<p><strong>ಕಠ್ಮಂಡು (ಪಿಟಿಐ): </strong> ಕಿಕ್ಕಿರಿದು ತುಂಬಿದ್ದ ಬಸ್ ಇಳಿಜಾರು ಪ್ರದೇಶದಲ್ಲಿ ಚಾಲಕನ ಹಿಡಿತಕ್ಕೆ ಸಿಗದೆ ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿದ್ದ ಗಂಡಕ್ ನಾಲೆಗೆ ಉರುಳಿ ಬಿದ್ದ ಪರಿಣಾಮ 36 ಭಾರತೀಯರು ಸೇರಿದಂತೆ 39 ಯಾತ್ರಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ನೇಪಾಳದಲ್ಲಿ ನಡೆದಿದೆ. <br /> <br /> ಮೃತರಾದವರಲ್ಲಿ ಬಹುಪಾಲು ಜನ ಭಾರತೀಯರು. ಬಸ್ಸಿನಲ್ಲಿ ಸುಮಾರು 100ರಿಂದ 120 ಜನ ಹಿಂದೂ ಯಾತ್ರಾರ್ಥಿಗಳನ್ನು ತುಂಬಿದ್ದರು. ಮೃತಪಟ್ಟ ಬಹುತೇಕ ಭಾರತೀಯರು ಉತ್ತರ ಪ್ರದೇಶದ ನವಲ್ಪಾರಸಿ ಜಿಲ್ಲೆಯವರಾಗಿದ್ದಾರೆ. <br /> <br /> ಗಂಡಕ್ ನಾಲೆ ಕಠ್ಮಂಡುವಿನಿಂದ 250 ಕಿಮೀ ದೂರದಲ್ಲಿದ್ದು, ಆ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಸ್ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಬಸ್ಸಿನ ಛಾವಣಿ ಮೇಲೂ ಜನರು ಕುಳಿತು ಪ್ರಯಾಣಿಸುತ್ತಿದ್ದರು.<br /> <br /> ಯಾತ್ರಾರ್ಥಿಗಳು ತ್ರಿವೇಣಿ ಘಾಟ್ನಲ್ಲಿ ನಡೆಯುತ್ತಿದ್ದ ಬೋಲಬಮ್ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಮೃತರಾದವರಲ್ಲಿ 10 ಜನ ಮಹಿಳೆಯರು, ಒಂದು ಹೆಣ್ಣು ಮಗು. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು (ಪಿಟಿಐ): </strong> ಕಿಕ್ಕಿರಿದು ತುಂಬಿದ್ದ ಬಸ್ ಇಳಿಜಾರು ಪ್ರದೇಶದಲ್ಲಿ ಚಾಲಕನ ಹಿಡಿತಕ್ಕೆ ಸಿಗದೆ ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿದ್ದ ಗಂಡಕ್ ನಾಲೆಗೆ ಉರುಳಿ ಬಿದ್ದ ಪರಿಣಾಮ 36 ಭಾರತೀಯರು ಸೇರಿದಂತೆ 39 ಯಾತ್ರಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ನೇಪಾಳದಲ್ಲಿ ನಡೆದಿದೆ. <br /> <br /> ಮೃತರಾದವರಲ್ಲಿ ಬಹುಪಾಲು ಜನ ಭಾರತೀಯರು. ಬಸ್ಸಿನಲ್ಲಿ ಸುಮಾರು 100ರಿಂದ 120 ಜನ ಹಿಂದೂ ಯಾತ್ರಾರ್ಥಿಗಳನ್ನು ತುಂಬಿದ್ದರು. ಮೃತಪಟ್ಟ ಬಹುತೇಕ ಭಾರತೀಯರು ಉತ್ತರ ಪ್ರದೇಶದ ನವಲ್ಪಾರಸಿ ಜಿಲ್ಲೆಯವರಾಗಿದ್ದಾರೆ. <br /> <br /> ಗಂಡಕ್ ನಾಲೆ ಕಠ್ಮಂಡುವಿನಿಂದ 250 ಕಿಮೀ ದೂರದಲ್ಲಿದ್ದು, ಆ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಸ್ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಬಸ್ಸಿನ ಛಾವಣಿ ಮೇಲೂ ಜನರು ಕುಳಿತು ಪ್ರಯಾಣಿಸುತ್ತಿದ್ದರು.<br /> <br /> ಯಾತ್ರಾರ್ಥಿಗಳು ತ್ರಿವೇಣಿ ಘಾಟ್ನಲ್ಲಿ ನಡೆಯುತ್ತಿದ್ದ ಬೋಲಬಮ್ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಮೃತರಾದವರಲ್ಲಿ 10 ಜನ ಮಹಿಳೆಯರು, ಒಂದು ಹೆಣ್ಣು ಮಗು. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>