<p><strong>ಬೆಂಗಳೂರು</strong>: ನಟ ದರ್ಶನ್ ಪತ್ನಿ ವಿಷಯದಲ್ಲಿ ಖಳನಾಯಕನಾಗಿದ್ದರೂ ಸಿನಿಮಾಲೋಕ ಅವರ ಭವಿಷ್ಯದ ಕುರಿತು ಆಶಾದಾಯಕವಾಗಿಯೇ ಮಾತನಾಡುತ್ತಿದೆ. ಇದಕ್ಕೆ ಕಾರಣ ಅವರ ಮೇಲೆ ಹೂಡಿರುವ ದೊಡ್ಡ ಮೊತ್ತದ ಬಂಡವಾಳ. <br /> <br /> ಅವರನ್ನು ನೆಚ್ಚಿಕೊಂಡು ಚಿತ್ರಗಳನ್ನು ನಿರ್ಮಿಸುತ್ತಿರುವವರು, ಮುಂಗಡ ಹಣ ಕೊಟ್ಟು ಕಾಲ್ಷೀಟ್ ಪಡೆದು ತಮ್ಮ ಸರತಿಗೆ ಕಾಯುತ್ತಿರುವವರಲ್ಲಿ ದರ್ಶನ್ ಇಮೇಜ್ ಬದಲಾದೀತೆ ಎಂಬ ಆತಂಕವೇನೋ ಇದೆ. ಆದರೆ, ಯಾರೂ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸಿದ್ಧರಿಲ್ಲ. <br /> <br /> ಕನ್ನಡ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ನ ಚಿತ್ರ ಎನಿಸಿಕೊಳ್ಳಲಿರುವ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ~. ಬೆಳಗಾವಿಯ ಆನಂದ ಬಿ.ಅಪ್ಪುಗೋಳ ಅದರ ನಿರ್ಮಾಪಕರು. ಅವರು ಈಗಲೂ ದರ್ಶನ್ ಅಭಿನಯದ ಈ ಚಿತ್ರದ ಕುರಿತು ಆಶಾವಾದಿಯಾಗಿಯೇ ಇದ್ದಾರೆ. <br /> <br /> `ದರ್ಶನ್ ನಮಗೆ ಒಬ್ಬ ನಟನಾಗಿ ಅಷ್ಟೇ ಮುಖ್ಯ. ಅವರ ವೈಯಕ್ತಿಕ ಬದುಕು ಬೇರೆ. ನಟನಾ ಬದುಕು ಬೇರೆ. ಖಾಸಗಿ ಸಮಸ್ಯೆಗಳು ಬರುತ್ತವೆ, ಹೋಗುತ್ತವೆ. ಅದರಿಂದ ನಮ್ಮ ಚಿತ್ರಕ್ಕೆ ಸಮಸ್ಯೆಯೇನೂ ಆಗುವುದಿಲ್ಲ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಇದೆ. <br /> <br /> ಒಂದು ಹಾಡು ಹಾಗೂ ಕ್ಲೈಮ್ಯಾಕ್ಸ್ಗೆ ಇದೇ 16ರಿಂದ ಚಿತ್ರೀಕರಣ ಪ್ರಾರಂಭವಾಗಬೇಕು. ಅವರಿಗೆ ಜಾಮೀನು ದೊರೆತ ನಂತರ ಎಲ್ಲಾ ಒಳ್ಳೆಯದೇ ಆಗುತ್ತದೆಂಬುದು ನಮ್ಮ ಭಾವನೆ~ ಎಂಬುದು ಅಪ್ಪುಗೋಳ ಅವರ ಪ್ರತಿಕ್ರಿಯೆ. <br /> <br /> ಕಿತ್ತೂರಿನ ಕಲ್ಮಠದಲ್ಲಿ ನವೆಂಬರ್ 19ರಿಂದ ಚಿತ್ರೀಕರಣ ಪ್ರಾರಂಭಿಸಿದ್ದ `ಸಂಗೊಳ್ಳಿರಾಯಣ್ಣ~ ಈಗಾಗಲೇ ನೂರಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಸಿದೆ. ಅದರ ಬಜೆಟ್ ಎಷ್ಟು ಎಂಬುದನ್ನು ಹೇಳಲು ನಿರ್ಮಾಪಕರು ತಯಾರಿಲ್ಲ. ಒಂದು ಅಂದಾಜಿನ ಪ್ರಕಾರ ಈಗಾಗಲೇ ಸುಮಾರು 12 ಕೋಟಿ ರೂಪಾಯಿ ಖರ್ಚಾಗಿದೆ. <br /> <br /> ಚಿತ್ರ ಮುಗಿಯುವ ಹೊತ್ತಿಗೆ ಇನ್ನೂ ಮೂರ್ನಾಲ್ಕು ಕೋಟಿಯಂತೂ ಬೇಕಾಗುತ್ತದೆ ಎಂಬುದು