<p>ಪ್ರಾಥಮಿಕ ಶಾಲೆಯಿಂದ ಹಿಡಿದು ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಸಿಇಟಿವರೆಗೆ ಟ್ಯೂಷನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಗತ್ಯವಿರಲಿ, ಇಲ್ಲದಿರಲಿ ಮಕ್ಕಳನ್ನು ಟ್ಯೂಷನ್ಗೆ ಕಳುಹಿಸುವ ಪೋಷಕರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಟ್ಯೂಷನ್ಗೆ ಕಳುಹಿಸುವುದು ಪ್ರತಿಷ್ಠೆಯ ಪ್ರಶ್ನೆ ಎಂಬ ಭಾವನೆಯೂ ಕೆಲವರಲ್ಲಿ ಇದೆ.<br /> <br /> ಹಿಂದೆಲ್ಲ ನಗರ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುತ್ತಿದ್ದ ಟ್ಯೂಷನ್ ಹಾವಳಿ ಈಗ ಸಮೂಹ ಸನ್ನಿಯಂತೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದೆ. ಖಾಸಗಿ ಟ್ಯೂಟೋರಿಯಲ್ ಸಂಸ್ಥೆಗಳು ಇದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದು, ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬ್ಯಾಚ್ಗಳಲ್ಲಿ ಟ್ಯೂಷನ್ ನಡೆಸುವ ಹಲವು ಸಂಸ್ಥೆಗಳಿವೆ.<br /> <br /> ಇಂತಹ ಸಂಸ್ಥೆಗಳೊಂದಿಗೆ ಕೆಲ ಉಪನ್ಯಾಸಕರೂ ಕೈಜೋಡಿಸಿದ್ದು, ಇಂತಹ ಕಡೆಯೇ ಟ್ಯೂಷನ್ಗೆ ಸೇರಿ ಎಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. `ನಿಮಗೆ ಕಾಲೇಜಿನಲ್ಲಿ ಪಾಠ ಹೇಳಿದರೆ ಅರ್ಥವಾಗುವುದಿಲ್ಲ, ಟ್ಯೂಷನ್ಗೆ ಬನ್ನಿ~ ಎಂದು ಬಹಿರಂಗವಾಗಿ ಮನೆ ಪಾಠಕ್ಕೆ ಆಹ್ವಾನ ನೀಡುವ ಉಪನ್ಯಾಸಕರ ಸಂಖ್ಯೆಗೇನೂ ಕಮ್ಮಿಯಿಲ್ಲ.<br /> <br /> ಈಗಷ್ಟೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ, ಬೇಸಿಗೆ ರಜೆಯಲ್ಲಿಯೇ ಎಸ್ಸೆಸ್ಸೆಲ್ಸಿ, ಪಿಯುಸಿಗೆ ಟ್ಯೂಷನ್ ಶುರುವಾಗಿತ್ತು. ಕಾಯ್ದೆ ಪ್ರಕಾರ ಸರ್ಕಾರಿ ನೌಕರರಾದ ಶಿಕ್ಷಕರು ಟ್ಯೂಷನ್ ನಡೆಸುವುದು ಶಿಕ್ಷಾರ್ಹ ಅಪರಾಧ.<br /> <br /> ಆದರೂ ಬಹಿರಂಗವಾಗಿಯೇ ಎಲ್ಲ ಕಡೆ ಟ್ಯೂಷನ್ ನಡೆಯುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ `ಪ್ರಜಾವಾಣಿ~ ನಡೆಸಿದ ಸಂದರ್ಶನದ ಸಾರಾಂಶ ಹೀಗಿದೆ.<br /> <br /> <strong>* ಟ್ಯೂಷನ್ ಅಗತ್ಯವಿದೆಯೇ? ಇದರ ಬಗ್ಗೆ ಸರ್ಕಾರದ ನಿಲುವೇನು?