<p><strong>ಕೋಲಾರ:</strong> ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿರಿಸಿದ ಶೇ 22.75ರಷ್ಟು ಅನುದಾನ ಬಳಸುವಲ್ಲಿ ನಿರ್ಲಕ್ಷ್ಯ ತೋರುವ ಸ್ಥಳೀಯ ಸಂಸ್ಥೆ ಗಳಿಗೆ ಶೀಘ್ರ ಸಮಾಜ ಕಲ್ಯಾಣ ಇಲಾಖೆಯು ಪಾಠ ಹೇಳಲಿದೆ.<br /> <br /> ಅನುದಾನವನ್ನು ಬಳಸದಿರುವುದು, ಅರ್ಹ ಫಲಾನುಭವಿಗಳಿಗೆ ನೀಡದಿರು ವುದು, ಅನರ್ಹರನ್ನು ಆಯ್ಕೆ ಮಾಡು ವುದೂ ಸೇರಿದಂತೆ ಅನುದಾನ ಬಳಕೆಯ ಲೋಪಗಳನ್ನು ಪತ್ತೆ ಹಚ್ಚಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮುಂದಾಗಿದೆ.<br /> <br /> ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಸೂಚನೆ ಮೇರೆಗೆ ನಿರ್ದೇಶನಾಲಯವು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳಿಗೆ ನಿರ್ದೇಶನಾಲಯದ ಜಿಲ್ಲಾ ಮಟ್ಟದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾರಂಭಿಸಿದ್ದಾರೆ. <br /> <br /> ಸ್ಥಳೀಯ ಆಡಳಿತ ಸಂಸ್ಥೆಗಳೂ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ನೀಡಲಾಗುತ್ತಿರುವ ಸೌಕರ್ಯಗಳನ್ನೂ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ, ಈ ಅನುದಾನ ಬಳಕೆ ಮೇಲ್ವಿಚಾರಣೆಗೆ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗೆ ನಿರ್ದೇಶನಾಲ ಯವು ವರದಿ ನೀಡಲಿದ್ದು, ಅದನ್ನು ಆಧರಿಸಿ ಇಲಾಖೆಯು ಕ್ರಮಕೈ ಗೊಳ್ಳಲಿದೆ.<br /> <br /> `ಅನುದಾನದ ಅಡಿ ತಯಾರಿಸಿದ ಕ್ರಿಯಾ ಯೋಜನೆ, ಫಲಾನುಭವಿಗಳ ಆಯ್ಕೆ, ಸೌಲಭ್ಯ ವಿತರಣೆಯ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲು ಮಾಹಿತಿಗಳನ್ನು ಸಂಗ್ರಹಿಸುವರು, ನಂತರ ಪರಿಶೀಲಿಸಿ ಕ್ರಮಕ್ಕೆ ಶಿಫಾರಸು ಮಾಡುವರು~ ಎಂದು ನಿರ್ದೇಶನಾಲಯ ಬೆಂಗಳೂರು ಪ್ರಾದೇಶಿಕ ಎಸ್ಪಿ ರೇಣುಕಾ ಕೆ. ಸುಕುಮಾರ್ ತಿಳಿಸಿದ್ದಾರೆ.<br /> <br /> ಪರಿಶಿಷ್ಟರ ಅನುದಾನ ಬಳಕೆ ಕುರಿತು ನಗರಸಭೆಯಿಂದ ಮಾಹಿತಿ ಪಡೆಯುವ ಸಲುವಾಗಿ ಬುಧವಾರ ನಗರಕ್ಕೆ ಬಂದಿದ್ದ ಅವರು `ಪ್ರಜಾವಾಣಿ~ಯೊಡನೆ ಮಾತನಾಡಿ, `ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯಾಚರಣೆ ಶುರುವಾಗಿದೆ. ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರ ಮತ್ತು ತುಮಕೂರು ವ್ಯಾಪ್ತಿಯಲ್ಲಿ ಹಲವು ಕಚೇರಿಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.<br /> <br /> `ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಅನುದಾನ ಬಳಕೆಯ ಬಗ್ಗೆಯೂ ಗಂಭೀರ ಪರಿಶೀಲನೆ ನಡೆಸಲಾಗು ವುದು. ಪ್ರತಿ ಗ್ರಾಮ ಪಂಚಾಯಿತಿ ಯನ್ನೂ ವಿಶೇಷವಾಗಿ ಪರಿಗಣಿಸಲಾಗು ವುದು. ಎಲ್ಲಿಯೂ ಪರಿಶಿಷ್ಟರ ಅನುದಾನ ಅರ್ಹರಲ್ಲದೆ ಬೇರೊಬ್ಬರಿಗೆ ತಲುಪುವುದನ್ನು ತಡೆಯುವುದೇ ಕಾರ್ಯಾಚರಣೆಯ ಉದ್ದೇಶ~ ಎಂದರು.