<p>ನವದೆಹಲಿ (ಐಎಎನ್ಎಸ್): ಭಾರತದ ರಾಜಧಾನಿಯ ಮೇಲೆ ಭಯೋತ್ಪಾದಕ ಗುಂಪುಗಳು ಹದ್ದುಗಣ್ಣು ಇರಿಸಿವೆ. ದೆಹಲಿ ಹೈಕೋರ್ಟ್ ಹೊರಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಭಯೋತ್ಪಾದಕ ಕೃತ್ಯ ಎಂದು ಗೃಹ ಸಚಿವ ಪಿ. ಚಿದಂಬರಂ ಬುಧವಾರ ಹೇಳಿದರು.<br /> <br /> ಲೋಕಸಭೆಯಲ್ಲಿ ಬಾಂಬ್ ಸ್ಫೋಟ ಘಟನೆಯ ಬಗ್ಗೆ ಹೇಳಿಕೆ ನೀಡಿದ ಬಳಿಕ ಚಿದಂಬರಂ ಬಾಂಬ್ ಸ್ಫೋಟ ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದರು.<br /> <br /> ಬಾಂಬ್ ಸ್ಫೋಟದ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಚಿದಂಬರಂ ಅವರು ಸ್ಫೋಟದಲ್ಲಿ 9 ಜನ ಮೃತರಾಗಿ, 47 ಮಂದಿ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಗೃಹ ಸಚಿವರು ದಾಳಿಕೋರರ ಗುರುತು ಅಥವಾ ಸೂಟ್ ಕೇಸ್ ನಲ್ಲಿ ಶಕ್ತಿಶಾಲಿ ಬಾಂಬ್ ಇರಿಸಿದವರ ಗುರುತು ವಿವರ ನೀಡಲಿಲ್ಲ. <br /> <br /> ಘಟನೆ ಬಗ್ಗೆ ವಿವಿಧ ಸಂಸ್ಥೆಗಳು ಬಹುಮುಖ ತನಿಖೆ ಆರಂಭಿಸಿವೆ. ಘಟನೆಗೆ ಕಾರಣರಾದವರನ್ನು ತತ್ ಕ್ಷಣಕ್ಕೆ ಗುರುತು ಹಚ್ಚುವುದು ಕಷ್ಟ ಎಂದು ಅವರು ನುಡಿದರು.<br /> <br /> <strong>ಸಂಸತ್ತಿನ ಖಂಡನೆ:</strong> ಅದಕ್ಕೆ ಮುನ್ನ ಸಂಸತ್ತಿನ ಉಭಯ ಸದನಗಳೂ ಬಾಂಬ್ ಸ್ಫೋಟದ ಘಟನೆಯನ್ನು ಖಂಡಿಸಿದವು. ಖಂಡನೆಯ ಬಳಿಕ ಕಲಾಪಗಳನ್ನು ಸ್ವಲ್ಪ ಕಾಲ ಮುಂದೂಡಲಾಯಿತು.<br /> <br /> <strong>ಪ್ರತಿಪಕ್ಷ ಟೀಕೆ:</strong> ಹೈಕೋರ್ಟ್ ಆವರಣದ ಹೊರಭಾಗದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಘಟನೆಗೆ ಸರ್ಕಾರದ ಭದ್ರತಾಲೋಪವೇ ಕಾರಣ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ವಿವಿಧ ಪಕ್ಷಗಳ ಧುರೀಣರು ಈ ಬಗ್ಗೆ ಪ್ರತಿಕ್ರಿಯಿಸಿ ಘಟನೆ- ಭದ್ರತಾ ಲೋಪ ಬಗ್ಗೆ ವಿಸ್ತೃತ ತನಿಖೆಗೆ ಆಗ್ರಹಿಸಿದ್ದಾರೆ.<br /> <br /> ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಶಂಕರ ಪ್ರಸಾದ್, ಸಿಪಿಐ ನಾಯಕ ಡಿ. ರಾಜಾ, ಗುರುದಾಸ ದಾಸಗುಪ್ತ ಅವರು ಬಾಂಬ್ ಸ್ಫೋಟದ ಬಗ್ಗೆ ಸರ್ಕಾರಕ್ಕೆ ಯಾವುದೇ ಪೂರ್ವಭಾವಿ ಮಾಹಿತಿ ದೊರಕದೇ ಇದ್ದುದು ದುರದೃಷ್ಟಕರ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ಭಾರತದ ರಾಜಧಾನಿಯ ಮೇಲೆ ಭಯೋತ್ಪಾದಕ ಗುಂಪುಗಳು ಹದ್ದುಗಣ್ಣು ಇರಿಸಿವೆ. ದೆಹಲಿ ಹೈಕೋರ್ಟ್ ಹೊರಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಭಯೋತ್ಪಾದಕ ಕೃತ್ಯ ಎಂದು ಗೃಹ ಸಚಿವ ಪಿ. ಚಿದಂಬರಂ ಬುಧವಾರ ಹೇಳಿದರು.<br /> <br /> ಲೋಕಸಭೆಯಲ್ಲಿ ಬಾಂಬ್ ಸ್ಫೋಟ ಘಟನೆಯ ಬಗ್ಗೆ ಹೇಳಿಕೆ ನೀಡಿದ ಬಳಿಕ ಚಿದಂಬರಂ ಬಾಂಬ್ ಸ್ಫೋಟ ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದರು.<br /> <br /> ಬಾಂಬ್ ಸ್ಫೋಟದ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಚಿದಂಬರಂ ಅವರು ಸ್ಫೋಟದಲ್ಲಿ 9 ಜನ ಮೃತರಾಗಿ, 47 ಮಂದಿ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಗೃಹ ಸಚಿವರು ದಾಳಿಕೋರರ ಗುರುತು ಅಥವಾ ಸೂಟ್ ಕೇಸ್ ನಲ್ಲಿ ಶಕ್ತಿಶಾಲಿ ಬಾಂಬ್ ಇರಿಸಿದವರ ಗುರುತು ವಿವರ ನೀಡಲಿಲ್ಲ. <br /> <br /> ಘಟನೆ ಬಗ್ಗೆ ವಿವಿಧ ಸಂಸ್ಥೆಗಳು ಬಹುಮುಖ ತನಿಖೆ ಆರಂಭಿಸಿವೆ. ಘಟನೆಗೆ ಕಾರಣರಾದವರನ್ನು ತತ್ ಕ್ಷಣಕ್ಕೆ ಗುರುತು ಹಚ್ಚುವುದು ಕಷ್ಟ ಎಂದು ಅವರು ನುಡಿದರು.<br /> <br /> <strong>ಸಂಸತ್ತಿನ ಖಂಡನೆ:</strong> ಅದಕ್ಕೆ ಮುನ್ನ ಸಂಸತ್ತಿನ ಉಭಯ ಸದನಗಳೂ ಬಾಂಬ್ ಸ್ಫೋಟದ ಘಟನೆಯನ್ನು ಖಂಡಿಸಿದವು. ಖಂಡನೆಯ ಬಳಿಕ ಕಲಾಪಗಳನ್ನು ಸ್ವಲ್ಪ ಕಾಲ ಮುಂದೂಡಲಾಯಿತು.<br /> <br /> <strong>ಪ್ರತಿಪಕ್ಷ ಟೀಕೆ:</strong> ಹೈಕೋರ್ಟ್ ಆವರಣದ ಹೊರಭಾಗದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಘಟನೆಗೆ ಸರ್ಕಾರದ ಭದ್ರತಾಲೋಪವೇ ಕಾರಣ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ವಿವಿಧ ಪಕ್ಷಗಳ ಧುರೀಣರು ಈ ಬಗ್ಗೆ ಪ್ರತಿಕ್ರಿಯಿಸಿ ಘಟನೆ- ಭದ್ರತಾ ಲೋಪ ಬಗ್ಗೆ ವಿಸ್ತೃತ ತನಿಖೆಗೆ ಆಗ್ರಹಿಸಿದ್ದಾರೆ.<br /> <br /> ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಶಂಕರ ಪ್ರಸಾದ್, ಸಿಪಿಐ ನಾಯಕ ಡಿ. ರಾಜಾ, ಗುರುದಾಸ ದಾಸಗುಪ್ತ ಅವರು ಬಾಂಬ್ ಸ್ಫೋಟದ ಬಗ್ಗೆ ಸರ್ಕಾರಕ್ಕೆ ಯಾವುದೇ ಪೂರ್ವಭಾವಿ ಮಾಹಿತಿ ದೊರಕದೇ ಇದ್ದುದು ದುರದೃಷ್ಟಕರ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>