<p><strong>ಉಡುಪಿ:</strong> `ನಮಸ್ಕಾರ ತಾಯಿ.... ನಾನ್ಯಾರು ಗೊತ್ತಾ ಅಮ್ಮಾ...~ <br /> ಹೀಗೆಂದು ತಮ್ಮ ಮಾಮೂಲಿ ಶೈಲಿಯಲ್ಲಿ ಪರಿಚಯಿಸಿಕೊಂಡಿದ್ದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ. <br /> <br /> ಬ್ರಹ್ಮಗಿರಿಯ ದಲಿತರ ಕಾಲೋನಿ ಕಾಡಬೆಟ್ಟುವಿನಲ್ಲಿ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದರು. ಬ್ರಹ್ಮಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಪಕ್ಷದ ಕಾರ್ಯಕರ್ತರು, ಶಾಸಕ ಅಭಯಚಂದ್ರ ಜೈನ್ ಮತ್ತಿತತರ ಮುಖಂಡರೊಂದಿಗೆ ಅಲ್ಲಿಗೆ ತೆರಳಿದ ಅವರು ತಮ್ಮ ಎಂದಿನ ಶೈಲಿಯಲ್ಲಿ `ಕೈ~ ಗುರುತಿಗೇ ಮತ ಹಾಕಬೇಕು ಆಯ್ತಾ...~ ಎಂದು ಮತದಾರರಲ್ಲಿ ವಿನಂತಿಸಿದರು.<br /> <br /> `ಈ ಭಾಗದಲ್ಲಿ ಸಿದ್ದರಾಮಯ್ಯ ಅಷ್ಟಾಗಿ ಪರಿಚಿತರಲ್ಲದ ಕಾರಣ ಅವರು ನಾನ್ಯಾರು ಗೊತ್ತಾ ಅಮ್ಮಾ ಎಂದು ಪರಿಚಯಿಸಿಕೊಳ್ಳುತ್ತಲೇ ಸಾಗಿದರು.<br /> <br /> `ಇಲ್ಲಿ ವಾಸಿಸಲು ಪ್ರಾರಂಭಿಸಿ ಹತ್ತಾರು ವರ್ಷಗಳಾದರೂ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ~ ಸ್ಥಳೀಯರು ದೂರಿದರು. ಅದಕ್ಕೆ ಸ್ಪಂದಿಸಿ ಸಿದ್ದರಾಮಯ್ಯ, `ನೀವು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕಬೇಕು, ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಹಕ್ಕುಪತ್ರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ~ ಎಂದು ಭರವಸೆ ನೀಡಿದರು. <br /> <br /> ಸಿದ್ದರಾಮಯ್ಯ ಅವರನ್ನು ಕಂಡು ಕೆಲವರು `ತಾವು ನಿಮ್ಮ ಅಭಿಮಾನಿಗಳು~ ಎಂದು ಹೇಳಿಕೊಂಡರು. ಈ ಹಿಂದೆ ಕಾಂಗ್ರೆಸ್ನವರು ನಡೆಸಿದ ಬಳ್ಳಾರಿ ಪಾದಯಾತ್ರೆಯಲ್ಲಿ ಕೂಡ ತಾವು ಪಾಲ್ಗೊಂಡಿದ್ದಾಗಿ ಕೆಲವರು ಹೇಳಿಕೊಂಡರು. ಕೆಲವು ನಿಮಿಷ ಮತಯಾಚಿಸಿದ ಸಿದ್ದರಾಮಯ್ಯ ಅಲ್ಲಿಂದ ನಿರ್ಗಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> `ನಮಸ್ಕಾರ ತಾಯಿ.... ನಾನ್ಯಾರು ಗೊತ್ತಾ ಅಮ್ಮಾ...~ <br /> ಹೀಗೆಂದು ತಮ್ಮ ಮಾಮೂಲಿ ಶೈಲಿಯಲ್ಲಿ ಪರಿಚಯಿಸಿಕೊಂಡಿದ್ದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ. <br /> <br /> ಬ್ರಹ್ಮಗಿರಿಯ ದಲಿತರ ಕಾಲೋನಿ ಕಾಡಬೆಟ್ಟುವಿನಲ್ಲಿ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದರು. ಬ್ರಹ್ಮಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಪಕ್ಷದ ಕಾರ್ಯಕರ್ತರು, ಶಾಸಕ ಅಭಯಚಂದ್ರ ಜೈನ್ ಮತ್ತಿತತರ ಮುಖಂಡರೊಂದಿಗೆ ಅಲ್ಲಿಗೆ ತೆರಳಿದ ಅವರು ತಮ್ಮ ಎಂದಿನ ಶೈಲಿಯಲ್ಲಿ `ಕೈ~ ಗುರುತಿಗೇ ಮತ ಹಾಕಬೇಕು ಆಯ್ತಾ...~ ಎಂದು ಮತದಾರರಲ್ಲಿ ವಿನಂತಿಸಿದರು.<br /> <br /> `ಈ ಭಾಗದಲ್ಲಿ ಸಿದ್ದರಾಮಯ್ಯ ಅಷ್ಟಾಗಿ ಪರಿಚಿತರಲ್ಲದ ಕಾರಣ ಅವರು ನಾನ್ಯಾರು ಗೊತ್ತಾ ಅಮ್ಮಾ ಎಂದು ಪರಿಚಯಿಸಿಕೊಳ್ಳುತ್ತಲೇ ಸಾಗಿದರು.<br /> <br /> `ಇಲ್ಲಿ ವಾಸಿಸಲು ಪ್ರಾರಂಭಿಸಿ ಹತ್ತಾರು ವರ್ಷಗಳಾದರೂ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ~ ಸ್ಥಳೀಯರು ದೂರಿದರು. ಅದಕ್ಕೆ ಸ್ಪಂದಿಸಿ ಸಿದ್ದರಾಮಯ್ಯ, `ನೀವು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕಬೇಕು, ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಹಕ್ಕುಪತ್ರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ~ ಎಂದು ಭರವಸೆ ನೀಡಿದರು. <br /> <br /> ಸಿದ್ದರಾಮಯ್ಯ ಅವರನ್ನು ಕಂಡು ಕೆಲವರು `ತಾವು ನಿಮ್ಮ ಅಭಿಮಾನಿಗಳು~ ಎಂದು ಹೇಳಿಕೊಂಡರು. ಈ ಹಿಂದೆ ಕಾಂಗ್ರೆಸ್ನವರು ನಡೆಸಿದ ಬಳ್ಳಾರಿ ಪಾದಯಾತ್ರೆಯಲ್ಲಿ ಕೂಡ ತಾವು ಪಾಲ್ಗೊಂಡಿದ್ದಾಗಿ ಕೆಲವರು ಹೇಳಿಕೊಂಡರು. ಕೆಲವು ನಿಮಿಷ ಮತಯಾಚಿಸಿದ ಸಿದ್ದರಾಮಯ್ಯ ಅಲ್ಲಿಂದ ನಿರ್ಗಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>