<p><strong>ಕೊಳ್ಳೇಗಾಲ: </strong> ದುರಸ್ತಿಯಲ್ಲಿರುವ ಕಾಂಪೌಂಡ್ ಸರ್ಕಾರಿ ಪ್ರಾಥಮಿಕ ಶಾಲೆ, ಆಯುರ್ವೇದ ಆಸ್ಪತ್ರೆ. ವ್ಯರ್ಥವಾಗಿರುವ ಕಿರುನೀರು ಯೋಜನೆ. ನೀರಿಗಾಗಿ ಬೋರ್ವೆಲ್ ಬಳಿ ಪರದಾಡುವ ಮಹಿಳೆಯರು.... <br /> ಇಂಥ ಸಮಸ್ಯೆಗಳ ಸರಮಾಲೆ ಕಂಡು ಬರುವುದು ಕೊಳ್ಳೇಗಾಲ ತಾಲ್ಲೂಕಿನ ತಿಮ್ಮರಾಜೀಪುರದಲ್ಲಿ. <br /> <br /> ಅಕ್ಕಪಕ್ಕದ ಗ್ರಾಮಗಳ ಮಕ್ಕಳಿಗೂ ಸೇರಿದಂತೆ ತಿಮ್ಮರಾಜೀಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಶಾಲಾ ಆವರಣದಲ್ಲಿಯೇ ಆಯುರ್ವೇದ ಆಸ್ಪತ್ರೆಯೂ ಇದೆ. ಶಾಲೆಗೆ ಈ ಹಿಂದೆ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದರ ಒಂದು ಭಾಗ ಕುಸಿದು ಬ್ದ್ದಿದು ಹಲವು ತಿಂಗಳು ಕಳೆದರೂ ಕಾಂಪೌಂಡ್ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ.<br /> <br /> ಶಾಲೆಯ ಮುಂದಿನ ರಸ್ತೆಯಲ್ಲೇ ಪ್ರತಿನಿತ್ಯ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ಕಾಡಿಗೆ ಹೋಗುತ್ತವೆ. ಈ ವೇಳೆಯಲ್ಲಿ ಶಾಲೆಯ ಆವರಣದೊಳಗೆ ನುಗ್ಗಿ ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತಿವೆ. <br /> <br /> ಅಲ್ಲದೆ ಹಸಿರೀಕರಣಕ್ಕೂ ತೊಂದರೆಯಾಗಿದೆ. ಶಾಲಾ ಆವರಣದಲ್ಲಿಯೇ ಕಿರುನೀರು ಸರಬರಾಜು ಘಟಕ ಇದೆ. ಇಲ್ಲಿ ನಿತ್ಯ ನೀರು ಸೋರುವುದರಿಂದ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ಇದರ ಬಳಿಯೇ ಆಯುರ್ವೇದ ಆಸ್ಪತ್ರೆ ಇರುವುದರಿಂದ ಈ ನೀರಿನ ಪಂಪ್ ಬಳಿ ಸ್ವಚ್ಛತೆ ಕಾಪಾಡುವ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ.<br /> <br /> ಗ್ರಾಮದ ಕೆಲವು ಚರಂಡಿಗಳು ಕಸಕಡ್ಡಿಗಳಿಂದ ತುಂಬಿ ನಾರುತ್ತಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಅಧಿಕವಾಗಿದೆ. ಚರಂಡಿಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂಬುದು ಮಹಿಳೆಯರ ಮನವಿ.<br /> <br /> ಅಲ್ಲದೆ, ಈಗ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮಹಿಳೆಯರು ಬೋರ್ವೆಲ್ನಲ್ಲೇ ನೀರನ್ನು ಪಡೆಯುವ ಸ್ಥಿತಿ ಒದಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಿರುನೀರು ಸರಬರಾಜು ಟ್ಯಾಂಕ್ಗೆ ನೀರು ಪೂರೈಸಲು ಕ್ರಮಕೈಗೊಂಡು ಈ ಸಮಸ್ಯೆಯನ್ನು ತಪ್ಪಿಸಬೇಕು ಎನ್ನುತ್ತಾರೆ ಸ್ವಸಹಾಯ ಸಂಘಗಳ ಮಹಿಳೆಯರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ: </strong> ದುರಸ್ತಿಯಲ್ಲಿರುವ ಕಾಂಪೌಂಡ್ ಸರ್ಕಾರಿ ಪ್ರಾಥಮಿಕ ಶಾಲೆ, ಆಯುರ್ವೇದ ಆಸ್ಪತ್ರೆ. ವ್ಯರ್ಥವಾಗಿರುವ ಕಿರುನೀರು ಯೋಜನೆ. ನೀರಿಗಾಗಿ ಬೋರ್ವೆಲ್ ಬಳಿ ಪರದಾಡುವ ಮಹಿಳೆಯರು.... <br /> ಇಂಥ ಸಮಸ್ಯೆಗಳ ಸರಮಾಲೆ ಕಂಡು ಬರುವುದು ಕೊಳ್ಳೇಗಾಲ ತಾಲ್ಲೂಕಿನ ತಿಮ್ಮರಾಜೀಪುರದಲ್ಲಿ. <br /> <br /> ಅಕ್ಕಪಕ್ಕದ ಗ್ರಾಮಗಳ ಮಕ್ಕಳಿಗೂ ಸೇರಿದಂತೆ ತಿಮ್ಮರಾಜೀಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಶಾಲಾ ಆವರಣದಲ್ಲಿಯೇ ಆಯುರ್ವೇದ ಆಸ್ಪತ್ರೆಯೂ ಇದೆ. ಶಾಲೆಗೆ ಈ ಹಿಂದೆ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದರ ಒಂದು ಭಾಗ ಕುಸಿದು ಬ್ದ್ದಿದು ಹಲವು ತಿಂಗಳು ಕಳೆದರೂ ಕಾಂಪೌಂಡ್ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ.<br /> <br /> ಶಾಲೆಯ ಮುಂದಿನ ರಸ್ತೆಯಲ್ಲೇ ಪ್ರತಿನಿತ್ಯ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ಕಾಡಿಗೆ ಹೋಗುತ್ತವೆ. ಈ ವೇಳೆಯಲ್ಲಿ ಶಾಲೆಯ ಆವರಣದೊಳಗೆ ನುಗ್ಗಿ ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತಿವೆ. <br /> <br /> ಅಲ್ಲದೆ ಹಸಿರೀಕರಣಕ್ಕೂ ತೊಂದರೆಯಾಗಿದೆ. ಶಾಲಾ ಆವರಣದಲ್ಲಿಯೇ ಕಿರುನೀರು ಸರಬರಾಜು ಘಟಕ ಇದೆ. ಇಲ್ಲಿ ನಿತ್ಯ ನೀರು ಸೋರುವುದರಿಂದ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ಇದರ ಬಳಿಯೇ ಆಯುರ್ವೇದ ಆಸ್ಪತ್ರೆ ಇರುವುದರಿಂದ ಈ ನೀರಿನ ಪಂಪ್ ಬಳಿ ಸ್ವಚ್ಛತೆ ಕಾಪಾಡುವ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ.<br /> <br /> ಗ್ರಾಮದ ಕೆಲವು ಚರಂಡಿಗಳು ಕಸಕಡ್ಡಿಗಳಿಂದ ತುಂಬಿ ನಾರುತ್ತಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಅಧಿಕವಾಗಿದೆ. ಚರಂಡಿಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂಬುದು ಮಹಿಳೆಯರ ಮನವಿ.<br /> <br /> ಅಲ್ಲದೆ, ಈಗ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮಹಿಳೆಯರು ಬೋರ್ವೆಲ್ನಲ್ಲೇ ನೀರನ್ನು ಪಡೆಯುವ ಸ್ಥಿತಿ ಒದಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಿರುನೀರು ಸರಬರಾಜು ಟ್ಯಾಂಕ್ಗೆ ನೀರು ಪೂರೈಸಲು ಕ್ರಮಕೈಗೊಂಡು ಈ ಸಮಸ್ಯೆಯನ್ನು ತಪ್ಪಿಸಬೇಕು ಎನ್ನುತ್ತಾರೆ ಸ್ವಸಹಾಯ ಸಂಘಗಳ ಮಹಿಳೆಯರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>