<p>ಒಬ್ಬ ಬಿಲ್ಲು ಎತ್ತಿದ್ದರೆ ಮತ್ತೊಬ್ಬ ಬಾಣ ಬಿಡುತ್ತಾನೆ. ಬಿಲ್ಲು ಎತ್ತಿದವನು ಬಾಣ ಯಾಕೆ ಬಿಡಲಿಲ್ಲ? ಬಾಣ ಬಿಟ್ಟವನು ಬಿಲ್ಲು ಯಾಕೆ ಎತ್ತಲಿಲ್ಲ? ಈ ಪ್ರಶ್ನೆಗಳಿಗೆಲ್ಲ ಉತ್ತರ `ನಾವಿಕ~ ಚಿತ್ರದಲ್ಲಿದೆ~ ಎಂದರು ಚಿತ್ರದ ನಾಯಕ ಮನೀಷ್ ಚಂದ್ರ.<br /> <br /> ಕಿರುತೆರೆಯಲ್ಲಿ ನಿರೂಪಕರಾಗಿರುವ ಮನೀಷ್ ಚಂದ್ರ ಮತ್ತು ಶ್ರವಂತ್ ನಾಯಕರಾಗಿರುವ `ನಾವಿಕ~ ಚಿತ್ರದ ಸೀಡಿ ಬಿಡುಗಡೆ ಸಮಾರಂಭ ಅದು.<br /> ಕಳೆದ ಆಗಸ್ಟ್ನಲ್ಲಿ ಆರಂಭವಾದ ಈ ಸಿನಿಮಾದ ಆಡಿಯೋ ಇದೀಗ ಬಿಡುಗಡೆಯಾಗಿದೆ. <br /> <br /> ಅದಕ್ಕೆ ಕಾರಣ ನೀಡಿದ ನಿರ್ದೇಶಕ ಸೇನ್ ಪ್ರಕಾಶ್, `ಚಿತ್ರವನ್ನು ಉತ್ತಮವಾಗಿ ತೆರೆಗೆ ಸಿದ್ಧಪಡಿಸಬೇಕು ಎಂಬ ಕಾರಣದಿಂದ ನಿಧಾನವಾಗಿ ಕೆಲಸ ಮಾಡಿದೆವು. ಇದೀಗ ಚಿತ್ರೀಕರಣ ನಂತರದ ಎಲ್ಲಾ ತಾಂತ್ರಿಕ ಕೆಲಸಗಳೂ ಮುಗಿದಿವೆ. ಪ್ರಥಮ ಪ್ರತಿ ಸಿದ್ಧವಾಗುತ್ತಿದೆ~ ಎಂದರು.<br /> <br /> ಬೆಂಗಳೂರಿನಲ್ಲಿಯೇ 32 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ಅವರು ತಮ್ಮ ಚಿತ್ರದ ಕತೆ ಪ್ರಸ್ತುತ ನಡೆಯುತ್ತಿರುವ ವಾಸ್ತವ ಅಂಶಗಳನ್ನು ಆಧಾರವಾಗಿ ಹೊಂದಿದೆ~ ಎಂದರು. <br /> <br /> `ಇದೊಂದು ಹೊಸ ಸಬ್ಜೆಕ್ಟ್. ರಂಗನಾಥ ಎಂಬುವರು ಕತೆ ಬರೆದಿದ್ದಾರೆ. ಈ ಚಿತ್ರದಲ್ಲಿ ಇಬ್ಬರೂ ನಟರ ಸ್ವಭಾವ ಪರಸ್ಪರ ವೈರುಧ್ಯದಿಂದ ಕೂಡಿದೆ. ನಮ್ಮ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದರೆ ಇಬ್ಬರು ಪ್ರತಿಭಾವಂತ ನಾಯಕ ನಟರು ಚಿತ್ರರಂಗಕ್ಕೆ ಸಿಕ್ಕಂತಾಗುತ್ತದೆ~ ಎಂದು ನಾಯಕರ ಬೆನ್ನು ತಟ್ಟಿದರು.