<p><strong>ನರಗುಂದ:</strong> ಕೇಂದ್ರ ಸರ್ಕಾರ ರಂಜಕ ಹಾಗೂ ಪೊಟ್ಯಾಶ್ ರಸಗೊಬ್ಬರಗಳ ಮಾರಾಟ ದರವನ್ನು ಕಡಿಮೆ ಮಾಡುವಂತೆ ತಯಾರಕರಿಗೆ ಸೂಚಿಸಿದೆ.<br /> <br /> ಆದ್ದರಿಂದ ರಸಗೊಬ್ಬರ ತಯಾರಕರು ಸರ್ಕಾರದ ಸೂಚನೆ ಒಪ್ಪಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡಲು ಹಾಗೂ ಹಳೇ ದಾಸ್ತಾನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಒಪ್ಪಿರು ತ್ತಾರೆ.<br /> <br /> ಆದ್ದರಿಂದ ಖಾಸಗಿ, ಸರಕಾರಿ ಸಂಘದ ಸಗಟು, ಚಿಲ್ಲರೆ ರಸಗೊಬ್ಬರದ ಮಾರಾಟಗಾರರು ಪರಿಷ್ಕೃತ ದರದಲ್ಲಿಯೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ ಎಂದುಕೃಷಿ ಇಲಾ ಖೆಯ ಸಹಾಯಕ ನಿರ್ದೇಶಕ ಮಂಜು ನಾಥ ತಿಳಿಸಿದ್ದಾರೆ.<br /> <br /> ಆದರೆ ಮಾರಾಟಗಾರರು ಪರಿಷ್ಕೃತ ಕಡಿಮೆ ದರದಲ್ಲಿ ಮಾರಾಟ ಮಾಡದೇ ಹೋದರೆ ಅಂಥವರ ಬಗ್ಗೆ ರೈತರಿಂದ ದೂರುಗಳ ಬಂದಲ್ಲಿ ರಸಗೊಬ್ಬರ ನಿಯಂತ್ರಣ -1985ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು.<br /> <br /> ಜೊತೆಗೆ ಕೃಷಿ ಪರಿಕರ, ಬೀಜ ಹಾಗೂ ಕೀಟನಾಶಕಗಳನ್ನು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು. ಇಲ್ಲವಾದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ಕೇಂದ್ರ ಸರ್ಕಾರ ರಂಜಕ ಹಾಗೂ ಪೊಟ್ಯಾಶ್ ರಸಗೊಬ್ಬರಗಳ ಮಾರಾಟ ದರವನ್ನು ಕಡಿಮೆ ಮಾಡುವಂತೆ ತಯಾರಕರಿಗೆ ಸೂಚಿಸಿದೆ.<br /> <br /> ಆದ್ದರಿಂದ ರಸಗೊಬ್ಬರ ತಯಾರಕರು ಸರ್ಕಾರದ ಸೂಚನೆ ಒಪ್ಪಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡಲು ಹಾಗೂ ಹಳೇ ದಾಸ್ತಾನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಒಪ್ಪಿರು ತ್ತಾರೆ.<br /> <br /> ಆದ್ದರಿಂದ ಖಾಸಗಿ, ಸರಕಾರಿ ಸಂಘದ ಸಗಟು, ಚಿಲ್ಲರೆ ರಸಗೊಬ್ಬರದ ಮಾರಾಟಗಾರರು ಪರಿಷ್ಕೃತ ದರದಲ್ಲಿಯೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ ಎಂದುಕೃಷಿ ಇಲಾ ಖೆಯ ಸಹಾಯಕ ನಿರ್ದೇಶಕ ಮಂಜು ನಾಥ ತಿಳಿಸಿದ್ದಾರೆ.<br /> <br /> ಆದರೆ ಮಾರಾಟಗಾರರು ಪರಿಷ್ಕೃತ ಕಡಿಮೆ ದರದಲ್ಲಿ ಮಾರಾಟ ಮಾಡದೇ ಹೋದರೆ ಅಂಥವರ ಬಗ್ಗೆ ರೈತರಿಂದ ದೂರುಗಳ ಬಂದಲ್ಲಿ ರಸಗೊಬ್ಬರ ನಿಯಂತ್ರಣ -1985ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು.<br /> <br /> ಜೊತೆಗೆ ಕೃಷಿ ಪರಿಕರ, ಬೀಜ ಹಾಗೂ ಕೀಟನಾಶಕಗಳನ್ನು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು. ಇಲ್ಲವಾದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>