ಅಂದಾಜು. <br /> ಇದೇ 23ರಂದು ತೆರೆಕಾಣಬೇಕಿರುವ `ಸಾರಥಿ~ ದರ್ಶನ್ ವೃತ್ತಿಬದುಕಿನಲ್ಲಿ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದ ಚಿತ್ರ. <br /> <br /> ಹಿಂದೆ ಇದೇ ನಾಯಕನನ್ನು ನೆಚ್ಚಿಕೊಂಡು `ಭೂಪತಿ~ ಚಿತ್ರವನ್ನು ನಿರ್ಮಿಸಿ ಎರಡು ಕೋಟಿಗಿಂತ ಹೆಚ್ಚು ನಷ್ಟ ಅನುಭವಿಸಿದ್ದ ಹಿರಿಯ ನಿರ್ಮಾಪಕ ಕೆ.ಸಿ.ಎನ್.ಚಂದ್ರು `ಸಾರಥಿ~ಯ ಮೂಲಕ ಕಳೆದುಕೊಂಡದ್ದನ್ನು ಮರಳಿ ಪಡೆಯುವ ಯೋಚನೆಯಲ್ಲಿದ್ದರು. <br /> <br /> ಆದರೆ, ಈ ಚಿತ್ರ ನಿಗದಿತ ಬಜೆಟ್ ಮೀರಿದಾಗ ಚಂದ್ರು ಕಂಗಾಲಾದರು. ಗಾಂಧಿನಗರದ ಮೂಲಗಳ ಪ್ರಕಾರ `ಸಾರಥಿ~ ಒಂಬತ್ತು ಕೋಟಿ ಬಜೆಟ್ನ ಚಿತ್ರ. ಅಷ್ಟೊಂದು ಖರ್ಚು ಭರಿಸಲಾಗದೆ ಕೆ.ಸಿ.ಎನ್.ಚಂದ್ರು ಆ ಚಿತ್ರವನ್ನು ಸತ್ಯಪ್ರಕಾಶ್ ಎಂಬುವರಿಗೆ ಮಾರಾಟ ಮಾಡಿದರು. <br /> <br /> `ಜಾಮೀನು ಸಿಕ್ಕ ನಂತರ ಪ್ರೇಕ್ಷಕರನ್ನು ಉದ್ದೇಶಿಸಿ ನಮ್ಮ ನಾಯಕ ನಟರೇ ಸ್ಪಷ್ಟನೆ ನೀಡಲಿದ್ದಾರೆ. ಅವರ ಅಭಿಮಾನಿಗಳು ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯನ್ನು ಮುಂದೂಡಬೇಡಿ ಎನ್ನುತ್ತಿದ್ದಾರೆ. ನಾನು ಕೂಡ ಯಾರಿಗೂ ಚಿತ್ರದ ಬಿಡುಗಡೆಯ ಹಕ್ಕನ್ನು ಮಾರಾಟ ಮಾಡಿಲ್ಲ. <br /> <br /> ಇನ್ನೂ ಸೆನ್ಸಾರ್ ಆಗಬೇಕಿರುವುದರಿಂದ ಜಾಹೀರಾತುಗಳಲ್ಲಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿಲ್ಲ. 23ರಂದು ಚಿತ್ರ ಖಂಡಿತ ಬಿಡುಗಡೆ ಆಗುತ್ತದೆ~ ಅಂತಾರೆ ಸತ್ಯಪ್ರಕಾಶ್. <br /> <br /> ದರ್ಶನ್ ಜೈಲು ಸೇರಿದ ಶುಕ್ರವಾರ (ಸೆ.9) `ಚಿಂಗಾರಿ~ ಚಿತ್ರದ ಬಾಕಿ ಇರುವ ಒಂದು ಹಾಡಿನ ಚಿತ್ರೀಕರಣ ನಡೆಯಬೇಕಿತ್ತು. ಅದೀಗ ಮುಂದಕ್ಕೆ ಹೋಗಿದೆ. ಆ ಚಿತ್ರದ ನಿರ್ಮಾಪಕ ಮಹದೇವ್ ಕೂಡ ಎಲ್ಲಾ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. `ಇದುವರೆಗೆ 75 ದಿನ ಶೂಟಿಂಗ್ ಮಾಡಿದ್ದೇವೆ.