<p><strong>ಸಂತೇಮರಹಳ್ಳಿ (ಚಾಮರಾಜನಗರ ಜಿಲ್ಲೆ): </strong>ತಲೆಯ ಮೇಲೆ ಸುಡುವ ಕೆಂಡವನ್ನು ಸುರಿದುಕೊಂಡು ವಿಶಿಷ್ಟವಾಗಿ ಕೊಂಡೋತ್ಸವ ಹಬ್ಬವನ್ನು ಸಮೀಪದ ತೆಳ್ಳನೂರು ಗ್ರಾಮದಲ್ಲಿ ಶುಕ್ರವಾರ ಆಚರಿಸಲಾಯಿತು.<br /> <br /> ಗ್ರಾಮದ ಹೊರವಲಯದಲ್ಲಿರುವ ಉರುಕಾತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸುಡುತ್ತಿರುವ ಕೆಂಡವನ್ನು ರಾಶಿ ಹಾಕಲಾಗಿತ್ತು. ಪೂಜಾರಿ ಕೊಳಗದೊಂದಿಗೆ ಪ್ರದಕ್ಷಿಣೆ ಹಾಕಿ ಕೆಂಡವನ್ನು ಮೊಗೆದು ತಲೆಯ ಮೇಲೆ ಸುರಿದುಕೊಂಡು ಮತ್ತೊಂದು ಕೊಳಗ ಕೆಂಡವನ್ನು ತುಂಬಿಕೊಂಡು ದೇವಿಗೆ ನೈವೇದ್ಯ ಮಾಡುವುದು ವಿಶೇಷವಾಗಿ ಕಂಡು ಬಂತು.<br /> <br /> ಗ್ರಾಮದ ಜನತೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.<br /> ಗ್ರಾಮದಲ್ಲಿ ತಲೆತಲಾಂತರಗಳಿಂದ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 9 ವರ್ಷಗಳಿಂದ ಹಬ್ಬವನ್ನು ಸ್ಥಗಿತಗೊಳಿಸಲಾಗಿತ್ತು. <br /> <br /> ಕೊಂಡೋತ್ಸವದ ಹಿಂದಿನ ದಿನ ಪೂಜಾರಿ ಆಹಾರ ಸೇವಿಸುವುದಿಲ್ಲ. ಶುಕ್ರವಾರ ಬೆಳಗಿನ ಜಾವ ಪೂಜಾರಿಯ ಮೇಲೆ ದೇವಿ ಬಂದು ದೇವಸ್ಥಾನದಿಂದ ಜಮೀನುಗಳ ಕಡೆಗೆ ಹೋಗಿ, ಒಂದು ಮರವನ್ನು ತಬ್ಬಿದಾಗ ಆ ಹಸಿ ಮರವನ್ನು ಗ್ರಾಮಸ್ಥರು ತರಿದು ದೇವಸ್ಥಾನದ ಮುಂದೆ ತಂದು ರಾಶಿ ಮಾಡಿ ಬೆಂಕಿ ಹಾಕುತ್ತಾರೆ.<br /> <br /> ಸಂಜೆವರೆಗೆ ಕೆಂಡ ಸಿದ್ಧವಾಗುತ್ತದೆ. ಗ್ರಾಮದ ಬೀದಿಗಳಿಂದ ಸತ್ತಿಗೆ, ಸೂರಿಪಾನಿಗಳೊಂದಿಗೆ ಮೆರವಣಿಗೆಯಲ್ಲಿ ಬಂದ ಪೂಜಾರಿ ಕೊಳಗದಲ್ಲಿ ಕೆಂಡ ತುಂಬಿಕೊಂಡು ತಲೆಯ ಮೇಲೆ ಸುರಿದುಕೊಂಡು, ಮತ್ತೊಂದು ಕೊಳಗದಲ್ಲಿ ದೇವಿಗೆ ನೈವೇದ್ಯ ಮಾಡುವುದು ವಿಶೇಷವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಮರಹಳ್ಳಿ (ಚಾಮರಾಜನಗರ ಜಿಲ್ಲೆ): </strong>ತಲೆಯ ಮೇಲೆ ಸುಡುವ ಕೆಂಡವನ್ನು ಸುರಿದುಕೊಂಡು ವಿಶಿಷ್ಟವಾಗಿ ಕೊಂಡೋತ್ಸವ ಹಬ್ಬವನ್ನು ಸಮೀಪದ ತೆಳ್ಳನೂರು ಗ್ರಾಮದಲ್ಲಿ ಶುಕ್ರವಾರ ಆಚರಿಸಲಾಯಿತು.