<p><strong>ಮಡಿಕೇರಿ:</strong> ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣ ಸಮಿತಿಗೆ ತಲಕಾವೇರಿಯಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದಲೇ ನಮ್ಮನ್ನು ಅನ್ನದಾನ ಪ್ರಕ್ರಿಯೆಯಿಂದ ದೂರ ಇಡ ಲಾಗಿದೆ ಎಂದು ಕೊಡಗು ಏಕೀಕರಣ ರಂಗದ ಪದಾಧಿ ಕಾರಿಗಳು ಆರೋಪಿಸಿದ್ದಾರೆ.<br /> <br /> ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗದ ಪ್ರಮುಖರಾದ ಬಿ.ಎಸ್. ತಮ್ಮಯ್ಯ, ದೇವಸ್ಥಾನದ ಪವಿತ್ರ ಜಾಗವನ್ನು ಯಾರಿಗೂ ನೀಡಬಾರದು ಎನ್ನುವುದು ನಮ್ಮ ವಾದ ಎಂದರು.<br /> <br /> ಮಂಡ್ಯ ಸಮಿತಿಗೆ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ನಮ್ಮದು ಸಂಪೂರ್ಣ ವಿರೋಧ ಇದೆ. ಆದರೆ, ಅನ್ನಸಂತರ್ಪಣೆಗೆ ಅಲ್ಲ. ಯಾವ ಸಂಘಗಳಾದರೂ ಅನ್ನದಾನ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು. <br /> <br /> ಕಳೆದ 20 ವರ್ಷಗಳಿಂದ ಸುಸೂತ್ರವಾಗಿ ತಲ ಕಾವೇರಿಯಲ್ಲಿ ಅನ್ನದಾನ ನಡೆಸಿಕೊಂಡು ಬಂದಿರು ವಾಗ ಈಗ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು. <br /> <br /> ಅನ್ನದಾನ ಹೆಸರಿನಲ್ಲಿ ನಾವು ಯಾವುದೇ ದಂಧೆ ನಡೆಸುತ್ತಿಲ್ಲ. ಆರ್ಥಿಕ ಸಹಾಯ ನೀಡುವ ಪ್ರತಿಯೊಬ್ಬ ದಾನಿಗೂ ಲೆಕ್ಕಪತ್ರ ನೀಡುತ್ತೇವೆ ಎಂದರು.<br /> <br /> ಅನ್ನದಾನಕ್ಕೆಂದೇ ದೇವಸ್ಥಾನದ ಆವರಣದಲ್ಲಿ ಅನ್ನಛತ್ರ ನಿರ್ಮಿಸಿರುವಾಗ ನಾವು ಏಕೆ ಹೊರಗೆ ಅನ್ನದಾನ ಮಾಡಬೇಕು. ಆದ್ದರಿಂದ ಈ ಸಲದಿಂದ ಅನ್ನದಾನ ಮಾಡುವುದನ್ನು ನಾವು ಕೈಬಿಟ್ಟಿದ್ದೇವೆ ಎಂದು ಅವರು ಹೇಳಿದರು.<br /> <br /> <strong>ಜೀರ್ಣೋದ್ಧಾರ ಸಮಿತಿಗೆ ವಿರೋಧ </strong><br /> ದೇವಸ್ಥಾನದ ಎಲ್ಲ ಜೀರ್ಣೋದ್ಧಾರ ಕೆಲಸಗಳು ಮುಗಿದಿದ್ದರೂ ಕೂಡ ಭಾಗಮಂಡಲ-ತಲಕಾವೇರಿ ಜೀರ್ಣೋದ್ಧಾರ ಸಮಿತಿಯನ್ನು ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗಳು ಏಕೆ ರಚಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು. <br /> <br /> ಇದು ಮುಜರಾಯಿ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಕಾನೂನಿನ ಸಮರ ನಡೆಸುವುದಾಗಿ ಅವರು ಹೇಳಿದರು. <br /> <br /> ಈ ಸಮಿತಿಯಲ್ಲಿ ಕೇವಲ ಜನಪ್ರತಿನಿಧಿಗಳು ತಮ್ಮ ಪಕ್ಷದವರನ್ನೇ ಸದಸ್ಯರನ್ನಾಗಿ ನೇಮಿಸಿದ್ದಾರೆ. ಇದರಲ್ಲಿ ಸ್ಥಳೀಯರಿಗಾಗಲಿ, ಸಮಾಜಸೇವಕರಿಗಾಗಲಿ ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು. <br /> ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡುತ್ತಿರುವವರ ವಿರುದ್ಧ ಸ್ಥಳೀಯ ಜನರು ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ತಮ್ಮು ಪೂವಯ್ಯ, ಎಂ.ಕೆ. ಅಪ್ಪಚ್ಚು, ಪಿ.