ದರಿಂದಲೇ ಕುವೆಂಪು ಶ್ರೀ ಸಾಮಾನ್ಯನನ್ನು `ಮಾನ್ಯ~ ಮಾಡುತ್ತಾರೆ. ನಿಮ್ಮಲ್ಲಿರುವ ಪ್ರತಿಭೆಯಿಂದ ತೆಂಡೂಲ್ಕರ್, ಪಿಟೀಲು ಚೌಡಯ್ಯ ಮುಂತಾದವರ ರೀತಿ ಉತ್ತಮ ಸ್ಥಾನಕ್ಕೆ ಏರಬಹುದು ಎಂದು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು. <br /> <br /> ಪ್ರಾಣಿಗಳಿಗೆ ಹೊಟ್ಟೆಗೆ ಹಿಟ್ಟು ಬೇಕು. ಆದರೆ ಮನುಷ್ಯನಿಗೆ ಹೊಟ್ಟೆಗೆ ಹಿಟ್ಟು-ಜುಟ್ಟಿಗೆ ಮಲ್ಲಿಗೆಯೂ ಬೇಕು. ಕನಸು ಕಾಣದೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಕನಸನ್ನು ನನಸು ಮಾಡುವ ಪ್ರಯತ್ನವೂ ಆಗಬೇಕು. `ನೀ ಏನಾದರೂ ಆಗು ಮೊದಲು ಮಾನವನಾಗು...~ ಎಂಬ ಗೀತೆಯನ್ನು ಹಾಡಿ, ನಂತರ ಅಹಂಕಾರ ತ್ಯಜಿಸಿ ವಿನಯವಂತರಾಗಿ, ಮಾನವೀಯ ಗುಣ ಬೆಳಸಿಕೊಳ್ಳಬೇಕು ಎಂಬ ಸಂದೇಶ ಈ ಹಾಡಿನಲ್ಲಿದೆ ಎಂದರು.<br /> <br /> ಭಾರತ ಬಹುಮುಖಿ ಸಂಸ್ಕೃತಿಯ ದೇಶ. ಆದ್ದರಿಂದಲೇ ಕಬೀರ, ಸಂತ ಶಿಶುನಾಳ ಷರೀಫ ಅಂತಹವರು ಈ ಮಣ್ಣಿನಿಂದಲೇ ಹುಟ್ಟಿ ಬರುತ್ತಾರೆ. ಭಾರತೀಯರ ಭಾವೈಕ್ಯತೆಗೆ ಸಾಕ್ಷಿಯಾದವರು ಷರೀಫರು. `ಕಾಡು ಕುದುರೆ ಓಡಿ ಬಂದಿತ್ತಾ~ ಎಂಬ ಗೀತೆ ನನಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. ಇದಕ್ಕೆ ಕಾರಣ ಕಂಬಾರರ ಕಾವ್ಯದಲ್ಲಿರುವ ಅದ್ಭುತ ಶಕ್ತಿ ಎಂದು ವಿನಯಪೂರ್ವಕವಾಗಿ ಗೀತೆ ರಚನಕಾರರನ್ನು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>