<p><strong>ತಿಪಟೂರು</strong>: ದೇಸಿ ಸಂಗೀತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಸಂಗೀತ ಕಲಾವಿದ ಜಾವಗಲ್ ಪ್ರಸನ್ನ ತಿಳಿಸಿದರು.<br /> <br /> ಬೆಂಗಳೂರಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಹಾಗೂ ತಿಪಟೂರಿನ ಶಂಕರ್ ಟ್ರೈನಿಂಗ್ ಸೆಂಟರ್ನಿಂದ ನಗರದಲ್ಲಿ ಈಚೆಗೆ ಮೂರು ದಿನಗಳ ಕಾಲ ನಡೆದ ಆನಂದಕಂದ ವಿರಚಿತ ಭಾವಗೀತೆಗಳ ತರಬೇತಿ ಶಿಬಿರ `ಬನ್ನಿ ನಮ್ಮ ಹಾಡಿಗೆ' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ನಮ್ಮ ಸಂಗೀತ ಪರಂಪರೆ ವೈವಿಧ್ಯ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಸಂಗೀತದ ಬೆಳವಣಿಗೆ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದು ತಿಳಿಸಿದರು.<br /> <br /> ಬೆಂಗಳೂರು ಸ್ವರ ಸುರಭಿ ಟ್ರಸ್ಟ್ನ ಸುವರ್ಣಮ್ಮ ಮಾತನಾಡಿ, ಮಕ್ಕಳ ಸಂಗೀತಾಭ್ಯಾಸ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಏಕಾಗ್ರತೆ, ತಾಧ್ಯಾತ್ಮ, ವಿಶಾಲ ಮನೋಭಾವ ಬೆಳೆಯುತ್ತದೆ. ಸಾಹಿತ್ಯದಲ್ಲಿ ಒಲವು ಮೂಡುತ್ತದೆ ಎಂದು ತಿಳಿಸಿದರು. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ನ ಸತೀಶ್ ಕುಲಕರ್ಣಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು</strong>: ದೇಸಿ ಸಂಗೀತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಸಂಗೀತ ಕಲಾವಿದ ಜಾವಗಲ್ ಪ್ರಸನ್ನ ತಿಳಿಸಿದರು.<br /> <br /> ಬೆಂಗಳೂರಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಹಾಗೂ ತಿಪಟೂರಿನ ಶಂಕರ್ ಟ್ರೈನಿಂಗ್ ಸೆಂಟರ್ನಿಂದ ನಗರದಲ್ಲಿ ಈಚೆಗೆ ಮೂರು ದಿನಗಳ ಕಾಲ ನಡೆದ ಆನಂದಕಂದ ವಿರಚಿತ ಭಾವಗೀತೆಗಳ ತರಬೇತಿ ಶಿಬಿರ `ಬನ್ನಿ ನಮ್ಮ ಹಾಡಿಗೆ' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ನಮ್ಮ ಸಂಗೀತ ಪರಂಪರೆ ವೈವಿಧ್ಯ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಸಂಗೀತದ ಬೆಳವಣಿಗೆ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದು ತಿಳಿಸಿದರು.<br /> <br /> ಬೆಂಗಳೂರು ಸ್ವರ ಸುರಭಿ ಟ್ರಸ್ಟ್ನ ಸುವರ್ಣಮ್ಮ ಮಾತನಾಡಿ, ಮಕ್ಕಳ ಸಂಗೀತಾಭ್ಯಾಸ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಏಕಾಗ್ರತೆ, ತಾಧ್ಯಾತ್ಮ, ವಿಶಾಲ ಮನೋಭಾವ ಬೆಳೆಯುತ್ತದೆ. ಸಾಹಿತ್ಯದಲ್ಲಿ ಒಲವು ಮೂಡುತ್ತದೆ ಎಂದು ತಿಳಿಸಿದರು. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ನ ಸತೀಶ್ ಕುಲಕರ್ಣಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>