<br /> <br /> `ಕಾರ್ಯಾಚರಣೆಗೆ ತಾಲ್ಲೂಕುವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಆಡಳಿತ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿ ವರದಿ ನೀಡುತ್ತಾರೆ. ಅದನ್ನು ಸೂಕ್ತ ಕ್ರಮದ ಶಿಫಾರಸಿನ ಜೊತೆಗೆ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗುವುದು. ಅನುದಾನ ಸದ್ಬಳಕೆಯನ್ನೆ ಆಶಯ ವನ್ನಾಗಿರಿಸಿಕೊಂಡಿರುವ ಇಲಾಖೆಯು ಕ್ರಮವನ್ನು ಕೈಗೊಳ್ಳಲಿದೆ~ ಎಂದು ತಿಳಿಸಿದರು.<br /> <br /> ದೂರಿಲ್ಲ: ನಿರ್ದೇಶನಾಲಯವು ಯಾವುದೇ ದೂರನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸುವುದಿಲ್ಲ. ಬದಲಿಗೆ ನಿರ್ದೇಶನಲಾಯದ ಪ್ರಮುಖ ಜವಾಬ್ದಾರಿ ಎಂದು ಪರಿಗಣಿಸಿ ಸ್ವಯಂ ಪ್ರೇರಣೆಯಿಂದ ತೊಡಗಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ ಹಲವು ಕ್ರಮಗಳನ್ನು ಕೈಗೊಳ್ಳುವ ಕೆಲಸವೂ ನಡೆಯುತ್ತಿದೆ~ ಎಂದರು.<br /> <br /> <strong>ಗೊತ್ತಿಲ್ಲ: </strong>ಸ್ಥಳೀಯ ಸಂಸ್ಥೆಗಳ ಬಹಳಷ್ಟು ಅಧಿಕಾರಿಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವೊಂದು ಇದೆ ಎಂಬ ಸಂಗತಿಯೇ ಗೊತ್ತಿಲ್ಲ. ಈ ಕಾರ್ಯಾಚರಣೆಯ ಪರಿಣಾಮವಾಗಿ ಅವರಲ್ಲಿ ನಿರ್ದೇಶನಾಲಯದ ಕುರಿತು ಜಾಗೃತಿ ಮೂಡುತ್ತಿರುವುದೂ ವಿಶೇಷ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿರಿಸಿದ ಶೇ 22.75ರಷ್ಟು ಅನುದಾನ ಬಳಸುವಲ್ಲಿ ನಿರ್ಲಕ್ಷ್ಯ ತೋರುವ ಸ್ಥಳೀಯ ಸಂಸ್ಥೆ ಗಳಿಗೆ ಶೀಘ್ರ ಸಮಾಜ ಕಲ್ಯಾಣ ಇಲಾಖೆಯು ಪಾಠ ಹೇಳಲಿದೆ.<br /> <br /> ಅನುದಾನವನ್ನು ಬಳಸದಿರುವುದು, ಅರ್ಹ ಫಲಾನುಭವಿಗಳಿಗೆ ನೀಡದಿರು ವುದು, ಅನರ್ಹರನ್ನು ಆಯ್ಕೆ ಮಾಡು ವುದೂ ಸೇರಿದಂತೆ ಅನುದಾನ ಬಳಕೆಯ ಲೋಪಗಳನ್ನು ಪತ್ತೆ ಹಚ್ಚಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮುಂದಾಗಿದೆ.<br /> <br /> ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಸೂಚನೆ ಮೇರೆಗೆ ನಿರ್ದೇಶನಾಲಯವು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳಿಗೆ ನಿರ್ದೇಶನಾಲಯದ ಜಿಲ್ಲಾ ಮಟ್ಟದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾರಂಭಿಸಿದ್ದಾರೆ. <br /> <br /> ಸ್ಥಳೀಯ ಆಡಳಿತ ಸಂಸ್ಥೆಗಳೂ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ನೀಡಲಾಗುತ್ತಿರುವ ಸೌಕರ್ಯಗಳನ್ನೂ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ, ಈ ಅನುದಾನ ಬಳಕೆ ಮೇಲ್ವಿಚಾರಣೆಗೆ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗೆ ನಿರ್ದೇಶನಾಲ ಯವು ವರದಿ ನೀಡಲಿದ್ದು, ಅದನ್ನು ಆಧರಿಸಿ ಇಲಾಖೆಯು ಕ್ರಮಕೈ ಗೊಳ್ಳಲಿದೆ.