<p>ಲಖನೌ (ಪಿಟಿಐ): ಮುಲಾಯಂ ನೇತೃತ್ವದ ಸಮಾಜವಾದಿ ಪಕ್ಷವು ಹಳೆಯ ಚಿಂತನೆ, ಧರ್ಮ ಹಾಗೂ ಜಾತಿ ಆಧಾರಿತ ರಾಜಕೀಯ, ಗೂಂಡಾಗಿರಿಯ ಪಾರುಪತ್ಯಕ್ಕೆ ಹೆಸರಾದದ್ದು. ಈ ನಂಬಿಕೆಯನ್ನು ಮುರಿದು ಪಕ್ಷಕ್ಕೊಂದು ಹೊಸ ವರ್ಚಸ್ಸು ನೀಡುವಲ್ಲಿ ಅಖಿಲೇಶ್ ಯಶ ಕಂಡಿದ್ದಾರೆ.<br /> <br /> ಇಂಗ್ಲಿಷ್ ಹಾಗೂ ಕಂಪ್ಯೂಟರ್ ಎಂದರೆ ಮಾರು ದೂರ ಸರಿಯುತ್ತಿದ್ದ ಪಕ್ಷದಲ್ಲಿ ಈಗ ಆಧುನಿಕತೆಯ ಗಂಧ ಗಾಳಿ ತೀಡಿದೆ. ಯುವ ನಾಯಕನ ಸಾರಥ್ಯದಲ್ಲಿ ಹೊಸ ನೀರು ಹರಿಯುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ಅಖಿಲೇಶ್, ಎಸ್ಪಿಗೆ ಅಂಟಿದ `ಗೂಂಡಾ ಪಕ್ಷ~ಎಂಬ ಕಳಂಕವನ್ನೂ ಅಳಿಸಿ ಹಾಕಲು ಪ್ರಯತ್ನಿಸಿದ್ದಾರೆ.<br /> <br /> 1973ರ ಜುಲೈನಲ್ಲಿ ಹುಟ್ಟಿದ ಅಖಿಲೇಶ್, ರಾಜಸ್ತಾನದ ಸೇನಾ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪೂರೈಸಿದ್ದಾರೆ. ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ಪದವಿ. 1998ರಲ್ಲಿ ಸಿಡ್ನಿಯಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ.<br /> <br /> ತಂದೆ ಮುಲಾಯಂ ಅವರ ಒತ್ತಾಯಕ್ಕೆ ರಾಜಕೀಯ ಸೇರಿದ ಅಖಿಲೇಶ್, 2000ದಲ್ಲಿ ಕನೌಜ್ ಕ್ಷೇತ್ರದ ಪ್ರತಿನಿಧಿಯಾಗಿ ಲೋಕಸಭೆಗೆ ಕಾಲಿಟ್ಟಾಗ ಆಗಿನ್ನೂ ಅವರಿಗೆ 27 ವರ್ಷ.<br /> <br /> ಈ ಬಾರಿ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ದೃಢ ಸಂಕಲ್ಪ ಮಾಡಿದ ಅವರು, ಕಳೆದ 6 ತಿಂಗಳಿನಲ್ಲಿ ರಾಜ್ಯದಾದ್ಯಂತ 800 ರ್ಯಾಲಿಗಳನ್ನು ನಡೆಸಿದರು. 10,000 ಕಿ.