<p><strong>ನವದೆಹಲಿ (ಪಿಟಿಐ):</strong> ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್ಯಸಭಾ ಸದಸ್ಯ ಅಮರ್ಸಿಂಗ್ ಅವರನ್ನು ಜೈಲಿನಲ್ಲಿ ನೈರ್ಮಲ್ಯ ಕಾಯ್ದುಕೊಂಡಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ದೆಹಲಿ ಕೋರ್ಟ್ಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ.<br /> <br /> ಆರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಕೋರಿ ಅಮರ್ಸಿಂಗ್ ಅರ್ಜಿ ಸಲ್ಲಿಸಿದ್ದರು.<br /> ವಿಶೇಷ ನ್ಯಾಯಮೂರ್ತಿ ಸಂಗೀತಾ ಧಿಂಗ್ರ ಸೆಹ್ಗಲ್ ಅವರಿಗೆ ಜೈಲಿನ ಅಧಿಕಾರಿಗಳು ಫ್ಯಾಕ್ಸ್ ಮೂಲಕ ವರದಿ ಸಲ್ಲಿಸಿದ್ದಾರೆ. ಸಿಂಗ್ ಅವರ ಕೆಲವು ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಇನ್ನೂ ಬರಬೇಕಿದೆ ಎಂದೂ ವರದಿ ಹೇಳಿದೆ.<br /> <br /> ವರದಿಯನ್ನು ಸ್ವೀಕರಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಈ ತಿಂಗಳ 12ಕ್ಕೆ ನಿಗದಿಗೊಳಿಸಿತು ಅಲ್ಲದೆ ಎಲ್ಲಾ ವೈದ್ಯಕೀಯ ವರದಿಗಳನ್ನು ಸೋಮವಾರ ಬೆಳಿಗ್ಗೆ 11ರ ವೇಳೆಗೆ ಸಲ್ಲಿಸುವಂತೆ ಕೂಡ ಜೈಲಿನ ಅಧಿಕಾರಿಗಳಿಗೆ ಸೂಚಿಸಿತು.<br /> <br /> `ಅಮರ್ಸಿಂಗ್ ಅವರನ್ನು ಪರೀಕ್ಷಿಸುತ್ತಿರುವ ವೈದ್ಯರ ಪ್ರಕಾರ, ರಕ್ತ ಮತ್ತು ಮೂತ್ರ ಪರೀಕ್ಷೆಯಂತಹ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಸಲಹೆ ನೀಡಲಾಗಿದೆ. ಇವುಗಳ ಫಲಿತಾಂಶ ಇನ್ನೂ ಬರಬೇಕಿದ್ದು ಈ ವರದಿಯನ್ನು ಈ ತಿಂಗಳ 12ರಂದು ಬೆಳಿಗ್ಗೆ 11ರ ವೇಳೆಗೆ ಸಲ್ಲಿಸಬೇಕು~ ಎಂದು ನ್ಯಾಯಮೂರ್ತಿ ಹೇಳಿದರು.<br /> <br /> ತುರ್ತು ಸ್ಥಿತಿಯಲ್ಲಿ ರೋಗಿಗಳನ್ನು ಸೂಕ್ತ ಆಸ್ಪತ್ರೆಗೆ ಕೊಂಡೊಯ್ಯಲು ಜೈಲಿನ ಆಸ್ಪತ್ರೆಯು ಸುಸಜ್ಜಿತವಾದ ಆಂಬುಲೆನ್ಸ್ ಹೊಂದಿದೆ ಎಂದೂ ಜೈಲಿನ ಅಧಿಕಾರಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಈ ತಿಂಗಳ 6ರಂದು ಬಂಧನಕ್ಕೆ ಒಳಗಾದ ಸಿಂಗ್ ಅವರನ್ನು ಜೈಲ್ ನಂಬರ್ ಮೂರರ ನಾಲ್ಕನೇ ವಾರ್ಡ್ನಲ್ಲಿ ಇರಿಸಲಾಗಿದೆ. <br /> <br /> ಇಲ್ಲಿ 20 ಕೋಣೆಗಳು ಇವೆ. ಪ್ರತಿ ಕೋಣೆಗೂ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನಗೃಹವಿದೆ ಎಂದು ಹೇಳಿದ್ದಾರೆ.<br /> ವೈದ್ಯಕೀಯ ಪರೀಕ್ಷೆಗಾಗಿ ಈ ಮೊದಲು ತಮ್ಮ ರಕ್ತ ನೀಡಲು ನಿರಾಕರಿಸಿದ್ದ ಸಿಂಗ್ ಶುಕ್ರವಾರ ಬೆಳಿಗ್ಗೆ ಇದಕ್ಕೆ ಒಪ್ಪಿಕೊಂಡರು ಎಂದು ವರದಿ ಹೇಳಿದೆ.<br /> <br /> ಕಳೆದ ಮೂರು ದಿನಗಳಲ್ಲಿ ಸಿಂಗ್ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.