</strong><br /> - ಸರ್ಕಾರಿ ಮತ್ತು ಅನುದಾನಿತ ಶಾಲಾ -ಕಾಲೇಜುಗಳ ಮಕ್ಕಳಿಗೆ ಟ್ಯೂಷನ್ ಅಗತ್ಯವಿಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶಾಲೆಯಲ್ಲಿಯೇ ಪರಿಹಾರ ಬೋಧನೆ ಮೂಲಕ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. <br /> <br /> ನಮ್ಮಲ್ಲಿ ಇನ್ನೂ ಮೊದಲ ಪೀಳಿಗೆಯ ಮಕ್ಕಳು ಶಾಲೆಗೆ ಬರುತ್ತಿರುವುದರಿಂದ ಎಲ್ಲರ ಕಲಿಕಾ ಮಟ್ಟವೂ ಒಂದೇ ರೀತಿ ಇರುವುದಿಲ್ಲ. ಇದನ್ನು ಗಮನಿಸಿಯೇ ಪರಿಹಾರ ಬೋಧನೆ ಕಾರ್ಯಕ್ರಮ ರೂಪಿಸಲಾಗಿದೆ.<br /> <br /> <strong>* ಟ್ಯೂಷನ್ ನಿಷೇಧಿಸಿದ್ದರೂ, ಅದನ್ನು ಯಾಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ?</strong><br /> - ಇದರಲ್ಲಿ ಕೊರತೆಗಳು ಆಗಿರುವುದು ನಿಜ. `ನಾವು ಹೇಳುವುದು ಒಂದು, ವಾಸ್ತವವಾಗಿ ಆಗುತ್ತಿರುವುದೇ ಬೇರೆ~ ಎನ್ನುವುದನ್ನು ಒಪ್ಪುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಈಗಾಗಲೇ ಸುತ್ತೋಲೆ ಕಳುಹಿಸಲಾಗಿದೆ. ಈ ವರ್ಷ ಬಿಗಿಕ್ರಮಕೈಗೊಳ್ಳುತ್ತೇವೆ. ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತೇವೆ~.<br /> <br /> <strong>* ಉಪನ್ಯಾಸಕರು ಕಾಲೇಜಿಗಿಂತ ಮನೆಪಾಠಕ್ಕೆ ಹೆಚ್ಚು ಒತ್ತುನೀಡುತ್ತಿದ್ದಾರಲ್ಲಾ?</strong><br /> - ಬರುವ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕುತ್ತೇವೆ. ಟ್ಯೂಷನ್ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ. ವಿಶೇಷ ಜಾಗೃತ ದಳ ರಚನೆ ಮಾಡಿ ಮನೆ ಪಾಠ ಮಾಡುವ ಉಪನ್ಯಾಸಕರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುತ್ತೇವೆ.<br /> <br /> <strong>* ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ ಮಾಡದೆ ಇರುವುದೇ ಟ್ಯೂಷನ್ ಹಾವಳಿ ಹೆಚ್ಚಾಗಲು ಕಾರಣ ಎಂಬುದನ್ನು ಒಪ್ಪುತ್ತೀರಾ?</strong><br /> - ಶಿಕ್ಷಕರು ಚೆನ್ನಾಗಿ ಪಾಠ ಮಾಡುವ ಕಡೆ ದಾಖಲಾತಿ ಚೆನ್ನಾಗಿದೆ. ಶಿಕ್ಷಕರಿಗೂ ತರಬೇತಿ ಅಗತ್ಯವಿದೆ. ಈಗಿನ ವ್ಯವಸ್ಥೆಗೆ ತಕ್ಕಂತೆ ವೈಜ್ಞಾನಿಕವಾಗಿ ಕಲಿಸುವ ವಿಧಾನದ ಬಗ್ಗೆ ಕಾಲ ಕಾಲಕ್ಕೆ ತರಬೇತಿ ನೀಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಶಿಕ್ಷಕರಿಗೂ ಹಿತಿಮಿತಿಗಳಿವೆ.<br /> <br /> 15-20 ವರ್ಷಗಳ ಹಿಂದೆ ನೇಮಕವಾಗಿರುವ ಶಿಕ್ಷಕರಿಗೆ ಈಗಿನ ಕಾಲಮಾನಕ್ಕೆ ತಕ್ಕಂತೆ ಬೋಧಿಸಲು ಕಷ್ಟವಾಗಬಹುದು. ತರಬೇತಿ ಮೂಲಕ ಅವರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸುವ ಕೆಲಸ ಮಾಡುತ್ತೇವೆ.<br /> <br /> ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಈಗ ಪ್ರೌಢಶಾಲೆಗಳಲ್ಲಿ ಜಾರಿಯಾಗಿದೆ. ಮುಂದಿನ ವರ್ಷ ಪಿಯುಸಿಗೂ ಇದು ವಿಸ್ತರಣೆಯಾಗಲಿದೆ. ಆಗ 30 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರು ಇರಲಿದ್ದಾರೆ. ಇದರಿಂದಾಗಿ ಒತ್ತಡ ಕಡಿಮೆಯಾಗಲಿದ್ದು, ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟದತ್ತ ಗಮನಹರಿಸಲು ಸಾಧ್ಯವಾಗಲಿದೆ.<br /> <br /> <strong>* ಪ್ರವೇಶ ಸಂದರ್ಭದಲ್ಲಿಯೇ ಖಾಸಗಿ ಕಾಲೇಜುಗಳು ಕಡ್ಡಾಯವಾಗಿ ಟ್ಯೂಷನ್ ಶುಲ್ಕವನ್ನು ಕಟ್ಟಬೇಕು ಎಂದು ಒತ್ತಡ ಹೇರುತ್ತಿವೆಯಲ್ಲಾ?</strong><br /> - ನ್ಯಾಯೋಚಿತ ಮಾರ್ಗವನ್ನು ಅನುಸರಿಸದ ಶಾಲಾ- ಕಾಲೇಜುಗಳ ವಿರುದ್ಧ ಸಮಾಜ, ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕು. ಕೆಲವೊಂದು ವಿಷಯಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. ಅಂತಹ ವಿಷಯಗಳನ್ನು ನಮ್ಮ ಗಮನಕ್ಕೆ ತಂದರೆ ಕ್ರಮಕೈಗೊಳ್ಳುತ್ತೇವೆ. ಸಮಾಜ, ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ.<br /> <br /> <strong>* ಪೋಷಕರು, ವಿದ್ಯಾರ್ಥಿಗಳ ಮನವೊಲಿಸುವ ಕೆಲಸವನ್ನು ಸರ್ಕಾರ ಯಾಕೆ ಮಾಡಬಾರದು?</strong><br /> - `ಅಂಕ ಗಳಿಸುವುದೇ ಜೀವನದ ಸರ್ವಸ್ವ ಅಲ್ಲ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಪದೇ ಪದೇ ನಾವು ಹೇಳುತ್ತಿದ್ದೇವೆ. ಟ್ಯೂಷನ್ಗೆ ಹೋದರಷ್ಟೇ ನಮ್ಮ ಮಗ ಅಥವಾ ಮಗಳು ಉದ್ಧಾರ ಸಾಧ್ಯ ಎಂಬ ತಪ್ಪುಕಲ್ಪನೆಯಿಂದ ಹೊರ ಬರಬೇಕು.<br /> <br /> ಅಂಕಗಳೇ ಜೀವನದಲ್ಲಿ ಎಲ್ಲವನ್ನೂ ನಿರ್ಧರಿಸುವುದಿಲ್ಲ. ಮುಂದಿನ ವ್ಯಾಸಂಗಕ್ಕೆ ಅಂಕಗಳು ಮಾನದಂಡ ಅಷ್ಟೇ. ಪೋಷಕರು ಅನಗತ್ಯವಾಗಿ ಮಕ್ಕಳ ಮೇಲೆ ಒತ್ತಡ ಹೇರುವುದು~ ಸರಿಯಲ್ಲ.<br /> <br /> ಶೈಕ್ಷಣಿಕ ಪಠ್ಯಕ್ರಮಕ್ಕೆ ಸೀಮಿತವಾಗಿ ಹೇಳುವುದಾದರೆ ಟ್ಯೂಷನ್ ಅಗತ್ಯವಿಲ್ಲ, ಆದರೆ ಕೆಲ ಪೋಷಕರು ಶಾಲಾ ಹಂತದಲ್ಲೇ ಬೇರೆ ಬೇರೆ ಕೋರ್ಸ್ಗಳನ್ನು ಕಲಿಯಬೇಕು ಎಂದು ಬಯಸುತ್ತಾರೆ. ಅಂತಹವರು ಬೇಕಾದರೆ ಟ್ಯೂಷನ್ಗೆ ಕಳುಹಿಸಲಿ, ಆದರೆ ಪಠ್ಯಕ್ರಮಕ್ಕೆ ಟ್ಯೂಷನ್ಗೆ ಹೋಗುವ ಅಗತ್ಯವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಾಥಮಿಕ ಶಾಲೆಯಿಂದ ಹಿಡಿದು ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಸಿಇಟಿವರೆಗೆ ಟ್ಯೂಷನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಗತ್ಯವಿರಲಿ, ಇಲ್ಲದಿರಲಿ ಮಕ್ಕಳನ್ನು ಟ್ಯೂಷನ್ಗೆ ಕಳುಹಿಸುವ ಪೋಷಕರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಟ್ಯೂಷನ್ಗೆ ಕಳುಹಿಸುವುದು ಪ್ರತಿಷ್ಠೆಯ ಪ್ರಶ್ನೆ ಎಂಬ ಭಾವನೆಯೂ ಕೆಲವರಲ್ಲಿ ಇದೆ.<br /> <br /> ಹಿಂದೆಲ್ಲ ನಗರ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುತ್ತಿದ್ದ ಟ್ಯೂಷನ್ ಹಾವಳಿ ಈಗ ಸಮೂಹ ಸನ್ನಿಯಂತೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದೆ. ಖಾಸಗಿ ಟ್ಯೂಟೋರಿಯಲ್ ಸಂಸ್ಥೆಗಳು ಇದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದು, ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬ್ಯಾಚ್ಗಳಲ್ಲಿ ಟ್ಯೂಷನ್ ನಡೆಸುವ ಹಲವು ಸಂಸ್ಥೆಗಳಿವೆ.<br /> <br /> ಇಂತಹ ಸಂಸ್ಥೆಗಳೊಂದಿಗೆ ಕೆಲ ಉಪನ್ಯಾಸಕರೂ ಕೈಜೋಡಿಸಿದ್ದು, ಇಂತಹ ಕಡೆಯೇ ಟ್ಯೂಷನ್ಗೆ ಸೇರಿ ಎಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. `ನಿಮಗೆ ಕಾಲೇಜಿನಲ್ಲಿ ಪಾಠ ಹೇಳಿದರೆ ಅರ್ಥವಾಗುವುದಿಲ್ಲ, ಟ್ಯೂಷನ್ಗೆ ಬನ್ನಿ~ ಎಂದು ಬಹಿರಂಗವಾಗಿ ಮನೆ ಪಾಠಕ್ಕೆ ಆಹ್ವಾನ ನೀಡುವ ಉಪನ್ಯಾಸಕರ ಸಂಖ್ಯೆಗೇನೂ ಕಮ್ಮಿಯಿಲ್ಲ.<br /> <br /> ಈಗಷ್ಟೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ, ಬೇಸಿಗೆ ರಜೆಯಲ್ಲಿಯೇ ಎಸ್ಸೆಸ್ಸೆಲ್ಸಿ, ಪಿಯುಸಿಗೆ ಟ್ಯೂಷನ್ ಶುರುವಾಗಿತ್ತು. ಕಾಯ್ದೆ ಪ್ರಕಾರ ಸರ್ಕಾರಿ ನೌಕರರಾದ ಶಿಕ್ಷಕರು ಟ್ಯೂಷನ್ ನಡೆಸುವುದು ಶಿಕ್ಷಾರ್ಹ ಅಪರಾಧ.<br /> <br /> ಆದರೂ ಬಹಿರಂಗವಾಗಿಯೇ ಎಲ್ಲ ಕಡೆ ಟ್ಯೂಷನ್ ನಡೆಯುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ `ಪ್ರಜಾವಾಣಿ~ ನಡೆಸಿದ ಸಂದರ್ಶನದ ಸಾರಾಂಶ ಹೀಗಿದೆ.<br /> <br /> <strong>* ಟ್ಯೂಷನ್ ಅಗತ್ಯವಿದೆಯೇ? ಇದರ ಬಗ್ಗೆ ಸರ್ಕಾರದ ನಿಲುವೇನು?