<p>ಮುನವಳ್ಳಿ (ತಾ. ಸವದತ್ತಿ): ತಾಲ್ಲೂಕಿನ ಮದ್ಲೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ನಿಮಿತ್ತ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 51 ಜೋಡಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು.<br /> ಸಮಾರಂಭದದಲ್ಲಿ ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದುಂದುವೆಚ್ಚ ತಪ್ಪಿಸಿ ಬಡವರಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಮಾಜದಲ್ಲಿ ಬಡವ- ಶ್ರೀಮಂತ, ಮೇಲು ಕೀಳು, ಜಾತಿ ಧರ್ಮ ಇತ್ಯಾದಿ ಬೇಧಭಾವವನ್ನು ತೊಡೆದು ಹಾಕಿ ಸಮಾನತೆ, ಸಹಬಾಳ್ವೆ ಮತ್ತು ಶಾಂತಿ ನೆಮ್ಮದಿಯ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ನುಡಿದರು.<br /> <br /> ನೂತನವಾಗಿ ದಾಂಪತ್ಯಕ್ಕೆ ಹೆಜ್ಜೆ ಇಡುತ್ತಿರುವ ವಧು ವರರು ಉತ್ತಮ ಸಮಾಜ ನಿರ್ಮಿಸುವತ್ತ ಗಮನ ನೀಡಬೇಕು ಎಂದು ಆಶೀರ್ವದಿಸಿದರು.ಇಂಚಗೇರಿಮಠದ ಪ್ರಭು ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ದೇಶನೂರ ಸಾರ್ವಜನಿಕ ವಿರಕ್ತಮಠದ ಧರ್ಮಗುರು ಮೆನಿನೋ, ಮದ್ಲೂರ ಶಾಂತಿಮಠದ ಭೀಮಾನಂದ ಸ್ವಾಮೀಜಿ ಮತ್ತು ಗೊರಗುದ್ದಿ ಮಠದ ತುಕಾರಾಮ ಸಾಧು ಮಹಾರಾಜರು ಉಪಸ್ಥಿತರಿದ್ದರು.<br /> <br /> ಗ್ರಾ.ಪಂ. ಅಧ್ಯಕ್ಷ ಫಕೀರಪ್ಪ ಹದ್ದನ್ನವರ, ಸದಸ್ಯರಾದ ಅಶೋಕ ಕುರಿ, ಫಕ್ರುಸಾಬ್ ದೊಡಮನಿ, ಪಾಂಡು ಕಲಕುಟ್ರಿ, ಮಲ್ಲೇಶ ಕಲಕುಟ್ರಿ, ಸಿದ್ಧಾರೂಢ ಬಿಲಕಂಚಿ, ಮಹಾದೇವ ಪಟಾತ, ಜಿ.ಎಸ್. ದೊಡಮನಿ, ಬಸವರಾಜ ಪೂಜೇರ, ಬಾಬು ಪರಾಶಿ, ಲಕ್ಷ್ಮಣ್ಣ ಹೊಟ್ಟಿ, ಎಮ್.ಎಮ್. ಗೊರವನಕೊಳ್ಳ, ಸಿದ್ದಪ್ಪ ಹೂಲಿ ಮತ್ತು ಮಾರುತಿ ಕುರಿ ಮತ್ತಿತರರು ಭಾಗವಹಿಸಿದ್ದರು.<br /> ಬಸವರಾಜ ಮನಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್. ದೊಡಮನಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಡಿಗೇರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುನವಳ್ಳಿ (ತಾ. ಸವದತ್ತಿ): ತಾಲ್ಲೂಕಿನ ಮದ್ಲೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ನಿಮಿತ್ತ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 51 ಜೋಡಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು.<br /> ಸಮಾರಂಭದದಲ್ಲಿ ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದುಂದುವೆಚ್ಚ ತಪ್ಪಿಸಿ ಬಡವರಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಮಾಜದಲ್ಲಿ ಬಡವ- ಶ್ರೀಮಂತ, ಮೇಲು ಕೀಳು, ಜಾತಿ ಧರ್ಮ ಇತ್ಯಾದಿ ಬೇಧಭಾವವನ್ನು ತೊಡೆದು ಹಾಕಿ ಸಮಾನತೆ, ಸಹಬಾಳ್ವೆ ಮತ್ತು ಶಾಂತಿ ನೆಮ್ಮದಿಯ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ನುಡಿದರು.<br /> <br /> ನೂತನವಾಗಿ ದಾಂಪತ್ಯಕ್ಕೆ ಹೆಜ್ಜೆ ಇಡುತ್ತಿರುವ ವಧು ವರರು ಉತ್ತಮ ಸಮಾಜ ನಿರ್ಮಿಸುವತ್ತ ಗಮನ ನೀಡಬೇಕು ಎಂದು ಆಶೀರ್ವದಿಸಿದರು.ಇಂಚಗೇರಿಮಠದ ಪ್ರಭು ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ದೇಶನೂರ ಸಾರ್ವಜನಿಕ ವಿರಕ್ತಮಠದ ಧರ್ಮಗುರು ಮೆನಿನೋ, ಮದ್ಲೂರ ಶಾಂತಿಮಠದ ಭೀಮಾನಂದ ಸ್ವಾಮೀಜಿ ಮತ್ತು ಗೊರಗುದ್ದಿ ಮಠದ ತುಕಾರಾಮ ಸಾಧು ಮಹಾರಾಜರು ಉಪಸ್ಥಿತರಿದ್ದರು.<br /> <br /> ಗ್ರಾ.ಪಂ. ಅಧ್ಯಕ್ಷ ಫಕೀರಪ್ಪ ಹದ್ದನ್ನವರ, ಸದಸ್ಯರಾದ ಅಶೋಕ ಕುರಿ, ಫಕ್ರುಸಾಬ್ ದೊಡಮನಿ, ಪಾಂಡು ಕಲಕುಟ್ರಿ, ಮಲ್ಲೇಶ ಕಲಕುಟ್ರಿ, ಸಿದ್ಧಾರೂಢ ಬಿಲಕಂಚಿ, ಮಹಾದೇವ ಪಟಾತ, ಜಿ.ಎಸ್. ದೊಡಮನಿ, ಬಸವರಾಜ ಪೂಜೇರ, ಬಾಬು ಪರಾಶಿ, ಲಕ್ಷ್ಮಣ್ಣ ಹೊಟ್ಟಿ, ಎಮ್.ಎಮ್. ಗೊರವನಕೊಳ್ಳ, ಸಿದ್ದಪ್ಪ ಹೂಲಿ ಮತ್ತು ಮಾರುತಿ ಕುರಿ ಮತ್ತಿತರರು ಭಾಗವಹಿಸಿದ್ದರು.<br /> ಬಸವರಾಜ ಮನಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್. ದೊಡಮನಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಡಿಗೇರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>