<p>ಬಿಡುಗಡೆಯಾಗುವ ಮುನ್ನವೇ ಈ ಸಿನಿಮಾ 10 ಕೋಟಿ ರೂಪಾಯಿ ವ್ಯವಹಾರ ಮಾಡಿದೆ ಎಂದರು ನಿರ್ಮಾಪಕ ಶಂಕರಗೌಡ. ಅದು ಅವರ ನಿರ್ಮಾಣದ `ವರದ ನಾಯಕ~ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. <br /> <br /> ಚಿತ್ರ ತಡವಾಗಿ ಸಿದ್ಧವಾಗಿದ್ದರೂ ವರ್ಚಸ್ಸು ಜೋರಾಗಿಯೇ ಇದೆ ಎಂಬುದನ್ನು ಅವರು ಖುಷಿಯಿಂದ ಹೇಳಿಕೊಂಡರು. ಅವರ ಪಾಲಿಗೆ ಈ ಚಿತ್ರ ವರವಾಗಿ ಪರಿಣಮಿಸಿದೆಯಂತೆ. <br /> ಸುದೀಪ್ರಿಂದಾಗಿ ಈ ಸಿನಿಮಾ ನಿರ್ಮಿಸಿದ್ದೇನೆ ಎಂದ ಶಂಕರಗೌಡ ತಮ್ಮ ಪಾಲಿನ ಸಂತಸದ ದಿನವಿದು ಎಂದರು. ಅವರ ಮಾತುಹೆಚ್ಚಾಗಿ ನಾಯಕ ದ್ವಯರಾದ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಕುರಿತಾಗಿಯೇ ಇತ್ತು. <br /> <br /> ತಮಿಳು ಮೂಲದವರಾದ ನಿರ್ದೇಶಕ ಅಯ್ಯಪ್ಪ ಪಿ. ಶರ್ಮ ಇನ್ನೂ ಕನ್ನಡ ಕಲಿಯುತ್ತಿರುವವರು. ಸುದೀಪ್ ಅವರಿಗೆ ಹಳೆಯ ಸ್ನೇಹಿತರಂತೆ. ಕನ್ನಡ ಚಿತ್ರರಂಗದ ಅನೇಕ ಹಳೆಯ ಸ್ನೇಹಿತರು ಈ ಚಿತ್ರದ ಮೂಲಕ ಮತ್ತೆ ಸಿಕ್ಕಿದ್ದಾರೆ ಎಂಬ ಖುಷಿ ಅವರಲ್ಲಿತ್ತು. ತೆಲುಗಿನ `ಲಕ್ಷ್ಯಂ~ ಚಿತ್ರದ ಕನ್ನಡ ಅವತರಣಿಕೆ ಇದು. <br /> <br /> ಈ ಚಿತ್ರದಲ್ಲಿ ತಾವು ನಟಿಸಲು ಮುಖ್ಯ ಕಾರಣ ಚಿರಂಜೀವಿ ಸರ್ಜಾ ಎಂದರು ನಟ ಸುದೀಪ್. ಚಿರು ನನ್ನ ತಮ್ಮನಿದ್ದಂತೆ ಎಂದ ಅವರು, ಚಿತ್ರಕ್ಕಾಗಿ ಸಾಕಷ್ಟು ಕಠಿಣ ಶ್ರಮ ಪಟ್ಟಿದ್ದಾರೆ. ಚೆನ್ನಾಗಿ ನಟಿಸಿದ್ದಾರೆ ಎಂದು ಬೆನ್ನುತಟ್ಟಿದರು. <br /> <br /> ಚಿತ್ರದ ಬಗ್ಗೆ ಸುದೀಪ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರ್ದೇಶಕ ಅಯ್ಯಪ್ಪ ಶರ್ಮ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯ ಚಿತ್ರದ ಪೂರ್ವ ತಯಾರಿಗೆಂದು ವ್ಯಯಿಸಿದ್ದು ಅವರ ಶ್ರದ್ಧೆಯ ಪ್ರತೀಕ ಎಂದು ಮೆಚ್ಚುಗೆ ಮಾತನ್ನಾಡಿದರು.<br /> <br /> ಹುಡುಗಾಟದ ದಿನಗಳಲ್ಲಿ ಕಮಲಹಾಸನ್ ಚಿತ್ರಗಳೆಂದರೆ ಬಿಡದೆ ಚಿತ್ರಮಂದಿರಕ್ಕೆ ಓಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು ಉಪಮುಖ್ಯಮಂತ್ರಿ ಆರ್. ಅಶೋಕ್. ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿವೆ. ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವ ಕಾಲ ಮರುಕಳಿಸಿದೆ ಎಂದವರು ಹರ್ಷ ವ್ಯಕ್ತಪಡಿಸಿದರು.