<br /> <br /> ನಮಗೆ ಏನೂ ತೊಂದರೆಯಾಗಿಲ್ಲ. ಇದು ಗಂಡ-ಹೆಂಡತಿ ನಡುವಿನ ಜಗಳ. ಈಗ ದರ್ಶನ್ ಪತ್ನಿಯೇ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಮಾಧ್ಯಮ ಈ ವಿಷಯವನ್ನು ದೊಡ್ಡದಾಗಿಸಿದೆಯಷ್ಟೆ. ನಮ್ಮ ಸಿನಿಮಾಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂಬುದು ಮಹದೇವ್ ನುಡಿ. <br /> <br /> `ಮೈಸೂರು ಹುಡುಗ~, `ಬುಲ್ಬುಲ್~ ಹಾಗೂ `ಭೀಮ~ ದರ್ಶನ್ ಅಭಿನಯಿಸಲಿರುವ ಮುಂದಿನ ಚಿತ್ರಗಳು. `ಬುಲ್ಬುಲ್~ ಅವರದ್ದೇ ಬ್ಯಾನರ್ನ ಚಿತ್ರ. ಅದರ ಚಿತ್ರಕಥೆ ಸಿದ್ಧವಾಗುತ್ತಿದೆ. ಉಳಿದ ಚಿತ್ರಗಳು ಕೂಡ ಪೂರ್ವ ತಯಾರಿಯ ಹಂತದಲ್ಲಿವೆ. <br /> <br /> ಸಿನಿಮಾ ಮಾರುಕಟ್ಟೆಯ ಲೆಕ್ಕಾಚಾರದ ಪ್ರಕಾರ ದರ್ಶನ್ ಹೆಸರನ್ನು ನೆಚ್ಚಿಕೊಂಡು ಸುಮಾರು 40-45 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಹಣ ಚೆಲ್ಲಿರುವ ಯಾವ ನಿರ್ಮಾಪಕರೂ ಅವರ ವಿರುದ್ಧವಾಗಿ ಮಾತನಾಡುವ ಸ್ಥಿತಿಯಲ್ಲಿ ಈಗ ಇಲ್ಲ. <br /> <br /> ದರ್ಶನ್ ಸಹೋದರ ದಿನಕರ್ ನಿರ್ದೇಶಿಸಿರುವ `ಸಾರಥಿ~ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದರ ಮೇಲೆ ದರ್ಶನ್ ಚಿತ್ರಭವಿಷ್ಯ ನಿಂತಿದೆ. ಬಲ್ಲವರ ಪ್ರಕಾರ ಅವರ ಖಾಸಗಿ ಹಾಗೂ ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಉಲ್ಬಣಿಸಿದ್ದು `ಸಾರಥಿ~ ಸೆಟ್ಟೇರಿದ ಹೊತ್ತಲ್ಲೇ. ಕಳಂಕದ ಹಣೆಪಟ್ಟಿ ಹೊತ್ತು ನಿಂತಿರುವ ದರ್ಶನ್ ಅವರನ್ನು `ಸಂಗೊಳ್ಳಿರಾಯಣ್ಣ~ನಾಗಿ ಜನ ಹೇಗೆ ನೋಡುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. <br /> <br /> <strong>ದರ್ಶನ್ ಪತ್ನಿ ಹಲ್ಲೆ ಪ್ರಕರಣ ಖಂಡನೀಯ: ಜಯಮಾಲಾ</strong><br /> <strong>`ಆರೋಪಿಗೆ ಬೆಂಬಲ ಕಳವಳಕಾರಿ~</strong><br /> <br /> <strong>ಬೆಂಗಳೂರು: </strong>ದೌರ್ಜನ್ಯಕ್ಕೆ ಒಳಗಾದ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಲ್ಲುವ ಬದಲು ನಟನನ್ನು ಬೆಂಬಲಿಸಿದ ಚಿತ್ರರಂಗದವರ ವರ್ತನೆಗೆ ಸಂಘ- ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.<br /> `ಚಿತ್ರರಂಗದಲ್ಲಿರುವ ನಾವು ಜನರಿಗೆ ಮಾದರಿಯಾಗಿರಬೇಕು. <br /> <br /> ವಿಜಯಲಕ್ಷ್ಮಿ ಅವರ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಯಾರಾದರೂ ಸರಿ ಮಹಿಳೆ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಈ ಘಟನೆ ಯಾರಿಗೂ ಶೋಭೆ ತರುವಂತದಲ್ಲ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರ ಜತೆ ನಾನು ನಟಿಸಿದ್ದೇನೆ. <br /> <br /> ಅವರೊಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ಸಹನೆ- ಪ್ರೀತಿ ಅವರಲ್ಲಿತ್ತು. ಅಂತಹ ಗುಣಗಳನ್ನು ದರ್ಶನ್ ಬೆಳೆಸಿಕೊಳ್ಳಬೇಕು~ ಎಂದು ನಟಿ ಜಯಮಾಲಾ ಅಭಿಪ್ರಾಯಪಟ್ಟಿದ್ದಾರೆ.<br /> <br /> `ವಿಜಯಲಕ್ಷ್ಮಿ ಅವರಿಗೆ ಅಗತ್ಯ ಬೆಂಬಲ ಮತ್ತು ರಕ್ಷಣೆ ಸಿಗಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಬಗ್ಗೆ ಏನೂ ಹೇಳಲಾರೆ. ಆದರೆ ಅವರ ಸಂಸಾರ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ~ ಎಂದು ಅವರು ತಿಳಿಸಿದರು.<br /> <br /> `ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ನಟ ದರ್ಶನ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಆದರೆ ಚಿತ್ರರಂಗದ ನಟರು ಮತ್ತು ಗಣ್ಯ ವ್ಯಕ್ತಿಗಳು ದರ್ಶನ್ ಬೆಂಬಲಕ್ಕೆ ನಿಂತಿರುವ ಸಂಗತಿ ಕಳವಳಕಾರಿಯಾದದ್ದು~ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷೆ ಬಿ.ಎಸ್.ಪ್ರತಿಭಾಕುಮಾರಿ ಹೇಳಿದ್ದಾರೆ.<br /> <br /> `ನಟರು ಖಾಸಗಿ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಅದನ್ನು ಎಲ್ಲರೂ ಖಂಡಿಸಬೇಕು. ಪತ್ನಿಯ ಮೇಲೆ ಹಲ್ಲೆ ನಡೆಸಿರುವ ದರ್ಶನ್ ಅವರನ್ನು ಬೆಂಬಲಿಸಿರುವ ಚಿತ್ರರಂಗದ ಗಣ್ಯರ ಕ್ರಮಕ್ಕೆ ಸಂಘಟನೆಯ ವಿರೋಧವಿದೆ. <br /> <br /> ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ನಟ ತಪ್ಪಿತಸ್ಥ ಎಂದು ಗೊತ್ತಾದರೆ ಆತನನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು~ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> `ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಿನಿಮಾ ನಟರು ಇತರರಿಗೆ ಆದರ್ಶರಾಗಿರಬೇಕು. ಆದರೆ ಈಗ ನಡೆದಿರುವ ಘಟನೆ ದೂರಗಾಮಿ ಪರಿಣಾಮ ಬೀರುತ್ತದೆ. ಇಂತಹ ಘಟನೆಗಳು ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಕಾಣಬೇಕು~ ಎಂದು ಅಖಿಲ ಭಾರತ ಜನವಾದಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಟ ದರ್ಶನ್ ಪತ್ನಿ ವಿಷಯದಲ್ಲಿ ಖಳನಾಯಕನಾಗಿದ್ದರೂ ಸಿನಿಮಾಲೋಕ ಅವರ ಭವಿಷ್ಯದ ಕುರಿತು ಆಶಾದಾಯಕವಾಗಿಯೇ ಮಾತನಾಡುತ್ತಿದೆ. ಇದಕ್ಕೆ ಕಾರಣ ಅವರ ಮೇಲೆ ಹೂಡಿರುವ ದೊಡ್ಡ ಮೊತ್ತದ ಬಂಡವಾಳ. <br /> <br /> ಅವರನ್ನು ನೆಚ್ಚಿಕೊಂಡು ಚಿತ್ರಗಳನ್ನು ನಿರ್ಮಿಸುತ್ತಿರುವವರು, ಮುಂಗಡ ಹಣ ಕೊಟ್ಟು ಕಾಲ್ಷೀಟ್ ಪಡೆದು ತಮ್ಮ ಸರತಿಗೆ ಕಾಯುತ್ತಿರುವವರಲ್ಲಿ ದರ್ಶನ್ ಇಮೇಜ್ ಬದಲಾದೀತೆ ಎಂಬ ಆತಂಕವೇನೋ ಇದೆ. ಆದರೆ, ಯಾರೂ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸಿದ್ಧರಿಲ್ಲ. <br /> <br /> ಕನ್ನಡ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ನ ಚಿತ್ರ ಎನಿಸಿಕೊಳ್ಳಲಿರುವ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ~. ಬೆಳಗಾವಿಯ ಆನಂದ ಬಿ.ಅಪ್ಪುಗೋಳ ಅದರ ನಿರ್ಮಾಪಕರು. ಅವರು ಈಗಲೂ ದರ್ಶನ್ ಅಭಿನಯದ ಈ ಚಿತ್ರದ ಕುರಿತು ಆಶಾವಾದಿಯಾಗಿಯೇ ಇದ್ದಾರೆ. <br /> <br /> `ದರ್ಶನ್ ನಮಗೆ ಒಬ್ಬ ನಟನಾಗಿ ಅಷ್ಟೇ ಮುಖ್ಯ. ಅವರ ವೈಯಕ್ತಿಕ ಬದುಕು ಬೇರೆ. ನಟನಾ ಬದುಕು ಬೇರೆ. ಖಾಸಗಿ ಸಮಸ್ಯೆಗಳು ಬರುತ್ತವೆ, ಹೋಗುತ್ತವೆ. ಅದರಿಂದ ನಮ್ಮ ಚಿತ್ರಕ್ಕೆ ಸಮಸ್ಯೆಯೇನೂ ಆಗುವುದಿಲ್ಲ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಇದೆ. <br /> <br /> ಒಂದು ಹಾಡು ಹಾಗೂ ಕ್ಲೈಮ್ಯಾಕ್ಸ್ಗೆ ಇದೇ 16ರಿಂದ ಚಿತ್ರೀಕರಣ ಪ್ರಾರಂಭವಾಗಬೇಕು. ಅವರಿಗೆ ಜಾಮೀನು ದೊರೆತ ನಂತರ ಎಲ್ಲಾ ಒಳ್ಳೆಯದೇ ಆಗುತ್ತದೆಂಬುದು ನಮ್ಮ ಭಾವನೆ~ ಎಂಬುದು ಅಪ್ಪುಗೋಳ ಅವರ ಪ್ರತಿಕ್ರಿಯೆ. <br /> <br /> ಕಿತ್ತೂರಿನ ಕಲ್ಮಠದಲ್ಲಿ ನವೆಂಬರ್ 19ರಿಂದ ಚಿತ್ರೀಕರಣ ಪ್ರಾರಂಭಿಸಿದ್ದ `ಸಂಗೊಳ್ಳಿರಾಯಣ್ಣ~ ಈಗಾಗಲೇ ನೂರಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಸಿದೆ. ಅದರ ಬಜೆಟ್ ಎಷ್ಟು ಎಂಬುದನ್ನು ಹೇಳಲು ನಿರ್ಮಾಪಕರು ತಯಾರಿಲ್ಲ. ಒಂದು ಅಂದಾಜಿನ ಪ್ರಕಾರ ಈಗಾಗಲೇ ಸುಮಾರು 12 ಕೋಟಿ ರೂಪಾಯಿ ಖರ್ಚಾಗಿದೆ. <br /> <br /> ಚಿತ್ರ ಮುಗಿಯುವ ಹೊತ್ತಿಗೆ ಇನ್ನೂ ಮೂರ್ನಾಲ್ಕು ಕೋಟಿಯಂತೂ ಬೇಕಾಗುತ್ತದೆ ಎಂಬುದು ಅಂದಾಜು. <br /> ಇದೇ 