<p><strong>ರಾಮನಗರ: </strong>ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಒಂಬತ್ತು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಆರು ಮಂದಿ ನೌಕರರನ್ನು ಕಾಯಂಗೊಳಿಸಬೇಕು ಎಂದು ಪೌರ ಸೇವಾ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ವೆಂಕಟೇಶ್ ಆಗ್ರಹಿಸಿದರು. <br /> <br /> ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕಾರ್ಮಿಕರಿಂದ ಈ ಕೆಲಸ ಮಾಡಿಸಲಾಗುತ್ತಿದೆ. ಈ ಕುರಿತು ಸದ್ಯದಲ್ಲಿಯೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.<br /> <br /> ನಗರದಲ್ಲಿರುವ ಮ್ಯೋನ್ಹೋಲ್ಗಳನ್ನು ಸ್ವಚ್ಛಗೊಳಿಸಲು ಒಳಚರಂಡಿ ಮಂಡಳಿಯವರು ಜೆಟ್ಟಿಂಗ್ ಯಂತ್ರ ಬಳಸುತ್ತಿದ್ದಾರೆಂದು ನಾವು ತಿಳಿದಿದ್ದೆವು. ಆದರೆ ಮಾ 3ರಂದು ನಗರಸಭೆಯ 2ನೇ ವಾರ್ಡನ ಮ್ಯೋನ್ ಹೋಲ್ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. <br /> <br /> ಒಳಚರಂಡಿ ಮಂಡಳಿ ಎಂಜಿನಿಯರ್ ಜಯರಾಮ್, ನಗರಸಭೆ ಸದಸ್ಯ ರೈಡ್ ನಾಗರಾಜ್ ಅವರ ಒತ್ತಾಯಕ್ಕೆ ಮಣಿದು ಕಾರ್ಮಿಕರು ಈ ಕೆಲಸ ಮಾಡಿದ್ದಾರೆ ಎಂದು ಅವರು ದೂರಿದರು.<br /> <br /> ನಗರಸಭೆ ವ್ಯಾಪ್ತಿಯಲ್ಲಿ 9 ವರ್ಷಗಳಿಂದ ಮಲ ಸ್ವಚ್ಛತೆ ಮಾಡುವ ಹೀನ ಪದ್ಧತಿ ಇರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಕಾರ್ಯ ನಿರ್ವಹಿಸುತ್ತಿರುವ ಒಳ ಚರಂಡಿ ಮಂಡಳಿಯ ಕಾರ್ಮಿಕರಿಗೆ ಸರಿಯಾಗಿ ವೇತನವನ್ನೂ ನೀಡುತ್ತಿಲ್ಲ. ಸರ್ಕಾರದ ಈ ಕೆಲಸಕ್ಕೆ ಖಾಸಗಿ ವ್ಯಕ್ತಿಯೊಬ್ಬರಿಂದ ವೇತನ ಪಡೆಯುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. <br /> <br /> ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದರು. ಗುತ್ತಿಗೆ ಕಾರ್ಮಿಕರಾದ ಕೇಶವಕುಮಾರ, ರಾಮು, ಎಂ.ವೆಂಕಟೇಶ್, ಶೇಖರ್, ಲಕ್ಷ್ಮಣ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.<br /> <br /> <strong>ಒಳಚರಂಡಿ ಸ್ವಚ್ಛತೆ ವಿವಾದ: ಪಿತೂರಿ ಆರೋಪ</strong><br /> `ಕೆಲಸ ಕಾಯಂ ಮಾಡಿಸುವುದಾಗಿ ಆಮಿಷ ತೋರಿಸಿ ಕೆಲವರು ನಗರಸಭೆಯ ನೂತನ ಸದಸ್ಯ ರೈಡ್ ನಾಗರಾಜ್ ವಿರುದ್ಧ ಪೊಲೀಸ್ಠಾಣೆಯಲ್ಲಿ ದೂರು ನೀಡುವಂತೆ ಮಾಡಿದರು. ತಪ್ಪಿನ ಅರಿವಾಗಿ ಈ ದೂರನ್ನು ಹಿಂಪಡೆದಿರುವುದಾಗಿ~ ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರಾದ ಕೇಶವ ಕುಮಾರ್, ರಾಜು ತಿಳಿಸಿದರು.