<p>ಪಾಂಡವಪುರ: ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿನ ಪೈಪ್ ತುಕ್ಕುಹಿಡಿದು ರಂಧ್ರವಾಗಿದ್ದರೂ ಸರಿಪಡಿಸಿದ ಕಾರಣ ಮೂರು ದಿನಗಳಿಂದ ಕಲುಷಿತ ನೀರು ಕುಡಿದ ಗ್ರಾಮದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾ ಗುತ್ತಿರುವುದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.<br /> <br /> ಮೂರು ದಿನಗಳಿಂದ ಮಕ್ಕಳು ಮಹಿಳೆಯರೂ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಗ್ರಾಮದ ಕಿರಣ್, ಮಲ್ಲಿಕಾರ್ಜುನ, ಭಾಗ್ಯಮ್ಮ, ಶಕುಂತಲಾ, ಮಂಜುಳ, ಮಂಜುನಾಥ್, ಸತೀಶ್, ಜಯರಾಮ್, ಜಯಮ್ಮ, ಶಾಂತ, ಪ್ರವೀಣ್ಕುಮಾರ್, ಸ್ವಾಮಿಶೆಟ್ಟಿ, ಪುಟ್ಟಮ್ಮ, ಶಿವಕುಮಾರ್, ಜಗದೀಶ್ ಸೇರಿದಂತೆ ಕೆಲವರು ಮೈಸೂರಿನ ಇಡಿ ಆಸ್ಪತ್ರೆಯಲ್ಲಿ ಮತ್ತೆ ಕೆಲವರು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಚರಂಡಿ ನೀರು ಸೇರ್ಪಡೆ: ಗ್ರಾಮದಲ್ಲಿರುವ ಕುಡಿಯುವ ನೀರಿನ ಸರಬರಾಜಿನ ಪೈಪ್ಲೈನ್ ತುಕ್ಕುಹಿಡಿದು ಸಣ್ಣರಂಧ್ರವಾಗಿದ್ದರೂ ಅಧಿಕಾರಿಗಳು ಗಮನಿಸದೆ ಇದ್ದುದರಿಂದ ಚರಂಡಿನೀರು ಪೈಪ್ಲೈನ್ಗೆ ಸೇರಿದ್ದರಿಂದ ಕುಡಿಯುವ ನೀರು ಕಲ್ಮಷವಾಗಿದೆ. ಈ ನೀರನ್ನೆ ಕುಡಿದ ಜನರು ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದಾರೆ. <br /> <br /> ಸ್ವಚ್ಛತೆಯ ಕೊರತೆ: ಗ್ರಾಮದೊಳಗಡೆಯೇ ತಿಪ್ಪೆಗುಂಡಿಗಳು ರಾಶಿ ರಾಶಿಯಾಗಿ ಬಿದ್ದಿದ್ದು ಇದರ ವಿಲೇವಾರಿಗೆ ಗ್ರಾಮಪಂಚಾಯಿತಿ ಮುಂದಾಗಿಲ್ಲ. ಎಲ್ಲೆಡೆ ಅನ್ಯೆರ್ಮಲ್ಯ ತಾಂಡವವಾಡುತ್ತಿದೆ. ಚರಂಡಿಗಳನ್ನು ಸ್ವಚ್ಚಗೊಳಿಸಿ ಹಲವು ದಿನಗಳೇ ಆಗಿರುವುದರಿಂದ ಗಬ್ಬುವಾಸನೆ ಬೀರುತ್ತಿದೆ. ಕುಡಿಯುವ ನೀರಿನ ಟ್ಯಾಂಕ್ ಸ್ಚಚ್ಛತೆಯ ಭಾಗ್ಯ ಕಂಡಿಲ್ಲ. <br /> <br /> ಕ್ರಮಕ್ಕೆ ಒತ್ತಾಯ<br /> ಗ್ರಾಮ ಪಂಚಾಯಿತಿಯ ಬೇಜಾವಾಬ್ದಾರಿತನದಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಸರಿಪಡಿಸದೆ ಹಾಗೂ ಚರಂಡಿಗಳನ್ನು ಸ್ವಚ್ಚತೆಗೊಳಿಸದೆ ಇದ್ದುದರಿಂದ ಕಲುಷಿತ ನೀರನ್ನು ಕುಡಿದ ಜನರು ಅಸ್ವಸ್ಥರಾಗಬೇಕಾಗಿ ಬಂತು ಎಂದು ಗ್ರಾಮಸ್ಥರಾದ ಅರುಣ್ಕುಮಾರ್, ರವಿ. ಚಲುವೇಗೌಡ, ಜಯಮ್ಮ, ಸಾವಿತ್ರಮ್ಮ ಸೇರಿದಂತೆ ಅನೇಕರು ದೂರಿದ್ದಾರೆ.