<p>ಕೋಲಾರ: ದೀಪಾವಳಿಗೆ ದೀಪವೊಂದೇ ಸಾಕು, ದೀಪಾವಳಿ ತರುವುದು ಹೊಸತನ- ಪಟಾಕಿ ತರುವುದು ಕುರುಡುತನ, ಪಟಾಕಿಗೆ ವಿದಾಯ- ಅಪ್ಪನ ಜೇಬಿಗೆ ಉಳಿತಾಯ...<br /> <br /> ನೂರಾರು ಮಕ್ಕಳು ಇಂಥ ಘೋಷವಾಕ್ಯಗಳುಳ್ಳ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ನಡೆಯುತ್ತಿದ್ದಾಗ ದಾರಿಯುದ್ದಕ್ಕೂ ಜನ ಕುತೂಹಲ ಮತ್ತು ಆಸಕ್ತಿಯಿಂದ ನಿಂತು ನೋಡಿದರು.<br /> <br /> ಸುರಕ್ಷಿತ ದೀಪಾವಳಿ ಆಚರಣೆ ಕುರಿತು ಆಟೋರಿಕ್ಷಾದ ಮೈಕ್ಗಳ ಮೂಲಕ ಸೂಚನೆಗಳನ್ನು ಕೇಳುತ್ತಿದ್ದ ಜನರಿಗೆ ಇದು ಹೊಸ ಬಗೆಯಾಗಿತ್ತು. ಅದರಲ್ಲೂ ಆಕರ್ಷಕ ಬರಹಗಳುಳ್ಳ ಫಲಕಗಳು ಹೆಚ್ಚು ಜನರ ಗಮನ ಸೆಳೆದವು.<br /> <br /> ನಗರದ ಗಾಂಧಿವನದ ಆವರಣದಲ್ಲಿ ಜಾಗೃತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಚಾಲನೆ ನೀಡಿದರು.<br /> <br /> ದೀಪಾವಳಿಗೆ ದೀಪವೊಂದೇ ಸಾಕು ಎಂದು ಎಲ್ಲರೂ ನಿರ್ಧಾರವನ್ನು ಕೈಗೊಂಡರೆ ಬಹುತೇಕ ಅಪಘಾತಗಳನ್ನು ತಪ್ಪಿಸಬಹುದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹತ್ತಿ ಬಟ್ಟೆ, ಪಾದರಕ್ಷೆಗಳನ್ನು ಧರಿಸಬೇಕು ಎಂದು ಕಿವಿಮಾತು ಹೇಳಿದರು.<br /> <br /> ಬಹು ಮಹಡಿಗಳ ಕಟ್ಟಡಗಳಲ್ಲಿ ವಾಸಿಸುವವರು ತೆರೆದ ಮೈದಾನಗಳಲ್ಲಿ ಸಂಘಟಿತರಾಗಿ ಪಟಾಕಿಗಳನ್ನು ಸಿಡಿಸುವುದು ಉತ್ತಮ. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಮನೆಯಲ್ಲಿ ಸಿದ್ದಪಡಿಸಿಟ್ಟುಕೊಳ್ಳಲೇಬೇಕು. <br /> <br /> ಶಬ್ದಮಾಲಿನ್ಯದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಕಿವಿಗಳಲ್ಲಿ ಹತ್ತಿ ಉಂಡೆಗಳನ್ನು ಇಟ್ಟುಕೊಳ್ಳಬೇಕು. <br /> ರೋಗಿಗಳು, ಎಳೆಯ ಮಕ್ಕಳು ಮತ್ತು ವೃದ್ಧರು ಇರುವ ಮನೆಗಳಲ್ಲಿ ಪಟಾಕಿ ಹೊಡೆಯಬಾರದು. ಆದಷ್ಟೂ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು ಎಂದರು.<br /> <br /> ಗಾಂಧಿವನದಿಂದ ಶುರುವಾಗಿ ಎಂ.ಜಿ ರಸ್ತೆ ಮೂಲಕನ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ನಗರದ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. <br /> <br /> ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್ದಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಪಿಖರ್ ಉಲ್ಲಾ ಸಹ ಫಲಕಗಳನ್ನ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ದೀಪಾವಳಿಗೆ ದೀಪವೊಂದೇ ಸಾಕು, ದೀಪಾವಳಿ ತರುವುದು ಹೊಸತನ- ಪಟಾಕಿ ತರುವುದು ಕುರುಡುತನ, ಪಟಾಕಿಗೆ ವಿದಾಯ- ಅಪ್ಪನ ಜೇಬಿಗೆ ಉಳಿತಾಯ...