<p>ಗಾಂಧಿನಗರದಲ್ಲಿ ನಿರ್ಮಾಪಕರು- ನಟರ ಬಾಂಧವ್ಯದ ಕುರಿತೇ ಮಾತು. ಜನ್ಮ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಕೂಡ ಇದೇ ನಡೆಯಿತು. <br /> <br /> ಅಲ್ಲಿಗೆ ಆಗಮಿಸಿದ್ದು ವಿವಾದದ ಕೇಂದ್ರ ಬಿಂದು ನಿರ್ಮಾಪಕ ಮುನಿರತ್ನ. ನಟ ಯೋಗೀಶ್ ಹಾಗೂ ಅವರ ನಡುವೆ ಇತ್ತೀಚೆಗೆ ನಡೆದಿದ್ದ ವಾಗ್ವಾದದ ಸುತ್ತ ಮಾತು ಹೆಣೆದುಕೊಂಡಿತ್ತು. ವಿವಾದವನ್ನು ತಿಳಿಗೊಳಿಸುವ ಮೂಡ್ನಲ್ಲಿದ್ದರು ಮುನಿರತ್ನ. <br /> <br /> ನಿರ್ಮಾಪಕನಾಗಿ 23 ವರ್ಷಗಳಿಂದ ತೊಡಗಿಕೊಂಡಿರುವ ಅವರನ್ನು ಚಿತ್ರರಂಗದ ಕೆಲವರ ಮಾತುಗಳು ಕಠಿಣ ಧೋರಣೆ ತಳೆಯುವಂತೆ ಮಾಡಿದವಂತೆ. `ವೈಯಕ್ತಿಕವಾಗಿ ನಿಂದಿಸುವ ಉದ್ದೇಶ ನನ್ನದಲ್ಲ. ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸು ಬರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಎಷ್ಟೋ ನಿರ್ಮಾಪಕರ ಕಷ್ಟಗಳನ್ನು ಕೇಳಿದಾಗ ಮರುಕ ಹುಟ್ಟಿತು. <br /> <br /> ಪ್ರತಿಯೊಬ್ಬರೂ ಮನೆಯ ಸದಸ್ಯರಂತೆ ನಡೆದುಕೊಳ್ಳಬೇಕು. ಆಗ ಚಿತ್ರರಂಗ ಉಳಿದೀತು~ ಎಂಬುದು ಅವರ ಮಾತಿನ ಒಕ್ಕಣೆ. ರೈತ ದೇಶದ ಬೆನ್ನೆಲುಬು. ಹಾಗೆಯೇ ನಿರ್ಮಾಪಕ ಚಿತ್ರರಂಗದ ದೇವೋಭವ ಎಂಬ ಕಿವಿಮಾತನ್ನು ಹೇಳಲು ಅವರು ಮರೆಯಲಿಲ್ಲ. <br /> ಪಕ್ಕದಲ್ಲೇ ಕುಳಿತಿದ್ದ ಸಾ.ರಾ.ಗೋವಿಂದು ಕೂಡ ಇದಕ್ಕೆ ದನಿಗೂಡಿಸಿದರು. <br /> <br /> ನಿರ್ಮಾಪಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರ ತಯಾರಾಗಬೇಕು. ನಿರ್ಮಾಪಕ ಉಳಿಯಬೇಕು ಎಂಬ ಧಾಟಿಯಲ್ಲಿ ಅವರು ಮಾತನಾಡಿದರು. ಜತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಷ್ಣು ಭಾವಚಿತ್ರ ಹರಿದುಹಾಕಿದ ಕಿಡಿಗೇಡಿಗಳನ್ನು ಶಪಿಸಿದರು. <br /> <br /> `ನನ್ನ ಹೆಸರಿಗೆ ಮಸಿ ಬಳಿಯಲು ಇಂಥ ಕೆಲಸ ನಡೆದಿದೆ. ರಾಜ್ಕುಮಾರ್ ಅವರ ಆದರ್ಶಗಳಲ್ಲಿ ನಡೆಯುತ್ತಿದ್ದೇನೆ. ದೊಡ್ಡವರನ್ನು ವೈಯಕ್ತಿಕವಾಗಿ ನಿಂದಿಸುವ ಯಾವ ಉದ್ದೇಶವೂ ತಮಗಿಲ್ಲ~ ಎಂದರು. <br /> <br /> ಐದು ವರ್ಷಗಳಿಂದ ಜನ್ಮ ಚಿತ್ರ ನಿರ್ದೇಶನ ಮಾಡುತ್ತಿರುವ ಚಕ್ರವರ್ತಿ (ಚಂದ್ರಚೂಡ್) ಕೂಡ ನಿರ್ಮಾಪಕರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ನಿರ್ಮಾಪಕ ಹೃದಯದ ಮೇಲಿನ ಜೇಬಿದ್ದಂತೆ ನಿರ್ದೇಶಕ ಹೃದಯವಿದ್ದಂತೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. <br /> ಇತ್ತ `ಕೃಷ್ಣ ಸನ್ ಆಫ್ ಸಿ.