`ವರದಿಗಳು ಸಮಗ್ರವಾಗಿಲ್ಲ, ಅವಸರದಲ್ಲಿ ಸಿದ್ಧಪಡಿಸಿರುವಂತಿದೆ, ಜೈಲಿನ ಅಧೀಕ್ಷರ ಅಭಿಪ್ರಾಯವನ್ನು ಆಧಾರವಾಗಿರಿಸಿಕೊಳ್ಳಲು ಸಾಧ್ಯವಿಲ್ಲ~ ಎಂದು ಸಿಂಗ್ ಪರ ವಕೀಲ ಹರಿಹರನ್ ಕೋರ್ಟ್ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್ಯಸಭಾ ಸದಸ್ಯ ಅಮರ್ಸಿಂಗ್ ಅವರನ್ನು ಜೈಲಿನಲ್ಲಿ ನೈರ್ಮಲ್ಯ ಕಾಯ್ದುಕೊಂಡಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ದೆಹಲಿ ಕೋರ್ಟ್ಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ.<br /> <br /> ಆರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಕೋರಿ ಅಮರ್ಸಿಂಗ್ ಅರ್ಜಿ ಸಲ್ಲಿಸಿದ್ದರು.<br /> ವಿಶೇಷ ನ್ಯಾಯಮೂರ್ತಿ ಸಂಗೀತಾ ಧಿಂಗ್ರ ಸೆಹ್ಗಲ್ ಅವರಿಗೆ ಜೈಲಿನ ಅಧಿಕಾರಿಗಳು ಫ್ಯಾಕ್ಸ್ ಮೂಲಕ ವರದಿ ಸಲ್ಲಿಸಿದ್ದಾರೆ. ಸಿಂಗ್ ಅವರ ಕೆಲವು ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಇನ್ನೂ ಬರಬೇಕಿದೆ ಎಂದೂ ವರದಿ ಹೇಳಿದೆ.<br /> <br /> ವರದಿಯನ್ನು ಸ್ವೀಕರಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಈ ತಿಂಗಳ 12ಕ್ಕೆ ನಿಗದಿಗೊಳಿಸಿತು ಅಲ್ಲದೆ ಎಲ್ಲಾ ವೈದ್ಯಕೀಯ ವರದಿಗಳನ್ನು ಸೋಮವಾರ ಬೆಳಿಗ್ಗೆ 11ರ ವೇಳೆಗೆ ಸಲ್ಲಿಸುವಂತೆ ಕೂಡ ಜೈಲಿನ ಅಧಿಕಾರಿಗಳಿಗೆ ಸೂಚಿಸಿತು.<br /> <br /> `ಅಮರ್ಸಿಂಗ್ ಅವರನ್ನು ಪರೀಕ್ಷಿಸುತ್ತಿರುವ ವೈದ್ಯರ ಪ್ರಕಾರ, ರಕ್ತ ಮತ್ತು ಮೂತ್ರ ಪರೀಕ್ಷೆಯಂತಹ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಸಲಹೆ ನೀಡಲಾಗಿದೆ. ಇವುಗಳ ಫಲಿತಾಂಶ ಇನ್ನೂ ಬರಬೇಕಿದ್ದು ಈ ವರದಿಯನ್ನು ಈ ತಿಂಗಳ 12ರಂದು ಬೆಳಿಗ್ಗೆ 11ರ ವೇಳೆಗೆ ಸಲ್ಲಿಸಬೇಕು~ ಎಂದು ನ್ಯಾಯಮೂರ್ತಿ ಹೇಳಿದರು.<br /> <br /> ತುರ್ತು ಸ್ಥಿತಿಯಲ್ಲಿ ರೋಗಿಗಳನ್ನು ಸೂಕ್ತ ಆಸ್ಪತ್ರೆಗೆ ಕೊಂಡೊಯ್ಯಲು ಜೈಲಿನ ಆಸ್ಪತ್ರೆಯು ಸುಸಜ್ಜಿತವಾದ ಆಂಬುಲೆನ್ಸ್ ಹೊಂದಿದೆ ಎಂದೂ ಜೈಲಿನ ಅಧಿಕಾರಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಈ ತಿಂಗಳ 6ರಂದು ಬಂಧನಕ್ಕೆ ಒಳಗಾದ ಸಿಂಗ್ ಅವರನ್ನು ಜೈಲ್ ನಂಬರ್ ಮೂರರ ನಾಲ್ಕನೇ ವಾರ್ಡ್ನಲ್ಲಿ ಇರಿಸಲಾಗಿದೆ. <br /> <br /> ಇಲ್ಲಿ 20 ಕೋಣೆಗಳು ಇವೆ. ಪ್ರತಿ ಕೋಣೆಗೂ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನಗೃಹವಿದೆ ಎಂದು ಹೇಳಿದ್ದಾರೆ.<br /> ವೈದ್ಯಕೀಯ ಪರೀಕ್ಷೆಗಾಗಿ ಈ ಮೊದಲು ತಮ್ಮ ರಕ್ತ ನೀಡಲು ನಿರಾಕರಿಸಿದ್ದ ಸಿಂಗ್ ಶುಕ್ರವಾರ ಬೆಳಿಗ್ಗೆ ಇದಕ್ಕೆ ಒಪ್ಪಿಕೊಂಡರು ಎಂದು ವರದಿ ಹೇಳಿದೆ.<br /> <br /> ಕಳೆದ ಮೂರು ದಿನಗಳಲ್ಲಿ ಸಿಂಗ್ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.`ವರದಿಗಳು ಸಮಗ್ರವಾಗಿಲ್ಲ, ಅವಸರದಲ್ಲಿ ಸಿದ್ಧಪಡಿಸಿರುವಂತಿದೆ, ಜೈಲಿನ ಅಧೀಕ್ಷರ ಅಭಿಪ್ರಾಯವನ್ನು ಆಧಾರವಾಗಿರಿಸಿಕೊಳ್ಳಲು ಸಾಧ್ಯವಿಲ್ಲ~ ಎಂದು ಸಿಂಗ್ ಪರ ವಕೀಲ ಹರಿಹರನ್ ಕೋರ್ಟ್ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>