<br /> <br /> ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಸಿಕ್ಕಿದ್ದರಿಂದ ದೇಹವನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡು ನಟಿಸಿದ್ದ ಶ್ರವಂತ್ `ಚಿಕ್ಕಮಗಳೂರು ಚಿಕ್ಕಮಲ್ಲಿಗೆ~ ಚಿತ್ರದ ನಂತರ ನಾಯಕನಾಗುವ ಅವಕಾಶ ಸಿಕ್ಕಿದ್ದನ್ನು ಸಂತಸದಿಂದ ಹಂಚಿಕೊಂಡರು. `ಹಿಂದಿನ ಚಿತ್ರದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಈ ಸಿನಿಮಾ ಮಾಡಿರುವೆ~ ಎಂದರು.<br /> <br /> ಮನೀಷ್, ಶ್ರವಂತ್ ಅವರ ಬದ್ಧತೆಯನ್ನು ಮೆಚ್ಚಿಕೊಂಡರು. ಒಳ್ಳೆಯವನಾ? ಕೆಟ್ಟವನಾ? ಎಂಬ ಗೊಂದಲ ಹುಟ್ಟುಹಾಕುವ ಡಬಲ್ ಶೇಡ್ ಇರುವ ಪಾತ್ರ ಮನೀಷ್ ಅವರದಂತೆ. <br /> <br /> ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮತ್ತು ಸಾ.ರಾ.ಗೋವಿಂದು ಸೀಡಿಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಸಂಗೀತ ನಿರ್ದೇಶಕ ರಾಜ್ ನಾರಾಯಣ್, ಸಂಭಾಷಣೆಕಾರ ಯೋಗಿ, ಸಂಕಲನಕಾರ ರವಿ ಹಾಜರಿದ್ದರು. ನಾಯಕಿಯರಾದ ಸ್ವಾತಿ, ಎಸ್ತಾರ್ ಜನ್ನತ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಬ್ಬ ಬಿಲ್ಲು ಎತ್ತಿದ್ದರೆ ಮತ್ತೊಬ್ಬ ಬಾಣ ಬಿಡುತ್ತಾನೆ. ಬಿಲ್ಲು ಎತ್ತಿದವನು ಬಾಣ ಯಾಕೆ ಬಿಡಲಿಲ್ಲ? ಬಾಣ ಬಿಟ್ಟವನು ಬಿಲ್ಲು ಯಾಕೆ ಎತ್ತಲಿಲ್ಲ? ಈ ಪ್ರಶ್ನೆಗಳಿಗೆಲ್ಲ ಉತ್ತರ `ನಾವಿಕ~ ಚಿತ್ರದಲ್ಲಿದೆ~ ಎಂದರು ಚಿತ್ರದ ನಾಯಕ ಮನೀಷ್ ಚಂದ್ರ.<br /> <br /> ಕಿರುತೆರೆಯಲ್ಲಿ ನಿರೂಪಕರಾಗಿರುವ ಮನೀಷ್ ಚಂದ್ರ ಮತ್ತು ಶ್ರವಂತ್ ನಾಯಕರಾಗಿರುವ `ನಾವಿಕ~ ಚಿತ್ರದ ಸೀಡಿ ಬಿಡುಗಡೆ ಸಮಾರಂಭ ಅದು.<br /> ಕಳೆದ ಆಗಸ್ಟ್ನಲ್ಲಿ ಆರಂಭವಾದ ಈ ಸಿನಿಮಾದ ಆಡಿಯೋ ಇದೀಗ ಬಿಡುಗಡೆಯಾಗಿದೆ. <br /> <br /> ಅದಕ್ಕೆ ಕಾರಣ ನೀಡಿದ ನಿರ್ದೇಶಕ ಸೇನ್ ಪ್ರಕಾಶ್, `ಚಿತ್ರವನ್ನು ಉತ್ತಮವಾಗಿ ತೆರೆಗೆ ಸಿದ್ಧಪಡಿಸಬೇಕು ಎಂಬ ಕಾರಣದಿಂದ ನಿಧಾನವಾಗಿ ಕೆಲಸ ಮಾಡಿದೆವು. ಇದೀಗ ಚಿತ್ರೀಕರಣ ನಂತರದ ಎಲ್ಲಾ ತಾಂತ್ರಿಕ ಕೆಲಸಗಳೂ ಮುಗಿದಿವೆ. ಪ್ರಥಮ ಪ್ರತಿ ಸಿದ್ಧವಾಗುತ್ತಿದೆ~ ಎಂದರು.<br /> <br /> ಬೆಂಗಳೂರಿನಲ್ಲಿಯೇ 32 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ಅವರು ತಮ್ಮ ಚಿತ್ರದ ಕತೆ ಪ್ರಸ್ತುತ ನಡೆಯುತ್ತಿರುವ ವಾಸ್ತವ ಅಂಶಗಳನ್ನು ಆಧಾರವಾಗಿ ಹೊಂದಿದೆ~ ಎಂದರು. <br /> <br /> `ಇದೊಂದು ಹೊಸ ಸಬ್ಜೆಕ್ಟ್. ರಂಗನಾಥ ಎಂಬುವರು ಕತೆ ಬರೆದಿದ್ದಾರೆ. ಈ ಚಿತ್ರದಲ್ಲಿ ಇಬ್ಬರೂ ನಟರ ಸ್ವಭಾವ ಪರಸ್ಪರ ವೈರುಧ್ಯದಿಂದ ಕೂಡಿದೆ. ನಮ್ಮ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದರೆ ಇಬ್ಬರು ಪ್ರತಿಭಾವಂತ ನಾಯಕ ನಟರು ಚಿತ್ರರಂಗಕ್ಕೆ ಸಿಕ್ಕಂತಾಗುತ್ತದೆ~ ಎಂದು ನಾಯಕರ ಬೆನ್ನು ತಟ್ಟಿದರು.<br /> <br /> ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಸಿಕ್ಕಿದ್ದರಿಂದ ದೇಹವನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡು ನಟಿಸಿದ್ದ ಶ್ರವಂತ್ `ಚಿಕ್ಕಮಗಳೂರು ಚಿಕ್ಕಮಲ್ಲಿಗೆ~ ಚಿತ್ರದ ನಂತರ ನಾಯಕನಾಗುವ ಅವಕಾಶ ಸಿಕ್ಕಿದ್ದನ್ನು ಸಂತಸದಿಂದ ಹಂಚಿಕೊಂಡರು. `ಹಿಂದಿನ ಚಿತ್ರದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಈ ಸಿನಿಮಾ ಮಾಡಿರುವೆ~ ಎಂದರು.<br /> <br /> ಮನೀಷ್, ಶ್ರವಂತ್ ಅವರ ಬದ್ಧತೆಯನ್ನು ಮೆಚ್ಚಿಕೊಂಡರು. ಒಳ್ಳೆಯವನಾ? ಕೆಟ್ಟವನಾ? ಎಂಬ ಗೊಂದಲ ಹುಟ್ಟುಹಾಕುವ ಡಬಲ್ ಶೇಡ್ ಇರುವ ಪಾತ್ರ ಮನೀಷ್ ಅವರದಂತೆ. <br /> <br /> ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮತ್ತು ಸಾ.ರಾ.ಗೋವಿಂದು ಸೀಡಿಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಸಂಗೀತ ನಿರ್ದೇಶಕ ರಾಜ್ ನಾರಾಯಣ್, ಸಂಭಾಷಣೆಕಾರ ಯೋಗಿ, ಸಂಕಲನಕಾರ ರವಿ ಹಾಜರಿದ್ದರು. ನಾಯಕಿಯರಾದ ಸ್ವಾತಿ, ಎಸ್ತಾರ್ ಜನ್ನತ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>