<p>ರಾಜ್ಯದಲ್ಲಿ ಮಳೆ ಅಲ್ಲಲ್ಲಿ ಇಣುಕುತ್ತಿದೆ. ನೀರಾವರಿ ಪ್ರದೇಶ ಹಾಗೂ ಮಲೆನಾಡಿನಲ್ಲಿ ಭತ್ತವನ್ನು ಬಿತ್ತುವುದಕ್ಕಿಂತ ನಾಟಿ ಮಾಡುವುದು ಹೆಚ್ಚು ಪ್ರಚಲಿತದಲ್ಲಿದೆ.<br /> <br /> ಆದರೆ ರೈತರು ಅಧಿಕ ಲಾಭ, ಇಳುವರಿ ಆಸೆಯಿಂದ ಹೆಚ್ಚು ನೀರು ನಿಲ್ಲಿಸಿ ಗದ್ದೆಯಲ್ಲಿ ಕೆಸರು ಮಾಡುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ ಹಾಗೂ ಪೋಷಕಾಂಶಗಳು ಪೋಲಾಗುತ್ತವೆ. ಅಲ್ಲದೆ 15-20 ಸೆಂ.ಮೀ ಆಳದವರೆಗೆ ಮಾತ್ರ ಉಳುಮೆ ಮಾಡುವುದು ಒಳ್ಳೆಯದು. ಇನ್ನಷ್ಟು ಆಳ ಉಳುಮೆಯಿಂದ ಅಧಿಕ ಹಣ ಖರ್ಚಾಗುತ್ತದೆ, ಇಳುವರಿಯೂ ಕಡಿಮೆಯಾಗುತ್ತದೆ. <br /> <br /> ಮಲೆನಾಡ ಪ್ರದೇಶಗಳಲ್ಲಿ ಇಳಿಜಾರಿಗೆ ಅನುಸಾರವಾಗಿ ತಾಕುಗಳನ್ನು ನಿರ್ಮಿಸಿ ಬದುಗಳಿಗೆ ಕೆಸರಿನ ಲೇಪನ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿ ಎಕರೆಗೆ 15-20 ಟನ್ ಮಣ್ಣು ಸವಕಳಿಯಾಗುವ ಸಾಧ್ಯತೆಗಳಿರುತ್ತವೆ. ಹೀಗೆಯೆ ಮುಂದುವರಿದರೆ ಫಲವತ್ತಾದ ಮೇಲ್ಮಣ್ಣು ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತದೆ.<br /> <br /> ಭತ್ತವನ್ನು ನಾಟಿ ಮಾಡುವಾಗ ಗದ್ದೆಯಲ್ಲಿ ಹೆಚ್ಚು ಕಳೆಗಳಿದ್ದರೆ ಹಾಗು ಭೂಮಿ ಗಟ್ಟಿಯಿದ್ದರೆ ಎರಡನೆ ಉಳುಮೆ ಅಗತ್ಯ. ಇದನ್ನು ನಾಟಿಗೆ ಒಂದು ವಾರದ ಮುಂಚೆ ಅತೀ ಹೆಚ್ಚು ನೀರು ನಿಲ್ಲಿಸದೇ ಮಾಡಬೇಕು. <br /> <br /> ಇದಾದ ನಂತರ ನಾಟಿಗೆ 1-2 ದಿನಗಳ ಮುಂಚೆ ಸುಮಾರು 5 ಸೆಂ.ಮೀ ನೀರನ್ನು ನಿಲ್ಲಿಸಿ ಹದವಾಗಿ ನೇಗಿಲಿನಿಂದ ಕೆಸರು ಉಳುಮೆ ಕೈಗೊಳ್ಳಬೇಕು. ನಾಟಿಗೆ ಮೊದಲು 2-3 ಸೆಂ.ಮೀ ನೀರು ನಿಲ್ಲಿಸಿ ಹಲಗೆಯಿಂದ ಭೂಮಿಯನ್ನು ಸಮತಟ್ಟುಗೊಳಿಸಿ ಕಳೆಗಳನ್ನು ನಿಯಂತ್ರಿಸಬಹುದು.<br /> <br /> ಕೆಲವರು ಹಲಗೆಯಿಂದ ಗದ್ದೆಯನ್ನು ಸಮಗೊಳಿಸುವುದಕ್ಕೆ ಹೆಚ್ಚಿನ ನೀರು ಬಳಸುತ್ತಾರೆ. ಇದರಿಂದ ನಾಟಿಯ ಸಮಯದಲ್ಲಿ ತೊಡಕು ಉಂಟಾಗುತ್ತದೆ. ಆ ಬಳಿಕ ಕೆಸರು ನೀರನ್ನು ಹೊರಹಾಕುತ್ತಾರೆ. <br /> <br /> ಆಗ ಪೋಷಕಾಂಶ ನಷ್ಟದ ಜತೆಗೆ ಫಲವತ್ತಾದ ಮಣ್ಣು ಸಹ ಗದ್ದೆಯಿಂದ ಹೊರ ಹಾಕಿದಂತಾಗಿ ಇಳುವರಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.ಆದ್ದರಿಂದ ಸರಿಯಾದ ಕ್ರಮಗಳನ್ನು ಅನುಸರಿಸಿ ಕೇವಲ 15-20 ಸೆಂ.