<br /> <br /> ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮ್ಯಾನ್ಹೋಲ್ ಒಳಗೆ ಇಳಿದು ಶುಚಿಗೊಳಿಸುವಂತೆ ನಗರಸಭೆ ಸದಸ್ಯ ನಾಗರಾಜ್ ಒತ್ತಾಯಿಸಲಿಲ್ಲ. ಬದಲಿಗೆ ಜಲಮಂಡಳಿ ಅಧಿಕಾರಿಗಳ ಸೂಚನೆ ಮೇರೆಗೆ ನಾವೇ ಸಕ್ಕಿಂಗ್ ಯಂತ್ರದ ನೆರವಿನಿಂದ ಕೆಲಸ ಮಾಡಿದ್ದೇವೆ~ ಎಂದು ಅವರು ಹೇಳಿದರು. <br /> <br /> ಈ ಹೇಳಿಕೆಯನ್ನು ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರಾದ ವೆಂಕಟೇಶ್, ಶೇಖರ್, ಲಕ್ಷ್ಮಣ, ವೆಂಕಟೇಶ್ ಅನುಮೋದಿಸಿದರು.<br /> <br /> `ನಗರಸಭೆಯ ಎರಡನೇ ವಾರ್ಡ್ ಉಪ ಚುನಾವಣೆಯಲ್ಲಿ ನಾನು ಜಯಗಳಿಸಿದ್ದೇನೆ. ಇದನ್ನು ಸಹಿಸದ ಕೆಲವರು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿತ್ತು. ಈ ಸಂಬಂಧ ದೂರು ನೀಡಿದವರು ಸತ್ಯವನ್ನು ಅರಿತು ದೂರು ಹಿಂಪಡೆದಿದ್ದಾರೆ.<br /> <br /> ಇದರಿಂದ ಜನತೆಗೆ ಎಲ್ಲ ಗೊತ್ತಾದಂತಾಗಿದೆ. ನಾನು ನಿರಪರಾಧಿ ಎಂಬುದೂ ಸಾಬೀತಾಗಿದೆ~ ಎಂದು ನಗರಸಭೆ ಸದಸ್ಯ ರೈಡ್ ನಾಗರಾಜ್ ಪ್ರತಿಕ್ರಿಯಿಸಿದರು.ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಸದಸ್ಯ ಚಿಕ್ಕವೀರೇಗೌಡ, ಸೋಮಶೇಖರ್, ದಲಿತ ಮುಖಂಡರಾದ ರಾ.ಸಿ.ದೇವರಾಜ್, ಶಿವಶಂಕರ್, ನರಸಿಂಹಯ್ಯ, ಶಿವಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಒಂಬತ್ತು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಆರು ಮಂದಿ ನೌಕರರನ್ನು ಕಾಯಂಗೊಳಿಸಬೇಕು ಎಂದು ಪೌರ ಸೇವಾ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ವೆಂಕಟೇಶ್ ಆಗ್ರಹಿಸಿದರು. <br /> <br /> ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕಾರ್ಮಿಕರಿಂದ ಈ ಕೆಲಸ ಮಾಡಿಸಲಾಗುತ್ತಿದೆ. ಈ ಕುರಿತು ಸದ್ಯದಲ್ಲಿಯೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.<br /> <br /> ನಗರದಲ್ಲಿರುವ ಮ್ಯೋನ್ಹೋಲ್ಗಳನ್ನು ಸ್ವಚ್ಛಗೊಳಿಸಲು ಒಳಚರಂಡಿ ಮಂಡಳಿಯವರು ಜೆಟ್ಟಿಂಗ್ ಯಂತ್ರ ಬಳಸುತ್ತಿದ್ದಾರೆಂದು ನಾವು ತಿಳಿದಿದ್ದೆವು. ಆದರೆ ಮಾ 3ರಂದು ನಗರಸಭೆಯ 2ನೇ ವಾರ್ಡನ ಮ್ಯೋನ್ ಹೋಲ್ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. <br /> <br /> ಒಳಚರಂಡಿ ಮಂಡಳಿ ಎಂಜಿನಿಯರ್ ಜಯರಾಮ್, ನಗರಸಭೆ ಸದಸ್ಯ ರೈಡ್ ನಾಗರಾಜ್ ಅವರ ಒತ್ತಾಯಕ್ಕೆ ಮಣಿದು ಕಾರ್ಮಿಕರು ಈ ಕೆಲಸ ಮಾಡಿದ್ದಾರೆ ಎಂದು ಅವರು ದೂರಿದರು.