<br /> <br /> ನೂರಾರು ಮಕ್ಕಳು ಇಂಥ ಘೋಷವಾಕ್ಯಗಳುಳ್ಳ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ನಡೆಯುತ್ತಿದ್ದಾಗ ದಾರಿಯುದ್ದಕ್ಕೂ ಜನ ಕುತೂಹಲ ಮತ್ತು ಆಸಕ್ತಿಯಿಂದ ನಿಂತು ನೋಡಿದರು.<br /> <br /> ಸುರಕ್ಷಿತ ದೀಪಾವಳಿ ಆಚರಣೆ ಕುರಿತು ಆಟೋರಿಕ್ಷಾದ ಮೈಕ್ಗಳ ಮೂಲಕ ಸೂಚನೆಗಳನ್ನು ಕೇಳುತ್ತಿದ್ದ ಜನರಿಗೆ ಇದು ಹೊಸ ಬಗೆಯಾಗಿತ್ತು. ಅದರಲ್ಲೂ ಆಕರ್ಷಕ ಬರಹಗಳುಳ್ಳ ಫಲಕಗಳು ಹೆಚ್ಚು ಜನರ ಗಮನ ಸೆಳೆದವು.<br /> <br /> ನಗರದ ಗಾಂಧಿವನದ ಆವರಣದಲ್ಲಿ ಜಾಗೃತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಚಾಲನೆ ನೀಡಿದರು.<br /> <br /> ದೀಪಾವಳಿಗೆ ದೀಪವೊಂದೇ ಸಾಕು ಎಂದು ಎಲ್ಲರೂ ನಿರ್ಧಾರವನ್ನು ಕೈಗೊಂಡರೆ ಬಹುತೇಕ ಅಪಘಾತಗಳನ್ನು ತಪ್ಪಿಸಬಹುದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹತ್ತಿ ಬಟ್ಟೆ, ಪಾದರಕ್ಷೆಗಳನ್ನು ಧರಿಸಬೇಕು ಎಂದು ಕಿವಿಮಾತು ಹೇಳಿದರು.<br /> <br /> ಬಹು ಮಹಡಿಗಳ ಕಟ್ಟಡಗಳಲ್ಲಿ ವಾಸಿಸುವವರು ತೆರೆದ ಮೈದಾನಗಳಲ್ಲಿ ಸಂಘಟಿತರಾಗಿ ಪಟಾಕಿಗಳನ್ನು ಸಿಡಿಸುವುದು ಉತ್ತಮ. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಮನೆಯಲ್ಲಿ ಸಿದ್ದಪಡಿಸಿಟ್ಟುಕೊಳ್ಳಲೇಬೇಕು. <br /> <br /> ಶಬ್ದಮಾಲಿನ್ಯದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಕಿವಿಗಳಲ್ಲಿ ಹತ್ತಿ ಉಂಡೆಗಳನ್ನು ಇಟ್ಟುಕೊಳ್ಳಬೇಕು. <br /> ರೋಗಿಗಳು, ಎಳೆಯ ಮಕ್ಕಳು ಮತ್ತು ವೃದ್ಧರು ಇರುವ ಮನೆಗಳಲ್ಲಿ ಪಟಾಕಿ ಹೊಡೆಯಬಾರದು. ಆದಷ್ಟೂ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು ಎಂದರು.<br /> <br /> ಗಾಂಧಿವನದಿಂದ ಶುರುವಾಗಿ ಎಂ.ಜಿ ರಸ್ತೆ ಮೂಲಕನ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ನಗರದ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. <br /> <br /> ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್ದಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಪಿಖರ್ ಉಲ್ಲಾ ಸಹ ಫಲಕಗಳನ್ನ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>