<p>ವೇದಿಕೆ ಒಂದು, ಕಾಲೇಜುಗಳು 105, ಪ್ರತಿಭೆಗಳು ನೂರಾರು, ವೀಕ್ಷಕರು ಸಾವಿರಾರು-ಇವಿಷ್ಟು ಸೇರಿದರೆ `ದಸರಾ ಯುವ ಸಂಭ್ರಮ~ವಾಗುತ್ತದೆ.<br /> <br /> ಹೌದು. ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲು ಯುವ ಸಂಭ್ರಮವನ್ನು ಸೆ.21 ರಿಂದ 25 ರ ವರೆಗೆ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ 105 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಯುವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಕುಣಿದು, ಕುಪ್ಪಳಿಸಿ ಸಂಭ್ರಮವನ್ನು ಹಂಚಿದರು.<br /> <br /> ಯುವ ಸಂಭ್ರಮದಲ್ಲಿ ಜಾನಪದ, ಪುರಾಣ, ಮಾಡ್ರನ್, ಸಮಕಾಲೀನ ನೃತ್ಯ ಅಲ್ಲದೇ ಪ್ರಸ್ತುತ ವಿದ್ಯಮಾನಕ್ಕೆ ಕನ್ನಡಿ ಹಿಡಿಯುವ ರೂಪಕಗಳು ವೇದಿಕೆಯಲ್ಲಿ ಅನಾವರಣಗೊಂಡವು.</p>.<p><strong>ದೇಸಿ ಪ್ರೇಮ!<br /> </strong>ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಜಿಲ್ಲೆಯ ಬಹುತೇಕ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಮ್ಮ ನೆಲದ ಸೊಗಡನ್ನು ಹೊಂದಿರುವ ದೇಸಿಯ ಕಲೆ ಜಾನಪದಕ್ಕೆ ಶರಣಾಗಿದ್ದರು. ಯುವ ಸಮೂಹ ಮಾಡ್ರನ್ ನೃತ್ಯ ಮತ್ತು ಫಾಸ್ಟ್ಬೀಟ್ಗಳ ಹಾಡಿಗೆ ಮಾತ್ರ ಮಾರುಹೋಗುತ್ತಾರೆ ಎನ್ನುವ ನಂಬಿಕೆಯನ್ನು ಸುಳ್ಳು ಮಾಡಿದರು.<br /> <br /> ಪ್ರತಿದಿನ 15 ರಿಂದ 20 ತಂಡಗಳು ಪ್ರದರ್ಶನ ನೀಡುತ್ತಿದ್ದವು. ಇವುಗಳಲ್ಲಿ 5 ರಿಂದ 8 ಜಾನಪದ ನೃತ್ಯಗಳು ಇರುತ್ತಿದ್ದವು. ಕಂಸಾಳೆ, ಪೂಜಾ ಕುಣಿತ, ಕರಗ, ಡೊಳ್ಳು ಕುಣಿತ, ಕೋಲಾಟ, ಬುಡಕಟ್ಟು ನೃತ್ಯಗಳು ಪ್ರದರ್ಶನಗೊಂಡವು. ಪ್ರೇಕ್ಷಕರೂ ಸಹ ದೇಸಿ ಕಲೆಗೆ ಉತ್ತಮ ಸ್ಪಂದನೆ ನೀಡುವ ಮೂಲಕ `ಜೈ~ ಎಂದರು.<br /> <br /> ಯುವ ಪ್ರತಿಭೆಗಳು ಹಾಡುಗಳ ಆಯ್ಕೆ, ಅವುಗಳಿಗೆ ನೃತ್ಯ ಸಂಯೋಜನೆ, ಆಕರ್ಷಕ ಉಡುಗೆ-ತೊಡುಗೆ, ಮೇಕಪ್ನಲ್ಲಿ ಸೃಜನಶೀಲತೆ ಮೆರೆದಿದ್ದರು. ಯುವ ಜನಾಂಗದ ನಾಡಿಮಿಡಿತವನ್ನು ಚೆನ್ನಾಗಿ ಅರಿತು, ಅವರಿಗೆ ಬೇಕಾಗಿರುವುದನ್ನೇ ಉಣಬಡಿಸಿ `ಸೈ~ ಎನಿಸಿಕೊಂಡರು.