</strong><br /> - ಸರ್ಕಾರಿ ಮತ್ತು ಅನುದಾನಿತ ಶಾಲಾ -ಕಾಲೇಜುಗಳ ಮಕ್ಕಳಿಗೆ ಟ್ಯೂಷನ್ ಅಗತ್ಯವಿಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶಾಲೆಯಲ್ಲಿಯೇ ಪರಿಹಾರ ಬೋಧನೆ ಮೂಲಕ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. <br /> <br /> ನಮ್ಮಲ್ಲಿ ಇನ್ನೂ ಮೊದಲ ಪೀಳಿಗೆಯ ಮಕ್ಕಳು ಶಾಲೆಗೆ ಬರುತ್ತಿರುವುದರಿಂದ ಎಲ್ಲರ ಕಲಿಕಾ ಮಟ್ಟವೂ ಒಂದೇ ರೀತಿ ಇರುವುದಿಲ್ಲ. ಇದನ್ನು ಗಮನಿಸಿಯೇ ಪರಿಹಾರ ಬೋಧನೆ ಕಾರ್ಯಕ್ರಮ ರೂಪಿಸಲಾಗಿದೆ.<br /> <br /> <strong>* ಟ್ಯೂಷನ್ ನಿಷೇಧಿಸಿದ್ದರೂ, ಅದನ್ನು ಯಾಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ?</strong><br /> - ಇದರಲ್ಲಿ ಕೊರತೆಗಳು ಆಗಿರುವುದು ನಿಜ. `ನಾವು ಹೇಳುವುದು ಒಂದು, ವಾಸ್ತವವಾಗಿ ಆಗುತ್ತಿರುವುದೇ ಬೇರೆ~ ಎನ್ನುವುದನ್ನು ಒಪ್ಪುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಈಗಾಗಲೇ ಸುತ್ತೋಲೆ ಕಳುಹಿಸಲಾಗಿದೆ. ಈ ವರ್ಷ ಬಿಗಿಕ್ರಮಕೈಗೊಳ್ಳುತ್ತೇವೆ. ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತೇವೆ~.<br /> <br /> <strong>* ಉಪನ್ಯಾಸಕರು ಕಾಲೇಜಿಗಿಂತ ಮನೆಪಾಠಕ್ಕೆ ಹೆಚ್ಚು ಒತ್ತುನೀಡುತ್ತಿದ್ದಾರಲ್ಲಾ?</strong><br /> - ಬರುವ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕುತ್ತೇವೆ. ಟ್ಯೂಷನ್ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ. ವಿಶೇಷ ಜಾಗೃತ ದಳ ರಚನೆ ಮಾಡಿ ಮನೆ ಪಾಠ ಮಾಡುವ ಉಪನ್ಯಾಸಕರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುತ್ತೇವೆ.<br /> <br /> <strong>* ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ ಮಾಡದೆ ಇರುವುದೇ ಟ್ಯೂಷನ್ ಹಾವಳಿ ಹೆಚ್ಚಾಗಲು ಕಾರಣ ಎಂಬುದನ್ನು ಒಪ್ಪುತ್ತೀರಾ?</strong><br /> - ಶಿಕ್ಷಕರು ಚೆನ್ನಾಗಿ ಪಾಠ ಮಾಡುವ ಕಡೆ ದಾಖಲಾತಿ ಚೆನ್ನಾಗಿದೆ. ಶಿಕ್ಷಕರಿಗೂ ತರಬೇತಿ ಅಗತ್ಯವಿದೆ. ಈಗಿನ ವ್ಯವಸ್ಥೆಗೆ ತಕ್ಕಂತೆ ವೈಜ್ಞಾನಿಕವಾಗಿ ಕಲಿಸುವ ವಿಧಾನದ ಬಗ್ಗೆ ಕಾಲ ಕಾಲಕ್ಕೆ ತರಬೇತಿ ನೀಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಶಿಕ್ಷಕರಿಗೂ ಹಿತಿಮಿತಿಗಳಿವೆ.<br /> <br /> 15-20 ವರ್ಷಗಳ ಹಿಂದೆ ನೇಮಕವಾಗಿರುವ ಶಿಕ್ಷಕರಿಗೆ ಈಗಿನ ಕಾಲಮಾನಕ್ಕೆ ತಕ್ಕಂತೆ ಬೋಧಿಸಲು ಕಷ್ಟವಾಗಬಹುದು. ತರಬೇತಿ ಮೂಲಕ ಅವರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸುವ ಕೆಲಸ ಮಾಡುತ್ತೇವೆ.