ಎಂ~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿಯೂ ಇಂಥದೇ ಮಾತುಗಳು ಹರಿದವು. <br /> <br /> ಆದರೆ ಅದಕ್ಕೆ ತಿಳಿಹಾಸ್ಯದ ಲೇಪವಿತ್ತು ಅಷ್ಟೇ. ನಿರ್ಮಾಪಕ ಯೋಗೀಶ್ ಹುಣಸೂರು, `ಚಿತ್ರರಂಗದಲ್ಲಿ ಈಗ ನಿರ್ಮಾಪಕರು ನಟರ ಬಗ್ಗೆ ಅವರು ಇರಬೇಕಾದ ರೀತಿನೀತಿಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನನ್ನ ಚಿತ್ರದಲ್ಲಿ ದೂರು ಕೇಳಿ ಬರಲಿಲ್ಲ~ ಎಂದರು. ವಿವಾದವಿಲ್ಲದೆ, ಮನಸ್ತಾಪಗಳಿಲ್ಲದೆ ಚಿತ್ರ ನಿರ್ಮಿಸಿದ ತೃಪ್ತಿ ಅವರದು. <br /> </p>.<p>ಅದಕ್ಕೆ ಒತ್ತಾಸೆಯಾಗಿ ನಿಂತವರು ನಟ ಅಜಯ್ ರಾವ್. `ಕಡಿಮೆ ಅವಧಿಯಲ್ಲಿ ಸಂಪೂರ್ಣ ಹಣವನ್ನು ನಿರ್ಮಾಪಕರು ನೀಡಿದ್ದಾರೆ~ ಎಂಬ ತೃಪ್ತಿಯ ನಗೆಯಾಡಿದರು ಅವರು.</p>.<p> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಾಂಧಿನಗರದಲ್ಲಿ ನಿರ್ಮಾಪಕರು- ನಟರ ಬಾಂಧವ್ಯದ ಕುರಿತೇ ಮಾತು. ಜನ್ಮ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಕೂಡ ಇದೇ ನಡೆಯಿತು. <br /> <br /> ಅಲ್ಲಿಗೆ ಆಗಮಿಸಿದ್ದು ವಿವಾದದ ಕೇಂದ್ರ ಬಿಂದು ನಿರ್ಮಾಪಕ ಮುನಿರತ್ನ. ನಟ ಯೋಗೀಶ್ ಹಾಗೂ ಅವರ ನಡುವೆ ಇತ್ತೀಚೆಗೆ ನಡೆದಿದ್ದ ವಾಗ್ವಾದದ ಸುತ್ತ ಮಾತು ಹೆಣೆದುಕೊಂಡಿತ್ತು. ವಿವಾದವನ್ನು ತಿಳಿಗೊಳಿಸುವ ಮೂಡ್ನಲ್ಲಿದ್ದರು ಮುನಿರತ್ನ. <br /> <br /> ನಿರ್ಮಾಪಕನಾಗಿ 23 ವರ್ಷಗಳಿಂದ ತೊಡಗಿಕೊಂಡಿರುವ ಅವರನ್ನು ಚಿತ್ರರಂಗದ ಕೆಲವರ ಮಾತುಗಳು ಕಠಿಣ ಧೋರಣೆ ತಳೆಯುವಂತೆ ಮಾಡಿದವಂತೆ. `ವೈಯಕ್ತಿಕವಾಗಿ ನಿಂದಿಸುವ ಉದ್ದೇಶ ನನ್ನದಲ್ಲ. ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸು ಬರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಎಷ್ಟೋ ನಿರ್ಮಾಪಕರ ಕಷ್ಟಗಳನ್ನು ಕೇಳಿದಾಗ ಮರುಕ ಹುಟ್ಟಿತು. <br /> <br /> ಪ್ರತಿಯೊಬ್ಬರೂ ಮನೆಯ ಸದಸ್ಯರಂತೆ ನಡೆದುಕೊಳ್ಳಬೇಕು. ಆಗ ಚಿತ್ರರಂಗ ಉಳಿದೀತು~ ಎಂಬುದು ಅವರ ಮಾತಿನ ಒಕ್ಕಣೆ. ರೈತ ದೇಶದ ಬೆನ್ನೆಲುಬು. ಹಾಗೆಯೇ ನಿರ್ಮಾಪಕ ಚಿತ್ರರಂಗದ ದೇವೋಭವ ಎಂಬ ಕಿವಿಮಾತನ್ನು ಹೇಳಲು ಅವರು ಮರೆಯಲಿಲ್ಲ. <br /> ಪಕ್ಕದಲ್ಲೇ ಕುಳಿತಿದ್ದ ಸಾ.