<p><strong>ತುಮರಿ: </strong>ವ್ಯಕ್ತಿಯ ಒಳಗಿನ ಪ್ರಪಂಚದ ಭಾವನೆಗಳನ್ನು ಶುದ್ಧ ಆಗಿಸಿಕೊಳ್ಳುವುದೇ ಧರ್ಮ ಸಂಸ್ಕಾರವಾಗಿದ್ದು, ದುಃಖದ ಕತ್ತಲಿನ ವಿರುದ್ಧ ನಿರಂತರ ಹೋರಾಟಕ್ಕೆ ಜೈನಧರ್ಮವೇ ದಾರಿದೀಪ ಎಂದು ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.<br /> <br /> ಸಮೀಪದ ವಳಗೆರೆ ಪಂಚಕೂಟ ಮಹಾಬಸದಿಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು.<br /> <br /> ಜಗತ್ತು ನಿಂತಿರುವುದೇ ಭಾವನೆಗಳ ಮೇಲೆ ಎಂಬುದು ಮೂಲಸತ್ಯವಾದ ಕಾರಣ ಭಾವಶುದ್ಧಿಯ ಹೊರತಾಗಿ ಜಿನಮಾರ್ಗಗಳು ವ್ಯಕ್ತಿಗೆ ಲಭ್ಯವಾಗದು. ಮನಸ್ಸಿನ ವಿಕಲ್ಪಗಳ ವಿರುದ್ಧ ಎಚ್ಚರವಾಗಿರಲು ಬಸದಿ, ಧ್ಯಾನ, ಅಧ್ಯಯನವೇ ಮಾರ್ಗ ಎಂದರು.<br /> <br /> ಭಾವನೆಗಳು ಋಜುಮಾರ್ಗದಲ್ಲಿ ಪರಿವರ್ತನೆಯಾದರೆ ಭವಗಳು ತನ್ನಿಂತಾನೆ ದೂರವಾಗುತ್ತವೆ ಎಂದು ಸೂಚ್ಯವಾಗಿ ನುಡಿದ ಅವರು, ಹಿಂಸೆಯು ಪ್ರಪಂಚದ ಅತಿದೊಡ್ಡ ರೋಗವಾಗಿದ್ದು, ಮಹಾವೀರರ ಬೋಧನೆಗಳು ಪ್ರಪಂಚದ ಕ್ಷೋಭೆಗೆ ಪರಿಹಾರ ಮಾರ್ಗ ನೀಡುತ್ತವೆ ಎಂದು ವಿಶ್ಲೇಷಿಸಿದರು.<br /> <br /> ಬದುಕಿನ ಪ್ರತಿ ಹಂತಗಳಲ್ಲೂ ಅಹಿಂಸೆಯ ಶ್ರೇಷ್ಠ ವಿಧಾನವನ್ನು ಅನುಸರಿಸುವ ಜತೆ ಪ್ರಸ್ತುತತೆಗೆ ಬೆನ್ನು ಮಾಡದೇ ಮಹಿಳಾ ಶೈಕ್ಷಣಿಕ ಪ್ರಗತಿಯ ಕಡೆ ಹೆಚ್ಚಿನ ಗಮನಕೊಡಬೇಕು ಎಂದು ವಿನಂತಿಸಿದರು.<br /> <br /> ಬಡವರ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣದಿಂದ ಮಲೆನಾಡಿನ ಜೈನ ಸಮುದಾಯದ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಮಹಿಳಾ ವಸತಿನಿಲಯವನ್ನು ತುಮರಿಯಲ್ಲಿ ಸ್ಥಾಪಿಸಲು ಮಠವು ತೀರ್ಮಾನಿಸಿದೆ ಎಂದರು.<br /> <br /> ಸಾಗರ ಮತ್ತು ಶಿವಮೊಗ್ಗದಲ್ಲಿನ ಮಠದ ಹಾಸ್ಟೆಲ್ಗಳನ್ನು ಮೇಲ್ದರ್ಜೆಗೇರಿಸುವ ಸಂಕಲ್ಪ ಮಾಡಿದ್ದು, ಸಮುದಾಯದ ಜನ ಸಾಮಾನ್ಯರ ಹಿತಕಾಪಾಡಲು ಹೊಂಬುಜ ಕ್ಷೇತ್ರ ಸಿದ್ಧವಿದೆ ಎಂದು ಭರವಸೆ ನೀಡಿದರು.<br /> <br /> ಪೀಠಾಧ್ಯಕ್ಷರಾದ ನಂತರ ಮೊದಲ ಬಾರಿಗೆ ತುಮರಿಗೆ ಆಗಮಿಸಿದ ಸ್ವಾಮೀಜಿಯನ್ನು ಬುಧವಾರ ಸಂಜೆ ಹಾರಿಗೆ ಬಸದಿಯಿಂದ ಹತ್ತು ಕಿ.ಮಿ. ದೂರ ತೆರೆದ ವಾಹನದಲ್ಲಿ ಯಕ್ಷಗಾನ ವೇಷ, ಕೋಲಾಟ, ಡೊಳ್ಳು ಕುಣಿತ ಒಳಗೊಂಡ ಮೆರವಣಿಗೆ ಮೂಲಕ ವಳಗೆರೆ ಪಂಚಕೂಟ ಬಸದಿಗೆ ಕರೆ ತರಲಾಯಿತು.