23ರಂದು ತೆರೆಕಾಣಬೇಕಿರುವ `ಸಾರಥಿ~ ದರ್ಶನ್ ವೃತ್ತಿಬದುಕಿನಲ್ಲಿ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದ ಚಿತ್ರ. <br /> <br /> ಹಿಂದೆ ಇದೇ ನಾಯಕನನ್ನು ನೆಚ್ಚಿಕೊಂಡು `ಭೂಪತಿ~ ಚಿತ್ರವನ್ನು ನಿರ್ಮಿಸಿ ಎರಡು ಕೋಟಿಗಿಂತ ಹೆಚ್ಚು ನಷ್ಟ ಅನುಭವಿಸಿದ್ದ ಹಿರಿಯ ನಿರ್ಮಾಪಕ ಕೆ.ಸಿ.ಎನ್.ಚಂದ್ರು `ಸಾರಥಿ~ಯ ಮೂಲಕ ಕಳೆದುಕೊಂಡದ್ದನ್ನು ಮರಳಿ ಪಡೆಯುವ ಯೋಚನೆಯಲ್ಲಿದ್ದರು. <br /> <br /> ಆದರೆ, ಈ ಚಿತ್ರ ನಿಗದಿತ ಬಜೆಟ್ ಮೀರಿದಾಗ ಚಂದ್ರು ಕಂಗಾಲಾದರು. ಗಾಂಧಿನಗರದ ಮೂಲಗಳ ಪ್ರಕಾರ `ಸಾರಥಿ~ ಒಂಬತ್ತು ಕೋಟಿ ಬಜೆಟ್ನ ಚಿತ್ರ. ಅಷ್ಟೊಂದು ಖರ್ಚು ಭರಿಸಲಾಗದೆ ಕೆ.ಸಿ.ಎನ್.ಚಂದ್ರು ಆ ಚಿತ್ರವನ್ನು ಸತ್ಯಪ್ರಕಾಶ್ ಎಂಬುವರಿಗೆ ಮಾರಾಟ ಮಾಡಿದರು. <br /> <br /> `ಜಾಮೀನು ಸಿಕ್ಕ ನಂತರ ಪ್ರೇಕ್ಷಕರನ್ನು ಉದ್ದೇಶಿಸಿ ನಮ್ಮ ನಾಯಕ ನಟರೇ ಸ್ಪಷ್ಟನೆ ನೀಡಲಿದ್ದಾರೆ. ಅವರ ಅಭಿಮಾನಿಗಳು ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯನ್ನು ಮುಂದೂಡಬೇಡಿ ಎನ್ನುತ್ತಿದ್ದಾರೆ. ನಾನು ಕೂಡ ಯಾರಿಗೂ ಚಿತ್ರದ ಬಿಡುಗಡೆಯ ಹಕ್ಕನ್ನು ಮಾರಾಟ ಮಾಡಿಲ್ಲ. <br /> <br /> ಇನ್ನೂ ಸೆನ್ಸಾರ್ ಆಗಬೇಕಿರುವುದರಿಂದ ಜಾಹೀರಾತುಗಳಲ್ಲಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿಲ್ಲ. 23ರಂದು ಚಿತ್ರ ಖಂಡಿತ ಬಿಡುಗಡೆ ಆಗುತ್ತದೆ~ ಅಂತಾರೆ ಸತ್ಯಪ್ರಕಾಶ್. <br /> <br /> ದರ್ಶನ್ ಜೈಲು ಸೇರಿದ ಶುಕ್ರವಾರ (ಸೆ.9) `ಚಿಂಗಾರಿ~ ಚಿತ್ರದ ಬಾಕಿ ಇರುವ ಒಂದು ಹಾಡಿನ ಚಿತ್ರೀಕರಣ ನಡೆಯಬೇಕಿತ್ತು. ಅದೀಗ ಮುಂದಕ್ಕೆ ಹೋಗಿದೆ. ಆ ಚಿತ್ರದ ನಿರ್ಮಾಪಕ ಮಹದೇವ್ ಕೂಡ ಎಲ್ಲಾ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. `ಇದುವರೆಗೆ 75 ದಿನ ಶೂಟಿಂಗ್ ಮಾಡಿದ್ದೇವೆ.<br /> <br /> ನಮಗೆ ಏನೂ ತೊಂದರೆಯಾಗಿಲ್ಲ. ಇದು ಗಂಡ-ಹೆಂಡತಿ ನಡುವಿನ ಜಗಳ. ಈಗ ದರ್ಶನ್ ಪತ್ನಿಯೇ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಮಾಧ್ಯಮ ಈ ವಿಷಯವನ್ನು ದೊಡ್ಡದಾಗಿಸಿದೆಯಷ್ಟೆ. ನಮ್ಮ ಸಿನಿಮಾಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂಬುದು ಮಹದೇವ್ ನುಡಿ. <br /> <br /> `ಮೈಸೂರು ಹುಡುಗ~, `ಬುಲ್ಬುಲ್~ ಹಾಗೂ `ಭೀಮ~ ದರ್ಶನ್ ಅಭಿನಯಿಸಲಿರುವ ಮುಂದಿನ ಚಿತ್ರಗಳು. `ಬುಲ್ಬುಲ್~ ಅವರದ್ದೇ ಬ್ಯಾನರ್ನ ಚಿತ್ರ. ಅದರ ಚಿತ್ರಕಥೆ ಸಿದ್ಧವಾಗುತ್ತಿದೆ. ಉಳಿದ ಚಿತ್ರಗಳು ಕೂಡ ಪೂರ್ವ ತಯಾರಿಯ ಹಂತದಲ್ಲಿವೆ. <br /> <br /> ಸಿನಿಮಾ ಮಾರುಕಟ್ಟೆಯ ಲೆಕ್ಕಾಚಾರದ ಪ್ರಕಾರ ದರ್ಶನ್ ಹೆಸರನ್ನು ನೆಚ್ಚಿಕೊಂಡು ಸುಮಾರು 40-45 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಹಣ ಚೆಲ್ಲಿರುವ ಯಾವ ನಿರ್ಮಾಪಕರೂ ಅವರ ವಿರುದ್ಧವಾಗಿ ಮಾತನಾಡುವ ಸ್ಥಿತಿಯಲ್ಲಿ ಈಗ ಇಲ್ಲ. <br /> <br /> ದರ್ಶನ್ ಸಹೋದರ ದಿನಕರ್ ನಿರ್ದೇಶಿಸಿರುವ `ಸಾರಥಿ~ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದರ ಮೇಲೆ ದರ್ಶನ್ ಚಿತ್ರಭವಿಷ್ಯ ನಿಂತಿದೆ. ಬಲ್ಲವರ ಪ್ರಕಾರ ಅವರ ಖಾಸಗಿ ಹಾಗೂ ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಉಲ್ಬಣಿಸಿದ್ದು `ಸಾರಥಿ~ ಸೆಟ್ಟೇರಿದ ಹೊತ್ತಲ್ಲೇ. ಕಳಂಕದ ಹಣೆಪಟ್ಟಿ ಹೊತ್ತು ನಿಂತಿರುವ ದರ್ಶನ್ ಅವರನ್ನು `ಸಂಗೊಳ್ಳಿರಾಯಣ್ಣ~ನಾಗಿ ಜನ ಹೇಗೆ ನೋಡುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. <br /> <br /> <strong>ದರ್ಶನ್ ಪತ್ನಿ ಹಲ್ಲೆ ಪ್ರಕರಣ ಖಂಡನೀಯ: ಜಯಮಾಲಾ</strong><br /> <strong>`ಆರೋಪಿಗೆ ಬೆಂಬಲ ಕಳವಳಕಾರಿ~</strong><br /> <br /> <strong>ಬೆಂಗಳೂರು: </strong>ದೌರ್ಜನ್ಯಕ್ಕೆ ಒಳಗಾದ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಲ್ಲುವ ಬದಲು ನಟನನ್ನು ಬೆಂಬಲಿಸಿದ ಚಿತ್ರರಂಗದವರ ವರ್ತನೆಗೆ ಸಂಘ- ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.<br /> `ಚಿತ್ರರಂಗದಲ್ಲಿರುವ ನಾವು ಜನರಿಗೆ ಮಾದರಿಯಾಗಿರಬೇಕು. <br /> <br /> ವಿಜಯಲಕ್ಷ್ಮಿ ಅವರ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಯಾರಾದರೂ ಸರಿ ಮಹಿಳೆ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಈ ಘಟನೆ ಯಾರಿಗೂ ಶೋಭೆ ತರುವಂತದಲ್ಲ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರ ಜತೆ ನಾನು ನಟಿಸಿದ್ದೇನೆ. <br /> <br /> ಅವರೊಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ಸಹನೆ- ಪ್ರೀತಿ ಅವರಲ್ಲಿತ್ತು. ಅಂತಹ ಗುಣಗಳನ್ನು ದರ್ಶನ್ ಬೆಳೆಸಿಕೊಳ್ಳಬೇಕು~ ಎಂದು ನಟಿ ಜಯಮಾಲಾ ಅಭಿಪ್ರಾಯಪಟ್ಟಿದ್ದಾರೆ.<br /> <br /> `ವಿಜಯಲಕ್ಷ್ಮಿ ಅವರಿಗೆ ಅಗತ್ಯ ಬೆಂಬಲ ಮತ್ತು ರಕ್ಷಣೆ ಸಿಗಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಬಗ್ಗೆ ಏನೂ ಹೇಳಲಾರೆ. ಆದರೆ ಅವರ ಸಂಸಾರ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ~ ಎಂದು ಅವರು ತಿಳಿಸಿದರು.<br /> <br /> `ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ನಟ ದರ್ಶನ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಆದರೆ ಚಿತ್ರರಂಗದ ನಟರು ಮತ್ತು ಗಣ್ಯ ವ್ಯಕ್ತಿಗಳು ದರ್ಶನ್ ಬೆಂಬಲಕ್ಕೆ ನಿಂತಿರುವ ಸಂಗತಿ ಕಳವಳಕಾರಿಯಾದದ್ದು~ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷೆ ಬಿ.ಎಸ್.ಪ್ರತಿಭಾಕುಮಾರಿ ಹೇಳಿದ್ದಾರೆ.<br /> <br /> `ನಟರು ಖಾಸಗಿ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಅದನ್ನು ಎಲ್ಲರೂ ಖಂಡಿಸಬೇಕು. ಪತ್ನಿಯ ಮೇಲೆ ಹಲ್ಲೆ ನಡೆಸಿರುವ ದರ್ಶನ್ ಅವರನ್ನು ಬೆಂಬಲಿಸಿರುವ ಚಿತ್ರರಂಗದ ಗಣ್ಯರ ಕ್ರಮಕ್ಕೆ ಸಂಘಟನೆಯ ವಿರೋಧವಿದೆ. <br /> <br /> ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ನಟ ತಪ್ಪಿತಸ್ಥ ಎಂದು ಗೊತ್ತಾದರೆ ಆತನನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು~ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> `ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಿನಿಮಾ ನಟರು ಇತರರಿಗೆ ಆದರ್ಶರಾಗಿರಬೇಕು. ಆದರೆ ಈಗ ನಡೆದಿರುವ ಘಟನೆ ದೂರಗಾಮಿ ಪರಿಣಾಮ ಬೀರುತ್ತದೆ. ಇಂತಹ ಘಟನೆಗಳು ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಕಾಣಬೇಕು~ ಎಂದು ಅಖಿಲ ಭಾರತ ಜನವಾದಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>