<p>ವಿಜಾಪುರ: ಜೈಪುರದ ಖ್ಯಾತ ಮೋಹನವೀಣಾ ಮಾಂತ್ರಿಕ ಪಂ.ವಿಶ್ವಮೋಹನ್ ಭಟ್ ಅವರಿಗೆ ಗುರುವಾರ ಇಲ್ಲಿ `ಪುಟ್ಟರಾಜ ಸಮ್ಮಾನ್-2012~ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದಿಂದ ನೀಡಲಾದ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.<br /> <br /> `ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಪಡೆದ ನಾನು ಧನ್ಯ. ಕರ್ನಾಟಕದ ಅತಿ ದೊಡ್ಡ ಪ್ರಶಸ್ತಿ ಇದು ಎಂದು ನಾನು ಭಾವಿಸಿದ್ದೇನೆ. ಗ್ರ್ಯಾಮಿ ಪ್ರಶಸ್ತಿಗೂ ನಾನು ಪಾತ್ರನಾಗಿದ್ದೇನೆ. ನಮ್ಮ ದೇಶದಲ್ಲಿ ದೊರೆತ ಈ ಪ್ರಶಸ್ತಿ ಆ ಗ್ರ್ಯಾಮಿ ಪ್ರಶಸ್ತಿಗಿಂತ ಕಡಿಮೆ ಅಲ್ಲ ಎಂಬುದು ನನ್ನ ಭಾವನೆ ಎಂದು ವಿಶ್ವಮೋಹನ್ ಭಟ್ ಹೇಳಿದರು. `ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವು ಹೊಸ ಪ್ರಯೋಗಗಳ ಮೂಲಕ ವಿಶ್ವಮಾನ್ಯತೆ ಪಡೆದಿದೆ~ ಎಂದು ಅವರು ನುಡಿದರು<br /> .<br /> ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಕನವಳ್ಳಿ, `ಗಿಟಾರನ್ನು ಹಿಂದೂಸ್ತಾನಿ ಸಂಗೀತ ವಾದ್ಯಕ್ಕೆ ಅಳವಡಿಸಿರುವುದು ಪಂ.ವಿಶ್ವಮೋಹನ ಭಟ್ ಸಾಧನೆ~ ಎಂದರು. ಸ್ಥಳೀಯ ಸುರ್ಸಿಂಗಾರದ ಭೋಜಣ್ಣ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಅಲ್-ಅಮೀನ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಎಸ್.ಪಾಟೀಲ ಮುಖ್ಯ ಅತಿಥಿಯಾಗಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ಜೈಪುರದ ಖ್ಯಾತ ಮೋಹನವೀಣಾ ಮಾಂತ್ರಿಕ ಪಂ.ವಿಶ್ವಮೋಹನ್ ಭಟ್ ಅವರಿಗೆ ಗುರುವಾರ ಇಲ್ಲಿ `ಪುಟ್ಟರಾಜ ಸಮ್ಮಾನ್-2012~ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದಿಂದ ನೀಡಲಾದ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.<br /> <br /> `ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಪಡೆದ ನಾನು ಧನ್ಯ. ಕರ್ನಾಟಕದ ಅತಿ ದೊಡ್ಡ ಪ್ರಶಸ್ತಿ ಇದು ಎಂದು ನಾನು ಭಾವಿಸಿದ್ದೇನೆ. ಗ್ರ್ಯಾಮಿ ಪ್ರಶಸ್ತಿಗೂ ನಾನು ಪಾತ್ರನಾಗಿದ್ದೇನೆ. ನಮ್ಮ ದೇಶದಲ್ಲಿ ದೊರೆತ ಈ ಪ್ರಶಸ್ತಿ ಆ ಗ್ರ್ಯಾಮಿ ಪ್ರಶಸ್ತಿಗಿಂತ ಕಡಿಮೆ ಅಲ್ಲ ಎಂಬುದು ನನ್ನ ಭಾವನೆ ಎಂದು ವಿಶ್ವಮೋಹನ್ ಭಟ್ ಹೇಳಿದರು. `ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವು ಹೊಸ ಪ್ರಯೋಗಗಳ ಮೂಲಕ ವಿಶ್ವಮಾನ್ಯತೆ ಪಡೆದಿದೆ~ ಎಂದು ಅವರು ನುಡಿದರು<br /> .<br /> ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಕನವಳ್ಳಿ, `ಗಿಟಾರನ್ನು ಹಿಂದೂಸ್ತಾನಿ ಸಂಗೀತ ವಾದ್ಯಕ್ಕೆ ಅಳವಡಿಸಿರುವುದು ಪಂ.ವಿಶ್ವಮೋಹನ ಭಟ್ ಸಾಧನೆ~ ಎಂದರು. ಸ್ಥಳೀಯ ಸುರ್ಸಿಂಗಾರದ ಭೋಜಣ್ಣ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಅಲ್-ಅಮೀನ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಎಸ್.ಪಾಟೀಲ ಮುಖ್ಯ ಅತಿಥಿಯಾಗಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>