<br /> <br /> ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಈಗ ಪ್ರೌಢಶಾಲೆಗಳಲ್ಲಿ ಜಾರಿಯಾಗಿದೆ. ಮುಂದಿನ ವರ್ಷ ಪಿಯುಸಿಗೂ ಇದು ವಿಸ್ತರಣೆಯಾಗಲಿದೆ. ಆಗ 30 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರು ಇರಲಿದ್ದಾರೆ. ಇದರಿಂದಾಗಿ ಒತ್ತಡ ಕಡಿಮೆಯಾಗಲಿದ್ದು, ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟದತ್ತ ಗಮನಹರಿಸಲು ಸಾಧ್ಯವಾಗಲಿದೆ.<br /> <br /> <strong>* ಪ್ರವೇಶ ಸಂದರ್ಭದಲ್ಲಿಯೇ ಖಾಸಗಿ ಕಾಲೇಜುಗಳು ಕಡ್ಡಾಯವಾಗಿ ಟ್ಯೂಷನ್ ಶುಲ್ಕವನ್ನು ಕಟ್ಟಬೇಕು ಎಂದು ಒತ್ತಡ ಹೇರುತ್ತಿವೆಯಲ್ಲಾ?</strong><br /> - ನ್ಯಾಯೋಚಿತ ಮಾರ್ಗವನ್ನು ಅನುಸರಿಸದ ಶಾಲಾ- ಕಾಲೇಜುಗಳ ವಿರುದ್ಧ ಸಮಾಜ, ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕು. ಕೆಲವೊಂದು ವಿಷಯಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. ಅಂತಹ ವಿಷಯಗಳನ್ನು ನಮ್ಮ ಗಮನಕ್ಕೆ ತಂದರೆ ಕ್ರಮಕೈಗೊಳ್ಳುತ್ತೇವೆ. ಸಮಾಜ, ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ.<br /> <br /> <strong>* ಪೋಷಕರು, ವಿದ್ಯಾರ್ಥಿಗಳ ಮನವೊಲಿಸುವ ಕೆಲಸವನ್ನು ಸರ್ಕಾರ ಯಾಕೆ ಮಾಡಬಾರದು?</strong><br /> - `ಅಂಕ ಗಳಿಸುವುದೇ ಜೀವನದ ಸರ್ವಸ್ವ ಅಲ್ಲ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಪದೇ ಪದೇ ನಾವು ಹೇಳುತ್ತಿದ್ದೇವೆ. ಟ್ಯೂಷನ್ಗೆ ಹೋದರಷ್ಟೇ ನಮ್ಮ ಮಗ ಅಥವಾ ಮಗಳು ಉದ್ಧಾರ ಸಾಧ್ಯ ಎಂಬ ತಪ್ಪುಕಲ್ಪನೆಯಿಂದ ಹೊರ ಬರಬೇಕು.<br /> <br /> ಅಂಕಗಳೇ ಜೀವನದಲ್ಲಿ ಎಲ್ಲವನ್ನೂ ನಿರ್ಧರಿಸುವುದಿಲ್ಲ. ಮುಂದಿನ ವ್ಯಾಸಂಗಕ್ಕೆ ಅಂಕಗಳು ಮಾನದಂಡ ಅಷ್ಟೇ. ಪೋಷಕರು ಅನಗತ್ಯವಾಗಿ ಮಕ್ಕಳ ಮೇಲೆ ಒತ್ತಡ ಹೇರುವುದು~ ಸರಿಯಲ್ಲ.<br /> <br /> ಶೈಕ್ಷಣಿಕ ಪಠ್ಯಕ್ರಮಕ್ಕೆ ಸೀಮಿತವಾಗಿ ಹೇಳುವುದಾದರೆ ಟ್ಯೂಷನ್ ಅಗತ್ಯವಿಲ್ಲ, ಆದರೆ ಕೆಲ ಪೋಷಕರು ಶಾಲಾ ಹಂತದಲ್ಲೇ ಬೇರೆ ಬೇರೆ ಕೋರ್ಸ್ಗಳನ್ನು ಕಲಿಯಬೇಕು ಎಂದು ಬಯಸುತ್ತಾರೆ. ಅಂತಹವರು ಬೇಕಾದರೆ ಟ್ಯೂಷನ್ಗೆ ಕಳುಹಿಸಲಿ, ಆದರೆ ಪಠ್ಯಕ್ರಮಕ್ಕೆ ಟ್ಯೂಷನ್ಗೆ ಹೋಗುವ ಅಗತ್ಯವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>