<br /> ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮರಿ: </strong>ವ್ಯಕ್ತಿಯ ಒಳಗಿನ ಪ್ರಪಂಚದ ಭಾವನೆಗಳನ್ನು ಶುದ್ಧ ಆಗಿಸಿಕೊಳ್ಳುವುದೇ ಧರ್ಮ ಸಂಸ್ಕಾರವಾಗಿದ್ದು, ದುಃಖದ ಕತ್ತಲಿನ ವಿರುದ್ಧ ನಿರಂತರ ಹೋರಾಟಕ್ಕೆ ಜೈನಧರ್ಮವೇ ದಾರಿದೀಪ ಎಂದು ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.<br /> <br /> ಸಮೀಪದ ವಳಗೆರೆ ಪಂಚಕೂಟ ಮಹಾಬಸದಿಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು.<br /> <br /> ಜಗತ್ತು ನಿಂತಿರುವುದೇ ಭಾವನೆಗಳ ಮೇಲೆ ಎಂಬುದು ಮೂಲಸತ್ಯವಾದ ಕಾರಣ ಭಾವಶುದ್ಧಿಯ ಹೊರತಾಗಿ ಜಿನಮಾರ್ಗಗಳು ವ್ಯಕ್ತಿಗೆ ಲಭ್ಯವಾಗದು. ಮನಸ್ಸಿನ ವಿಕಲ್ಪಗಳ ವಿರುದ್ಧ ಎಚ್ಚರವಾಗಿರಲು ಬಸದಿ, ಧ್ಯಾನ, ಅಧ್ಯಯನವೇ ಮಾರ್ಗ ಎಂದರು.<br /> <br /> ಭಾವನೆಗಳು ಋಜುಮಾರ್ಗದಲ್ಲಿ ಪರಿವರ್ತನೆಯಾದರೆ ಭವಗಳು ತನ್ನಿಂತಾನೆ ದೂರವಾಗುತ್ತವೆ ಎಂದು ಸೂಚ್ಯವಾಗಿ ನುಡಿದ ಅವರು, ಹಿಂಸೆಯು ಪ್ರಪಂಚದ ಅತಿದೊಡ್ಡ ರೋಗವಾಗಿದ್ದು, ಮಹಾವೀರರ ಬೋಧನೆಗಳು ಪ್ರಪಂಚದ ಕ್ಷೋಭೆಗೆ ಪರಿಹಾರ ಮಾರ್ಗ ನೀಡುತ್ತವೆ ಎಂದು ವಿಶ್ಲೇಷಿಸಿದರು.<br /> <br /> ಬದುಕಿನ ಪ್ರತಿ ಹಂತಗಳಲ್ಲೂ ಅಹಿಂಸೆಯ ಶ್ರೇಷ್ಠ ವಿಧಾನವನ್ನು ಅನುಸರಿಸುವ ಜತೆ ಪ್ರಸ್ತುತತೆಗೆ ಬೆನ್ನು ಮಾಡದೇ ಮಹಿಳಾ ಶೈಕ್ಷಣಿಕ ಪ್ರಗತಿಯ ಕಡೆ ಹೆಚ್ಚಿನ ಗಮನಕೊಡಬೇಕು ಎಂದು ವಿನಂತಿಸಿದರು.<br /> <br /> ಬಡವರ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣದಿಂದ ಮಲೆನಾಡಿನ ಜೈನ ಸಮುದಾಯದ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಮಹಿಳಾ ವಸತಿನಿಲಯವನ್ನು ತುಮರಿಯಲ್ಲಿ ಸ್ಥಾಪಿಸಲು ಮಠವು ತೀರ್ಮಾನಿಸಿದೆ ಎಂದರು.<br /> <br /> ಸಾಗರ ಮತ್ತು ಶಿವಮೊಗ್ಗದಲ್ಲಿನ ಮಠದ ಹಾಸ್ಟೆಲ್ಗಳನ್ನು ಮೇಲ್ದರ್ಜೆಗೇರಿಸುವ ಸಂಕಲ್ಪ ಮಾಡಿದ್ದು, ಸಮುದಾಯದ ಜನ ಸಾಮಾನ್ಯರ ಹಿತಕಾಪಾಡಲು ಹೊಂಬುಜ ಕ್ಷೇತ್ರ ಸಿದ್ಧವಿದೆ ಎಂದು ಭರವಸೆ ನೀಡಿದರು.<br /> <br /> ಪೀಠಾಧ್ಯಕ್ಷರಾದ ನಂತರ ಮೊದಲ ಬಾರಿಗೆ ತುಮರಿಗೆ ಆಗಮಿಸಿದ ಸ್ವಾಮೀಜಿಯನ್ನು ಬುಧವಾರ ಸಂಜೆ ಹಾರಿಗೆ ಬಸದಿಯಿಂದ ಹತ್ತು ಕಿ.ಮಿ. ದೂರ ತೆರೆದ ವಾಹನದಲ್ಲಿ ಯಕ್ಷಗಾನ ವೇಷ, ಕೋಲಾಟ, ಡೊಳ್ಳು ಕುಣಿತ ಒಳಗೊಂಡ ಮೆರವಣಿಗೆ ಮೂಲಕ ವಳಗೆರೆ ಪಂಚಕೂಟ ಬಸದಿಗೆ ಕರೆ ತರಲಾಯಿತು.<br /> ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>