<p><strong>ಕೋಲಾರ</strong>: ವಿಶ್ವಬ್ಯಾಂಕ್ ನೆರವಿನಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ 2006ರಲ್ಲಿ ಸಲ್ಲಿಸಲಾಗಿದ್ದ ಕುಡಿಯುವ ನೀರು ಮತ್ತು ಮಳೆ ನೀರು ಚರಂಡಿಗಳ ನಿರ್ಮಾಣ ಕುರಿತ ಪ್ರಸ್ತಾವನೆಯು ವಾಪಸ್ ಬಂದಿರುವುದರಿಂದ ಮತ್ತೆ ಹೊಸ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ನಗರಸಭೆಯಲ್ಲಿ ಬುಧವಾರ ವಿಶೇಷ ತುರ್ತು ಸಭೆ ಏರ್ಪಡಿಸಲಾಗಿತ್ತು.<br /> <br /> ನೀರು ಪೂರೈಕೆ ಸಲುವಾಗಿ 2.38 ಕೋಟಿ ಮತ್ತು ಮಳೆ ನೀರಿನ ದೊಡ್ಡ ಚರಂಡಿಗಳ ನಿರ್ಮಾಣಕ್ಕೆ 4.35 ಕೋಟಿ ರೂಪಾಯಿ ನಗರಸಭೆಗೆ ಬಿಡುಗಡೆಯಾಗಿದೆ. ಪ್ರಸ್ತಾವನೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಸಲ್ಲಿಸಬೇಕಾಗಿದೆ ಎಂದು ಸದಸ್ಯರಿಗೆ ಮಾಹಿತಿ ನೀಡಲಾಯಿತು. <br /> <br /> ನಗರದ ಹೊರವಲಯದ ಬಾಣಂತಿ ಕೆರೆಯಿಂದ ನೀರು ತರುವುದು, ಕೋಲಾರಮ್ಮ, ಮಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳಲ್ಲಿ ಪಂಪ್ಹೌಸ್ಗಳ ನಿರ್ಮಾಣ, ಬೋರ್ವೆಲ್ಗಳನ್ನು ಕೊರೆಯುವುದು ಸೇರಿದಂತೆ ಸದಸ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. <br /> <br /> ಅಂಬೇಡ್ಕರ್ ನಗರ, ಹೊಸ ಬಸ್ ನಿಲ್ದಾಣದ ಬಳಿ, ಕೀಲುಕೋಟೆ ಬಳಿ, ಗಾಂಧಿನಗರದ ಬಳಿ ಮಳೆ ನೀರಿನ ದೊಡ್ಡ ಚರಂಡಿಗಳ ನಿರ್ಮಾಣಕ್ಕೆ ಸಲಹೆಗಳು ಬಂದಿವೆ. ಒಂದೆರಡು ದಿನದಲ್ಲಿ ನಿರ್ಧಾರ ಕೈಗೊಂಡು ಪ್ರಸ್ತಾವನೆ ಸಿದ್ಧಪಡಿಸಲಾಗುವುದು ಎಂದು ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ ತಿಳಿಸಿದ್ದಾರೆ.<br /> <br /> ನಗರಸಭೆ ಅಧ್ಯಕ್ಷೆ ನಾಜಿಯಾ, ಆಯುಕ್ತ ಕೆ.ಎಚ್.ರಾಯ್, ಸದಸ್ಯರಾದ ರಘು, ವಿ.ಕೆ.ರಾಜೇಶ್, ರೌತ್ ಶಂಕರಪ್ಪ, ವಿ.ಪ್ರಕಾಶ್, ಶ್ರೀರಾಮಪ್ಪ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ವಿಶ್ವಬ್ಯಾಂಕ್ ನೆರವಿನಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ 2006ರಲ್ಲಿ ಸಲ್ಲಿಸಲಾಗಿದ್ದ ಕುಡಿಯುವ ನೀರು ಮತ್ತು ಮಳೆ ನೀರು ಚರಂಡಿಗಳ ನಿರ್ಮಾಣ ಕುರಿತ ಪ್ರಸ್ತಾವನೆಯು ವಾಪಸ್ ಬಂದಿರುವುದರಿಂದ ಮತ್ತೆ ಹೊಸ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ನಗರಸಭೆಯಲ್ಲಿ ಬುಧವಾರ ವಿಶೇಷ ತುರ್ತು ಸಭೆ ಏರ್ಪಡಿಸಲಾಗಿತ್ತು.<br /> <br /> ನೀರು ಪೂರೈಕೆ ಸಲುವಾಗಿ 2.38 ಕೋಟಿ ಮತ್ತು ಮಳೆ ನೀರಿನ ದೊಡ್ಡ ಚರಂಡಿಗಳ ನಿರ್ಮಾಣಕ್ಕೆ 4.35 ಕೋಟಿ ರೂಪಾಯಿ ನಗರಸಭೆಗೆ ಬಿಡುಗಡೆಯಾಗಿದೆ. ಪ್ರಸ್ತಾವನೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಸಲ್ಲಿಸಬೇಕಾಗಿದೆ ಎಂದು ಸದಸ್ಯರಿಗೆ ಮಾಹಿತಿ ನೀಡಲಾಯಿತು. <br /> <br /> ನಗರದ ಹೊರವಲಯದ ಬಾಣಂತಿ ಕೆರೆಯಿಂದ ನೀರು ತರುವುದು, ಕೋಲಾರಮ್ಮ, ಮಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳಲ್ಲಿ ಪಂಪ್ಹೌಸ್ಗಳ ನಿರ್ಮಾಣ, ಬೋರ್ವೆಲ್ಗಳನ್ನು ಕೊರೆಯುವುದು ಸೇರಿದಂತೆ ಸದಸ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. <br /> <br /> ಅಂಬೇಡ್ಕರ್ ನಗರ, ಹೊಸ ಬಸ್ ನಿಲ್ದಾಣದ ಬಳಿ, ಕೀಲುಕೋಟೆ ಬಳಿ, ಗಾಂಧಿನಗರದ ಬಳಿ ಮಳೆ ನೀರಿನ ದೊಡ್ಡ ಚರಂಡಿಗಳ ನಿರ್ಮಾಣಕ್ಕೆ ಸಲಹೆಗಳು ಬಂದಿವೆ. ಒಂದೆರಡು ದಿನದಲ್ಲಿ ನಿರ್ಧಾರ ಕೈಗೊಂಡು ಪ್ರಸ್ತಾವನೆ ಸಿದ್ಧಪಡಿಸಲಾಗುವುದು ಎಂದು ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ ತಿಳಿಸಿದ್ದಾರೆ.<br /> <br /> ನಗರಸಭೆ ಅಧ್ಯಕ್ಷೆ ನಾಜಿಯಾ, ಆಯುಕ್ತ ಕೆ.ಎಚ್.ರಾಯ್, ಸದಸ್ಯರಾದ ರಘು, ವಿ.ಕೆ.ರಾಜೇಶ್, ರೌತ್ ಶಂಕರಪ್ಪ, ವಿ.ಪ್ರಕಾಶ್, ಶ್ರೀರಾಮಪ್ಪ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>