<p>ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ಎಲ್.ಕೆ. ಅಡ್ವಾಣಿ ಹೇಳುವುದರೊಂದಿಗೆ ತೆಲಂಗಾಣ ವಿಚಾರದಲ್ಲಿ ಆ ಪಕ್ಷದ ದ್ವಂದ್ವ ನಿಲುವು ಮತ್ತೆ ಬಹಿರಂಗಗೊಂಡಿದೆ.<br /> <br /> ಆಂಧ್ರದಲ್ಲಿ `ಜನಚೇತನ ಯಾತ್ರೆ~ ಎರಡನೇ ದಿನವಾದ ಬುಧವಾರ ಕಾಮರೆಡ್ಡಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಕಾಂಗ್ರೆಸ್ ತೆಲಂಗಾಣ ಕುರಿತು ವಹಿಸಿರುವ ಮೌನವನ್ನು ಇನ್ನಾದರೂ ಮುರಿದು ಪ್ರತ್ಯೇಕ ರಾಜ್ಯ ರಚನೆಗೆ ಅಗತ್ಯವಾದ ಮಸೂದೆಯನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು~ ಎಂದು ಅವರು ಆಗ್ರಹಿಸಿದರು.<br /> <br /> `ತೆಲಂಗಾಣ ಜನರ ಕನಸು 2012ರ ಆರಂಭದ ಹೊತ್ತಿಗೆ ಸಾಕಾರಗೊಳ್ಳಬೇಕಾದರೆ ಯುಪಿಎ ಸರ್ಕಾರ ಈ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳಬೇಕು~ ಒತ್ತಾಯಿಸಿದರು. ಆದರೆ, ಎನ್ಡಿಎ ಅಧಿಕಾರದಲ್ಲಿದ್ದಾಗ (2002) ಗೃಹ ಸಚಿವರಾಗಿದ್ದ ಅಡ್ವಾಣಿ, ತೆಲಂಗಾಣ ರಚನೆಗೆ ವಿರೋಧ ವ್ಯಕ್ತಪಡಿಸಿದ್ದರು. <br /> <br /> `ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಸಮರ್ಪಕ ಯೋಜನೆಗಳ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲಾಗುವುದು~ ಎಂದು ಅಡ್ವಾಣಿ ಹೇಳಿದ್ದರು.<br /> <br /> ತೆಲಂಗಾಣ ರಚನೆ ವಿಚಾರವಾಗಿ ಸಂಸದ ಅಲೆ ನರೇಂದ್ರ ಅವರಿಗೆ ಏಪ್ರಿಲ್ 2, 2002ರಲ್ಲಿ ಪತ್ರ ಬರೆದಿದ್ದ ಅಡ್ವಾಣಿ, `ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ಕೇಂದ್ರ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ~ ಎಂದೂ ತಿಳಿಸಿದ್ದರು.<br /> <br /> ಆದರೆ, ತೆಲುಗು ದೇಶಂ ಪಕ್ಷವು (ಟಿಡಿಪಿ) 2004ರಲ್ಲಿ ಎನ್ಡಿಎಯಿಂದ ಹೊರಬಂದ ನಂತರ ತೆಲಂಗಾಣ ರಚನೆಗೆ ಟಿಡಿಪಿಯೇ ಅಡ್ಡಗಾಲು ಎಂದು ಬಿಜೆಪಿ ದೂಷಿಸಿತ್ತು.<br /> <br /> `ಪ್ರತ್ಯೇಕ ರಾಜ್ಯ ರಚನೆಗೆ ತೆಲಂಗಾಣದ ಜನತೆ ಮತ್ತು ತನ್ನ 33 ಸಂಸದರ ಸಹಮತವಿಲ್ಲ ಎಂದು ಟಿಡಿಪಿ ಹೇಳಿತ್ತು~ ಎಂದು ಬಿಜೆಪಿ ಆಗ ವಿವರಣೆ ನೀಡಿತ್ತು.<br /> <br /> ಅಡ್ವಾಣಿ 2002ರಲ್ಲಿ ಸಂಸದ ನರೇಂದ್ರ ಅವರಿಗೆ ಬರೆದಿದ್ದ ಪತ್ರದಲ್ಲಿ ತೆಲಂಗಾಣ ರಚನೆ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದಿದ್ದರೆ, ಬಿಜೆಪಿ 2004ರಲ್ಲಿ ನೀಡಿದ್ದ ಹೇಳಿಕೆಯಲ್ಲಿ ಟಿಡಿಪಿಯೇ ತೊಡರುಗಾಲು ಎಂಬ ಅಂಶವಿದೆ. ಇದು ತೆಲಂಗಾಣ ಕುರಿತು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ಎಲ್.