<p>ಬೆಂಗಳೂರು: ಕಳೆದ 23-24ರಂದು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಜರುಗಿದ ‘ಕಾಂಟಿನೆಂಟಲ್ ಯೋಗ ಚಾಂಪಿಯನ್ಶಿಪ್’ ಸ್ಪರ್ಧೆಯಲ್ಲಿ ವಿಜೇತರಾದ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಅವರವರ ಊರುಗಳಲ್ಲಿ ನಿವೇಶನವನ್ನು ಮಂಜೂರು ಮಾಡಬೇಕು’ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.<br /> <br /> ವಿಜೇತರಾದ ಅಭ್ಯರ್ಥಿಗಳು ತಮ್ಮ ಸಾಧನೆಯ ವಿವರಗಳನ್ನು ನೀಡಲು ನಗರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಯಾವ್ಯಾವುದಕ್ಕೋ ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರ, ಯೋಗ ಸ್ಪರ್ಧೆಯಲ್ಲಿ ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಈ ಕ್ರೀಡಾಪಟುಗಳಿಗೆ ನಿವೇಶನ ಮಂಜೂರು ಮಾಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.<br /> <br /> ಬ್ಯಾಂಕಾಕ್ನ ಪಟ್ಟಾಯದ ಫೆರಿಟೆಕ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ವಿಯೆಟ್ನಾಂ, ರಷ್ಯ, ಸಿಂಗಪುರ, ಮಲೇಶಿಯಾ ಹಾಗೂ ಇರಾಕ್ ದೇಶಗಳ 72 ಯೋಗ ಪಟುಗಳು ಭಾಗವಹಿಸಿದ್ದರು. <br /> <br /> ಗೋಷ್ಠಿಯಲ್ಲಿ ಯೋಗ ಫೆಡರೇಶನ್ನ ವ್ಯವಸ್ಥಾಪಕ ಎಂ.ವಿ.ಗೋಪಾಲ್, ಶಶಿಕಲಾ ಗೋಪಾಲ್ ಇದ್ದರು. <br /> <br /> <strong>ಸ್ಪರ್ಧಾ ವಿಜೇತರ ವಿವರ:</strong><br /> ಎಸ್.ವಿ.ಸುಮಿತ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಡಿ.ಪುರುಷೋತ್ತಮ-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಅನಿಲ್ಕುಮಾರ್ ಶೆಟ್ಟರ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಎನ್.ಯೋಗರಾಜ್-3 ಚಿನ್ನದ ಪದಕ. ಪ್ರಸನ್ನ-3 ಚಿನ್ನದ ಪದಕ. ಜೆ.ದೀಪಕ್-3 ಚಿನ್ನದ ಪದಕ, ಅಭಿಷೇಕ್-2 ಚಿನ್ನ, 1 ರಜತ. ಪ್ರೇಮ್ಕುಮಾರ್-1 ಚಿನ್ನ, 2 ರಜತ ಪದಕ. <br /> <br /> <strong>ಮಹಿಳಾ ಯೋಗಪಟುಗಳು</strong><br /> ಅಂಕಿತ ಎಂ.ಗೋಪಾಲ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಪಿ.ಜಿ.ನಾಗವೀಣ-2 ಚಿನ್ನ, 1 ಕಂಚು. ಸಿ.ಎಂ.ಭಾರತಿ-1 ಚಿನ್ನ, 2 ರಜತ ಪದಕ. ಆರ್.ಉಮಾದೇವಿ-ತಲಾ ಒಂದು ಚಿನ್ನ, ರಜತ ಮತ್ತು ಕಂಚಿನ ಪದಕ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕಳೆದ 23-24ರಂದು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಜರುಗಿದ ‘ಕಾಂಟಿನೆಂಟಲ್ ಯೋಗ ಚಾಂಪಿಯನ್ಶಿಪ್’ ಸ್ಪರ್ಧೆಯಲ್ಲಿ ವಿಜೇತರಾದ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಅವರವರ ಊರುಗಳಲ್ಲಿ ನಿವೇಶನವನ್ನು ಮಂಜೂರು ಮಾಡಬೇಕು’ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.<br /> <br /> ವಿಜೇತರಾದ ಅಭ್ಯರ್ಥಿಗಳು ತಮ್ಮ ಸಾಧನೆಯ ವಿವರಗಳನ್ನು ನೀಡಲು ನಗರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಯಾವ್ಯಾವುದಕ್ಕೋ ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರ, ಯೋಗ ಸ್ಪರ್ಧೆಯಲ್ಲಿ ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಈ ಕ್ರೀಡಾಪಟುಗಳಿಗೆ ನಿವೇಶನ ಮಂಜೂರು ಮಾಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.<br /> <br /> ಬ್ಯಾಂಕಾಕ್ನ ಪಟ್ಟಾಯದ ಫೆರಿಟೆಕ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ವಿಯೆಟ್ನಾಂ, ರಷ್ಯ, ಸಿಂಗಪುರ, ಮಲೇಶಿಯಾ ಹಾಗೂ ಇರಾಕ್ ದೇಶಗಳ 72 ಯೋಗ ಪಟುಗಳು ಭಾಗವಹಿಸಿದ್ದರು. <br /> <br /> ಗೋಷ್ಠಿಯಲ್ಲಿ ಯೋಗ ಫೆಡರೇಶನ್ನ ವ್ಯವಸ್ಥಾಪಕ ಎಂ.ವಿ.ಗೋಪಾಲ್, ಶಶಿಕಲಾ ಗೋಪಾಲ್ ಇದ್ದರು. <br /> <br /> <strong>ಸ್ಪರ್ಧಾ ವಿಜೇತರ ವಿವರ:</strong><br /> ಎಸ್.ವಿ.ಸುಮಿತ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಡಿ.ಪುರುಷೋತ್ತಮ-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಅನಿಲ್ಕುಮಾರ್ ಶೆಟ್ಟರ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಎನ್.ಯೋಗರಾಜ್-3 ಚಿನ್ನದ ಪದಕ. ಪ್ರಸನ್ನ-3 ಚಿನ್ನದ ಪದಕ. ಜೆ.ದೀಪಕ್-3 ಚಿನ್ನದ ಪದಕ, ಅಭಿಷೇಕ್-2 ಚಿನ್ನ, 1 ರಜತ. ಪ್ರೇಮ್ಕುಮಾರ್-1 ಚಿನ್ನ, 2 ರಜತ ಪದಕ. <br /> <br /> <strong>ಮಹಿಳಾ ಯೋಗಪಟುಗಳು</strong><br /> ಅಂಕಿತ ಎಂ.ಗೋಪಾಲ್-3 ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ. ಪಿ.ಜಿ.ನಾಗವೀಣ-2 ಚಿನ್ನ, 1 ಕಂಚು. ಸಿ.ಎಂ.ಭಾರತಿ-1 ಚಿನ್ನ, 2 ರಜತ ಪದಕ. ಆರ್.ಉಮಾದೇವಿ-ತಲಾ ಒಂದು ಚಿನ್ನ, ರಜತ ಮತ್ತು ಕಂಚಿನ ಪದಕ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>