<p>ಆಲಮಟ್ಟಿ: ಪ್ರತಿ ಗ್ರಾಮಗಳ ಸರ್ವಧರ್ಮೀಯ ಹಳೇ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.<br /> <br /> ಶುಕ್ರವಾರ, ಗಣಿ ಪುನರ್ವಸತಿ ಕೇಂದ್ರದಲ್ಲಿ ನಡೆದ ಶ್ರೀ ಒಪ್ಪತ್ತೇಶ್ವರ ಮಠದ ನೂತನ ಕಟ್ಟಡದ ಅಡಿಗಲ್ಲು ನೆರವೇರಿಸಿ ಮಾತನಾಡಿದರು. <br /> <br /> ಈ ಮಠದ ಕಟ್ಟಡಕ್ಕಾಗಿ ತುರ್ತಾಗಿ ಲಕ್ಷ ರೂಪಾಯಿ ಹಾಗೂ ಹಂತ ಹಂತವಾಗಿ 5 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಹೇಳಿದರು. <br /> <br /> ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಗಣಿ ಗ್ರಾಮದಲ್ಲಿ ಜನತೆಯಲ್ಲಿ ಮೂಡಿರುವ ದ್ವೇಷ, ಅಸೂಯೆ ನಿವಾರಣೆಯಾಗಬೇಕಿದ್ದು, ಆ ನಿಟ್ಟಿನಲ್ಲಿ ಮಠದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು. <br /> <br /> ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, `ನಮ್ಮ ದೇಶದ ಯೋಗ, ಆಧ್ಮಾತ್ಮ ಕಲಿಯಲು ವಿದೇಶಿಯರು ಮುಗಿಬೀಳುತ್ತಿದ್ದು, ಹೆಮ್ಮೆಯ ಸಂಗತಿಯಾಗಿದೆ. ವಿದೇಶ ಸಂಸ್ಕೃತಿ ದ್ರಾಕ್ಷ (ದ್ರಾಕ್ಷಾರಸ) ಸಂಸ್ಕೃತಿಯಾದರೇ ನಮ್ಮದು ರುದ್ರಾಕ್ಷ ಸಂಸ್ಕೃತಿ ಎಂದರು.<br /> <br /> ಸಿದ್ಧವೀರ ಸ್ವಾಮೀಜಿ, ಫಕೀರೇಶ್ವರ ಸ್ವಾಮೀಜಿ, ಪ್ರಶಾಂತ ದೇವರು, ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.<br /> <br /> ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ರೈತ ಮುಖಂಡ ಬಸವರಾಜ ಕುಂಬಾರ, ಭೂನ್ಯಾಯ ಮಂಡಳಿ ಸದಸ್ಯ ಪ್ರಶಾಂತ ಪವಾರ, ತಹಸೀಲ್ದಾರ ಮಹಾದೇವ ಮುರಗಿ, ಸುಭಾಷಚಂದ್ರ ಅವಟಿ, ಭೀಮಣ್ಣ ಗೋಡಿಹಾಳ, ಲಕ್ಷ್ಮಣ ಬಡಿಗೇರ, ಸುಶೀಲಾ ಪವಾರ, ರಂಗನಗೌಡ ಪಾಟೀಲ, ಮೊದಲಾದವರಿದ್ದರು.<br /> <br /> ಇದಕ್ಕೂ ಮೊದಲು 108 ಸುಮಂಗಲೆಯರಿಂದ ಕುಂಭದ ಮೆರವಣಿಗೆ ಡೊಳ್ಳುಗಳ ನಿನಾದದ ಮಧ್ಯೆ ಜರುಗಿತು. ಶ್ರೀಶೈಲ ಪಟ್ಟಣಶೆಟ್ಟಿ ಸ್ವಾಗತಿಸಿದರು. ಫಕೀರೇಶ್ವರ ಶ್ರೀಗಳು ನಿರೂಪಿಸಿದರು. ರಮೇಶ ಚವ್ಹಾಣ ವಂದಿಸಿದರು. ವಿವಿಧ ಶ್ರೀಗಳನ್ನು, ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲಮಟ್ಟಿ: ಪ್ರತಿ ಗ್ರಾಮಗಳ ಸರ್ವಧರ್ಮೀಯ ಹಳೇ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.