<p><strong>ಭುವನೇಶ್ವರ:</strong> ನಕ್ಸಲೀಯರು ಶುಕ್ರವಾರದಿಂದ ಒಡಿಶಾದ ನಾರಾಯಣ ಪಟ್ಟಣ ಹಾಗೂ ಕೊರಾಪುಟ್ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ 48 ಗಂಟೆಗಳ ಬಂದ್ ಆಚರಣೆಯಲ್ಲಿ ತೊಡಗಿದ್ದಾರೆ.<br /> <br /> ಶಾಸಕ ಹಿಕಾಕ ಅವರನ್ನು ಒತ್ತೆ ಇರಿಸಿಕೊಂಡಿರುವ ನಕ್ಸಲೀಯ ಸಂಘಟನೆಯೇ ಈ ಬಂದ್ಗೆ ಕರೆ ನೀಡಿರುವುದು ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿದೆ. ಆದರೆ ಹಿಕಾಕ ಅಪಹರಣಕ್ಕೂ ಬಂದ್ಗೂ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.<br /> <br /> ನಕ್ಸಲೀಯರು ರಸ್ತೆಗಳ ಮೇಲೆ ಮರಗಳನ್ನು ಕೆಡವಿದ್ದರಿಂದ ನಾರಾಯಣ ಪಟ್ಟಣವು ಶುಕ್ರವಾರ ಬೆಳಿಗ್ಗೆಯಿಂದಲೇ ಸಂಪರ್ಕ ಕಡಿದುಕೊಂಡಿದೆ ಎಂದು ಹೇಳಲಾಗಿದೆ. ಕೆಲವು ಕಡೆ ಈ ಮರಗಳ ಮೇಲೆ ನಕ್ಸಲೀಯರು ತಮ್ಮ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಅಂಟಿಸಿದ್ದಾರೆ.<br /> <br /> ತಮ್ಮ ವಿರುದ್ಧ ನಡೆಯುತ್ತಿರುವ `ಆಪರೇಶನ್ ಗ್ರೀನ್ ಹಂಟ್~ ನಿಲ್ಲಿಸಬೇಕು, ತಮ್ಮ ಪ್ರದೇಶದಲ್ಲಿ ನಿಯೋಜಿಸಿರುವ ಕೇಂದ್ರ ಪಡೆಗಳೂ ಸೇರಿದಂತೆ ಭದ್ರತಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು ಹಾಗೂ ಕೊರಾಪುಟ್ನ ಜೈಲಿನಲ್ಲಿರುವ `ರಾಜಕೀಯ ಕೈದಿಗಳನ್ನು~ ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವುದು ಮಾವೊವಾದಿಗಳ 3 ಬೇಡಿಕೆಗಳಾಗಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ನಕ್ಸಲೀಯರು ಶುಕ್ರವಾರದಿಂದ ಒಡಿಶಾದ ನಾರಾಯಣ ಪಟ್ಟಣ ಹಾಗೂ ಕೊರಾಪುಟ್ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ 48 ಗಂಟೆಗಳ ಬಂದ್ ಆಚರಣೆಯಲ್ಲಿ ತೊಡಗಿದ್ದಾರೆ.<br /> <br /> ಶಾಸಕ ಹಿಕಾಕ ಅವರನ್ನು ಒತ್ತೆ ಇರಿಸಿಕೊಂಡಿರುವ ನಕ್ಸಲೀಯ ಸಂಘಟನೆಯೇ ಈ ಬಂದ್ಗೆ ಕರೆ ನೀಡಿರುವುದು ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿದೆ. ಆದರೆ ಹಿಕಾಕ ಅಪಹರಣಕ್ಕೂ ಬಂದ್ಗೂ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.<br /> <br /> ನಕ್ಸಲೀಯರು ರಸ್ತೆಗಳ ಮೇಲೆ ಮರಗಳನ್ನು ಕೆಡವಿದ್ದರಿಂದ ನಾರಾಯಣ ಪಟ್ಟಣವು ಶುಕ್ರವಾರ ಬೆಳಿಗ್ಗೆಯಿಂದಲೇ ಸಂಪರ್ಕ ಕಡಿದುಕೊಂಡಿದೆ ಎಂದು ಹೇಳಲಾಗಿದೆ. ಕೆಲವು ಕಡೆ ಈ ಮರಗಳ ಮೇಲೆ ನಕ್ಸಲೀಯರು ತಮ್ಮ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಅಂಟಿಸಿದ್ದಾರೆ.<br /> <br /> ತಮ್ಮ ವಿರುದ್ಧ ನಡೆಯುತ್ತಿರುವ `ಆಪರೇಶನ್ ಗ್ರೀನ್ ಹಂಟ್~ ನಿಲ್ಲಿಸಬೇಕು, ತಮ್ಮ ಪ್ರದೇಶದಲ್ಲಿ ನಿಯೋಜಿಸಿರುವ ಕೇಂದ್ರ ಪಡೆಗಳೂ ಸೇರಿದಂತೆ ಭದ್ರತಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು ಹಾಗೂ ಕೊರಾಪುಟ್ನ ಜೈಲಿನಲ್ಲಿರುವ `ರಾಜಕೀಯ ಕೈದಿಗಳನ್ನು~ ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವುದು ಮಾವೊವಾದಿಗಳ 3 ಬೇಡಿಕೆಗಳಾಗಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>