<br /> <br /> ಯುವಕ ನೇಣಿಗೆ ಶರಣು<br /> ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.<br /> <br /> ಹಾರೋಹಳ್ಳಿ ಗ್ರಾಮದ ಹೇಮಾವತಿ ಬಡಾವಣೆಯ ನಿವಾಸಿ ನಾರಾಯಣಗೌಡ ಅವರ ಪುತ್ರ ರವಿ (28) ಎಂಬುವರೆ ಆತ್ಮಹತ್ಯೆಗೆ ಶರಣಾಗಿದ್ದಾರೆ.<br /> <br /> ಮನೆಯಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ಮನೆಯ ಹಿಂಭಾಗದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.<br /> <br /> ಆತ್ಮಹತ್ಯೆಗೆ ಶರಣಾಗಿರುವ ರವಿ ಕಳೆದ ಮೇ 24ರಂದು ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದ ಕಾಳೇಗೌಡ ಅವರ ಪುತ್ರಿ ದಿವ್ಯರನ್ನು ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ಪೊಲೀಸ್ಠಾಣೆಯಲ್ಲಿ ದಾಖಲಾಗಿರುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾಂಡವಪುರ: ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿನ ಪೈಪ್ ತುಕ್ಕುಹಿಡಿದು ರಂಧ್ರವಾಗಿದ್ದರೂ ಸರಿಪಡಿಸಿದ ಕಾರಣ ಮೂರು ದಿನಗಳಿಂದ ಕಲುಷಿತ ನೀರು ಕುಡಿದ ಗ್ರಾಮದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾ ಗುತ್ತಿರುವುದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.<br /> <br /> ಮೂರು ದಿನಗಳಿಂದ ಮಕ್ಕಳು ಮಹಿಳೆಯರೂ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಗ್ರಾಮದ ಕಿರಣ್, ಮಲ್ಲಿಕಾರ್ಜುನ, ಭಾಗ್ಯಮ್ಮ, ಶಕುಂತಲಾ, ಮಂಜುಳ, ಮಂಜುನಾಥ್, ಸತೀಶ್, ಜಯರಾಮ್, ಜಯಮ್ಮ, ಶಾಂತ, ಪ್ರವೀಣ್ಕುಮಾರ್, ಸ್ವಾಮಿಶೆಟ್ಟಿ, ಪುಟ್ಟಮ್ಮ, ಶಿವಕುಮಾರ್, ಜಗದೀಶ್ ಸೇರಿದಂತೆ ಕೆಲವರು ಮೈಸೂರಿನ ಇಡಿ ಆಸ್ಪತ್ರೆಯಲ್ಲಿ ಮತ್ತೆ ಕೆಲವರು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಚರಂಡಿ ನೀರು ಸೇರ್ಪಡೆ: ಗ್ರಾಮದಲ್ಲಿರುವ ಕುಡಿಯುವ ನೀರಿನ ಸರಬರಾಜಿನ ಪೈಪ್ಲೈನ್ ತುಕ್ಕುಹಿಡಿದು