ಮೀ ನೀರು ನಿಲ್ಲಿಸಿ ಕೆಸರು ಉಳುಮೆ ಮಾಡಬೇಕು. ಮಣ್ಣಿನ ಪೋಷಕಾಂಶ ಕಾಪಾಡಿ ಅಧಿಕ ಇಳುವರಿ ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ಮಳೆ ಅಲ್ಲಲ್ಲಿ ಇಣುಕುತ್ತಿದೆ. ನೀರಾವರಿ ಪ್ರದೇಶ ಹಾಗೂ ಮಲೆನಾಡಿನಲ್ಲಿ ಭತ್ತವನ್ನು ಬಿತ್ತುವುದಕ್ಕಿಂತ ನಾಟಿ ಮಾಡುವುದು ಹೆಚ್ಚು ಪ್ರಚಲಿತದಲ್ಲಿದೆ.<br /> <br /> ಆದರೆ ರೈತರು ಅಧಿಕ ಲಾಭ, ಇಳುವರಿ ಆಸೆಯಿಂದ ಹೆಚ್ಚು ನೀರು ನಿಲ್ಲಿಸಿ ಗದ್ದೆಯಲ್ಲಿ ಕೆಸರು ಮಾಡುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ ಹಾಗೂ ಪೋಷಕಾಂಶಗಳು ಪೋಲಾಗುತ್ತವೆ. ಅಲ್ಲದೆ 15-20 ಸೆಂ.ಮೀ ಆಳದವರೆಗೆ ಮಾತ್ರ ಉಳುಮೆ ಮಾಡುವುದು ಒಳ್ಳೆಯದು. ಇನ್ನಷ್ಟು ಆಳ ಉಳುಮೆಯಿಂದ ಅಧಿಕ ಹಣ ಖರ್ಚಾಗುತ್ತದೆ, ಇಳುವರಿಯೂ ಕಡಿಮೆಯಾಗುತ್ತದೆ. <br /> <br /> ಮಲೆನಾಡ ಪ್ರದೇಶಗಳಲ್ಲಿ ಇಳಿಜಾರಿಗೆ ಅನುಸಾರವಾಗಿ ತಾಕುಗಳನ್ನು ನಿರ್ಮಿಸಿ ಬದುಗಳಿಗೆ ಕೆಸರಿನ ಲೇಪನ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿ ಎಕರೆಗೆ 15-20 ಟನ್ ಮಣ್ಣು ಸವಕಳಿಯಾಗುವ ಸಾಧ್ಯತೆಗಳಿರುತ್ತವೆ. ಹೀಗೆಯೆ ಮುಂದುವರಿದರೆ ಫಲವತ್ತಾದ ಮೇಲ್ಮಣ್ಣು ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತದೆ.<br /> <br /> ಭತ್ತವನ್ನು ನಾಟಿ ಮಾಡುವಾಗ ಗದ್ದೆಯಲ್ಲಿ ಹೆಚ್ಚು ಕಳೆಗಳಿದ್ದರೆ ಹಾಗು ಭೂಮಿ ಗಟ್ಟಿಯಿದ್ದರೆ ಎರಡನೆ ಉಳುಮೆ ಅಗತ್ಯ. ಇದನ್ನು ನಾಟಿಗೆ ಒಂದು ವಾರದ ಮುಂಚೆ ಅತೀ ಹೆಚ್ಚು ನೀರು ನಿಲ್ಲಿಸದೇ ಮಾಡಬೇಕು. <br /> <br /> ಇದಾದ ನಂತರ ನಾಟಿಗೆ 1-2 ದಿನಗಳ ಮುಂಚೆ ಸುಮಾರು 5 ಸೆಂ.ಮೀ ನೀರನ್ನು ನಿಲ್ಲಿಸಿ ಹದವಾಗಿ ನೇಗಿಲಿನಿಂದ ಕೆಸರು ಉಳುಮೆ ಕೈಗೊಳ್ಳಬೇಕು. ನಾಟಿಗೆ ಮೊದಲು 2-3 ಸೆಂ.ಮೀ ನೀರು ನಿಲ್ಲಿಸಿ ಹಲಗೆಯಿಂದ ಭೂಮಿಯನ್ನು ಸಮತಟ್ಟುಗೊಳಿಸಿ ಕಳೆಗಳನ್ನು ನಿಯಂತ್ರಿಸಬಹುದು.<br /> <br /> ಕೆಲವರು ಹಲಗೆಯಿಂದ ಗದ್ದೆಯನ್ನು ಸಮಗೊಳಿಸುವುದಕ್ಕೆ ಹೆಚ್ಚಿನ ನೀರು ಬಳಸುತ್ತಾರೆ. ಇದರಿಂದ ನಾಟಿಯ ಸಮಯದಲ್ಲಿ ತೊಡಕು ಉಂಟಾಗುತ್ತದೆ. ಆ ಬಳಿಕ ಕೆಸರು ನೀರನ್ನು ಹೊರಹಾಕುತ್ತಾರೆ. <br /> <br /> ಆಗ ಪೋಷಕಾಂಶ ನಷ್ಟದ ಜತೆಗೆ ಫಲವತ್ತಾದ ಮಣ್ಣು ಸಹ ಗದ್ದೆಯಿಂದ ಹೊರ ಹಾಕಿದಂತಾಗಿ ಇಳುವರಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.ಆದ್ದರಿಂದ ಸರಿಯಾದ ಕ್ರಮಗಳನ್ನು ಅನುಸರಿಸಿ ಕೇವಲ 15-20 ಸೆಂ.ಮೀ ನೀರು ನಿಲ್ಲಿಸಿ ಕೆಸರು ಉಳುಮೆ ಮಾಡಬೇಕು. ಮಣ್ಣಿನ ಪೋಷಕಾಂಶ ಕಾಪಾಡಿ ಅಧಿಕ ಇಳುವರಿ ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>