ಎಂ. ಮುತ್ತಣ್ಣ, ಸೋಮಯ್ಯ, ನಂದೇಟಿರ ರಾಜ ಮಂದಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣ ಸಮಿತಿಗೆ ತಲಕಾವೇರಿಯಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದಲೇ ನಮ್ಮನ್ನು ಅನ್ನದಾನ ಪ್ರಕ್ರಿಯೆಯಿಂದ ದೂರ ಇಡ ಲಾಗಿದೆ ಎಂದು ಕೊಡಗು ಏಕೀಕರಣ ರಂಗದ ಪದಾಧಿ ಕಾರಿಗಳು ಆರೋಪಿಸಿದ್ದಾರೆ.<br /> <br /> ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗದ ಪ್ರಮುಖರಾದ ಬಿ.ಎಸ್. ತಮ್ಮಯ್ಯ, ದೇವಸ್ಥಾನದ ಪವಿತ್ರ ಜಾಗವನ್ನು ಯಾರಿಗೂ ನೀಡಬಾರದು ಎನ್ನುವುದು ನಮ್ಮ ವಾದ ಎಂದರು.<br /> <br /> ಮಂಡ್ಯ ಸಮಿತಿಗೆ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ನಮ್ಮದು ಸಂಪೂರ್ಣ ವಿರೋಧ ಇದೆ. ಆದರೆ, ಅನ್ನಸಂತರ್ಪಣೆಗೆ ಅಲ್ಲ. ಯಾವ ಸಂಘಗಳಾದರೂ ಅನ್ನದಾನ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು. <br /> <br /> ಕಳೆದ 20 ವರ್ಷಗಳಿಂದ ಸುಸೂತ್ರವಾಗಿ ತಲ ಕಾವೇರಿಯಲ್ಲಿ ಅನ್ನದಾನ ನಡೆಸಿಕೊಂಡು ಬಂದಿರು ವಾಗ ಈಗ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು. <br /> <br /> ಅನ್ನದಾನ ಹೆಸರಿನಲ್ಲಿ ನಾವು ಯಾವುದೇ ದಂಧೆ ನಡೆಸುತ್ತಿಲ್ಲ. ಆರ್ಥಿಕ ಸಹಾಯ ನೀಡುವ ಪ್ರತಿಯೊಬ್ಬ ದಾನಿಗೂ ಲೆಕ್ಕಪತ್ರ ನೀಡುತ್ತೇವೆ ಎಂದರು.<br /> <br /> ಅನ್ನದಾನಕ್ಕೆಂದೇ ದೇವಸ್ಥಾನದ ಆವರಣದಲ್ಲಿ ಅನ್ನಛತ್ರ ನಿರ್ಮಿಸಿರುವಾಗ ನಾವು ಏಕೆ ಹೊರಗೆ ಅನ್ನದಾನ ಮಾಡಬೇಕು. ಆದ್ದರಿಂದ ಈ ಸಲದಿಂದ ಅನ್ನದಾನ ಮಾಡುವುದನ್ನು ನಾವು ಕೈಬಿಟ್ಟಿದ್ದೇವೆ ಎಂದು ಅವರು ಹೇಳಿದರು.<br /> <br /> <strong>ಜೀರ್ಣೋದ್ಧಾರ ಸಮಿತಿಗೆ ವಿರೋಧ </strong><br /> ದೇವಸ್ಥಾನದ ಎಲ್ಲ ಜೀರ್ಣೋದ್ಧಾರ ಕೆಲಸಗಳು ಮುಗಿದಿದ್ದರೂ ಕೂಡ ಭಾಗಮಂಡಲ-ತಲಕಾವೇರಿ ಜೀರ್ಣೋದ್ಧಾರ ಸಮಿತಿಯನ್ನು ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗಳು ಏಕೆ ರಚಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು. <br /> <br /> ಇದು ಮುಜರಾಯಿ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಕಾನೂನಿನ ಸಮರ ನಡೆಸುವುದಾಗಿ ಅವರು ಹೇಳಿದರು. <br /> <br /> ಈ ಸಮಿತಿಯಲ್ಲಿ ಕೇವಲ ಜನಪ್ರತಿನಿಧಿಗಳು ತಮ್ಮ ಪಕ್ಷದವರನ್ನೇ ಸದಸ್ಯರನ್ನಾಗಿ ನೇಮಿಸಿದ್ದಾರೆ. ಇದರಲ್ಲಿ ಸ್ಥಳೀಯರಿಗಾಗಲಿ, ಸಮಾಜಸೇವಕರಿಗಾಗಲಿ ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು. <br /> ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡುತ್ತಿರುವವರ ವಿರುದ್ಧ ಸ್ಥಳೀಯ ಜನರು ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ತಮ್ಮು ಪೂವಯ್ಯ, ಎಂ.ಕೆ. ಅಪ್ಪಚ್ಚು, ಪಿ.ಎಂ. ಮುತ್ತಣ್ಣ, ಸೋಮಯ್ಯ, ನಂದೇಟಿರ ರಾಜ ಮಂದಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>