<p><strong>ಬೀಳಗಿ: </strong>ಆಹಾರ ಧಾನ್ಯಗಳನ್ನು ಪೂರೈಸುವ ನ್ಯಾಯ ಬೆಲೆ ಅಂಗಡಿಗಳು ಸರಕಾರ ನಿಗದಿಪಡಿಸಿದ ದರ, ಪ್ರಮಾಣ, ಗುಣಮಟ್ಟದ ಪಡಿತರ ಹಂಚುವ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ನಿಗಾ ಇಡಬೇಕೆಂದು ತಹಶೀಲ್ದಾರ್ ಎಲ್.ಬಿ. ಕುಲಕರ್ಣಿ ಹೇಳಿದರು.<br /> <br /> ತಾಲ್ಲೂಕಿನ ಕೊರ್ತಿ ಸಮುದಾಯ ಭವನದಲ್ಲಿ ಬುಧವಾರ ನಿರ್ದಿಷ್ಟ ಗುರಿಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಮಟ್ಟದ ಜಾಗೃತಿ ಸಮಿತಿಯ ಸದಸ್ಯರಿಗಾಗಿ ಏರ್ಪಡಿಸಿದ್ದ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ತಹಶೀಲ್ದಾರರ ಕಚೇರಿಯಿಂದ ಬಿಡುಗಡೆಯಾದ ಆಹಾರ ಧಾನ್ಯದ ಮಾಹಿತಿ ಪ್ರತಿ ಗ್ರಾಮ ಪಂಚಾಯಿತಿಗೂ, ಜಾಗೃತಿ ಸಮಿತಿ ಸದಸ್ಯರಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ತಾ.ಪಂ. ಇಒ ಡಾ.ಆರ್.ಸಿ. ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಪಡಿತರ ಧಾನ್ಯ ವಿತರಣೆಯಲ್ಲಿ ಅವ್ಯವಹಾರ ನಡೆಯದೇ, ಪಾರದರ್ಶಕವಾಗಿರಬೇಕು ಎಂದರು.<br /> <br /> ತಾ. ಪಂ. ಉಪಾಧ್ಯಕ್ಷ ಹನುಮಂತ ಮಾದರ, ಗೀತಾ ಹೊಳಬಸಪ್ಪ ಕಂಬಾರ, ಅನ್ನಪೂರ್ಣಾ ನವಲಗಣ್ಣ, ರಮೇಶ ಹುಣಸೀಕಟ್ಟಿ, ಆಹಾರ ಇಲಾಖೆ ಉಪ ತಹಶೀಲ್ದಾರರಾದ ಬಿ.ಎಂ. ಹೆಗ್ಗಳಗಿ, ಎನ್.ಎ. ಪಾಟೀಲ ಉಪಸ್ಥಿತರಿದ್ದರು.<br /> ಎಸ್.ಆರ್. ಗಯ್ಯಾಳಿ ಸ್ವಾಗತಿಸಿದರು. ಬಿ.ಎಸ್. ಕೊಪ್ಪಳ ವಂದಿಸಿದರು. ಪಿ.ಎಸ್. ಸೋಮನಕಟ್ಟಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ: </strong>ಆಹಾರ ಧಾನ್ಯಗಳನ್ನು ಪೂರೈಸುವ ನ್ಯಾಯ ಬೆಲೆ ಅಂಗಡಿಗಳು ಸರಕಾರ ನಿಗದಿಪಡಿಸಿದ ದರ, ಪ್ರಮಾಣ, ಗುಣಮಟ್ಟದ ಪಡಿತರ ಹಂಚುವ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ನಿಗಾ ಇಡಬೇಕೆಂದು ತಹಶೀಲ್ದಾರ್ ಎಲ್.ಬಿ. ಕುಲಕರ್ಣಿ ಹೇಳಿದರು.<br /> <br /> ತಾಲ್ಲೂಕಿನ ಕೊರ್ತಿ ಸಮುದಾಯ ಭವನದಲ್ಲಿ ಬುಧವಾರ ನಿರ್ದಿಷ್ಟ ಗುರಿಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಮಟ್ಟದ ಜಾಗೃತಿ ಸಮಿತಿಯ ಸದಸ್ಯರಿಗಾಗಿ ಏರ್ಪಡಿಸಿದ್ದ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ತಹಶೀಲ್ದಾರರ ಕಚೇರಿಯಿಂದ ಬಿಡುಗಡೆಯಾದ ಆಹಾರ ಧಾನ್ಯದ ಮಾಹಿತಿ ಪ್ರತಿ ಗ್ರಾಮ ಪಂಚಾಯಿತಿಗೂ, ಜಾಗೃತಿ ಸಮಿತಿ ಸದಸ್ಯರಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ತಾ.ಪಂ. ಇಒ ಡಾ.ಆರ್.ಸಿ. ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಪಡಿತರ ಧಾನ್ಯ ವಿತರಣೆಯಲ್ಲಿ ಅವ್ಯವಹಾರ ನಡೆಯದೇ, ಪಾರದರ್ಶಕವಾಗಿರಬೇಕು ಎಂದರು.<br /> <br /> ತಾ. ಪಂ. ಉಪಾಧ್ಯಕ್ಷ ಹನುಮಂತ ಮಾದರ, ಗೀತಾ ಹೊಳಬಸಪ್ಪ ಕಂಬಾರ, ಅನ್ನಪೂರ್ಣಾ ನವಲಗಣ್ಣ, ರಮೇಶ ಹುಣಸೀಕಟ್ಟಿ, ಆಹಾರ ಇಲಾಖೆ ಉಪ ತಹಶೀಲ್ದಾರರಾದ ಬಿ.ಎಂ. ಹೆಗ್ಗಳಗಿ, ಎನ್.ಎ. ಪಾಟೀಲ ಉಪಸ್ಥಿತರಿದ್ದರು.<br /> ಎಸ್.ಆರ್. ಗಯ್ಯಾಳಿ ಸ್ವಾಗತಿಸಿದರು. ಬಿ.ಎಸ್. ಕೊಪ್ಪಳ ವಂದಿಸಿದರು. ಪಿ.ಎಸ್. ಸೋಮನಕಟ್ಟಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>