<br /> <br /> ಗ್ರಾಮದ ಹೊರವಲಯದಲ್ಲಿರುವ ಉರುಕಾತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸುಡುತ್ತಿರುವ ಕೆಂಡವನ್ನು ರಾಶಿ ಹಾಕಲಾಗಿತ್ತು. ಪೂಜಾರಿ ಕೊಳಗದೊಂದಿಗೆ ಪ್ರದಕ್ಷಿಣೆ ಹಾಕಿ ಕೆಂಡವನ್ನು ಮೊಗೆದು ತಲೆಯ ಮೇಲೆ ಸುರಿದುಕೊಂಡು ಮತ್ತೊಂದು ಕೊಳಗ ಕೆಂಡವನ್ನು ತುಂಬಿಕೊಂಡು ದೇವಿಗೆ ನೈವೇದ್ಯ ಮಾಡುವುದು ವಿಶೇಷವಾಗಿ ಕಂಡು ಬಂತು.<br /> <br /> ಗ್ರಾಮದ ಜನತೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.<br /> ಗ್ರಾಮದಲ್ಲಿ ತಲೆತಲಾಂತರಗಳಿಂದ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 9 ವರ್ಷಗಳಿಂದ ಹಬ್ಬವನ್ನು ಸ್ಥಗಿತಗೊಳಿಸಲಾಗಿತ್ತು. <br /> <br /> ಕೊಂಡೋತ್ಸವದ ಹಿಂದಿನ ದಿನ ಪೂಜಾರಿ ಆಹಾರ ಸೇವಿಸುವುದಿಲ್ಲ. ಶುಕ್ರವಾರ ಬೆಳಗಿನ ಜಾವ ಪೂಜಾರಿಯ ಮೇಲೆ ದೇವಿ ಬಂದು ದೇವಸ್ಥಾನದಿಂದ ಜಮೀನುಗಳ ಕಡೆಗೆ ಹೋಗಿ, ಒಂದು ಮರವನ್ನು ತಬ್ಬಿದಾಗ ಆ ಹಸಿ ಮರವನ್ನು ಗ್ರಾಮಸ್ಥರು ತರಿದು ದೇವಸ್ಥಾನದ ಮುಂದೆ ತಂದು ರಾಶಿ ಮಾಡಿ ಬೆಂಕಿ ಹಾಕುತ್ತಾರೆ.<br /> <br /> ಸಂಜೆವರೆಗೆ ಕೆಂಡ ಸಿದ್ಧವಾಗುತ್ತದೆ. ಗ್ರಾಮದ ಬೀದಿಗಳಿಂದ ಸತ್ತಿಗೆ, ಸೂರಿಪಾನಿಗಳೊಂದಿಗೆ ಮೆರವಣಿಗೆಯಲ್ಲಿ ಬಂದ ಪೂಜಾರಿ ಕೊಳಗದಲ್ಲಿ ಕೆಂಡ ತುಂಬಿಕೊಂಡು ತಲೆಯ ಮೇಲೆ ಸುರಿದುಕೊಂಡು, ಮತ್ತೊಂದು ಕೊಳಗದಲ್ಲಿ ದೇವಿಗೆ ನೈವೇದ್ಯ ಮಾಡುವುದು ವಿಶೇಷವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>