<p><strong>ಫರೂಖಾಬಾದ್/ಉತ್ತರಪ್ರದೇಶ (ಪಿಟಿಐ): </strong>2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಿರ್ದೋಷಿ ಎಂದಿರುವುದು ನರ್ಸರಿ ವಿದ್ಯಾರ್ಥಿಗೆ ಒಳ್ಳೆಯ ಅಂಕ ನೀಡಿದಂತೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಟೀಕಿಸಿದ್ದಾರೆ.<br /> <br /> ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೋಷಿ ಎಂದು ಹೇಳಿದ್ದನ್ನೇ ಪಿಎಚ್ಡಿ ಎಂದು ಭಾವಿಸಿರುವ ಮೋದಿ, ಅದನ್ನೇ ದೊಡ್ಡದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಖುರ್ಷಿದ್ ವ್ಯಂಗ್ಯವಾಡಿದ್ದಾರೆ.<br /> <br /> ಗುಜರಾತ್ನಲ್ಲಿ ಕೋಮು ಗಲಭೆ ನಡೆದಾಗ ಮೋದಿ ಮುಖ್ಯಮಂತ್ರಿ ಆಗಿದ್ದರು. ಅವರ ಸಂಪುಟ ಸಹೋದ್ಯೋಗಿ ಆಗಿದ್ದ ಮಾಯಾ ಕೊಡ್ನಾನಿ ಸೇರಿದಂತೆ 170 ಜನರಿಗೆ ಜೀವಾವಧಿ ಶಿಕ್ಷೆ ಆಗಿದೆ ಎನ್ನುವುದನ್ನು ಮರೆಯಬಾರದು ಎಂದು ಸಚಿವರು ಹೇಳಿದ್ದಾರೆ.<br /> <br /> ವಿಕಿಲೀಕ್್ಸ ಸ್ಥಾಪಕ ಜೂಲಿಯನ್ ಅಸಾಂಜ್ ಅವರು ಮೋದಿ ಭ್ರಷ್ಟರಲ್ಲ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ ಖುರ್ಷಿದ್, ‘ಅಷ್ಟೊಂದು ಆತ್ಮವಿಶ್ವಾಸವಿರುವವರು (ಮೋದಿ) ಎಲ್ಲರಿಂದಲೂ ಏಕೆ ಬೆಂಬಲ ಯಾಚಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ.<br /> <br /> ಎಂಟು ವರ್ಷಗಳ ಹಿಂದೆ ಇದೇ ವಿಕಿಲೀಕ್್ಸ, ‘ಮೋದಿ ನಂಬಿಕೆಗೆ ಅನರ್ಹ ವ್ಯಕ್ತಿ ಮತ್ತು ಬೆದರಿಕೆಯ ಮೂಲಕ ಆಡಳಿತ ನಡೆಸುತ್ತಿದ್ದಾರೆ’ ಎಂದಾಗ<br /> ಮೋದಿ, ತಮಗೆ ಯಾರೂ ಪ್ರಮಾಣಪತ್ರ ನೀಡುವುದು ಬೇಡ ಎಂದಿದ್ದನ್ನು ಖುರ್ಷಿದ್ ಇಲ್ಲಿ ಉಲ್ಲೇಖಿಸಿದ್ದಾರೆ.<br /> <br /> ಅಸಂಬದ್ಧ ಹೇಳಿಕೆ– ಬಿಜೆಪಿ (ನವದೆಹಲಿ ವರದಿ): ಮೋದಿ ಅವರ ಬಗ್ಗೆ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ ಹೇಳಿಕೆ ಸಂಪೂರ್ಣ ಅಸಂಬದ್ಧದಿಂದ ಕೂಡಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.<br /> <br /> ನ್ಯಾಯಾಂಗ ವ್ಯವಸ್ಥೆ ಬಗ್ಗೆ ಖುರ್ಷಿದ್ ಅಸಂಬದ್ಧವಾಗಿ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಳ ಹಂತದ ಮತ್ತು ಉನ್ನತ ಮಟ್ಟದ ನ್ಯಾಯಾಲಯಗಳಿಗೆ ಅವುಗಳದೇ ಆದಘನತೆ ಗೌರವಗಳಿವೆ. ಆದ್ದರಿಂದ ಅವುಗಳ ಬಗ್ಗೆ ಅಗೌರವದಿಂದ ಮಾತನಾಡುವುದು ಅಸಂಬದ್ಧವಾಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ.<br /> <br /> 2002ರ ಕೋಮು ಗಲಭೆಯಲ್ಲಿ ಮೋದಿ ಅವರ ಪಾತ್ರವಿಲ್ಲ ಎಂದು ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ ಹೇಳಿದ್ದರೂ ತೀವ್ರ ಹತಾಶೆಗೆ ಒಳಗಾಗಿರುವ ಕಾಂಗ್ರೆಸ್, ಗುಜರಾತ್ ಗಲಭೆಯ ವಿಚಾರವನ್ನು ಜೀವಂತವಾಗಿರಲು ಸದಾ ಅದನ್ನೇ ಜಪಿಸುತ್ತಿದೆ ಎಂದು ಜಾವಡೇಕರ್ ಟೀಕಿಸಿದ್ದಾರೆ.<br /> <br /> ಗುಜರಾತ್ ಮುಸ್ಲಿಮರು ಮತ್ತು ಇತರರು ಕೋಮು ಗಲಭೆಯನ್ನು ಮರೆತಿದ್ದಾರೆ. ಆದರೆ ಖುರ್ಷಿದ್ ಹತಾಶರಾಗಿ ನ್ಯಾಯಾಂಗದ ಘನತೆಗೆ ಚ್ಯುತಿ ತರುವ ರೀತಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.<br /> <br /> ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರ ಮುಖಂಡರು ಹಾಗೂ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್, ಗುಜರಾತ್ ಗಲಭೆಯನ್ನು ಜೀವಂತವಾಗಿ ಇರಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫರೂಖಾಬಾದ್/ಉತ್ತರಪ್ರದೇಶ (ಪಿಟಿಐ): </strong>2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಿರ್ದೋಷಿ ಎಂದಿರುವುದು ನರ್ಸರಿ ವಿದ್ಯಾರ್ಥಿಗೆ ಒಳ್ಳೆಯ ಅಂಕ ನೀಡಿದಂತೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಟೀಕಿಸಿದ್ದಾರೆ.<br /> <br /> ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೋಷಿ ಎಂದು ಹೇಳಿದ್ದನ್ನೇ ಪಿಎಚ್ಡಿ ಎಂದು ಭಾವಿಸಿರುವ ಮೋದಿ, ಅದನ್ನೇ ದೊಡ್ಡದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಖುರ್ಷಿದ್ ವ್ಯಂಗ್ಯವಾಡಿದ್ದಾರೆ.<br /> <br /> ಗುಜರಾತ್ನಲ್ಲಿ ಕೋಮು ಗಲಭೆ ನಡೆದಾಗ ಮೋದಿ ಮುಖ್ಯಮಂತ್ರಿ ಆಗಿದ್ದರು. ಅವರ ಸಂಪುಟ ಸಹೋದ್ಯೋಗಿ ಆಗಿದ್ದ ಮಾಯಾ ಕೊಡ್ನಾನಿ ಸೇರಿದಂತೆ 170 ಜನರಿಗೆ ಜೀವಾವಧಿ ಶಿಕ್ಷೆ ಆಗಿದೆ ಎನ್ನುವುದನ್ನು ಮರೆಯಬಾರದು ಎಂದು ಸಚಿವರು ಹೇಳಿದ್ದಾರೆ.