<p><strong>ತಿರುವನಂತಪುರ (ಪಿಟಿಐ): </strong>ತಿರುವಾಂಕೂರು ರಾಜವಂಶಸ್ಥ ಉತ್ರಾಡಂ ತಿರುನಾಳ್ ಮಾರ್ತಾಂಡವರ್ಮ ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.<br /> <br /> 91 ವರ್ಷದ ವರ್ಮ ಸುಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಜೀರ್ಣಾಂಗನಾಳದ ರಕ್ತಸ್ರಾವದ ಕಾರಣ ಕಳೆದ ವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕುಂಟುಂಬ ಮೂಲಗಳು ತಿಳಿಸಿವೆ.<br /> <br /> ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಇವರ ಪತ್ನಿ ಈ ಮೊದಲೇ ಮರಣ ಹೊಂದಿದ್ದಾರೆ.<br /> <br /> ತಿರುವಾಂಕೂರು ಸಂಸ್ಥಾನದ ಕಡೆಯ ರಾಜರಾಗಿದ್ದ ಇವರ ಹಿರಿಯ ಸಹೋದರ ಚಿತಿರಾ ತಿರುನಾಳ್ ಬಲರಾಮ ವರ್ಮಾ 1991ರಲ್ಲಿ ನಿಧನರಾದ ನಂತರ ಮಾರ್ತಾಂಡ ವರ್ಮ ರಾಜಮನೆತನದ ಮುಖ್ಯಸ್ಥರಾಗಿದ್ದರು.<br /> <br /> 2011ರಲ್ಲಿ ಪದ್ಮನಾಭಸ್ವಾಮಿ ದೇವಾಲಯದ ನೆಲಮಾಳಿಗೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾದಾಗ ದೇವಸ್ಥಾನ ಮತ್ತು ರಾಜಮನೆತನ ಎರಡೂ ಪ್ರಸಿದ್ಧಿಗೆ ಬಂದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ (ಪಿಟಿಐ): </strong>ತಿರುವಾಂಕೂರು ರಾಜವಂಶಸ್ಥ ಉತ್ರಾಡಂ ತಿರುನಾಳ್ ಮಾರ್ತಾಂಡವರ್ಮ ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.<br /> <br /> 91 ವರ್ಷದ ವರ್ಮ ಸುಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಜೀರ್ಣಾಂಗನಾಳದ ರಕ್ತಸ್ರಾವದ ಕಾರಣ ಕಳೆದ ವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕುಂಟುಂಬ ಮೂಲಗಳು ತಿಳಿಸಿವೆ.<br /> <br /> ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಇವರ ಪತ್ನಿ ಈ ಮೊದಲೇ ಮರಣ ಹೊಂದಿದ್ದಾರೆ.<br /> <br /> ತಿರುವಾಂಕೂರು ಸಂಸ್ಥಾನದ ಕಡೆಯ ರಾಜರಾಗಿದ್ದ ಇವರ ಹಿರಿಯ ಸಹೋದರ ಚಿತಿರಾ ತಿರುನಾಳ್ ಬಲರಾಮ ವರ್ಮಾ 1991ರಲ್ಲಿ ನಿಧನರಾದ ನಂತರ ಮಾರ್ತಾಂಡ ವರ್ಮ ರಾಜಮನೆತನದ ಮುಖ್ಯಸ್ಥರಾಗಿದ್ದರು.<br /> <br /> 2011ರಲ್ಲಿ ಪದ್ಮನಾಭಸ್ವಾಮಿ ದೇವಾಲಯದ ನೆಲಮಾಳಿಗೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾದಾಗ ದೇವಸ್ಥಾನ ಮತ್ತು ರಾಜಮನೆತನ ಎರಡೂ ಪ್ರಸಿದ್ಧಿಗೆ ಬಂದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>