<p><strong>ಬಳ್ಳಾರಿ: </strong>ನಗರದ ವೀರಶೈವ ಕಾಲೇಜು ಮೈದಾನದಲ್ಲಿ ಭಾನುವಾರ ಕೆಎಸ್ಸಿಎ ಆಯೋಜಿಸಿದ್ದ ತುಮಕೂರು ವಲಯದ 2ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ದಾವಣಗೆರೆ ಕ್ರಿಕೆಟ್ ಕ್ಲಬ್ ತಂಡ ಬಳ್ಳಾರಿಯ ಎಸಿಸಿ ಕ್ರಿಕೆಟ್ ಕ್ಲಬ್ ತಂಡದ ವಿರುದ್ಧ ಜಯ ಗಳಿಸಿತು.<br /> <br /> ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡ ಆದರೆ, ದಾವಣಗೆರೆಯ ಸುರೇಶ್ ಕರ್ನಿ ಅವರ ಮಾರಕ ಬೌಲಿಂಗ್ (9.2 ಓವರ್ಗಳಲ್ಲಿ 13 ರನ್ಗಳಿಗೆ 6 ವಿಕೆಟ್) ದಾಳಿಗೆ ತತ್ತರಿಸಿ ಕೇವಲ 29.1 ಓವರ್ಗಳಲ್ಲಿ 89 ರನ್ಗಳಿಗೆ ಆಲೌಟ್ ಆಯಿತು.<br /> <br /> ಸುರೇಶ್ ಅವರಿಗೆ ಉತ್ತಮ ಜತೆ ನೀಡಿದ ಕೆ.ಪ್ರಶಾಂತ್ (10 ಓವರ್ಗಳಲ್ಲಿ 27 ರನ್ಗಳಿಗೆ 3 ವಿಕೆಟ್) ಎದುರಾಳಿ ತಂಡವನ್ನು ಅತ್ಯಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.<br /> <br /> ಬಳ್ಳಾರಿ ತಂಡದ ಪರ ಮಣಿ ನಾಲ್ಕು ಬೌಂಡರಿಗಳಿದ್ದ 18 ರನ್ ಗಳಿಸಿದರೆ, ಚಕ್ರವರ್ತಿ 3 ಬೌಂಡರಿಗಳಿದ್ದ 19 ರನ್ ಪೇರಿಸಿದರು.<br /> ತಮ್ಮ ಸರದಿಯ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ದಾವಣಗೆರೆ ಕ್ರಿಕೆಟ್ ಕ್ಲಬ್ ತಂಡ, ಕೇವಲ 9.2 ಓವರ್ಗಳಲ್ಲಿ 2 ವಿಕೆಟ್ ಕಳೆದಕೊಂಡು ಗೆಲುವಿನ ಗುರಿ ತಲುಪಿತು.<br /> <br /> ಕೆ.ಪ್ರಶಾಂತ್ 44 ಎಸೆತಗಳಲ್ಲಿ 11 ಬೌಂಡರಿ ನೆರವಿನ 60 ರನ್ ಗಳಿಸಿದರೆ, ಎಚ್.ಪಿ. ರಾಹುಲ್ 6 ಬೌಂಡರಿಗಳಿದ್ದ 27 ರನ್ ಗಳಿಸಿ ಉತ್ತಮ ಕಾಣಿಕೆ ನೀಡಿದರು.<br /> <br /> ಬಳ್ಳಾರಿಯ ಎಸಿಸಿ ತಂಡದ ಪರ ಆದಿತ್ಯ ಕಾಕಡೆ ಮತ್ತು ಇಜಾಜ್ ತಲಾ ಒಂದು ವಿಕೆಟ್ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ನಗರದ ವೀರಶೈವ ಕಾಲೇಜು ಮೈದಾನದಲ್ಲಿ ಭಾನುವಾರ ಕೆಎಸ್ಸಿಎ ಆಯೋಜಿಸಿದ್ದ ತುಮಕೂರು ವಲಯದ 2ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ದಾವಣಗೆರೆ ಕ್ರಿಕೆಟ್ ಕ್ಲಬ್ ತಂಡ ಬಳ್ಳಾರಿಯ ಎಸಿಸಿ ಕ್ರಿಕೆಟ್ ಕ್ಲಬ್ ತಂಡದ ವಿರುದ್ಧ ಜಯ ಗಳಿಸಿತು.<br /> <br /> ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡ ಆದರೆ, ದಾವಣಗೆರೆಯ ಸುರೇಶ್ ಕರ್ನಿ ಅವರ ಮಾರಕ ಬೌಲಿಂಗ್ (9.2 ಓವರ್ಗಳಲ್ಲಿ 13 ರನ್ಗಳಿಗೆ 6 ವಿಕೆಟ್) ದಾಳಿಗೆ ತತ್ತರಿಸಿ ಕೇವಲ 29.1 ಓವರ್ಗಳಲ್ಲಿ 89 ರನ್ಗಳಿಗೆ ಆಲೌಟ್ ಆಯಿತು.<br /> <br /> ಸುರೇಶ್ ಅವರಿಗೆ ಉತ್ತಮ ಜತೆ ನೀಡಿದ ಕೆ.ಪ್ರಶಾಂತ್ (10 ಓವರ್ಗಳಲ್ಲಿ 27 ರನ್ಗಳಿಗೆ 3 ವಿಕೆಟ್) ಎದುರಾಳಿ ತಂಡವನ್ನು ಅತ್ಯಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.<br /> <br /> ಬಳ್ಳಾರಿ ತಂಡದ ಪರ ಮಣಿ ನಾಲ್ಕು ಬೌಂಡರಿಗಳಿದ್ದ 18 ರನ್ ಗಳಿಸಿದರೆ, ಚಕ್ರವರ್ತಿ 3 ಬೌಂಡರಿಗಳಿದ್ದ 19 ರನ್ ಪೇರಿಸಿದರು.<br /> ತಮ್ಮ ಸರದಿಯ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ದಾವಣಗೆರೆ ಕ್ರಿಕೆಟ್ ಕ್ಲಬ್ ತಂಡ, ಕೇವಲ 9.2 ಓವರ್ಗಳಲ್ಲಿ 2 ವಿಕೆಟ್ ಕಳೆದಕೊಂಡು ಗೆಲುವಿನ ಗುರಿ ತಲುಪಿತು.<br /> <br /> ಕೆ.ಪ್ರಶಾಂತ್ 44 ಎಸೆತಗಳಲ್ಲಿ 11 ಬೌಂಡರಿ ನೆರವಿನ 60 ರನ್ ಗಳಿಸಿದರೆ, ಎಚ್.ಪಿ. ರಾಹುಲ್ 6 ಬೌಂಡರಿಗಳಿದ್ದ 27 ರನ್ ಗಳಿಸಿ ಉತ್ತಮ ಕಾಣಿಕೆ ನೀಡಿದರು.<br /> <br /> ಬಳ್ಳಾರಿಯ ಎಸಿಸಿ ತಂಡದ ಪರ ಆದಿತ್ಯ ಕಾಕಡೆ ಮತ್ತು ಇಜಾಜ್ ತಲಾ ಒಂದು ವಿಕೆಟ್ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>