<br /> <br /> ಚಿತ್ರಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಎಲ್ಲಾ ಹಾಡುಗಳನ್ನೂ ಕನ್ನಡದ ಹೊಸ ಗಾಯಕರಿಂದಲೇ ಹಾಡಿಸಿರುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಡುಗಡೆಯಾಗುವ ಮುನ್ನವೇ ಈ ಸಿನಿಮಾ 10 ಕೋಟಿ ರೂಪಾಯಿ ವ್ಯವಹಾರ ಮಾಡಿದೆ ಎಂದರು ನಿರ್ಮಾಪಕ ಶಂಕರಗೌಡ. ಅದು ಅವರ ನಿರ್ಮಾಣದ `ವರದ ನಾಯಕ~ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. <br /> <br /> ಚಿತ್ರ ತಡವಾಗಿ ಸಿದ್ಧವಾಗಿದ್ದರೂ ವರ್ಚಸ್ಸು ಜೋರಾಗಿಯೇ ಇದೆ ಎಂಬುದನ್ನು ಅವರು ಖುಷಿಯಿಂದ ಹೇಳಿಕೊಂಡರು. ಅವರ ಪಾಲಿಗೆ ಈ ಚಿತ್ರ ವರವಾಗಿ ಪರಿಣಮಿಸಿದೆಯಂತೆ. <br /> ಸುದೀಪ್ರಿಂದಾಗಿ ಈ ಸಿನಿಮಾ ನಿರ್ಮಿಸಿದ್ದೇನೆ ಎಂದ ಶಂಕರಗೌಡ ತಮ್ಮ ಪಾಲಿನ ಸಂತಸದ ದಿನವಿದು ಎಂದರು. ಅವರ ಮಾತುಹೆಚ್ಚಾಗಿ ನಾಯಕ ದ್ವಯರಾದ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಕುರಿತಾಗಿಯೇ ಇತ್ತು. <br /> <br /> ತಮಿಳು ಮೂಲದವರಾದ ನಿರ್ದೇಶಕ ಅಯ್ಯಪ್ಪ ಪಿ. ಶರ್ಮ ಇನ್ನೂ ಕನ್ನಡ ಕಲಿಯುತ್ತಿರುವವರು. ಸುದೀಪ್ ಅವರಿಗೆ ಹಳೆಯ ಸ್ನೇಹಿತರಂತೆ. ಕನ್ನಡ ಚಿತ್ರರಂಗದ ಅನೇಕ ಹಳೆಯ ಸ್ನೇಹಿತರು ಈ ಚಿತ್ರದ ಮೂಲಕ ಮತ್ತೆ ಸಿಕ್ಕಿದ್ದಾರೆ ಎಂಬ ಖುಷಿ ಅವರಲ್ಲಿತ್ತು. ತೆಲುಗಿನ `ಲಕ್ಷ್ಯಂ~ ಚಿತ್ರದ ಕನ್ನಡ ಅವತರಣಿಕೆ ಇದು. <br /> <br /> ಈ ಚಿತ್ರದಲ್ಲಿ ತಾವು ನಟಿಸಲು ಮುಖ್ಯ ಕಾರಣ ಚಿರಂಜೀವಿ ಸರ್ಜಾ ಎಂದರು ನಟ ಸುದೀಪ್. ಚಿರು ನನ್ನ ತಮ್ಮನಿದ್ದಂತೆ ಎಂದ ಅವರು, ಚಿತ್ರಕ್ಕಾಗಿ ಸಾಕಷ್ಟು ಕಠಿಣ ಶ್ರಮ ಪಟ್ಟಿದ್ದಾರೆ. ಚೆನ್ನಾಗಿ ನಟಿಸಿದ್ದಾರೆ ಎಂದು ಬೆನ್ನುತಟ್ಟಿದರು. <br /> <br /> ಚಿತ್ರದ ಬಗ್ಗೆ ಸುದೀಪ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರ್ದೇಶಕ ಅಯ್ಯಪ್ಪ ಶರ್ಮ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯ ಚಿತ್ರದ ಪೂರ್ವ ತಯಾರಿಗೆಂದು ವ್ಯಯಿಸಿದ್ದು ಅವರ ಶ್ರದ್ಧೆಯ ಪ್ರತೀಕ ಎಂದು ಮೆಚ್ಚುಗೆ ಮಾತನ್ನಾಡಿದರು.<br /> <br /> ಹುಡುಗಾಟದ ದಿನಗಳಲ್ಲಿ ಕಮಲಹಾಸನ್ ಚಿತ್ರಗಳೆಂದರೆ ಬಿಡದೆ ಚಿತ್ರಮಂದಿರಕ್ಕೆ ಓಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು ಉಪಮುಖ್ಯಮಂತ್ರಿ ಆರ್. ಅಶೋಕ್. ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿವೆ. ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವ ಕಾಲ ಮರುಕಳಿಸಿದೆ ಎಂದವರು ಹರ್ಷ ವ್ಯಕ್ತಪಡಿಸಿದರು.<br /> <br /> ಚಿತ್ರಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಎಲ್ಲಾ ಹಾಡುಗಳನ್ನೂ ಕನ್ನಡದ ಹೊಸ ಗಾಯಕರಿಂದಲೇ ಹಾಡಿಸಿರುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>