<br /> <br /> ನಗರಸಭೆ ವ್ಯಾಪ್ತಿಯಲ್ಲಿ 9 ವರ್ಷಗಳಿಂದ ಮಲ ಸ್ವಚ್ಛತೆ ಮಾಡುವ ಹೀನ ಪದ್ಧತಿ ಇರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಕಾರ್ಯ ನಿರ್ವಹಿಸುತ್ತಿರುವ ಒಳ ಚರಂಡಿ ಮಂಡಳಿಯ ಕಾರ್ಮಿಕರಿಗೆ ಸರಿಯಾಗಿ ವೇತನವನ್ನೂ ನೀಡುತ್ತಿಲ್ಲ. ಸರ್ಕಾರದ ಈ ಕೆಲಸಕ್ಕೆ ಖಾಸಗಿ ವ್ಯಕ್ತಿಯೊಬ್ಬರಿಂದ ವೇತನ ಪಡೆಯುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. <br /> <br /> ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದರು. ಗುತ್ತಿಗೆ ಕಾರ್ಮಿಕರಾದ ಕೇಶವಕುಮಾರ, ರಾಮು, ಎಂ.ವೆಂಕಟೇಶ್, ಶೇಖರ್, ಲಕ್ಷ್ಮಣ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.<br /> <br /> <strong>ಒಳಚರಂಡಿ ಸ್ವಚ್ಛತೆ ವಿವಾದ: ಪಿತೂರಿ ಆರೋಪ</strong><br /> `ಕೆಲಸ ಕಾಯಂ ಮಾಡಿಸುವುದಾಗಿ ಆಮಿಷ ತೋರಿಸಿ ಕೆಲವರು ನಗರಸಭೆಯ ನೂತನ ಸದಸ್ಯ ರೈಡ್ ನಾಗರಾಜ್ ವಿರುದ್ಧ ಪೊಲೀಸ್ಠಾಣೆಯಲ್ಲಿ ದೂರು ನೀಡುವಂತೆ ಮಾಡಿದರು. ತಪ್ಪಿನ ಅರಿವಾಗಿ ಈ ದೂರನ್ನು ಹಿಂಪಡೆದಿರುವುದಾಗಿ~ ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರಾದ ಕೇಶವ ಕುಮಾರ್, ರಾಜು ತಿಳಿಸಿದರು.<br /> <br /> ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮ್ಯಾನ್ಹೋಲ್ ಒಳಗೆ ಇಳಿದು ಶುಚಿಗೊಳಿಸುವಂತೆ ನಗರಸಭೆ ಸದಸ್ಯ ನಾಗರಾಜ್ ಒತ್ತಾಯಿಸಲಿಲ್ಲ. ಬದಲಿಗೆ ಜಲಮಂಡಳಿ ಅಧಿಕಾರಿಗಳ ಸೂಚನೆ ಮೇರೆಗೆ ನಾವೇ ಸಕ್ಕಿಂಗ್ ಯಂತ್ರದ ನೆರವಿನಿಂದ ಕೆಲಸ ಮಾಡಿದ್ದೇವೆ~ ಎಂದು ಅವರು ಹೇಳಿದರು. <br /> <br /> ಈ ಹೇಳಿಕೆಯನ್ನು ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರಾದ ವೆಂಕಟೇಶ್, ಶೇಖರ್, ಲಕ್ಷ್ಮಣ, ವೆಂಕಟೇಶ್ ಅನುಮೋದಿಸಿದರು.<br /> <br /> `ನಗರಸಭೆಯ ಎರಡನೇ ವಾರ್ಡ್ ಉಪ ಚುನಾವಣೆಯಲ್ಲಿ ನಾನು ಜಯಗಳಿಸಿದ್ದೇನೆ. ಇದನ್ನು ಸಹಿಸದ ಕೆಲವರು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿತ್ತು. ಈ ಸಂಬಂಧ ದೂರು ನೀಡಿದವರು ಸತ್ಯವನ್ನು ಅರಿತು ದೂರು ಹಿಂಪಡೆದಿದ್ದಾರೆ.<br /> <br /> ಇದರಿಂದ ಜನತೆಗೆ ಎಲ್ಲ ಗೊತ್ತಾದಂತಾಗಿದೆ. ನಾನು ನಿರಪರಾಧಿ ಎಂಬುದೂ ಸಾಬೀತಾಗಿದೆ~ ಎಂದು ನಗರಸಭೆ ಸದಸ್ಯ ರೈಡ್ ನಾಗರಾಜ್ ಪ್ರತಿಕ್ರಿಯಿಸಿದರು.ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಸದಸ್ಯ ಚಿಕ್ಕವೀರೇಗೌಡ, ಸೋಮಶೇಖರ್, ದಲಿತ ಮುಖಂಡರಾದ ರಾ.ಸಿ.ದೇವರಾಜ್, ಶಿವಶಂಕರ್, ನರಸಿಂಹಯ್ಯ, ಶಿವಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>