<p><strong>ಹಾಸನ: </strong>ಹಾಸನ ನಗರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಸಿ.ಆರ್. ಶಂಕರ್ ಅವಿರೋಧವಾಗಿ ಆಯ್ಕೆಯಾದರು. ಜನವರಿ 1ರಂದು ಎಚ್.ಸಿ. ರಂಗಸ್ವಾಮಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.<br /> <br /> ರಂಗಸ್ವಾಮಿ ಅವರ ಆಯ್ಕೆಯ ಸಂದರ್ಭದಲ್ಲೇ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಸಿ.ಆರ್. ಶಂಕರ್ ಅವರು ಆಗ ಅವಕಾಶ ಲಭ್ಯವಾಗದಿರುವುದಕ್ಕೆ ಪಕ್ಷದ ಮುಖಂಡರ ವಿರುದ್ಧವೇ ಕಿಡಿಕಾರಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ, ಈಗ ಅಧ್ಯಕ್ಷರ ಸ್ಥಾನ ಲಭಿಸಿದೆ.<br /> <br /> ಗುರುವಾರ ಬೆಳಿಗ್ಗೆ 11 ಗಂಟೆಗೆ ಹಾಸನ ಉಪ ವಿಭಾಗಾಧಿಕಾರಿ ನಾಗರಾಜ್ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮಧ್ಯಾಹ್ನದವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಿ.ಆರ್. ಶಂಕರ್ ಅಲ್ಲದೆ ಎಚ್.ಎಲ್. ವಿಜಯಕುಮಾರ್ ಹಾಗೂ ಎಚ್.ಕೆ. ಯೋಗೇಂದ್ರ ಕುಮಾರ್ ಅವರೂ ನಾಮಪತ್ರ ಸಲ್ಲಿಸಿದ್ದರು. <br /> <br /> ಮಧ್ಯಾಹ್ನ ಮೂರು ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಸಿ 3.15ರವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಪಕ್ಷದ ಮುಖಂಡರ ಸೂಚನೆಯಂತೆ ಎಚ್.ಎಲ್. ವಿಜಯಕುಮಾರ್ ಹಾಗೂ ಎಚ್.ಕೆ. ಯೋಗೇಂದ್ರ ಕುಮಾರ್ ಅವರು ನಾಮಪತ್ರ್ನ ಹಿಂತೆಗೆಕೊಂಡ ಕಾರಣ ಶಂಕರ್ ಅವರು ಅವಿರೋಧವಾಗಿ ಆಯ್ಕೆದರು.<br /> <br /> ನಗರಸಭೆಯ ಒಟ್ಟಾರೆ 35 ಮಂದಿ ಸದಸ್ಯರಲ್ಲಿ ಇಬ್ಬರು ನಿಧನಹೊಂದಿದ್ದು, ಉಳಿದ 33ರಲ್ಲಿ 30 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಚ್.ಎಸ್. ಪ್ರಕಾಶ್ ಅವರೂ ಉಪಸ್ಥಿತರಿದ್ದರು. ನಗರಸಭೆಯ ಆಯುಕ್ತ ಶಿವನಂಜೇಗೌಡ, ತರಬೇತಿಯಲ್ಲಿರುವ ಮುಖ್ಯಾಧಿಕಾರಿ ಶ್ರೀಮಾಧ್ವಿ ಹಾಗೂ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಹಾಸನ ನಗರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಸಿ.ಆರ್. ಶಂಕರ್ ಅವಿರೋಧವಾಗಿ ಆಯ್ಕೆಯಾದರು. ಜನವರಿ 1ರಂದು ಎಚ್.ಸಿ. ರಂಗಸ್ವಾಮಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.<br /> <br /> ರಂಗಸ್ವಾಮಿ ಅವರ ಆಯ್ಕೆಯ ಸಂದರ್ಭದಲ್ಲೇ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಸಿ.ಆರ್. ಶಂಕರ್ ಅವರು ಆಗ ಅವಕಾಶ ಲಭ್ಯವಾಗದಿರುವುದಕ್ಕೆ ಪಕ್ಷದ ಮುಖಂಡರ ವಿರುದ್ಧವೇ ಕಿಡಿಕಾರಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ, ಈಗ ಅಧ್ಯಕ್ಷರ ಸ್ಥಾನ ಲಭಿಸಿದೆ.<br /> <br /> ಗುರುವಾರ ಬೆಳಿಗ್ಗೆ 11 ಗಂಟೆಗೆ ಹಾಸನ ಉಪ ವಿಭಾಗಾಧಿಕಾರಿ ನಾಗರಾಜ್ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮಧ್ಯಾಹ್ನದವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಿ.ಆರ್. ಶಂಕರ್ ಅಲ್ಲದೆ ಎಚ್.ಎಲ್. ವಿಜಯಕುಮಾರ್ ಹಾಗೂ ಎಚ್.ಕೆ. ಯೋಗೇಂದ್ರ ಕುಮಾರ್ ಅವರೂ ನಾಮಪತ್ರ ಸಲ್ಲಿಸಿದ್ದರು. <br /> <br /> ಮಧ್ಯಾಹ್ನ ಮೂರು ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಸಿ 3.15ರವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಪಕ್ಷದ ಮುಖಂಡರ ಸೂಚನೆಯಂತೆ ಎಚ್.ಎಲ್. ವಿಜಯಕುಮಾರ್ ಹಾಗೂ ಎಚ್.ಕೆ. ಯೋಗೇಂದ್ರ ಕುಮಾರ್ ಅವರು ನಾಮಪತ್ರ್ನ ಹಿಂತೆಗೆಕೊಂಡ ಕಾರಣ ಶಂಕರ್ ಅವರು ಅವಿರೋಧವಾಗಿ ಆಯ್ಕೆದರು.<br /> <br /> ನಗರಸಭೆಯ ಒಟ್ಟಾರೆ 35 ಮಂದಿ ಸದಸ್ಯರಲ್ಲಿ ಇಬ್ಬರು ನಿಧನಹೊಂದಿದ್ದು, ಉಳಿದ 33ರಲ್ಲಿ 30 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಚ್.ಎಸ್. ಪ್ರಕಾಶ್ ಅವರೂ ಉಪಸ್ಥಿತರಿದ್ದರು. ನಗರಸಭೆಯ ಆಯುಕ್ತ ಶಿವನಂಜೇಗೌಡ, ತರಬೇತಿಯಲ್ಲಿರುವ ಮುಖ್ಯಾಧಿಕಾರಿ ಶ್ರೀಮಾಧ್ವಿ ಹಾಗೂ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>