ಸಣ್ಣರಂಧ್ರವಾಗಿದ್ದರೂ ಅಧಿಕಾರಿಗಳು ಗಮನಿಸದೆ ಇದ್ದುದರಿಂದ ಚರಂಡಿನೀರು ಪೈಪ್ಲೈನ್ಗೆ ಸೇರಿದ್ದರಿಂದ ಕುಡಿಯುವ ನೀರು ಕಲ್ಮಷವಾಗಿದೆ. ಈ ನೀರನ್ನೆ ಕುಡಿದ ಜನರು ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದಾರೆ. <br /> <br /> ಸ್ವಚ್ಛತೆಯ ಕೊರತೆ: ಗ್ರಾಮದೊಳಗಡೆಯೇ ತಿಪ್ಪೆಗುಂಡಿಗಳು ರಾಶಿ ರಾಶಿಯಾಗಿ ಬಿದ್ದಿದ್ದು ಇದರ ವಿಲೇವಾರಿಗೆ ಗ್ರಾಮಪಂಚಾಯಿತಿ ಮುಂದಾಗಿಲ್ಲ. ಎಲ್ಲೆಡೆ ಅನ್ಯೆರ್ಮಲ್ಯ ತಾಂಡವವಾಡುತ್ತಿದೆ. ಚರಂಡಿಗಳನ್ನು ಸ್ವಚ್ಚಗೊಳಿಸಿ ಹಲವು ದಿನಗಳೇ ಆಗಿರುವುದರಿಂದ ಗಬ್ಬುವಾಸನೆ ಬೀರುತ್ತಿದೆ. ಕುಡಿಯುವ ನೀರಿನ ಟ್ಯಾಂಕ್ ಸ್ಚಚ್ಛತೆಯ ಭಾಗ್ಯ ಕಂಡಿಲ್ಲ. <br /> <br /> ಕ್ರಮಕ್ಕೆ ಒತ್ತಾಯ<br /> ಗ್ರಾಮ ಪಂಚಾಯಿತಿಯ ಬೇಜಾವಾಬ್ದಾರಿತನದಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಸರಿಪಡಿಸದೆ ಹಾಗೂ ಚರಂಡಿಗಳನ್ನು ಸ್ವಚ್ಚತೆಗೊಳಿಸದೆ ಇದ್ದುದರಿಂದ ಕಲುಷಿತ ನೀರನ್ನು ಕುಡಿದ ಜನರು ಅಸ್ವಸ್ಥರಾಗಬೇಕಾಗಿ ಬಂತು ಎಂದು ಗ್ರಾಮಸ್ಥರಾದ ಅರುಣ್ಕುಮಾರ್, ರವಿ. ಚಲುವೇಗೌಡ, ಜಯಮ್ಮ, ಸಾವಿತ್ರಮ್ಮ ಸೇರಿದಂತೆ ಅನೇಕರು ದೂರಿದ್ದಾರೆ.<br /> <br /> ಯುವಕ ನೇಣಿಗೆ ಶರಣು<br /> ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.<br /> <br /> ಹಾರೋಹಳ್ಳಿ ಗ್ರಾಮದ ಹೇಮಾವತಿ ಬಡಾವಣೆಯ ನಿವಾಸಿ ನಾರಾಯಣಗೌಡ ಅವರ ಪುತ್ರ ರವಿ (28) ಎಂಬುವರೆ ಆತ್ಮಹತ್ಯೆಗೆ ಶರಣಾಗಿದ್ದಾರೆ.<br /> <br /> ಮನೆಯಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ಮನೆಯ ಹಿಂಭಾಗದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.<br /> <br /> ಆತ್ಮಹತ್ಯೆಗೆ ಶರಣಾಗಿರುವ ರವಿ ಕಳೆದ ಮೇ 24ರಂದು ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದ ಕಾಳೇಗೌಡ ಅವರ ಪುತ್ರಿ ದಿವ್ಯರನ್ನು ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ಪೊಲೀಸ್ಠಾಣೆಯಲ್ಲಿ ದಾಖಲಾಗಿರುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>