<p><span style="font-size: 26px;"><strong>ಮದ್ದೂರು: </strong>ತಾಲ್ಲೂಕಿನ ಚಾಮನ ಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ `ಅನ್ನಭಾಗ್ಯ ಯೋಜನೆ'ಯ ಅಕ್ಕಿಯನ್ನು ನಿಗದಿತ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಜಯಂತಿ ನಗರದ ನಿವಾಸಿಗಳು ಪ್ರತಿಭಟನೆ ಮಾಡಿದರು.</span><br /> <br /> ಮುಖಂಡ ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರದಿಂದ 30ಕೆ.ಜಿ ಅಕ್ಕಿಗೆ ರೂ.1ರಂತೆ 30ರೂಪಾಯಿ ಪಡೆಯಬೇಕಾದ ಮಾಲೀಕರು, ಪ್ರತಿಯೊಬ್ಬರಿಂದ 38ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೊರಡಿ ಎಂದು ಬಡಜನರಿಗೆ ಬೆದರಿಕೆವೊಡ್ಡುತ್ತಾರೆ ಎಂದು ಆರೋಪಿಸಿದರು.<br /> <br /> ಮುಖಂಡರಾದ ಭೈರವ, ವೆಂಕಟರಾಮು, ಪುಟ್ಟಮ್ಮ, ಯಶೋದಮ್ಮ, ಚಂದ್ರಮ್ಮ, ತಾಯಮ್ಮ, ಭಾಗ್ಯಮ್ಮ, ಕರಿಯಮ್ಮ, ಶಶಿಕಲಾ, ಶೃತಿ ಸೇರಿದಂತೆ ಹಲವರು ಭಾಗವಹಿಸಿದ್ದರು.<br /> <br /> ಆಗ್ರಹ: ಇದೇ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕಾಲೋನಿಯಲ್ಲಿ ಹಲವು ದಿನಗಳಿಂದ ಕೆಟ್ಟಿರುವ ಕೈಪಂಪ್ ಅನ್ನು ದುರಸ್ತಿಗೊಳಿಸಲು ಕೂಡಲೇ ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಮದ್ದೂರು: </strong>ತಾಲ್ಲೂಕಿನ ಚಾಮನ ಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ `ಅನ್ನಭಾಗ್ಯ ಯೋಜನೆ'ಯ ಅಕ್ಕಿಯನ್ನು ನಿಗದಿತ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಜಯಂತಿ ನಗರದ ನಿವಾಸಿಗಳು ಪ್ರತಿಭಟನೆ ಮಾಡಿದರು.</span><br /> <br /> ಮುಖಂಡ ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರದಿಂದ 30ಕೆ.ಜಿ ಅಕ್ಕಿಗೆ ರೂ.1ರಂತೆ 30ರೂಪಾಯಿ ಪಡೆಯಬೇಕಾದ ಮಾಲೀಕರು, ಪ್ರತಿಯೊಬ್ಬರಿಂದ 38ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೊರಡಿ ಎಂದು ಬಡಜನರಿಗೆ ಬೆದರಿಕೆವೊಡ್ಡುತ್ತಾರೆ ಎಂದು ಆರೋಪಿಸಿದರು.<br /> <br /> ಮುಖಂಡರಾದ ಭೈರವ, ವೆಂಕಟರಾಮು, ಪುಟ್ಟಮ್ಮ, ಯಶೋದಮ್ಮ, ಚಂದ್ರಮ್ಮ, ತಾಯಮ್ಮ, ಭಾಗ್ಯಮ್ಮ, ಕರಿಯಮ್ಮ, ಶಶಿಕಲಾ, ಶೃತಿ ಸೇರಿದಂತೆ ಹಲವರು ಭಾಗವಹಿಸಿದ್ದರು.<br /> <br /> ಆಗ್ರಹ: ಇದೇ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕಾಲೋನಿಯಲ್ಲಿ ಹಲವು ದಿನಗಳಿಂದ ಕೆಟ್ಟಿರುವ ಕೈಪಂಪ್ ಅನ್ನು ದುರಸ್ತಿಗೊಳಿಸಲು ಕೂಡಲೇ ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>