<p><strong>ಚಲನಚಿತ್ರ ನಟ ಉಪೇಂದ್ರ ವಿಷಾದ<br /> <br /> ಬೆಂಗಳೂರು</strong>: `ದೇವರು ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ~ ಎಂದು ಚಲನಚಿತ್ರ ನಟ ಉಪೇಂದ್ರ ಹೇಳಿದರು.<br /> <br /> ಜೂಮ್ 22 ಪಬ್ಲಿಕೇಶನ್ಸ್ ಹೊರತಂದಿರುವ ಕೆ.ಪ್ರವೀಣ ನಾಯಕ ಅವರ `ದೇವರು-ಧರ್ಮ ಏನಿದರ ಮರ್ಮ?~ ಪುಸ್ತಕವನ್ನು ಗುರುವಾರ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ಮೂಡ ನಂಬಿಕೆಗಳನ್ನು ಬಿತ್ತುವ ಹಾಗೂ ದೇವರ ಹೆಸರಿನಲ್ಲಿ ಮೋಸ ಮಾಡುವ ಜನರು ಸಮಾಜದಲ್ಲಿ ತುಂಬಿದ್ದಾರೆ. ದೇವರು ಹಾಗೂ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರವೀಣ ಅವರು ಪುಸ್ತಕವನ್ನು ರಚಿಸಿದ್ದಾರೆ. ಪುಸ್ತಕದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಅವರ ಕಾರ್ಯ ಶ್ಲಾಘನೀಯ~ ಎಂದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ಹೊಸ ಆಲೋಚನೆ ಹಾಗೂ ಚಿಂತನೆಗೆ ಪ್ರೇರೇಪಿಸುವಂತಾಗಿದ್ದು, ಹಲವು ಪ್ರಶ್ನೆಗಳನ್ನು ಎತ್ತಿರುವ ಈ ಪುಸ್ತಕವು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾದ ಪುಸ್ತಕವಾಗಿದೆ~ ಎಂದು ಹೇಳಿದರು.<br /> <br /> `ದೇವರು ಹಾಗೂ ಧರ್ಮದ ಎಂಬ ವಿಷಯದ ಕುರಿತು ಹಲವು ಪುಸ್ತಕಗಳಿದ್ದು, ಅವುಗಳ ಸಾಲಿಗೆ ಈ ಪುಸ್ತಕ ಸೇರಲಿದೆ~ ಎಂದರು.<br /> <br /> ನಟ ಎಂ.ಡಿ.ಕೌಶಿಕ್ ಜನರನ್ನು ಮೋಸ ಮಾಡುವ ಕುರಿತು ಪ್ರಾಯೋಗಿಕವಾಗಿ ಮ್ಯಾಜಿಕ್ ಪ್ರದರ್ಶಿಸಿದರು. ಸಮಾರಂಭದಲ್ಲಿ ಕೃತಿಕಾರ ಕೆ.ಪ್ರವೀಣ ನಾಯಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಲನಚಿತ್ರ ನಟ ಉಪೇಂದ್ರ ವಿಷಾದ<br /> <br /> ಬೆಂಗಳೂರು</strong>: `ದೇವರು ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ~ ಎಂದು ಚಲನಚಿತ್ರ ನಟ ಉಪೇಂದ್ರ ಹೇಳಿದರು.<br /> <br /> ಜೂಮ್ 22 ಪಬ್ಲಿಕೇಶನ್ಸ್ ಹೊರತಂದಿರುವ ಕೆ.ಪ್ರವೀಣ ನಾಯಕ ಅವರ `ದೇವರು-ಧರ್ಮ ಏನಿದರ ಮರ್ಮ?~ ಪುಸ್ತಕವನ್ನು ಗುರುವಾರ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ಮೂಡ ನಂಬಿಕೆಗಳನ್ನು ಬಿತ್ತುವ ಹಾಗೂ ದೇವರ ಹೆಸರಿನಲ್ಲಿ ಮೋಸ ಮಾಡುವ ಜನರು ಸಮಾಜದಲ್ಲಿ ತುಂಬಿದ್ದಾರೆ. ದೇವರು ಹಾಗೂ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರವೀಣ ಅವರು ಪುಸ್ತಕವನ್ನು ರಚಿಸಿದ್ದಾರೆ. ಪುಸ್ತಕದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಅವರ ಕಾರ್ಯ ಶ್ಲಾಘನೀಯ~ ಎಂದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ಹೊಸ ಆಲೋಚನೆ ಹಾಗೂ ಚಿಂತನೆಗೆ ಪ್ರೇರೇಪಿಸುವಂತಾಗಿದ್ದು, ಹಲವು ಪ್ರಶ್ನೆಗಳನ್ನು ಎತ್ತಿರುವ ಈ ಪುಸ್ತಕವು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾದ ಪುಸ್ತಕವಾಗಿದೆ~ ಎಂದು ಹೇಳಿದರು.<br /> <br /> `ದೇವರು ಹಾಗೂ ಧರ್ಮದ ಎಂಬ ವಿಷಯದ ಕುರಿತು ಹಲವು ಪುಸ್ತಕಗಳಿದ್ದು, ಅವುಗಳ ಸಾಲಿಗೆ ಈ ಪುಸ್ತಕ ಸೇರಲಿದೆ~ ಎಂದರು.<br /> <br /> ನಟ ಎಂ.ಡಿ.ಕೌಶಿಕ್ ಜನರನ್ನು ಮೋಸ ಮಾಡುವ ಕುರಿತು ಪ್ರಾಯೋಗಿಕವಾಗಿ ಮ್ಯಾಜಿಕ್ ಪ್ರದರ್ಶಿಸಿದರು. ಸಮಾರಂಭದಲ್ಲಿ ಕೃತಿಕಾರ ಕೆ.ಪ್ರವೀಣ ನಾಯಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>