<br /> <br /> ಅಷ್ಟೇನು ಸವಲತ್ತುಗಳು ಇಲ್ಲದ ಪಟ್ಟಣ ಪ್ರದೇಶದ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಪ್ರೇಕ್ಷಕರು ಮೆಚ್ಚುವಂತೆ ಪ್ರದರ್ಶನ ನೀಡಿದ್ದು ಗಮನಾರ್ಹ. ಕಾಲೇಜು ವಿದ್ಯಾರ್ಥಿಗಳು ಕೇವಲ ಅಬ್ಬರ, ಆಡಂಬರ, ಮಾಡರ್ನ್, ಫಾಸ್ಟ್ಬೀಟ್ ಹಾಡುಗಳಿಗಷ್ಟೇ ಸೀಮಿತವಾಗಿರಲಿಲ್ಲ.<br /> <br /> ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಂದ ಸ್ಫೂರ್ತಿಗೊಂಡು ಭ್ರಷ್ಟಾಚಾರ ವಿರುದ್ಧ, ರಾಷ್ಟ್ರೀಯ ಭಾವೈಕ್ಯ, ಕೋಮು ಸಾಮರಸ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತಾದ ನೃತ್ಯ ರೂಪಕಗಳನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು.<br /> <br /> ಟಿ.ವಿ. ಚಾನಲ್ಗಳು ನೃತ್ಯಕ್ಕೆ ಸಂಬಂಧಿಸಿದ ರಿಯಾಲಿಟಿ ಶೋಗಳನ್ನು ನಡೆಸುತ್ತಿವೆ. ಇವುಗಳ ಪ್ರಭಾವಕ್ಕೆ ಒಳಗಾದ ಕಾಲೇಜು ವಿದ್ಯಾರ್ಥಿಗಳು ಪೈಪೋಟಿಗೆ ಬಿದ್ದವರಂತೆ ಅತ್ಯುತ್ತಮ ಪ್ರದರ್ಶನ ನೀಡಿ, ತಮ್ಮ ಸುಪ್ತಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿದರು. ಈ ದೃಷ್ಟಿಯಲ್ಲಿ `ಯುವ ಸಂಭ್ರಮ~ ರಂಜನೆ ಜೊತೆಗೆ ನೂರಾರು ಪ್ರತಿಭೆಗಳನ್ನು ಬೆಳಕಿಗೆ ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೇದಿಕೆ ಒಂದು, ಕಾಲೇಜುಗಳು 105, ಪ್ರತಿಭೆಗಳು ನೂರಾರು, ವೀಕ್ಷಕರು ಸಾವಿರಾರು-ಇವಿಷ್ಟು ಸೇರಿದರೆ `ದಸರಾ ಯುವ ಸಂಭ್ರಮ~ವಾಗುತ್ತದೆ.<br /> <br /> ಹೌದು. ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲು ಯುವ ಸಂಭ್ರಮವನ್ನು ಸೆ.21 ರಿಂದ 25 ರ ವರೆಗೆ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ 105 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಯುವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಕುಣಿದು, ಕುಪ್ಪಳಿಸಿ ಸಂಭ್ರಮವನ್ನು ಹಂಚಿದರು.<br /> <br /> ಯುವ ಸಂಭ್ರಮದಲ್ಲಿ ಜಾನಪದ, ಪುರಾಣ, ಮಾಡ್ರನ್, ಸಮಕಾಲೀನ ನೃತ್ಯ ಅಲ್ಲದೇ ಪ್ರಸ್ತುತ ವಿದ್ಯಮಾನಕ್ಕೆ ಕನ್ನಡಿ ಹಿಡಿಯುವ ರೂಪಕಗಳು ವೇದಿಕೆಯಲ್ಲಿ ಅನಾವರಣಗೊಂಡವು.</p>.<p><strong>ದೇಸಿ ಪ್ರೇಮ!