ರಾ.ಗೋವಿಂದು ಕೂಡ ಇದಕ್ಕೆ ದನಿಗೂಡಿಸಿದರು. <br /> <br /> ನಿರ್ಮಾಪಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರ ತಯಾರಾಗಬೇಕು. ನಿರ್ಮಾಪಕ ಉಳಿಯಬೇಕು ಎಂಬ ಧಾಟಿಯಲ್ಲಿ ಅವರು ಮಾತನಾಡಿದರು. ಜತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಷ್ಣು ಭಾವಚಿತ್ರ ಹರಿದುಹಾಕಿದ ಕಿಡಿಗೇಡಿಗಳನ್ನು ಶಪಿಸಿದರು. <br /> <br /> `ನನ್ನ ಹೆಸರಿಗೆ ಮಸಿ ಬಳಿಯಲು ಇಂಥ ಕೆಲಸ ನಡೆದಿದೆ. ರಾಜ್ಕುಮಾರ್ ಅವರ ಆದರ್ಶಗಳಲ್ಲಿ ನಡೆಯುತ್ತಿದ್ದೇನೆ. ದೊಡ್ಡವರನ್ನು ವೈಯಕ್ತಿಕವಾಗಿ ನಿಂದಿಸುವ ಯಾವ ಉದ್ದೇಶವೂ ತಮಗಿಲ್ಲ~ ಎಂದರು. <br /> <br /> ಐದು ವರ್ಷಗಳಿಂದ ಜನ್ಮ ಚಿತ್ರ ನಿರ್ದೇಶನ ಮಾಡುತ್ತಿರುವ ಚಕ್ರವರ್ತಿ (ಚಂದ್ರಚೂಡ್) ಕೂಡ ನಿರ್ಮಾಪಕರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ನಿರ್ಮಾಪಕ ಹೃದಯದ ಮೇಲಿನ ಜೇಬಿದ್ದಂತೆ ನಿರ್ದೇಶಕ ಹೃದಯವಿದ್ದಂತೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. <br /> ಇತ್ತ `ಕೃಷ್ಣ ಸನ್ ಆಫ್ ಸಿ.ಎಂ~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿಯೂ ಇಂಥದೇ ಮಾತುಗಳು ಹರಿದವು. <br /> <br /> ಆದರೆ ಅದಕ್ಕೆ ತಿಳಿಹಾಸ್ಯದ ಲೇಪವಿತ್ತು ಅಷ್ಟೇ. ನಿರ್ಮಾಪಕ ಯೋಗೀಶ್ ಹುಣಸೂರು, `ಚಿತ್ರರಂಗದಲ್ಲಿ ಈಗ ನಿರ್ಮಾಪಕರು ನಟರ ಬಗ್ಗೆ ಅವರು ಇರಬೇಕಾದ ರೀತಿನೀತಿಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನನ್ನ ಚಿತ್ರದಲ್ಲಿ ದೂರು ಕೇಳಿ ಬರಲಿಲ್ಲ~ ಎಂದರು. ವಿವಾದವಿಲ್ಲದೆ, ಮನಸ್ತಾಪಗಳಿಲ್ಲದೆ ಚಿತ್ರ ನಿರ್ಮಿಸಿದ ತೃಪ್ತಿ ಅವರದು. <br /> </p>.<p>ಅದಕ್ಕೆ ಒತ್ತಾಸೆಯಾಗಿ ನಿಂತವರು ನಟ ಅಜಯ್ ರಾವ್. `ಕಡಿಮೆ ಅವಧಿಯಲ್ಲಿ ಸಂಪೂರ್ಣ ಹಣವನ್ನು ನಿರ್ಮಾಪಕರು ನೀಡಿದ್ದಾರೆ~ ಎಂಬ ತೃಪ್ತಿಯ ನಗೆಯಾಡಿದರು ಅವರು.</p>.<p> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>