<p>ಇತ್ತೀಚೆಗೆ ಗುಜರಾತಿಗೆ ಭೇಟಿ ನೀಡಿ ಹಿಂದಿರುಗಿದ ಮುಖ್ಯಮಂತ್ರಿ ಸದಾನಂದ ಗೌಡರು ಗುಜರಾತ್ ಮಾದರಿ ಆಡಳಿತ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಅದಕ್ಕೂ ಮುಂಚೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಕೂಡಾ ಅಂತಹದೇ ಹೇಳಿಕೆ ನೀಡಿದ್ದರು.<br /> <br /> 2002ರ ಗುಜರಾತ್ ನರಮೇಧದ ಹಿನ್ನೆಲೆಯಲ್ಲಿ ಸಹಜವಾಗಿಯೇ ನಮಗೆಲ್ಲಾ ಆತಂಕವಾಗಿತ್ತು. ಆದರೆ ಆನಂತರ ಗುಜರಾತಿನ ಅಭಿವೃದ್ಧಿಯ ದಾರಿಯನ್ನು ಮಾಧ್ಯಮಗಳ ಒಂದು ವಿಭಾಗ ಹಾಡಿ ಹೊಗಳುವ ಜತೆಯಲ್ಲೇ ಅಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ.<br /> <br /> ಹವಾನಿಯಂತ್ರಿತ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ `ಒಂದು ರೀತಿಯ~ ಪಶ್ಚಾತ್ತಾಪದ ಮಾತುಗಳನ್ನಾಡಿದಾಗ ಪರವಾಯಿಲ್ಲಾ ಅವರಲ್ಲೂ `ಮಾನವೀಯ ಹೃದಯ~ ಇದೆ ಎಂದು ಜನರು ಸಮಾಧಾನಪಟ್ಟುಕೊಂಡಿದ್ದರು. ಕೆಳ ಮಟ್ಟದ ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥವಾಗಲಿ ಎಂದು ಸರ್ವೋಚ್ಚ ನ್ಯಾಯಾಲಯ ಮೊಕದ್ದಮೆ ಹಿಂದಕ್ಕೆ ಕಳಿಸಿದ್ದನ್ನೇ `ತನಗೆ ಸಿಕ್ಕ ಕ್ಯಾರೆಕ್ಟರ್ ಸರ್ಟಿಫಿಕೇಟ್~ ಎಂದು ಬಗೆದು ಅಲ್ಲಿಯ ಐಪಿಎಸ್ ಅಧಿಕಾರಿ ಸಂಜೀವ ಭಟ್ರನ್ನು ಮೋದಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದಾಗ, ಅವರ ಮನಪರಿವರ್ತನೆಯಾಗಿದೆ ಎಂದು ನಂಬಿದ್ದ ಜನರಿಗೆ ನಿಜವಾದ ಮೋದಿ ಏನೆಂಬ ಎಂಬ ಸತ್ಯ ಮನವರಿಕೆಯಾಗುತ್ತಿದೆ. <br /> <br /> ಸಂಜೀವ ಭಟ್ರ ಅಪರಾಧವಾದರೂ ಏನು? 2002ರ ಗುಜರಾತ್ ನರಮೇಧದ ಸಮಯದಲ್ಲಿ ` ಮುಖ್ಯಮಂತ್ರಿ ಹಾಗೂ ಇಡೀ ಆಡಳಿತ ಯಂತ್ರ ಅಲ್ಪಸಂಖ್ಯಾತರ ವಿರುದ್ಧದ ಕಾರ್ಯಾಚರಣೆಯಲ್ಲಿ ಶಾಮೀಲಾಗಿತ್ತು~ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ್ದರು. ಈಗ ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ. <br /> <br /> ಗುಜರಾತಿನಲ್ಲಿ ದ್ವೇಷದ ರಾಜಕಾರಣ ತಾಂಡವವಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಗುಜರಾತ್ ಮಾದರಿಯ ವಿಷಪೂರಿತ ಅಭಿವೃದ್ಧಿ ರಾಜಕಾರಣ ನಮಗೆ ಖಂಡಿತಾ ಬೇಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಗುಜರಾತಿಗೆ ಭೇಟಿ ನೀಡಿ ಹಿಂದಿರುಗಿದ ಮುಖ್ಯಮಂತ್ರಿ ಸದಾನಂದ ಗೌಡರು ಗುಜರಾತ್ ಮಾದರಿ ಆಡಳಿತ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಅದಕ್ಕೂ ಮುಂಚೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಕೂಡಾ ಅಂತಹದೇ ಹೇಳಿಕೆ ನೀಡಿದ್ದರು.<br /> <br /> 2002ರ ಗುಜರಾತ್ ನರಮೇಧದ ಹಿನ್ನೆಲೆಯಲ್ಲಿ ಸಹಜವಾಗಿಯೇ ನಮಗೆಲ್ಲಾ ಆತಂಕವಾಗಿತ್ತು. ಆದರೆ ಆನಂತರ ಗುಜರಾತಿನ ಅಭಿವೃದ್ಧಿಯ ದಾರಿಯನ್ನು ಮಾಧ್ಯಮಗಳ ಒಂದು ವಿಭಾಗ ಹಾಡಿ ಹೊಗಳುವ ಜತೆಯಲ್ಲೇ ಅಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ.<br /> <br /> ಹವಾನಿಯಂತ್ರಿತ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ `ಒಂದು ರೀತಿಯ~ ಪಶ್ಚಾತ್ತಾಪದ ಮಾತುಗಳನ್ನಾಡಿದಾಗ ಪರವಾಯಿಲ್ಲಾ ಅವರಲ್ಲೂ `ಮಾನವೀಯ ಹೃದಯ~ ಇದೆ ಎಂದು ಜನರು ಸಮಾಧಾನಪಟ್ಟುಕೊಂಡಿದ್ದರು. ಕೆಳ ಮಟ್ಟದ ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥವಾಗಲಿ ಎಂದು ಸರ್ವೋಚ್ಚ ನ್ಯಾಯಾಲಯ ಮೊಕದ್ದಮೆ ಹಿಂದಕ್ಕೆ ಕಳಿಸಿದ್ದನ್ನೇ `ತನಗೆ ಸಿಕ್ಕ ಕ್ಯಾರೆಕ್ಟರ್ ಸರ್ಟಿಫಿಕೇಟ್~ ಎಂದು ಬಗೆದು ಅಲ್ಲಿಯ ಐಪಿಎಸ್ ಅಧಿಕಾರಿ ಸಂಜೀವ ಭಟ್ರನ್ನು ಮೋದಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದಾಗ, ಅವರ ಮನಪರಿವರ್ತನೆಯಾಗಿದೆ ಎಂದು ನಂಬಿದ್ದ ಜನರಿಗೆ ನಿಜವಾದ ಮೋದಿ ಏನೆಂಬ ಎಂಬ ಸತ್ಯ ಮನವರಿಕೆಯಾಗುತ್ತಿದೆ. <br /> <br /> ಸಂಜೀವ ಭಟ್ರ ಅಪರಾಧವಾದರೂ ಏನು? 2002ರ ಗುಜರಾತ್ ನರಮೇಧದ ಸಮಯದಲ್ಲಿ ` ಮುಖ್ಯಮಂತ್ರಿ ಹಾಗೂ ಇಡೀ ಆಡಳಿತ ಯಂತ್ರ ಅಲ್ಪಸಂಖ್ಯಾತರ ವಿರುದ್ಧದ ಕಾರ್ಯಾಚರಣೆಯಲ್ಲಿ ಶಾಮೀಲಾಗಿತ್ತು~ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ್ದರು. ಈಗ ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ. <br /> <br /> ಗುಜರಾತಿನಲ್ಲಿ ದ್ವೇಷದ ರಾಜಕಾರಣ ತಾಂಡವವಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಗುಜರಾತ್ ಮಾದರಿಯ ವಿಷಪೂರಿತ ಅಭಿವೃದ್ಧಿ ರಾಜಕಾರಣ ನಮಗೆ ಖಂಡಿತಾ ಬೇಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>