<br /> <br /> ಶುಕ್ರವಾರ, ಗಣಿ ಪುನರ್ವಸತಿ ಕೇಂದ್ರದಲ್ಲಿ ನಡೆದ ಶ್ರೀ ಒಪ್ಪತ್ತೇಶ್ವರ ಮಠದ ನೂತನ ಕಟ್ಟಡದ ಅಡಿಗಲ್ಲು ನೆರವೇರಿಸಿ ಮಾತನಾಡಿದರು. <br /> <br /> ಈ ಮಠದ ಕಟ್ಟಡಕ್ಕಾಗಿ ತುರ್ತಾಗಿ ಲಕ್ಷ ರೂಪಾಯಿ ಹಾಗೂ ಹಂತ ಹಂತವಾಗಿ 5 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಹೇಳಿದರು. <br /> <br /> ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಗಣಿ ಗ್ರಾಮದಲ್ಲಿ ಜನತೆಯಲ್ಲಿ ಮೂಡಿರುವ ದ್ವೇಷ, ಅಸೂಯೆ ನಿವಾರಣೆಯಾಗಬೇಕಿದ್ದು, ಆ ನಿಟ್ಟಿನಲ್ಲಿ ಮಠದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು. <br /> <br /> ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, `ನಮ್ಮ ದೇಶದ ಯೋಗ, ಆಧ್ಮಾತ್ಮ ಕಲಿಯಲು ವಿದೇಶಿಯರು ಮುಗಿಬೀಳುತ್ತಿದ್ದು, ಹೆಮ್ಮೆಯ ಸಂಗತಿಯಾಗಿದೆ. ವಿದೇಶ ಸಂಸ್ಕೃತಿ ದ್ರಾಕ್ಷ (ದ್ರಾಕ್ಷಾರಸ) ಸಂಸ್ಕೃತಿಯಾದರೇ ನಮ್ಮದು ರುದ್ರಾಕ್ಷ ಸಂಸ್ಕೃತಿ ಎಂದರು.<br /> <br /> ಸಿದ್ಧವೀರ ಸ್ವಾಮೀಜಿ, ಫಕೀರೇಶ್ವರ ಸ್ವಾಮೀಜಿ, ಪ್ರಶಾಂತ ದೇವರು, ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.<br /> <br /> ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ರೈತ ಮುಖಂಡ ಬಸವರಾಜ ಕುಂಬಾರ, ಭೂನ್ಯಾಯ ಮಂಡಳಿ ಸದಸ್ಯ ಪ್ರಶಾಂತ ಪವಾರ, ತಹಸೀಲ್ದಾರ ಮಹಾದೇವ ಮುರಗಿ, ಸುಭಾಷಚಂದ್ರ ಅವಟಿ, ಭೀಮಣ್ಣ ಗೋಡಿಹಾಳ, ಲಕ್ಷ್ಮಣ ಬಡಿಗೇರ, ಸುಶೀಲಾ ಪವಾರ, ರಂಗನಗೌಡ ಪಾಟೀಲ, ಮೊದಲಾದವರಿದ್ದರು.<br /> <br /> ಇದಕ್ಕೂ ಮೊದಲು 108 ಸುಮಂಗಲೆಯರಿಂದ ಕುಂಭದ ಮೆರವಣಿಗೆ ಡೊಳ್ಳುಗಳ ನಿನಾದದ ಮಧ್ಯೆ ಜರುಗಿತು. ಶ್ರೀಶೈಲ ಪಟ್ಟಣಶೆಟ್ಟಿ ಸ್ವಾಗತಿಸಿದರು. ಫಕೀರೇಶ್ವರ ಶ್ರೀಗಳು ನಿರೂಪಿಸಿದರು. ರಮೇಶ ಚವ್ಹಾಣ ವಂದಿಸಿದರು. ವಿವಿಧ ಶ್ರೀಗಳನ್ನು, ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>