<p>ಪಂಬನ್ ಸೇತುವೆಯು ಭಾರತದ ನೆಲವನ್ನೂ ರಾಮೇಶ್ವರ ದ್ವೀಪವನ್ನೂ ಸಂಪರ್ಕಿಸುತ್ತದೆ. 1914ರಲ್ಲಿ ನಿರ್ಮಿತವಾಗಿರುವ ಈ ರೈಲ್ವೆ ಸೇತುವೆ, ಸಮುದ್ರದ ಮೇಲೆ ನಿರ್ಮಿಸಲಾಗಿರುವ ದೇಶದ ಎರಡನೇ ಅತಿ ಉದ್ದದ ಸೇತುವೆ ಎನಿಸಿದೆ. ಪಾಕ್ ಜಲಸಂಧಿಯನ್ನು ಹಾದುಹೋಗುವ ಈ ಸೇತುವೆ 2 ಕಿ.ಮೀ. ಉದ್ದವಿದೆ.<br /> <br /> ಭಾರತ ಹಾಗೂ ಶ್ರೀಲಂಕಾ ನಡುವೆ ವ್ಯಾಪಾರ ಸಂಬಂಧ ಸುಧಾರಿಸುವ ಉದ್ದೇಶದಿಂದ 19ನೇ ಶತಮಾನದ ಕೊನೆಯಲ್ಲಿ ಈ ಸೇತುವೆ ನಿರ್ಮಿಸುವ ಯೋಚನೆ ಮೂಡಿತು. ಗುಜರಾತ್ನ ಕಛ್ನಿಂದ ಬಂದ ಕಾರ್ಮಿಕರು ಮೂರು ವರ್ಷದಲ್ಲಿ ಸೇತುವೆಯನ್ನು ನಿರ್ಮಿಸಿದರು. ಫೆಬ್ರುವರಿ 24, 1914ರಂದು ರೈಲ್ವೆ ಸೇತುವೆ ಉದ್ಘಾಟನೆಗೊಂಡಿತು. 1988ರಲ್ಲಿ ರಸ್ತೆ ಸೇತುವೆ ನಿರ್ಮಿತವಾಗುವವರೆಗೆ ಭಾರತ, ರಾಮೇಶ್ವರಂ ಸಂಪರ್ಕಿಸುವ ಏಕೈಕ ಮಾರ್ಗ ಪಂಬನ್ ಸೇತುವೆಯಾಗಿತ್ತು.<br /> <br /> 143 ಅಟ್ಟಳಿಗೆಗಳಿಂದ ನಿರ್ಮಿತವಾದ ಸೇತುವೆಯ ಎತ್ತರವನ್ನು ಹಡಗುಗಳ ಸಂಚಾರಕ್ಕೆ ತಕ್ಕಂತೆ ಹೆಚ್ಚಿಸಬಹುದು. ಕರಾವಳಿ ಪಡೆಯ ಹಡಗುಗಳು, ಸರಕು ಸಾಗಣೆ ಹಡಗುಗಳು, ಮೀನುಗಾರಿಕೆಯ ಹಡಗುಗಳು, ತೈಲ ಟ್ಯಾಂಕರ್ಗಳು ಈ ಸೇತುವೆಯ ಕೆಳಗೆ ಹಾದುಹೋಗುತ್ತವೆ.<br /> <br /> ಡಿಸೆಂಬರ್ 22, 1964ರಲ್ಲಿ ಸೇತುವೆಯ ಒಂದಿಷ್ಟು ಭಾಗ ಸೈಕ್ಲೋನ್ನಿಂದಾಗಿ ಹಾಳಾಗಿತ್ತು. ಆ ಕರಾಳ ದಿನ ಸೇತುವೆ ಮೇಲೆ ರೈಲಿನಲ್ಲಿ ಸಾಗುತ್ತಿದ್ದ 110 ಮಂದಿ ಮೃತಪಟ್ಟರು.<br /> <br /> 2007ರಲ್ಲಿ ಈ ರೈಲ್ವೆ ಟ್ರ್ಯಾಕ್ ಅನ್ನು ಮೀಟರ್ ಗೇಜ್ನಿಂದ ಬ್ರಾಡ್ ಗೇಜ್ಗೆ ಪರಿವರ್ತಿಸಲಾಯಿತು. ಭಾರತೀಯ ರೈಲ್ವೆ 100 ವರ್ಷದಷ್ಟು ಹಳೆಯದಾಗುತ್ತಿರುವ ಈ ಸೇತುವೆಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವಂತೆ ಆಗ್ರಹಿಸುತ್ತಿದೆ. ರಾಮನಾಥಸ್ವಾಮಿ ದೇವಸ್ಥಾನಕ್ಕೆ ಹೋಗುವ ನೂರಾರು ಭಕ್ತರು ಈ ರೈಲ್ವೆ ಮಾರ್ಗವನ್ನು ಉಪಯೋಗಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಂಬನ್ ಸೇತುವೆಯು ಭಾರತದ ನೆಲವನ್ನೂ ರಾಮೇಶ್ವರ ದ್ವೀಪವನ್ನೂ ಸಂಪರ್ಕಿಸುತ್ತದೆ. 1914ರಲ್ಲಿ ನಿರ್ಮಿತವಾಗಿರುವ ಈ ರೈಲ್ವೆ ಸೇತುವೆ, ಸಮುದ್ರದ ಮೇಲೆ ನಿರ್ಮಿಸಲಾಗಿರುವ ದೇಶದ ಎರಡನೇ ಅತಿ ಉದ್ದದ ಸೇತುವೆ ಎನಿಸಿದೆ. ಪಾಕ್ ಜಲಸಂಧಿಯನ್ನು ಹಾದುಹೋಗುವ ಈ ಸೇತುವೆ 2 ಕಿ.ಮೀ. ಉದ್ದವಿದೆ.<br /> <br /> ಭಾರತ ಹಾಗೂ ಶ್ರೀಲಂಕಾ ನಡುವೆ ವ್ಯಾಪಾರ ಸಂಬಂಧ ಸುಧಾರಿಸುವ ಉದ್ದೇಶದಿಂದ 19ನೇ ಶತಮಾನದ ಕೊನೆಯಲ್ಲಿ ಈ ಸೇತುವೆ ನಿರ್ಮಿಸುವ ಯೋಚನೆ ಮೂಡಿತು. ಗುಜರಾತ್ನ ಕಛ್ನಿಂದ ಬಂದ ಕಾರ್ಮಿಕರು ಮೂರು ವರ್ಷದಲ್ಲಿ ಸೇತುವೆಯನ್ನು ನಿರ್ಮಿಸಿದರು. ಫೆಬ್ರುವರಿ 24, 1914ರಂದು ರೈಲ್ವೆ ಸೇತುವೆ ಉದ್ಘಾಟನೆಗೊಂಡಿತು. 1988ರಲ್ಲಿ ರಸ್ತೆ ಸೇತುವೆ ನಿರ್ಮಿತವಾಗುವವರೆಗೆ ಭಾರತ, ರಾಮೇಶ್ವರಂ ಸಂಪರ್ಕಿಸುವ ಏಕೈಕ ಮಾರ್ಗ ಪಂಬನ್ ಸೇತುವೆಯಾಗಿತ್ತು.<br /> <br /> 143 ಅಟ್ಟಳಿಗೆಗಳಿಂದ ನಿರ್ಮಿತವಾದ ಸೇತುವೆಯ ಎತ್ತರವನ್ನು ಹಡಗುಗಳ ಸಂಚಾರಕ್ಕೆ ತಕ್ಕಂತೆ ಹೆಚ್ಚಿಸಬಹುದು. ಕರಾವಳಿ ಪಡೆಯ ಹಡಗುಗಳು, ಸರಕು ಸಾಗಣೆ ಹಡಗುಗಳು, ಮೀನುಗಾರಿಕೆಯ ಹಡಗುಗಳು, ತೈಲ ಟ್ಯಾಂಕರ್ಗಳು ಈ ಸೇತುವೆಯ ಕೆಳಗೆ ಹಾದುಹೋಗುತ್ತವೆ.<br /> <br /> ಡಿಸೆಂಬರ್ 22, 1964ರಲ್ಲಿ ಸೇತುವೆಯ ಒಂದಿಷ್ಟು ಭಾಗ ಸೈಕ್ಲೋನ್ನಿಂದಾಗಿ ಹಾಳಾಗಿತ್ತು. ಆ ಕರಾಳ ದಿನ ಸೇತುವೆ ಮೇಲೆ ರೈಲಿನಲ್ಲಿ ಸಾಗುತ್ತಿದ್ದ 110 ಮಂದಿ ಮೃತಪಟ್ಟರು.<br /> <br /> 2007ರಲ್ಲಿ ಈ ರೈಲ್ವೆ ಟ್ರ್ಯಾಕ್ ಅನ್ನು ಮೀಟರ್ ಗೇಜ್ನಿಂದ ಬ್ರಾಡ್ ಗೇಜ್ಗೆ ಪರಿವರ್ತಿಸಲಾಯಿತು. ಭಾರತೀಯ ರೈಲ್ವೆ 100 ವರ್ಷದಷ್ಟು ಹಳೆಯದಾಗುತ್ತಿರುವ ಈ ಸೇತುವೆಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವಂತೆ ಆಗ್ರಹಿಸುತ್ತಿದೆ. ರಾಮನಾಥಸ್ವಾಮಿ ದೇವಸ್ಥಾನಕ್ಕೆ ಹೋಗುವ ನೂರಾರು ಭಕ್ತರು ಈ ರೈಲ್ವೆ ಮಾರ್ಗವನ್ನು ಉಪಯೋಗಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>