<br /> <br /> ವಿಕಿಲೀಕ್್ಸ ಸ್ಥಾಪಕ ಜೂಲಿಯನ್ ಅಸಾಂಜ್ ಅವರು ಮೋದಿ ಭ್ರಷ್ಟರಲ್ಲ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ ಖುರ್ಷಿದ್, ‘ಅಷ್ಟೊಂದು ಆತ್ಮವಿಶ್ವಾಸವಿರುವವರು (ಮೋದಿ) ಎಲ್ಲರಿಂದಲೂ ಏಕೆ ಬೆಂಬಲ ಯಾಚಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ.<br /> <br /> ಎಂಟು ವರ್ಷಗಳ ಹಿಂದೆ ಇದೇ ವಿಕಿಲೀಕ್್ಸ, ‘ಮೋದಿ ನಂಬಿಕೆಗೆ ಅನರ್ಹ ವ್ಯಕ್ತಿ ಮತ್ತು ಬೆದರಿಕೆಯ ಮೂಲಕ ಆಡಳಿತ ನಡೆಸುತ್ತಿದ್ದಾರೆ’ ಎಂದಾಗ<br /> ಮೋದಿ, ತಮಗೆ ಯಾರೂ ಪ್ರಮಾಣಪತ್ರ ನೀಡುವುದು ಬೇಡ ಎಂದಿದ್ದನ್ನು ಖುರ್ಷಿದ್ ಇಲ್ಲಿ ಉಲ್ಲೇಖಿಸಿದ್ದಾರೆ.<br /> <br /> ಅಸಂಬದ್ಧ ಹೇಳಿಕೆ– ಬಿಜೆಪಿ (ನವದೆಹಲಿ ವರದಿ): ಮೋದಿ ಅವರ ಬಗ್ಗೆ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ ಹೇಳಿಕೆ ಸಂಪೂರ್ಣ ಅಸಂಬದ್ಧದಿಂದ ಕೂಡಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.<br /> <br /> ನ್ಯಾಯಾಂಗ ವ್ಯವಸ್ಥೆ ಬಗ್ಗೆ ಖುರ್ಷಿದ್ ಅಸಂಬದ್ಧವಾಗಿ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಳ ಹಂತದ ಮತ್ತು ಉನ್ನತ ಮಟ್ಟದ ನ್ಯಾಯಾಲಯಗಳಿಗೆ ಅವುಗಳದೇ ಆದಘನತೆ ಗೌರವಗಳಿವೆ. ಆದ್ದರಿಂದ ಅವುಗಳ ಬಗ್ಗೆ ಅಗೌರವದಿಂದ ಮಾತನಾಡುವುದು ಅಸಂಬದ್ಧವಾಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ.<br /> <br /> 2002ರ ಕೋಮು ಗಲಭೆಯಲ್ಲಿ ಮೋದಿ ಅವರ ಪಾತ್ರವಿಲ್ಲ ಎಂದು ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ ಹೇಳಿದ್ದರೂ ತೀವ್ರ ಹತಾಶೆಗೆ ಒಳಗಾಗಿರುವ ಕಾಂಗ್ರೆಸ್, ಗುಜರಾತ್ ಗಲಭೆಯ ವಿಚಾರವನ್ನು ಜೀವಂತವಾಗಿರಲು ಸದಾ ಅದನ್ನೇ ಜಪಿಸುತ್ತಿದೆ ಎಂದು ಜಾವಡೇಕರ್ ಟೀಕಿಸಿದ್ದಾರೆ.<br /> <br /> ಗುಜರಾತ್ ಮುಸ್ಲಿಮರು ಮತ್ತು ಇತರರು ಕೋಮು ಗಲಭೆಯನ್ನು ಮರೆತಿದ್ದಾರೆ. ಆದರೆ ಖುರ್ಷಿದ್ ಹತಾಶರಾಗಿ ನ್ಯಾಯಾಂಗದ ಘನತೆಗೆ ಚ್ಯುತಿ ತರುವ ರೀತಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.<br /> <br /> ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರ ಮುಖಂಡರು ಹಾಗೂ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್, ಗುಜರಾತ್ ಗಲಭೆಯನ್ನು ಜೀವಂತವಾಗಿ ಇರಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>