<br /> <br /> `ಅನುದಾನದ ಅಡಿ ತಯಾರಿಸಿದ ಕ್ರಿಯಾ ಯೋಜನೆ, ಫಲಾನುಭವಿಗಳ ಆಯ್ಕೆ, ಸೌಲಭ್ಯ ವಿತರಣೆಯ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲು ಮಾಹಿತಿಗಳನ್ನು ಸಂಗ್ರಹಿಸುವರು, ನಂತರ ಪರಿಶೀಲಿಸಿ ಕ್ರಮಕ್ಕೆ ಶಿಫಾರಸು ಮಾಡುವರು~ ಎಂದು ನಿರ್ದೇಶನಾಲಯ ಬೆಂಗಳೂರು ಪ್ರಾದೇಶಿಕ ಎಸ್ಪಿ ರೇಣುಕಾ ಕೆ. ಸುಕುಮಾರ್ ತಿಳಿಸಿದ್ದಾರೆ.<br /> <br /> ಪರಿಶಿಷ್ಟರ ಅನುದಾನ ಬಳಕೆ ಕುರಿತು ನಗರಸಭೆಯಿಂದ ಮಾಹಿತಿ ಪಡೆಯುವ ಸಲುವಾಗಿ ಬುಧವಾರ ನಗರಕ್ಕೆ ಬಂದಿದ್ದ ಅವರು `ಪ್ರಜಾವಾಣಿ~ಯೊಡನೆ ಮಾತನಾಡಿ, `ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯಾಚರಣೆ ಶುರುವಾಗಿದೆ. ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರ ಮತ್ತು ತುಮಕೂರು ವ್ಯಾಪ್ತಿಯಲ್ಲಿ ಹಲವು ಕಚೇರಿಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.<br /> <br /> `ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಅನುದಾನ ಬಳಕೆಯ ಬಗ್ಗೆಯೂ ಗಂಭೀರ ಪರಿಶೀಲನೆ ನಡೆಸಲಾಗು ವುದು. ಪ್ರತಿ ಗ್ರಾಮ ಪಂಚಾಯಿತಿ ಯನ್ನೂ ವಿಶೇಷವಾಗಿ ಪರಿಗಣಿಸಲಾಗು ವುದು. ಎಲ್ಲಿಯೂ ಪರಿಶಿಷ್ಟರ ಅನುದಾನ ಅರ್ಹರಲ್ಲದೆ ಬೇರೊಬ್ಬರಿಗೆ ತಲುಪುವುದನ್ನು ತಡೆಯುವುದೇ ಕಾರ್ಯಾಚರಣೆಯ ಉದ್ದೇಶ~ ಎಂದರು.<br /> <br /> `ಕಾರ್ಯಾಚರಣೆಗೆ ತಾಲ್ಲೂಕುವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಆಡಳಿತ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿ ವರದಿ ನೀಡುತ್ತಾರೆ. ಅದನ್ನು ಸೂಕ್ತ ಕ್ರಮದ ಶಿಫಾರಸಿನ ಜೊತೆಗೆ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗುವುದು. ಅನುದಾನ ಸದ್ಬಳಕೆಯನ್ನೆ ಆಶಯ ವನ್ನಾಗಿರಿಸಿಕೊಂಡಿರುವ ಇಲಾಖೆಯು ಕ್ರಮವನ್ನು ಕೈಗೊಳ್ಳಲಿದೆ~ ಎಂದು ತಿಳಿಸಿದರು.<br /> <br /> ದೂರಿಲ್ಲ: ನಿರ್ದೇಶನಾಲಯವು ಯಾವುದೇ ದೂರನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸುವುದಿಲ್ಲ. ಬದಲಿಗೆ ನಿರ್ದೇಶನಲಾಯದ ಪ್ರಮುಖ ಜವಾಬ್ದಾರಿ ಎಂದು ಪರಿಗಣಿಸಿ ಸ್ವಯಂ ಪ್ರೇರಣೆಯಿಂದ ತೊಡಗಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ ಹಲವು ಕ್ರಮಗಳನ್ನು ಕೈಗೊಳ್ಳುವ ಕೆಲಸವೂ ನಡೆಯುತ್ತಿದೆ~ ಎಂದರು.<br /> <br /> <strong>ಗೊತ್ತಿಲ್ಲ: </strong>ಸ್ಥಳೀಯ ಸಂಸ್ಥೆಗಳ ಬಹಳಷ್ಟು ಅಧಿಕಾರಿಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವೊಂದು ಇದೆ ಎಂಬ ಸಂಗತಿಯೇ ಗೊತ್ತಿಲ್ಲ. ಈ ಕಾರ್ಯಾಚರಣೆಯ ಪರಿಣಾಮವಾಗಿ ಅವರಲ್ಲಿ ನಿರ್ದೇಶನಾಲಯದ ಕುರಿತು ಜಾಗೃತಿ ಮೂಡುತ್ತಿರುವುದೂ ವಿಶೇಷ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>