<p>ಆಧುನಿಕತೆ ಬೆಳೆದಂತೆ ಜನರಲ್ಲಿ ಸಂಪ್ರದಾಯ, ಹಬ್ಬಗಳ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ನಾಡಹಬ್ಬ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸಿ ದಸರಾ ಆಚರಿಸುವುದು ಹಳೆ ಮೈಸೂರು ಭಾಗದಲ್ಲಿ ಪ್ರಚಲಿತದಲ್ಲಿದೆ.<br /> <br /> ಈ ಸಾಂಸ್ಕೃತಿಕ ಆಚರಣೆಗೆ ಮತ್ತಷ್ಟು ರಂಗು ತುಂಬಲು `ವಚನ ಜ್ಯೋತಿ ಬಳಗ~ ನಾಗರಬಾವಿ ಬಡಾವಣೆಯಲ್ಲಿ `ವಚನ ರಾತ್ರಿ~ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.<br /> <br /> ಕಾರ್ಯಕ್ರಮ ನಡೆದ ಮನೆಯ ಒಡತಿ ಎಪ್ಪತ್ತು ವಯಸ್ಸಿನ ರಾಜಮ್ಮ ಅವರು ಪ್ರತಿವರ್ಷದಂತೆ ಈ ಬಾರಿಯೂ ಗೊಂಬೆ ಕೂರಿಸುವ ಆಚರಣೆ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಬಾರಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತಿತರ ವಚನಕಾರರ ಗೊಂಬೆಗಳನ್ನು ಕೂರಿಸಿದ್ದು ವಿಶೇಷವಾಗಿತ್ತು. <br /> <br /> ರಂಗಭೂಮಿ ಕಲಾವಿದ ಅರಬಗಟ್ಟ ಬಸವರಾಜು ಅವರು ರಂಗಗೀತೆಗಳನ್ನು ಹಾಡಿದರು. <br /> <br /> ವೀಣಾ ಮೂರ್ತಿ ಅವರ `ದೇವಿಸ್ತುತಿ~, ಪ್ರೇಮಾ ಶಾಂತವೀರಯ್ಯ ಅವರ ಜನಪದ ಶಿವಸ್ತುತಿ, ಚಂದ್ರಮತಿ ಮಜಗೆ ಅವರ ವಚನ, ರತ್ನಾ ವೆಂಕಟೇಶ್ ಹಾಗೂ ಮೀನಾಕ್ಷಿ ಮೇಟಿ ಅವರ ಸಾಮೂಹಿಕ ಗೀತ ಗಾಯನ ಹಬ್ಬದ ವಾತಾವರಣಕ್ಕೆ ಗಾನ ಸಿಂಚನ ಮಾಡಿದಂತಿತ್ತು. <br /> <br /> ಬಳಗದ ಅಧ್ಯಕ್ಷ ಎಸ್.ಪಿನಕಪಾಣಿ, ಶಿವಕುಮಾರ್, ರುದ್ರೇಶ್ ಅಂದರಗಿ, ಟಿ.ಆರ್. ಮಹದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಧುನಿಕತೆ ಬೆಳೆದಂತೆ ಜನರಲ್ಲಿ ಸಂಪ್ರದಾಯ, ಹಬ್ಬಗಳ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ನಾಡಹಬ್ಬ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸಿ ದಸರಾ ಆಚರಿಸುವುದು ಹಳೆ ಮೈಸೂರು ಭಾಗದಲ್ಲಿ ಪ್ರಚಲಿತದಲ್ಲಿದೆ.<br /> <br /> ಈ ಸಾಂಸ್ಕೃತಿಕ ಆಚರಣೆಗೆ ಮತ್ತಷ್ಟು ರಂಗು ತುಂಬಲು `ವಚನ ಜ್ಯೋತಿ ಬಳಗ~ ನಾಗರಬಾವಿ ಬಡಾವಣೆಯಲ್ಲಿ `ವಚನ ರಾತ್ರಿ~ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.<br /> <br /> ಕಾರ್ಯಕ್ರಮ ನಡೆದ ಮನೆಯ ಒಡತಿ ಎಪ್ಪತ್ತು ವಯಸ್ಸಿನ ರಾಜಮ್ಮ ಅವರು ಪ್ರತಿವರ್ಷದಂತೆ ಈ ಬಾರಿಯೂ ಗೊಂಬೆ ಕೂರಿಸುವ ಆಚರಣೆ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಬಾರಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತಿತರ ವಚನಕಾರರ ಗೊಂಬೆಗಳನ್ನು ಕೂರಿಸಿದ್ದು ವಿಶೇಷವಾಗಿತ್ತು. <br /> <br /> ರಂಗಭೂಮಿ ಕಲಾವಿದ ಅರಬಗಟ್ಟ ಬಸವರಾಜು ಅವರು ರಂಗಗೀತೆಗಳನ್ನು ಹಾಡಿದರು. <br /> <br /> ವೀಣಾ ಮೂರ್ತಿ ಅವರ `ದೇವಿಸ್ತುತಿ~, ಪ್ರೇಮಾ ಶಾಂತವೀರಯ್ಯ ಅವರ ಜನಪದ ಶಿವಸ್ತುತಿ, ಚಂದ್ರಮತಿ ಮಜಗೆ ಅವರ ವಚನ, ರತ್ನಾ ವೆಂಕಟೇಶ್ ಹಾಗೂ ಮೀನಾಕ್ಷಿ ಮೇಟಿ ಅವರ ಸಾಮೂಹಿಕ ಗೀತ ಗಾಯನ ಹಬ್ಬದ ವಾತಾವರಣಕ್ಕೆ ಗಾನ ಸಿಂಚನ ಮಾಡಿದಂತಿತ್ತು. <br /> <br /> ಬಳಗದ ಅಧ್ಯಕ್ಷ ಎಸ್.ಪಿನಕಪಾಣಿ, ಶಿವಕುಮಾರ್, ರುದ್ರೇಶ್ ಅಂದರಗಿ, ಟಿ.ಆರ್. ಮಹದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>