<br /> </strong>ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಜಿಲ್ಲೆಯ ಬಹುತೇಕ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಮ್ಮ ನೆಲದ ಸೊಗಡನ್ನು ಹೊಂದಿರುವ ದೇಸಿಯ ಕಲೆ ಜಾನಪದಕ್ಕೆ ಶರಣಾಗಿದ್ದರು. ಯುವ ಸಮೂಹ ಮಾಡ್ರನ್ ನೃತ್ಯ ಮತ್ತು ಫಾಸ್ಟ್ಬೀಟ್ಗಳ ಹಾಡಿಗೆ ಮಾತ್ರ ಮಾರುಹೋಗುತ್ತಾರೆ ಎನ್ನುವ ನಂಬಿಕೆಯನ್ನು ಸುಳ್ಳು ಮಾಡಿದರು.<br /> <br /> ಪ್ರತಿದಿನ 15 ರಿಂದ 20 ತಂಡಗಳು ಪ್ರದರ್ಶನ ನೀಡುತ್ತಿದ್ದವು. ಇವುಗಳಲ್ಲಿ 5 ರಿಂದ 8 ಜಾನಪದ ನೃತ್ಯಗಳು ಇರುತ್ತಿದ್ದವು. ಕಂಸಾಳೆ, ಪೂಜಾ ಕುಣಿತ, ಕರಗ, ಡೊಳ್ಳು ಕುಣಿತ, ಕೋಲಾಟ, ಬುಡಕಟ್ಟು ನೃತ್ಯಗಳು ಪ್ರದರ್ಶನಗೊಂಡವು. ಪ್ರೇಕ್ಷಕರೂ ಸಹ ದೇಸಿ ಕಲೆಗೆ ಉತ್ತಮ ಸ್ಪಂದನೆ ನೀಡುವ ಮೂಲಕ `ಜೈ~ ಎಂದರು.<br /> <br /> ಯುವ ಪ್ರತಿಭೆಗಳು ಹಾಡುಗಳ ಆಯ್ಕೆ, ಅವುಗಳಿಗೆ ನೃತ್ಯ ಸಂಯೋಜನೆ, ಆಕರ್ಷಕ ಉಡುಗೆ-ತೊಡುಗೆ, ಮೇಕಪ್ನಲ್ಲಿ ಸೃಜನಶೀಲತೆ ಮೆರೆದಿದ್ದರು. ಯುವ ಜನಾಂಗದ ನಾಡಿಮಿಡಿತವನ್ನು ಚೆನ್ನಾಗಿ ಅರಿತು, ಅವರಿಗೆ ಬೇಕಾಗಿರುವುದನ್ನೇ ಉಣಬಡಿಸಿ `ಸೈ~ ಎನಿಸಿಕೊಂಡರು.<br /> <br /> ಅಷ್ಟೇನು ಸವಲತ್ತುಗಳು ಇಲ್ಲದ ಪಟ್ಟಣ ಪ್ರದೇಶದ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಪ್ರೇಕ್ಷಕರು ಮೆಚ್ಚುವಂತೆ ಪ್ರದರ್ಶನ ನೀಡಿದ್ದು ಗಮನಾರ್ಹ. ಕಾಲೇಜು ವಿದ್ಯಾರ್ಥಿಗಳು ಕೇವಲ ಅಬ್ಬರ, ಆಡಂಬರ, ಮಾಡರ್ನ್, ಫಾಸ್ಟ್ಬೀಟ್ ಹಾಡುಗಳಿಗಷ್ಟೇ ಸೀಮಿತವಾಗಿರಲಿಲ್ಲ.<br /> <br /> ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಂದ ಸ್ಫೂರ್ತಿಗೊಂಡು ಭ್ರಷ್ಟಾಚಾರ ವಿರುದ್ಧ, ರಾಷ್ಟ್ರೀಯ ಭಾವೈಕ್ಯ, ಕೋಮು ಸಾಮರಸ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತಾದ ನೃತ್ಯ ರೂಪಕಗಳನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು.<br /> <br /> ಟಿ.ವಿ. ಚಾನಲ್ಗಳು ನೃತ್ಯಕ್ಕೆ ಸಂಬಂಧಿಸಿದ ರಿಯಾಲಿಟಿ ಶೋಗಳನ್ನು ನಡೆಸುತ್ತಿವೆ. ಇವುಗಳ ಪ್ರಭಾವಕ್ಕೆ ಒಳಗಾದ ಕಾಲೇಜು ವಿದ್ಯಾರ್ಥಿಗಳು ಪೈಪೋಟಿಗೆ ಬಿದ್ದವರಂತೆ ಅತ್ಯುತ್ತಮ ಪ್ರದರ್ಶನ ನೀಡಿ, ತಮ್ಮ ಸುಪ್ತಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿದರು. ಈ ದೃಷ್ಟಿಯಲ್ಲಿ `ಯುವ ಸಂಭ್ರಮ~ ರಂಜನೆ ಜೊತೆಗೆ ನೂರಾರು ಪ್ರತಿಭೆಗಳನ್ನು ಬೆಳಕಿಗೆ ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>