<p>ಗಂಗಾವತಿ: ಅನಕ್ಷರತೆಯ ಪ್ರಮಾಣ ಕಡಿಮೆ ಮಾಡಿ, ಅಕ್ಷರಸ್ಥರ ಸಂಖ್ಯೆ ಹೆಚ್ಚಿಸಬೇಕೆಂಬ ಸಾಕ್ಷರತಾ ಭಾರತ-2012ರ ಗುರಿ ಸಾಧಿಸಲು ಇನ್ನು ಕೇವಲ 15 ದಿನ ಮಾತ್ರ ಬಾಕಿಯಿದ್ದು ಸೂಕ್ತ ಶ್ರಮ ವಹಿಸುವಂತೆ ಲೋಕ ಶಿಕ್ಷಣ ಸಮಿತಿಯ ತಾಲ್ಲೂಕು ಅಧಿಕಾರಿ ರಾಮಣ್ಣ ಕರೆ ನೀಡಿದರು.<br /> <br /> ತಾಲ್ಲೂಕು ಪಂಚಾಯಿತಿ ಹಿಂದಿರುವ ಶ್ರೀ ಕೃಷ್ಣ ದೇವರಾಯ ಕಲಾಮಂದಿರದಲ್ಲಿ ಗುರುವಾರ ಸಾಕ್ಷಾರತ ಯೋಜನೆಯ ಪ್ರೇರಕ, ಉಪ ಪ್ರೇರಕ ಮತ್ತು ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಪರೀಕ್ಷಾತಯಾರಿ ಕಾರ್ಯಾಗಾರದಲ್ಲಿ ಮಾತನಾಡಿದರು. <br /> <br /> ನವಸಾಕ್ಷರರಿಗೆ ನೀಡಲಾದ ಪುಸ್ತಕದಲ್ಲಿ ಒಟ್ಟು 28 ಪಾಠಗಳಿವೆ. 18-20 ಓದಿ ಕೈಬಿಟ್ಟವರ ಮನ ಪರಿವರ್ತನೆ ಮಾಡಿಸಿ ಹೆಚ್ಚುವರಿ ನಾಲ್ಕಾರು ಪಾಠ ಓದಲು ಹೇಳಬೇಕು, ಬಳಿಕ ಮಾಚ್ 15ರಂದು ನವ ಸಾಕ್ಷರರಿಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯಲಿವೆ. <br /> <br /> ಎಸ್ಸೆಸ್ಸೆಲ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ರಾಷ್ಟ್ರೀಯ ಮುಕ್ತ ವಿದ್ಯಾಲಯದಿಂದ ಹಿಂದಿ-ಇಂಗ್ಲಿಷ್ನಲ್ಲಿ ಮುದ್ರಿತ ಪ್ರಮಾಣ ಪತ್ರವನ್ನು ವಿತರಿಸಲಾಗುವುದು, ಈ ಹಿನ್ನೆಲೆ ಶಿಕ್ಷಣ ಸಮಿತಿಯ ಸಿಬ್ಬಂದಿ ಗಮನ ಹರಿಸುವಂತೆ ಮನವಿ ಮಾಡಿದರು.<br /> <br /> ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು-ಮೂರು ಕೇಂದ್ರ ಸ್ಥಾಪಿಸಲು ಉದ್ದೇಶಿಲಾಗಿದೆ. ಪ್ರತಿ ಕೇಂದ್ರಕ್ಕೆ 350-400 ಜನ ಅಭ್ಯರ್ಥಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಮಣ್ಣ ಉದ್ದೇಶಿತ ಕಾರ್ಯಕ್ರಮದ ಮಾಹಿತಿ ನೀಡಿದರು. <br /> <br /> ಬಳಿಕ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ ತುಪ್ಪದ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಹಿರೇಹನುಮವ್ವ ಉದ್ಘಾಟಿಸಿದರು. ಸದಸ್ಯ ಸಿದ್ದಪ್ಪ ಚಳ್ಳೂರು, ಬಸವರಾಜ ಮ್ಯಾಗಳಮನಿ, ಮುಖ್ಯಗುರು ಸಂಗಳದ ಇತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಅನಕ್ಷರತೆಯ ಪ್ರಮಾಣ ಕಡಿಮೆ ಮಾಡಿ, ಅಕ್ಷರಸ್ಥರ ಸಂಖ್ಯೆ ಹೆಚ್ಚಿಸಬೇಕೆಂಬ ಸಾಕ್ಷರತಾ ಭಾರತ-2012ರ ಗುರಿ ಸಾಧಿಸಲು ಇನ್ನು ಕೇವಲ 15 ದಿನ ಮಾತ್ರ ಬಾಕಿಯಿದ್ದು ಸೂಕ್ತ ಶ್ರಮ ವಹಿಸುವಂತೆ ಲೋಕ ಶಿಕ್ಷಣ ಸಮಿತಿಯ ತಾಲ್ಲೂಕು ಅಧಿಕಾರಿ ರಾಮಣ್ಣ ಕರೆ ನೀಡಿದರು.<br /> <br /> ತಾಲ್ಲೂಕು ಪಂಚಾಯಿತಿ ಹಿಂದಿರುವ ಶ್ರೀ ಕೃಷ್ಣ ದೇವರಾಯ ಕಲಾಮಂದಿರದಲ್ಲಿ ಗುರುವಾರ ಸಾಕ್ಷಾರತ ಯೋಜನೆಯ ಪ್ರೇರಕ, ಉಪ ಪ್ರೇರಕ ಮತ್ತು ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಪರೀಕ್ಷಾತಯಾರಿ ಕಾರ್ಯಾಗಾರದಲ್ಲಿ ಮಾತನಾಡಿದರು. <br /> <br /> ನವಸಾಕ್ಷರರಿಗೆ ನೀಡಲಾದ ಪುಸ್ತಕದಲ್ಲಿ ಒಟ್ಟು 28 ಪಾಠಗಳಿವೆ. 18-20 ಓದಿ ಕೈಬಿಟ್ಟವರ ಮನ ಪರಿವರ್ತನೆ ಮಾಡಿಸಿ ಹೆಚ್ಚುವರಿ ನಾಲ್ಕಾರು ಪಾಠ ಓದಲು ಹೇಳಬೇಕು, ಬಳಿಕ ಮಾಚ್ 15ರಂದು ನವ ಸಾಕ್ಷರರಿಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯಲಿವೆ. <br /> <br /> ಎಸ್ಸೆಸ್ಸೆಲ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ರಾಷ್ಟ್ರೀಯ ಮುಕ್ತ ವಿದ್ಯಾಲಯದಿಂದ ಹಿಂದಿ-ಇಂಗ್ಲಿಷ್ನಲ್ಲಿ ಮುದ್ರಿತ ಪ್ರಮಾಣ ಪತ್ರವನ್ನು ವಿತರಿಸಲಾಗುವುದು, ಈ ಹಿನ್ನೆಲೆ ಶಿಕ್ಷಣ ಸಮಿತಿಯ ಸಿಬ್ಬಂದಿ ಗಮನ ಹರಿಸುವಂತೆ ಮನವಿ ಮಾಡಿದರು.<br /> <br /> ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು-ಮೂರು ಕೇಂದ್ರ ಸ್ಥಾಪಿಸಲು ಉದ್ದೇಶಿಲಾಗಿದೆ. ಪ್ರತಿ ಕೇಂದ್ರಕ್ಕೆ 350-400 ಜನ ಅಭ್ಯರ್ಥಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಮಣ್ಣ ಉದ್ದೇಶಿತ ಕಾರ್ಯಕ್ರಮದ ಮಾಹಿತಿ ನೀಡಿದರು. <br /> <br /> ಬಳಿಕ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ ತುಪ್ಪದ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಹಿರೇಹನುಮವ್ವ ಉದ್ಘಾಟಿಸಿದರು. ಸದಸ್ಯ ಸಿದ್ದಪ್ಪ ಚಳ್ಳೂರು, ಬಸವರಾಜ ಮ್ಯಾಗಳಮನಿ, ಮುಖ್ಯಗುರು ಸಂಗಳದ ಇತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>