ಕೆ. ಅಡ್ವಾಣಿ ಹೇಳುವುದರೊಂದಿಗೆ ತೆಲಂಗಾಣ ವಿಚಾರದಲ್ಲಿ ಆ ಪಕ್ಷದ ದ್ವಂದ್ವ ನಿಲುವು ಮತ್ತೆ ಬಹಿರಂಗಗೊಂಡಿದೆ.<br /> <br /> ಆಂಧ್ರದಲ್ಲಿ `ಜನಚೇತನ ಯಾತ್ರೆ~ ಎರಡನೇ ದಿನವಾದ ಬುಧವಾರ ಕಾಮರೆಡ್ಡಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಕಾಂಗ್ರೆಸ್ ತೆಲಂಗಾಣ ಕುರಿತು ವಹಿಸಿರುವ ಮೌನವನ್ನು ಇನ್ನಾದರೂ ಮುರಿದು ಪ್ರತ್ಯೇಕ ರಾಜ್ಯ ರಚನೆಗೆ ಅಗತ್ಯವಾದ ಮಸೂದೆಯನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು~ ಎಂದು ಅವರು ಆಗ್ರಹಿಸಿದರು.<br /> <br /> `ತೆಲಂಗಾಣ ಜನರ ಕನಸು 2012ರ ಆರಂಭದ ಹೊತ್ತಿಗೆ ಸಾಕಾರಗೊಳ್ಳಬೇಕಾದರೆ ಯುಪಿಎ ಸರ್ಕಾರ ಈ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳಬೇಕು~ ಒತ್ತಾಯಿಸಿದರು. ಆದರೆ, ಎನ್ಡಿಎ ಅಧಿಕಾರದಲ್ಲಿದ್ದಾಗ (2002) ಗೃಹ ಸಚಿವರಾಗಿದ್ದ ಅಡ್ವಾಣಿ, ತೆಲಂಗಾಣ ರಚನೆಗೆ ವಿರೋಧ ವ್ಯಕ್ತಪಡಿಸಿದ್ದರು. <br /> <br /> `ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಸಮರ್ಪಕ ಯೋಜನೆಗಳ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲಾಗುವುದು~ ಎಂದು ಅಡ್ವಾಣಿ ಹೇಳಿದ್ದರು.<br /> <br /> ತೆಲಂಗಾಣ ರಚನೆ ವಿಚಾರವಾಗಿ ಸಂಸದ ಅಲೆ ನರೇಂದ್ರ ಅವರಿಗೆ ಏಪ್ರಿಲ್ 2, 2002ರಲ್ಲಿ ಪತ್ರ ಬರೆದಿದ್ದ ಅಡ್ವಾಣಿ, `ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ಕೇಂದ್ರ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ~ ಎಂದೂ ತಿಳಿಸಿದ್ದರು.<br /> <br /> ಆದರೆ, ತೆಲುಗು ದೇಶಂ ಪಕ್ಷವು (ಟಿಡಿಪಿ) 2004ರಲ್ಲಿ ಎನ್ಡಿಎಯಿಂದ ಹೊರಬಂದ ನಂತರ ತೆಲಂಗಾಣ ರಚನೆಗೆ ಟಿಡಿಪಿಯೇ ಅಡ್ಡಗಾಲು ಎಂದು ಬಿಜೆಪಿ ದೂಷಿಸಿತ್ತು.<br /> <br /> `ಪ್ರತ್ಯೇಕ ರಾಜ್ಯ ರಚನೆಗೆ ತೆಲಂಗಾಣದ ಜನತೆ ಮತ್ತು ತನ್ನ 33 ಸಂಸದರ ಸಹಮತವಿಲ್ಲ ಎಂದು ಟಿಡಿಪಿ ಹೇಳಿತ್ತು~ ಎಂದು ಬಿಜೆಪಿ ಆಗ ವಿವರಣೆ ನೀಡಿತ್ತು.<br /> <br /> ಅಡ್ವಾಣಿ 2002ರಲ್ಲಿ ಸಂಸದ ನರೇಂದ್ರ ಅವರಿಗೆ ಬರೆದಿದ್ದ ಪತ್ರದಲ್ಲಿ ತೆಲಂಗಾಣ ರಚನೆ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದಿದ್ದರೆ, ಬಿಜೆಪಿ 2004ರಲ್ಲಿ ನೀಡಿದ್ದ ಹೇಳಿಕೆಯಲ್ಲಿ ಟಿಡಿಪಿಯೇ ತೊಡರುಗಾಲು ಎಂಬ ಅಂಶವಿದೆ. ಇದು ತೆಲಂಗಾಣ ಕುರಿತು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>