ಮೀ ಯಾತ್ರೆ ಕೈಗೊಂಡರು. ಈ ಹಂತದಲ್ಲಿಯೇ ನಿಧಾನವಾಗಿ ಪಕ್ಷದ ವರ್ಚಸ್ಸು ಬದಲಿಸುವ ಕೆಲಸ ಮಾಡಿದರು. ಕೊನೆಗೂ ಚುನಾವಣೆಯಲ್ಲಿ `ಅಖಿಲೇಶ್ ಅಲೆ~ ಮತದಾರರನ್ನು ಮೋಡಿ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಖನೌ (ಪಿಟಿಐ): ಮುಲಾಯಂ ನೇತೃತ್ವದ ಸಮಾಜವಾದಿ ಪಕ್ಷವು ಹಳೆಯ ಚಿಂತನೆ, ಧರ್ಮ ಹಾಗೂ ಜಾತಿ ಆಧಾರಿತ ರಾಜಕೀಯ, ಗೂಂಡಾಗಿರಿಯ ಪಾರುಪತ್ಯಕ್ಕೆ ಹೆಸರಾದದ್ದು. ಈ ನಂಬಿಕೆಯನ್ನು ಮುರಿದು ಪಕ್ಷಕ್ಕೊಂದು ಹೊಸ ವರ್ಚಸ್ಸು ನೀಡುವಲ್ಲಿ ಅಖಿಲೇಶ್ ಯಶ ಕಂಡಿದ್ದಾರೆ.<br /> <br /> ಇಂಗ್ಲಿಷ್ ಹಾಗೂ ಕಂಪ್ಯೂಟರ್ ಎಂದರೆ ಮಾರು ದೂರ ಸರಿಯುತ್ತಿದ್ದ ಪಕ್ಷದಲ್ಲಿ ಈಗ ಆಧುನಿಕತೆಯ ಗಂಧ ಗಾಳಿ ತೀಡಿದೆ. ಯುವ ನಾಯಕನ ಸಾರಥ್ಯದಲ್ಲಿ ಹೊಸ ನೀರು ಹರಿಯುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ಅಖಿಲೇಶ್, ಎಸ್ಪಿಗೆ ಅಂಟಿದ `ಗೂಂಡಾ ಪಕ್ಷ~ಎಂಬ ಕಳಂಕವನ್ನೂ ಅಳಿಸಿ ಹಾಕಲು ಪ್ರಯತ್ನಿಸಿದ್ದಾರೆ.<br /> <br /> 1973ರ ಜುಲೈನಲ್ಲಿ ಹುಟ್ಟಿದ ಅಖಿಲೇಶ್, ರಾಜಸ್ತಾನದ ಸೇನಾ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪೂರೈಸಿದ್ದಾರೆ. ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ಪದವಿ. 1998ರಲ್ಲಿ ಸಿಡ್ನಿಯಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ.<br /> <br /> ತಂದೆ ಮುಲಾಯಂ ಅವರ ಒತ್ತಾಯಕ್ಕೆ ರಾಜಕೀಯ ಸೇರಿದ ಅಖಿಲೇಶ್, 2000ದಲ್ಲಿ ಕನೌಜ್ ಕ್ಷೇತ್ರದ ಪ್ರತಿನಿಧಿಯಾಗಿ ಲೋಕಸಭೆಗೆ ಕಾಲಿಟ್ಟಾಗ ಆಗಿನ್ನೂ ಅವರಿಗೆ 27 ವರ್ಷ.<br /> <br /> ಈ ಬಾರಿ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ದೃಢ ಸಂಕಲ್ಪ ಮಾಡಿದ ಅವರು, ಕಳೆದ 6 ತಿಂಗಳಿನಲ್ಲಿ ರಾಜ್ಯದಾದ್ಯಂತ 800 ರ್ಯಾಲಿಗಳನ್ನು ನಡೆಸಿದರು. 10,000 ಕಿ.ಮೀ ಯಾತ್ರೆ ಕೈಗೊಂಡರು. ಈ ಹಂತದಲ್ಲಿಯೇ ನಿಧಾನವಾಗಿ ಪಕ್ಷದ ವರ್ಚಸ್ಸು ಬದಲಿಸುವ ಕೆಲಸ ಮಾಡಿದರು. ಕೊನೆಗೂ ಚುನಾವಣೆಯಲ್ಲಿ `ಅಖಿಲೇಶ್ ಅಲೆ~ ಮತದಾರರನ್ನು ಮೋಡಿ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>