<p><strong>ಭಟ್ಕಳ:</strong> ನಾಪತ್ತೆಯಾಗಿದ್ದ ತಾಲ್ಲೂಕಿನ ಜಾಲಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಸಲಾಮ್ ದಾಮ್ದಾ (55) ಅಲಿಯಾಸ್ ಮೆಡಿಕಲ್ ಸಲಾಮ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕುಮಟಾದ ಕತಗಾಲ ಸಮೀಪದ ದೇವಿಮನೆ ಘಟ್ಟದ ಅರಣ್ಯ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. <br /> <br /> ಭೂಮಿ ವ್ಯವಹಾರ ನಡೆಸುತ್ತಿದ್ದ ಅವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯವಹಾರ ನಿಮಿತ್ತವೇ ಸೆ.6ರಂದು ಕುಮಟಾಕ್ಕೆ ಹೋಗಿ, ಅಲ್ಲಿಂದ ಶಿರಸಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿದ್ದರಂತೆ.<br /> <br /> ದಾಮ್ದಾ ಅವರು ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹದು ಎನ್ನಲಾಗಿದೆ. ಸೆ.6ರಂದು ಬೆಳಿಗ್ಗೆ ಮನೆಯಿಂದ ಹೊರಟವರು, ದೂರವಾಣಿಯಲ್ಲೂ ಸಂಪರ್ಕಿಸದೇ ಈವರೆಗೆ ಮನೆಗೆ ಹಿಂತಿರುಗಿ ಬಂದಿಲ್ಲವೆಂದು ಮೃತರ ಮಗ ಶುಕ್ರವಾರವಷ್ಟೇ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. <br /> <br /> ಆದರೆ ಭಾನುವಾರ ಶವ ಪತ್ತೆಯಾಗಿದೆ. ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಹಚ್ಚುವುದಕ್ಕೆ ಅವರ ಕುಟುಂಬದವರೂ ಸಹ ತೀವ್ರ ಪ್ರಯಾಸಪಟ್ಟು, ಕೊನೆಗೆ ಅವರು ಹಾಕಿಕೊಂಡಿದ್ದ ಅಂಗಿ ಮತ್ತು ಸೊಂಟದಲ್ಲಿದ್ದ ಬೆಲ್ಟ್ನಿಂದ ಗುರುತು ಹಿಡಿದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> ನಾಪತ್ತೆಯಾಗಿದ್ದ ತಾಲ್ಲೂಕಿನ ಜಾಲಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಸಲಾಮ್ ದಾಮ್ದಾ (55) ಅಲಿಯಾಸ್ ಮೆಡಿಕಲ್ ಸಲಾಮ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕುಮಟಾದ ಕತಗಾಲ ಸಮೀಪದ ದೇವಿಮನೆ ಘಟ್ಟದ ಅರಣ್ಯ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. <br /> <br /> ಭೂಮಿ ವ್ಯವಹಾರ ನಡೆಸುತ್ತಿದ್ದ ಅವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯವಹಾರ ನಿಮಿತ್ತವೇ ಸೆ.6ರಂದು ಕುಮಟಾಕ್ಕೆ ಹೋಗಿ, ಅಲ್ಲಿಂದ ಶಿರಸಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿದ್ದರಂತೆ.<br /> <br /> ದಾಮ್ದಾ ಅವರು ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹದು ಎನ್ನಲಾಗಿದೆ. ಸೆ.6ರಂದು ಬೆಳಿಗ್ಗೆ ಮನೆಯಿಂದ ಹೊರಟವರು, ದೂರವಾಣಿಯಲ್ಲೂ ಸಂಪರ್ಕಿಸದೇ ಈವರೆಗೆ ಮನೆಗೆ ಹಿಂತಿರುಗಿ ಬಂದಿಲ್ಲವೆಂದು ಮೃತರ ಮಗ ಶುಕ್ರವಾರವಷ್ಟೇ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. <br /> <br /> ಆದರೆ ಭಾನುವಾರ ಶವ ಪತ್ತೆಯಾಗಿದೆ. ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಹಚ್ಚುವುದಕ್ಕೆ ಅವರ ಕುಟುಂಬದವರೂ ಸಹ ತೀವ್ರ ಪ್ರಯಾಸಪಟ್ಟು, ಕೊನೆಗೆ ಅವರು ಹಾಕಿಕೊಂಡಿದ್ದ ಅಂಗಿ ಮತ್ತು ಸೊಂಟದಲ್ಲಿದ್ದ ಬೆಲ್ಟ್ನಿಂದ ಗುರುತು ಹಿಡಿದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>